ಸೆ. 23 ರಂದು ಜಿ ವಿ ರಾಘವೇಂದ್ರ ಅಯ್ಯರ್ ರವರ ನಿರ್ದೇಶನದ “ಭೂ ನಾಟಕ ಮಂಡಳಿ” ಚಲನಚಿತ್ರ ತೆರೆಗೆ

ಬೆಂಗಳೂರಿನ ರೇಣುಕಾಂಬ ಸ್ಟುಡಿಯೊ ಮಲ್ಲೇಶ್ವರಂ ನಲ್ಲಿ ಖ್ಯಾತ ನಿರ್ದೇಶಕರಾದ ಜಿ ವಿ ಅಯ್ಯರ್ ರವರ ಪುತ್ರ ಜಿ ವಿ ರಾಘವೇಂದ್ರ ಅಯ್ಯರ್ ರವರ ನಿರ್ದೇಶನದ “ಭೂ ನಾಟಕ ಮಂಡಳಿ” ಎಂಬ ಚಲನಚಿತ್ರದ ಟ್ರೈಲರ್ ಬಿಡುಗಡೆಯಾಯಿತು.ಮುಖ್ಯ ಪಾತ್ರದಲ್ಲಿ ಡ್ರಾಮಾ ಜೂನಿಯರ್ ತುಷಾರ್ ಗೌಡ, ತಂದೆಯ ಪಾತ್ರದಲ್ಲಿ ರಾಜೇಶ್ ಕೃಷ್ಣನ್, ತಾಯಿಯ ಪಾತ್ರದಲ್ಲಿ ಸ್ಪರ್ಶ ರೇಖಾ ನಟಿಸುತ್ತಿದ್ದಾರೆ. ಹಾಗೂ...

ಸುಳ್ಯ: ಸ. ಪ. ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸ್.ಡಿ.ಎಂ.ಸಿ ಗೆ ನೂತನ ಪದಾಧಿಕಾರಿಗಳ ಆಯ್ಕೆ

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಶಾಲಾ ಸಭಾಂಗಣದಲ್ಲಿ ಪ್ರೌಢಶಾಲಾ ವಿಭಾಗದ ಎಸ್.ಡಿ.ಎಂ.ಸಿ ಗೆ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಪ್ರಥಮ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಾಸಕಕರ ಸೂಚನೆಯಂತೆ ಎಸ್.ಡಿ.ಎಂ.ಸಿ ಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀಮತಿ ರಾಜೇಶ್ವರಿ ಕಾಡುತೋಟ ವಹಿಸಿದ್ದರು. ಸಮಿತಿಯ ನೂತನ ಸದಸ್ಯರಾಗಿ ನೇಮಕಗೊಂಡಿರುವ ಪ್ರವೀಣ್ ರಾವ್ ರೆಂಜಾಳ, ಜಯರಾಮ ಕೆ.ಕೆ,...
Ad Widget

ಸುಳ್ಯ ಎನ್ನೆಂಪಿಯುಸಿಯಲ್ಲಿ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ

ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟವು ಪ.ಪೂ ಶಿಕ್ಷಣ ಇಲಾಖೆ ಮತ್ತು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ಸಹಯೋಗದಲ್ಲಿ ಸುಳ್ಯ ಎನ್ನೆಂಪಿಯುಸಿಯಲ್ಲಿ ಸೆ.03 ರಂದು ನಡೆಯಿತು. ಸುಳ್ಯ ಎನ್ನೆಂಪಿಯುಸಿಯ ಪ್ರಾಂಶುಪಾಲರಾದ ಪ್ರೊ ರುದ್ರ ಕುಮಾರ್ ಅವರು ಪಂದ್ಯಾಟದ ಉದ್ಘಾಟಿಸಿ ಮಾತನಾಡಿ “ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಆಟೋಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಹಾಗಿದ್ದಾಗ ಮಾತ್ರ ಕಲಿಕೆಯಲ್ಲಿ ಬದಲಾವಣೆ ಸಾಧ್ಯ”...

ಬೆಳ್ಳಾರೆ: ಗ್ರಾಮ ಪಂಚಾಯತ್ ದ್ವಿತೀಯ ಹಂತದ ಗ್ರಾಮ ಸಭೆ

ಬೆಳ್ಳಾರೆ ಗ್ರಾಮ ಪಂಚಾಯತ್ 2021 - 2022 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಸೆ.03 ರಂದು ಬೆಳ್ಳಾರೆ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಶ್ಮಿ ಕೆ.ಎಂ.ನೋಡೆಲ್ ಅಧಿಕಾರಿಯಾಗಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಪಿ.ಡಿ.ಒ ಶ್ರೀಮತಿ...

ಐವರ್ನಾಡಿನ ಯುವಕ ಕಾಣೆ

ಐವರ್ನಾಡು ಗ್ರಾಮದ ಪಾಲೆಪ್ಪಾಡಿಯ ಸದಾಶಿವ ಎಂಬ ಯುವಕ ಕಾಣೆಯಾಗಿರುವ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿದೆ. ಇವರು ಮಂಗಳೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಭೇಟಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳಿ, ಅಲ್ಲಿಂದ ಕಾಣೆಯಾಗಿರುತ್ತಾರೆ ಎನ್ನಲಾಗಿದೆ. ಇವರನ್ನು ಕಂಡವರು ಹತ್ತಿರದ ಪೋಲಿಸ್ ಠಾಣೆಯಲ್ಲಿ ತಿಳಿಸಬೇಕಾದ ವಿನಂತಿ ಅಥವಾ ಈ ಕೆಳಕಂಡ ನಂಬರಿಗೆ ಕರೆ ಮಾಡಬೇಕಾಗಿ (7619546816 )...

ಪ್ರವೀಣ್ ನೆಟ್ಟಾರು ಅವರು ನಡೆಸುತ್ತಿದ್ದ ಅಕ್ಷಯ ಫಾರ್ಮ್ ಫ್ರೆಶ್ ಚಿಕನ್ ಸೆಂಟರ್ ಪುನಾರಾರಂಭ

ಬೆಳ್ಳಾರೆಯ ಮೇಲಿನ ಪೇಟೆಯ ಮಾಸ್ತಿಕಟ್ಟೆಯಲ್ಲಿ ಪ್ರವೀಣ್ ನೆತ್ತಾರು ಅವರು ನಡೆಸುತ್ತಿದ್ದ ಅಕ್ಷಯ ಫಾರ್ಮ್ ಫ್ರೆಶ್ ಚಿಕನ್ ಸೆಂಟರ್ ಸೆ.02 ರಂದು ಬೆಳಿಗ್ಗೆ ಗಣಹೋಮದೊಂದಿಗೆ ಪುನರಾರಂಭಗೊಂಡಿತು. ಚಿಕನ್ ಸೆಂಟರ್ ಅನ್ನು ಯತೀಶ್ ಕುಮಾರ್ ಪೆಲತ್ತಡ್ಕ ಅವರು ಮುನ್ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಅಕ್ಷಯ ಗ್ರೂಪ್ ನ ಮಾಲಕರಾದ ಜಯಂತ್ ನಡುಬೈಲು ಉಪಸ್ಥಿತರಿದ್ದರು. ಇಲ್ಲಿ ಶುಚಿರುಚಿಯಾದ ತಾವೇ ಉತ್ಪಾದಿಸಿದ ಕೋಳಿ,...

ಕಲ್ಮಕಾರು :- ನೂತನ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಪಂಜ-ಸುಬ್ರಹ್ಮಣ್ಯ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕಲ್ಮಕಾರು “ಎ” ಮತ್ತು ಕಲ್ಮಕಾರು “ಬಿ” ಒಕ್ಕೂಟಗಳ ಪದಗ್ರಹಣ ಸಮಾರಂಭವು ಆ.04 ರಂದು ದ.ಕ.ಉ.ಹಿ ಪ್ರಾಥಮಿಕ ಶಾಲಾ ವಠಾರ ಕಲ್ಮಕಾರು ಇಲ್ಲಿ ನಡೆಯಿತು. ಪ್ರಗತಿಪರ ಕೃಷಿಕರು ಹಾಗೂ ಯುವ ನ್ಯಾಯವಾದಿಗಳಾದ ಗುರುಚರಣ್.ಕೆ.ಎಸ್ ಕೊಪ್ಪಡ್ಕ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು....

ಬೆಳ್ಳಾರೆ: ಪ್ರೆಂಡ್ಸ್ ಟೈಗರ್ಸ್ ಹುಲಿ ವೇಷ ಕುಣಿತ ಪ್ರದರ್ಶನ

ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ,ವಿರಾಟ್ ಪ್ರೆಂಡ್ಸ್ ಬೆಳ್ಳಾರೆ ಇದರ ಆಶ್ರಯದಲ್ಲಿ ಆ 31 ಮತ್ತು ಸೆ.1 ರಂದು ನಡೆದ ಗಣೇಶೋತ್ಸವ ಕಾರ್ಯಕ್ರಮದ ಶ್ರೀ ದೇವರ ವಿಜೃಂಭಣೆಯ ಶೋಭಾಯಾತ್ರೆಯಲ್ಲಿ ಪ್ರೆಂಡ್ಸ್ ಟೈಗರ್ಸ್ ಹುಲಿ ವೇಷ ಕುಣಿತ ಪ್ರದರ್ಶನ ನೀಡಲಾಯಿತು.

ಪಂಜ ವಲಯ ಮಟ್ಟದ ಪ್ರತಿಭಾ ಕಾರಂಜಿ-ಸರಕಾರಿ ಪ್ರೌಢ ಶಾಲೆ ಎಣ್ಮೂರಿಗೆ ಸಮಗ್ರ ಪ್ರಶಸ್ತಿ

ಸರಕಾರಿ ಪ್ರೌಢ ಶಾಲೆ ಎಣ್ಮೂರು ಇಲ್ಲಿ ಸೆ.03 ರಂದು ಪಂಜ ವಲಯ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು. ಪ್ರತಿಭಾ ಕಾರಂಜಿಯನ್ನು ಮುರುಳ್ಯ ಗ್ರಾಮಪಂಚಾಯತ್ ಅಧ್ಯಕ್ಷರಾದ ಕುಮಾರಿ ಜಾನಕಿ ಮುರುಳ್ಯ ಉದ್ಘಾಟಿಸಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಶ್ರೀಮತಿ ಶೀತಲ್ ಯು.ಕೆ, ಶಿಕ್ಷಣ ಸಂಯೋಜಕರಾದ ಶ್ರೀಮತಿ ಸಂಧ್ಯಾ ಕುಮಾರಿ, ಪ್ರತಿಭಾ ಕಾರಂಜಿ ನೋಡೆಲ್ ಶ್ರೀ ವಸಂತ ಏನೆಕಲ್, BRP...

ಕಲ್ಲುಗುಂಡಿ : ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಕಲ್ಲುಗುಂಡಿಯ ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಸೆ.3 ರಂದು ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವೇರಪುರ ಆಂಗ್ಲಮಾಧ್ಯಮ ಶಾಲೆಯಲ್ಲಿ ಸಂಚಾಲಕರಾದ ವಂದನೀಯ ಫಾ. ಪಾವ್ಲ್ ಕ್ರಾಸ್ತ ವಹಿಸಿದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವನಿತಾ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದು, ಶಿಕ್ಷಕಿ ರೂಪಾರವರ ಮಾರ್ಗದರ್ಶನದಲ್ಲಿ ಹಾಗೂ ವಿದ್ಯಾರ್ಥಿ ನಾಯಕ ಅಶ್ವಿನ್...
Loading posts...

All posts loaded

No more posts

error: Content is protected !!