ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ 2021- 22 ನೇ ಸಾಲಿನ 103 ನೇ ಮಹಾಸಭೆಯು ಸಿರಿಸೌಧ ಸಭಾಂಗಣದಲ್ಲಿ ನಡೆಯಿತು.ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ವಹಿಸಿದ್ದರು. ಭಾರತ ಮಾತೆಯ ಭಾವಚಿತ್ರದ ಬಳಿ ಸಂಘದ ಹಿರಿಯ ನಿರ್ದೇಶಕರಾದ ಚಂದ್ರಶೇಖರ ಚೋಡಿಪಣೆಯವರು ದೀಪ ಪ್ರಜ್ವಲನೆಯನ್ನು ಮಾಡಿದರು. ಸಂಘದ ಎಲ್ಲಾ ನಿರ್ದೇಶಕರು ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು...

ಸಂಪಾಜೆ : ಪಯಸ್ವಿನಿ ಪ್ರಾ. ಕೃ.ಪ. ಸ. ಸಂಘದಲ್ಲಿ ಅಗಲಿದ ಮಾಜಿ ನಿರ್ದೇಶಕರಿಗೆ ಶ್ರದ್ಧಾಂಜಲಿ

ಕೊಡಗು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಈ ಹಿಂದೆ ಆಡಳಿತ ಮಂಡಳಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿ,ಈಗ ಅಕಾಲಿಕವಾಗಿ ನಿಧನ ಹೊಂದಿದ ದಿ.ಗಾಂಧಿಪ್ರಸಾದ್ ಬಂಗಾರಕೋಡಿ ಮತ್ತು ದಿ.ರತ್ನಾಕರ ದೊಡ್ಕಜೆ ರವರಿಗೆ ಸೆ. 10 ರಂದು ಶ್ರದ್ಧಾಂಜಲಿ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ಅದ್ಯಕ್ಷರಾದ ಅನಂತ್ ಊರುಬೈಲುರವರು ಮೃತ ನಿರ್ದೇಶಕರು ತಮ್ಮ ಆಡಳಿತದ...
Ad Widget

ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷೆಯಾಗಿ ಸಂಧ್ಯಾ ಸಚಿತ್ ಕುಮಾರ್ ನೇಮಕ

ಲಯನ್ಸ್ ಜಿಲ್ಲೆ 317ಡಿ ಪ್ರಾಂತ್ಯ 8ರ ಪ್ರಾಂತೀಯ ಅಧ್ಯಕ್ಷರಾಗಿ ಲ ಸಂಧ್ಯಾ ಸಚಿತ್ ಕುಮಾರ್ ಆಯ್ಕೆಯಾಗಿದ್ದಾರೆ. ಏಪ್ರಿಲ್ 11ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆದ 14ನೇ ಜಿಲ್ಲಾ ಕನ್ವೆನ್ಸನ್ ನಲ್ಲಿ ಲಯನ್ಸ್ ಜಿಲ್ಲೆ 317ಡಿಯ 2022-23ರ ನೂತನ ರಾಜ್ಯಪಾಲರಾದ ಸಂಚಿತ್ ಶೆಟ್ಟಿರವರು ಲ|ಸಂದ್ಯಾ ಸಚಿತ್ ಕುಮಾರ್ ರವರನ್ನು ಪ್ರಾಂತ್ಯ 8ರ ಅಧ್ಯಕ್ಷರಾಗಿ ನೇಮಕಗೊಳಿಸಿದರು. ಸಂದ್ಯಾರವರು ಚೆಂಬು...

ಸುಳ್ಯ ಪಯಸ್ವಿನಿ ಜೇಸಿಸ್ ಮತ್ತು ರೋಟರಿ ಕ್ಲಬ್ ವತಿಯಿಂದ ದೇಶ ಪರ್ಯಟನೆಗೆ ಹೊರಟ ಯುವಕ ಶಾಹಿಲ್ ಜಾ ಗೆ ಸುಳ್ಯದಲ್ಲಿ ಸ್ವಾಗತ ಅಭಿನಂದನೆ

ಸುಳ್ಯ ಪಯಸ್ವಿನಿ ಜೇಸಿಸ್ ಮತ್ತು ರೋಟರಿ ಕ್ಲಬ್ ವತಿಯಿಂದ ದೇಶ ಪರ್ಯಟನೆಯ ಸೈಕ್ಲಿಂಗ್ ಅಭಿಯಾನ ಹಮ್ಮಿಕೊಂಡ 16 ವರ್ಷ ಪ್ರಾಯದ ಶಾಹಿಲ್ ಜಾ ಎಂಬ ಕಲ್ಕತ್ತ ಮೂಲದ ಯುವಕನನ್ನು ಸುಳ್ಯದಲ್ಲಿ ಸ್ವಾಗತಿಸಿ ಅಭಿನಂದಿಸಲಾಯಿತು.ಮಣ್ಣಿನ ಸಂರಕ್ಷಣೆ (ಸೇವ್ ಸಾಯಿಲ್) ಎಂಬ ಉದ್ದೇಶದಿಂದ ಸದ್ಗುರು ರವರ ಪ್ರೇರೆಪಣೆಯಿಂದ ಕಲ್ಕತ್ತಾದಿಂದ ಹೊರಟ ಯುವಕನ ಸೈಕ್ಲಿಂಗ್ ಯಾತ್ರೆ ಈಗಾಗಲೇ 8 ರಾಜ್ಯಗಳನ್ನು...

ಸೆ.17 ರಂದು ಹರಿಹರ ಪಲ್ಲತ್ತಡ್ಕದಲ್ಲಿ ಗ್ರಾಮ ವಾಸ್ತವ್ಯ

ಸುಳ್ಯ ತಾಲೂಕು ತಹಶೀಲ್ದಾರ್ ಅನಿತಾಲಕ್ಷ್ಮಿ ಅವರ ನೇತೃತ್ವದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಸೆ.17 ರಂದು ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು ಎಂದು ಪ್ರಕಟಣೆ ತಿಳಿಸಿದೆ.ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು...

ಮಳೆ ಹಾನಿ ಪ್ರದೇಶದ ಹರಿಹರ ಪಲ್ಲತ್ತಡ್ಕ – ಕೊಲ್ಲಮೊಗ್ರ ಗ್ರಾಮಗಳಿಗೆ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳ ಭೇಟಿ

ಮಳೆ ಹಾನಿ ಪ್ರದೇಶದ ಹರಿಹರ - ಕೊಲ್ಲಮೊಗ್ರ ಗ್ರಾಮಗಳಿಗೆ ಕರ್ನಾಟಕ ರಾಜ್ಯ ರೈತ ಸಂಘದ ದ.ಕ ಜಿಲ್ಲಾ ಘಟಕ, ಸುಳ್ಯ ತಾಲೂಕು ಘಟಕ ಹಾಗೂ ಗ್ರಾಮ ಘಟಕದ ಪದಾಧಿಕಾರಿಗಳು ಸೆ. 11ರಂದು ಭೇಟಿ ನೀಡಿ ಸಂತ್ರಸ್ತರ ಅಹವಾಲು ಸ್ವೀಕರಿಸಿದರು. ಮಳೆಯಿಂದ ಹಾನಿಗೊಳಗಾದ ಹರಿಹರ ಪೇಟೆಯ ಬಾಳುಗೋಡು ಸೇತುವೆಯ ಬದಿಗಳು ಹಾಗೂ ಅಂಗಡಿ ಮುಂಗಟ್ಟುಗಳ ಹಾನಿಯನ್ನು ವೀಕ್ಷಿಸಿ...

ಸಾಲಮನ್ನಾದ ಬಾಕಿ ಹಣ ಶೀಘ್ರ ಬಿಡುಗಡೆ ಮಾಡಲು ಸಚಿವರಿಗೆ ಸುಳ್ಯದ ನಿಯೋಗ ಒತ್ತಾಯ

ಕರ್ನಾಟಕ ರಾಜ್ಯ ಸರ್ಕಾರದ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ರವರನ್ನು ಭೇಟಿಯಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕೆಲವು ಸದಸ್ಯರಿಗೆ ಬಾಕಿ ಇರುವ ಸಾಲಮನ್ನಾ ಮೊತ್ತವನ್ನು ಅತೀ ಶೀಘ್ರದಲ್ಲಿ ಬಿಡುಗಡೆ ಮಾಡುವಂತೆ ಮನವಿ ಮಾಡಲಾಯಿತು ಹಾಗೂ ಯಶಸ್ವಿನಿ ಯೋಜನೆಯನ್ನು ಮರುಜಾರಿಗೊಳಿಸಿದ ಬಗ್ಗೆ ಮಾನ್ಯ ‌ಸಚಿವರನ್ನು ಅಭಿನಂದಿಸಲಾಯಿತು. ಈ ನಿಯೋಗದಲ್ಲಿ ಕೆ.ಎಫ್.ಡಿ.ಸಿ ಅಧ್ಯಕ್ಷ ಎ....

ಸಂಪಾಜೆ ಬೈಲು : ವಿರಾಟ್ ಕೇಸರಿ ಬಳಗದಿಂದ ಶ್ರಮದಾನ

ಸಂಪಾಜೆ ಬೈಲು ಇಷ್ಟದೇವತೆ ಮತ್ತು ಮಹಿಷಂದಾಯ ಚಾವಡಿಯಲ್ಲಿ ವಿರಾಟ್ ಕೇಸರಿ ಸಂಘದ ವತಿಯಿಂದ ಸೆ.15 ರಂದು ಶ್ರಮದಾನ ನಡೆಯಿತು. ಶರತ್ ಕಾಸ್ಪಾಡಿ ಸಹಕಾರ ನೀಡಿದರು.

ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಬೆಳ್ಳಾರೆ ವಲಯಮಟ್ಟದ ಪ್ರತಿಭಾಕಾರಂಜಿ ಸಮಾರೋಪ -ಕೆ.ಪಿ.ಎಸ್ ಬೆಳ್ಳಾರೆ ಸಮಗ್ರ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ ಮತ್ತು ಪಯಸ್ವಿನಿ ಪ್ರೌಢ ಶಾಲೆ ಜಾಲ್ಸೂರು ಇದರ ಆಶ್ರಯದಲ್ಲಿ ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ನಡೆದ ಬೆಳ್ಳಾರೆ ವಲಯಮಟ್ಟದ ಪ್ರತಿಭಾಕಾರಂಜಿ ಸಮಾರೋಪ ಸಮಾರಂಭದಲ್ಲಿ ಕೆ.ಪಿ.ಎಸ್ ಬೆಳ್ಳಾರೆ ಸಮಗ್ರ ಪ್ರಶಸ್ತಿ ಯನ್ನು ಪಡೆದುಕೊಂಡಿದೆ.ಸಮಗ್ರ ಪ್ರಶಸ್ತಿ...

ಅಡ್ಪಂಗಾಯದಲ್ಲಿ ಪಾದಾಚಾರಿ ವೃದ್ದನಿಗೆ ಬೈಕ್ ಡಿಕ್ಕಿ : ಎರಡೂ ಕಾಲು ಕಳೆದುಕೊಂಡ ವೃದ್ಧ

ಅಜ್ಜಾವರ ಗ್ರಾಮದ ಅಡ್ಪಂಗಾಯ ಬಸ್ ನಿಲ್ದಾಣ ಬಳಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ದನಿಗೆ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆದು ವೃದ್ದನ ಎರಡೂ ಕಾಲು ತುಂಡಾಗಿ ಗಂಭೀರ ಗಾಯಗೊಂಡ ಘಟನೆ ಸೆ.೧೫ ರಂದು ನಡೆದಿದೆ. ಅಜ್ಜಾವರ ಕಡೆಯಿಂದ ಮುದರ ಎಂಬ ವೃದ್ದ ವ್ಯಕ್ತಿ ಹಾಗೂ ಪ್ರಭಾಕರ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ, ಮಂಡೆಕೋಲಿನ ಮಾರ್ಗ ಎಂಬಲ್ಲಿ ಬೈಕ್...
Loading posts...

All posts loaded

No more posts

error: Content is protected !!