ಜಾಲ್ಸೂರು : ಅಂಗಡಿಯಿಂದ ಮೊಬೈಲ್ ಕಳ್ಳತನ – ಈ ದೃಶ್ಯ ಸಿ.ಸಿ. ಕ್ಯಾಮರಾದಲ್ಲಿ ಸೆರೆ

https://youtu.be/gCATJiOZBoc ಗ್ರಾಹಕನಂತೆ ನಟಿಸಿ ಅಂಗಡಿಯಿಂದ ಮೊಬೈಲ್ ಫೋನನ್ನು ಕಳವುಗೈದ ಘಟನೆ ಜಾಲ್ಸೂರಿನಿಂದ ವರದಿಯಾಗಿದ್ದು, ಈ ದೃಶ್ಯ ಸಿ.ಸಿ. ಕ್ಯಾಮರಾದಲ್ಲಿ ದಾಖಲಾಗಿರುವುದಾಗಿ ತಿಳಿದುಬಂದಿದೆ.ಸೆ.15ರಂದು ರಾತ್ರಿ 10 ಗಂಟೆಯ ವೇಳೆಗೆ ಅಪರಿಚಿತ ವ್ಯಕ್ತಿಯೋರ್ವ ಖರೀದಿಯ ನೆಪದಲ್ಲಿ ಜಾಲ್ಲೂರಿನ ಶ್ರೀನಿವಾಸ ಕಾಂಪ್ಲೆಕ್ಸ್ ನಲ್ಲಿರುವ ದೇವಪ್ಪ ಅವರ ಗೂಡಂಗಡಿಗೆ ಬಂದು ಟೇಬಲ್ ಮೇಲೆ ಇಟ್ಟಿದ್ದ ಅವರ ಮೊಬೈಲನ್ನು ಕಳವುಗೈದಿದ್ದು, ಈ ದೃಶ್ಯ...

ಸುಬ್ರಹ್ಮಣ್ಯ :- ಶುಭಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 8ನೇ ವಾರ್ಷಿಕ ಮಹಾಸಭೆ

ಶುಭಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸುಬ್ರಹ್ಮಣ್ಯ ಇದರ 8ನೇ ವಾರ್ಷಿಕ ಮಹಾಸಭೆಯು ಸೆ.16 ರಂದು ಕಛೇರಿಯ ಆವರಣದಲ್ಲಿ ದಿನೇಶ್.ಬಿ.ಎನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಶ್ರೀಮತಿ ಶ್ವೇತಾ ರವರ ಪ್ರಾರ್ಥನೆಯೊಂದಿಗೆ ಸಭೆಯು ಆರಂಭಗೊಂಡಿತು. ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ದಿನೇಶ್.ಬಿ.ಎನ್ ರವರು ಸಂಘದ ಬೆಳವಣಿಗೆಯ ಬಗ್ಗೆ ಹೇಳಿದರು. ಅದೇ ರೀತಿ ಸಂಘದ ಉಪಾಧ್ಯಕ್ಷರಾದ ರವೀಂದ್ರ...
Ad Widget

ಕಲ್ಮಡ್ಕ : ಮಹಿಳಾ ಗ್ರಾಮ ಸಭೆ

ಕಲ್ಮಡ್ಕ ಗ್ರಾಮ ಪಂಚಾಯತಿನ 2022-23 ನೇ ಸಾಲಿನ ಮಹಿಳಾ ಗ್ರಾಮ ಸಭೆಯು ಸೆ.16 ರಂದು ನಡ್ಕ ಶಿವಗೌರಿ ಕಲಾಮಂದಿರ ಪಡ್ಪಿನಂಗಡಿಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಹಾಜಿರಾ ಗಫೂರ್, ಸದಸ್ಯರಾದ ಲೋಕೇಶ್ ಆಕ್ರಿಕಟ್ಟೆ, ಪವಿತ್ರ ಕುಧ್ವ, ಮೀನಾಕ್ಷಿ ಕೆ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಗೋಪಾಲಕೃಷ್ಣ ಕೆ, ಪ್ರಮೀಳಾ ಟಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ...

ಹರಿಪುರ ಸ.ಕಿ.ಪ್ರಾ. ಶಾಲೆಗೆ ಕೋಟೆ ಫೌಂಡೇಶನ್ ನಿಂದ ಬ್ಯಾಗ್ ವಿತರಣೆ

ಕೋಟೆ ಫೌಂಡೇಶನ್ ರೈಟ್ ಟೂ ಲೀವ್ ಮತ್ತು ಆಪ್ ಡೈನಾಮಿಕ್ಸ್ (ಪಾರ್ಟ್ ಆಫ್ ಸಿಸ್ಕೊ) ನಿಂದ ಸ.ಕಿ.ಪ್ರಾ. ಶಾಲೆ ಹರಿಪುರ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ ಸೆ. 13 ರಂದು ನಡೆಯಿತು. ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಲತಾ ಕುಮಾರಿ ಮತ್ತು ಪತ್ರಕರ್ತರಾದ ಮಹೇಶ್ ಪುಚ್ಚಪಾಡಿಯವರು ಸಹಕರಿಸಿದರು. ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯೆ...

ಬೊಮ್ಮಾರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಬೊಮ್ಮಾರು ಹಾಲು ಉತ್ಪಾದಕರ ಸಹಕಾರ ಸಂಘದ 2021-22ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯು ಸೆ.13ರಂದು ಬೊಮ್ಮಾರು ಶಿವಾಮೃತ ಸಂಘದ ಕಟ್ಟಡದಲ್ಲಿ ಸಂಘದ ಅಧ್ಯಕ್ಷ ದಿವಾಕರ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಇದೇ ಸಂದರ್ಭದಲ್ಲಿ ಯುವ ಹೈನುಗಾರ ಪ್ರಸಾದ್ ಜೋಗಿಮೂಲೆ ಮತ್ತು ನಿವೃತ್ತ ದೈ.ಶಿ.ಶಿ. ಲಕ್ಷ್ಮೀಶ ರೈ ಯವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ದ.ಕ.ಉಪ ವ್ಯವಸ್ಥಾಪಕ ಡಾ| ಸತೀಶ್ ರಾವ್,...

ಸುಳ್ಯ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾಗಿ ಶ್ರೀಮತಿ ಗೀತಾ ಅಧಿಕಾರ ಸ್ವೀಕಾರ

ಸುಳ್ಯ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾಗಿ ಶ್ರೀಮತಿ ಗೀತಾರವರು ಸೆ.12ರಂದು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ತಾಲ್ಲೂಕು ವಿಸ್ತರಣಾಧಿಕಾರಿ ಶುಭಾ ಎ. ಹಾಗೂ ತಾಲೂಕು ನಿಲಯಗಳ ಮೇಲ್ವಿಚಾರಕರು, ಸಿಬ್ಬಂದಿ ವರ್ಗದವರು ಗೀತಾರವರನ್ನು ಹೂವು ನೀಡಿ ಸ್ವಾಗತಿಸಿದರು.11 ವರ್ಷಗಳಿಂದ ಪುತ್ತೂರಿನಲ್ಲಿ ನಿಲಯ ಪಾಲಕರಾಗಿದ್ದ ಗೀತಾರವರು, ಅದಕ್ಕಿಂತ ಮೊದಲು ಬೆಳ್ತಂಗಡಿಯಲ್ಲಿ 9ವರ್ಷ ನಿಲಯಪಾಲಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ತಾಲ್ಲೂಕು...

ವಲಯ ಮಟ್ಟದ ಪ್ರತಿಭಾ ಕಾರಂಜಿ-ಮರ್ಕಂಜ ಪ್ರೌಢಶಾಲೆ ಸಮಗ್ರದಲ್ಲಿ ದ್ವಿತೀಯ

ಅಜ್ಜಾವರ ಸರಕಾರಿ ಪ್ರೌಢಶಾಲೆಯಲ್ಲಿ ಸೆ.13ರಂದು ನಡೆದ ಅರಂತೋಡು ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮರ್ಕಂಜ ಪ್ರೌಢಶಾಲೆ ಸಮಗ್ರ ದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಮರ್ಕಂಜ ಪ್ರೌಢಶಾಲೆಯ ವಿದ್ಯಾರ್ಥಿ ಗಳಾದ ಶ್ರೀವಾಸ್ತವ್ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಪ್ರಥಮ, ಜನನಿ ಐ.ಟಿ. ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ, ಗಾಯನ ಬಿ.ಡಿ. ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ, ಹವ್ಯಶ್ರೀ ಕನ್ನಡ...

ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆ.

ಸೆ.14 ರಂದು ಮೂಡಬಿದಿರೆಯ ಮಹಾವೀರ ಕಾಲೇಜಿನಲ್ಲಿ ನಡೆದ ಪದವಿ ಪೂರ್ವ ವಿಭಾಗದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜು ತಂಡ ತೃತೀಯ ಸ್ಥಾನ ಗಳಿಸಿದ್ದು ತಂಡದ ಆಟಗಾರರಾದ ಮನು ಶ್ರೀನಿವಾಸ್ ನಾಯ್ಕ (ದ್ವಿತೀಯ ಕಲಾ ವಿಭಾಗ ) ತುಕಾರಾಮ್ ಮಣಿಗೆಣಪ್ಪ ಮೋಟೆ (ಪ್ರ ಕಲಾ ವಿಭಾಗ )ಇವರು ಮಂಡ್ಯದಲ್ಲಿ ನಡೆಯಲಿರುವ...

ನಾಲ್ಕೂರು : ರಸ್ತೆ ಬದಿಯ ಅಪಾಯಕಾರಿ ಮರಗಳ ತೆರವು – ವಿಪತ್ತು ನಿರ್ವಹಣಾ ತಂಡ ಸಹಕಾರ

ಸುಳ್ಯ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನಡಗಲ್ಲು ಕಲ್ಲಾಜೆ ಸಮಿಪ ಗುಡ್ಡಕುಸಿತದ ಪರಿಣಾಮ ಕೆಲವು ಬೃಹತ್ ಮರಗಳು ರಸ್ತೆಗೆ ವಾಲಿನಿಂತಿದ್ದು ಅಪಾಯವನ್ನು ಆಹ್ವಾನಿಸುತ್ತಿತ್ತು. ಇದನ್ನು ಗಮನಿಸಿದ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ನಾಲ್ಕೂರು ಇದರ ಸ್ವಯಂಸೇವಕರು ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಇಂದು ತೆರವು ಮಾಡಿದರು. ಅರಣ್ಯ ಇಲಾಖೆಯ ನಾಲ್ಕೂರು ವಿಭಾಗದ ಅರಣ್ಯಾಧಿಕಾರಿ ಸದಾಶಿವ, ಅರಣ್ಯ ರಕ್ಷಕ...

ಸಹನಾ ಕಾಂತಬೈಲುಗೆ ಗೌರಮ್ಮ ದತ್ತಿ ಪ್ರಶಸ್ತಿ ಪ್ರಕಟ

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ದತ್ತಿನಿಧಿಗಳಲ್ಲಿ ಅತ್ಯಂತ ಪ್ರತಿಷ್ಠಿತವಾದ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಈ ಬಾರಿ ಸಹನಾ ಕಾಂತಬೈಲು ರಚಿಸಿದ 'ಇದು ಬರಿ ಮಣ್ಣಲ್ಲ' ಲಲಿತ ಪ್ರಬಂಧಕ್ಕೆ ಲಭಿಸಿದೆ. ಗೌರಮ್ಮರವರ ಪುತ್ರ ಬಿ.ಜಿ.ವಸಂತ ಅವರು ಕೊಡಗಿನ ಮಹಿ ಲೇಖಕಿಯರು ಪ್ರಕಟಿಸಿದ ಉತ್ತಮ ಕೃತಿಗೆ ಪ್ರಶಸ್ತಿ ನೀಡಿಗೌರವಿಸುವ ಸಲುವಾಗಿ ಈ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ....
Loading posts...

All posts loaded

No more posts

error: Content is protected !!