ಕುಕ್ಕೆ ಸುಬ್ರಹ್ಮಣ್ಯ : ದೇವಸ್ಥಾನದ ಆಡಳಿತಕ್ಕೊಳಪಟ್ಟ ಪ್ರೌಢಶಾಲೆ ಹಾಗೂ ಕಾಲೇಜುಗಳ ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ ಎಂಟು ತಿಂಗಳುಗಳಿಂದ ಪಾವತಿಯಾಗದ ವೇತನ ; ವೇತನ ಪಾವತಿಸುವಂತೆ ಆಗ್ರಹಿಸಿ ಶಿಕ್ಷಣ ಸಂಸ್ಥೆಯ ಮುಂದೆ ಮೌನ ಪ್ರತಿಭಟನೆ ; ಮನವಿ ಸ್ವೀಕರಿಸಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳು

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟಿರುವಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜಿನ ಬೋಧಕ ಹಾಗೂ ಬೋಧಕೇತರಸಿಬ್ಬಂದಿಗಳಿಗೆ ಕಳೆದ ಎಂಟು ತಿಂಗಳಿನಿಂದ ಬಾಕಿಯಾದವೇತನ ಪಾವತಿಸುವಂತೆ ಆಗ್ರಹಿಸಿ ಪೋಷಕ ವರ್ಗ ಮತ್ತು ಕಾಲೇಜು ಅಭಿಮಾನಿಗಳಿಂದ ಮೌನ ಪ್ರತಿಭಟನೆ ನಡೆಯಿತು.ಪ್ರತಿಭಟನೆಯ ಉದ್ದೇಶ : “ವೇತನ ನೀಡದಿರುವುದು ಮತ್ತು ಇದರ ಬಗ್ಗೆ ಪದೇ ಪದೆ ಪ್ರಯತ್ನ ಪಟ್ಟರೂ ಸಿಬ್ಬಂದಿಗಳಿಗೆ...

ಸುಬ್ರಹ್ಮಣ್ಯ ಹಾಗೂ ಗುತ್ತಿಗಾರು ವಿದ್ಯುತ್ ಉಪಕೇಂದ್ರದ ಈ ಭಾಗಗಳಲ್ಲಿ ನಾಳೆ(ಫೆ.12) ವಿದ್ಯುತ್ ವ್ಯತ್ಯಯ

ನಾಳೆ ಫೆ.12 ಗುರುವಾರದಂದು ಬೆಳ್ಳಾರೆ-ಗುತ್ತಿಗಾರು-ಸುಬ್ರಹ್ಮಣ್ಯ 33ಕೆವಿ ಮಾರ್ಗ ಹಾಗೂ 33/11 ಕೆವಿ ಗುತ್ತಿಗಾರು ಮತ್ತು ಸುಬ್ರಹ್ಮಣ್ಯ ವಿದ್ಯುತ್ ಉಪಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಪೂರ್ವಾಹ್ನ 10:00 ಗಂಟೆಯಿಂದ ಸಾಯಂಕಾಲ 3:00 ಗಂಟೆಯವರೆಗೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದ್ದು, ಸುಬ್ರಹ್ಮಣ್ಯ ಉಪಕೇಂದ್ರದಿಂದ ಹೊರಡುವ ಹರಿಹರ ಪಳ್ಳತ್ತಡ್ಕ, ನಡುಗಲ್ಲು, ಕುಮಾರಧಾರ, ಆದಿಶೇಷ, ಕೈಕಂಬ ಮತ್ತು...
Ad Widget

ಲೇಖನ : ಬದುಕಿನಲ್ಲಿ ಗಳಿಸಿದ್ದು-ಉಳಿಸಿದ್ದು ; ✍️ಉಲ್ಲಾಸ್ ಕಜ್ಜೋಡಿ

“ನಾವು ಇನ್ನೊಬ್ಬರ ಮನಸ್ಸು ಅಥವಾ ಹೃದಯವನ್ನು ಪ್ರೀತಿ ಹಾಗೂ ಗೌರವದಿಂದ ಗೆಲ್ಲಬಹುದೇ ವಿನಃ ಸಿಟ್ಟು ಅಥವಾ ಕೋಪದಿಂದ ಎಂದಿಗೂ ಗೆಲ್ಲಲು ಸಾಧ್ಯವಿಲ್ಲ” ಎಂಬುವುದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಆದರೂ ಕೂಡ ನಾವು ಕೆಲವೊಂದು ಸಂದರ್ಭಗಳಲ್ಲಿ ನಮ್ಮ ಕೆಲಸದ ಒತ್ತಡಗಳಿಂದಲೋ ಅಥವಾ ಬದುಕಿನ ಸಮಸ್ಯೆಗಳಿಂದಲೋ ನಮ್ಮೊಳಗೆ ಹುಟ್ಟುವ ಈ ಸಿಟ್ಟು ಅಥವಾ ಕೋಪವನ್ನು ಇತರರ ಮೇಲೆ ತೋರಿಸಿಬಿಡುತ್ತೇವೆ.ಯಾವುದೋ...

ಮಡಪ್ಪಾಡಿ : ಪುಷ್ಪಾವತಿ ತಳೂರು ನಿಧನ

ಮಡಪ್ಪಾಡಿ ಗ್ರಾಮದ ತಳೂರು ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧರ್ಮಪಾಲ ರವರ ಧರ್ಮ ಪತ್ನಿ ಶ್ರೀಮತಿ ಪುಷ್ಪಾವತಿ ಯವರು ಅಲ್ಪಕಾಲದ ಅಸೌಖ್ಯದಿಂದ ಫೆ.11 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರರಾದ ಹರ್ಷಿತ್, ದೀಕ್ಷಿತ್, ಪುತ್ರಿ ದೀಕ್ಷಾ ಹಾಗೂ ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.

ಬೊಳ್ಳಾಜೆ : ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ ಕೊಡುಗೆ

ಶ್ರೀ ಶಾಸ್ತಾವು ಯುವಕ ಮಂಡಲ ರೆಂಜಾಳ ಮರ್ಕಂಜ ಇದರ ವತಿಯಿಂದ ಬೊಳ್ಳಾಜೆ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಉಚಿತ ಸಮವಸ್ತ್ರವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ರಾಜೇಶ್ ಬೇರಿಕೆ ಹಾಗೂ ಪದ್ಮನಾಭ ನಿಡ್ಯಮಲೆ, ಸಂಜಿತ್ ಹೈದಂಗೂರ್,  ಶಾಲಾ ಶಿಕ್ಷಕಿ ಮತ್ತು ಸಹಾಯಕಿ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.  ಶಾಲಾ ಶಿಕ್ಷಕಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಮೊಗರ್ಪಣೆ : ಕಾರು ಹಾಗೂ ಲಾರಿ ಅಪಘಾತ

ಮೊಗರ್ಪಣೆ ಮಸೀದಿ ಎದುರು ಕಾರು ಹಾಗೂ ಲಾರಿ ಮಧ್ಯೆ ಇದೀಗ ಅಪಘಾತ ನಡೆದಿದೆ. ಕೆಲ ಹೊತ್ತು ರಸ್ತೆ  ಬ್ಲಾಕ್ ಆಗಿದ್ದು, ಪೋಲೀಸರು ಸ್ಥಳಕ್ಕೆ ಆಗಮಿಸಿ ತೆರವುಗೊಳಿಸಿದರು. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ.

ಶಿವರಾತ್ರಿಯಂದು “ಆಸರೆ ಉಳಿತಾಯ ಯೋಜನೆ”ಯ ಮೊದಲ ಉಚಿತ ಡ್ರಾ – ಇಂದೇ ತಮ್ಮ ಹೆಸರು ನೋಂದಾಯಿಸಿ

ಆಸರೆ ಇಲೆಕ್ಟ್ರಾನಿಕ್ಸ್ ಮತ್ತು ಹೋಂ ಅಪ್ಲಯನ್ಸ್ಸ್ ಗುತ್ತಿಗಾರು ಇಲ್ಲಿ ಪ್ರತೀ ವಾರಕ್ಕೆ ರೂ.200/- ರ ಪಾವತಿಯ ಹೊಸ "ಆಸರೆ ಉಳಿತಾಯ ಯೋಜನೆ" ಪ್ರಾರಂಭವಾಗಿದ್ದು, ಇದರ ಮೊದಲ ಉಚಿತ ಡ್ರಾ ಶಿವರಾತ್ರಿಯ ದಿನ‌ ನಡೆಯಲಿದೆ. ಬಹುಪಯೋಗಿ ಮೌಲ್ಯಯುತವಾದ ವಸ್ತುಗಳನ್ನು ಪ್ರತೀ ವಾರ ಗೆಲ್ಲುವ ಅವಕಾಶವಾಗಿದ್ದು, ಆಸಕ್ತರು ಈ ಕೂಡಲೇ ತಮ್ಮ ವಿಳಾಸದೊಂದಿಗೆ ಈ ನಂಬರ್‌ಗೆ 7975652508 ಸಂಪರ್ಕಿಸಿ...

ದೇವಚಳ್ಳ : ಗ್ರಾ.ಪಂ.ವತಿಯಿಂದ ದೇವ ಗೆಳೆಯರ ಬಳಗಕ್ಕೆ ಸನ್ಮಾನ

ದೇವಚಳ್ಳ ಗ್ರಾಮ ಪಂಚಾಯತ್ ವತಿಯಿಂದ ಫೆ.10 ರಂದು ನಡೆದ ಗ್ರಾಮ ಸಭೆಯಲ್ಲಿ ದೇವ ಗೆಳೆಯರ ಬಳಗವನ್ನು ಗುರುಸಿಸಿ ಸನ್ಮಾನಿಸಿದರು.  ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರ ಹಮ್ಮಿಕೊಳ್ಳುತ್ತಿರುವುದನ್ನು ಗುರುತಿಸಿ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಗೆಳೆಯರ ಬಳಗದ ಪದಾಧಿಕಾರಿಗಳನ್ನು ಗೌರವಿಸಿದರು.  ಈ ಸಂದರ್ಭದಲ್ಲಿ ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ರಮೇಶ್ ಪಡ್ಪು, ಅಧ್ಯಕ್ಷ ಮುಕುಂದ ಹಿರಿಯಡ್ಕ, ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು...

ದೇವಚಳ್ಳ : ಕೊನೆಯ ಗ್ರಾಮಸಭೆ – ಬ್ಯಾನರ್ ವಿಚಾರದಲ್ಲಿ ಚರ್ಚೆ – ಗ್ರಾಮದ ಅಭಿವೃದ್ದಿಯಲ್ಲಿ ಸಹಕರಿಸಿದವರಿಗೆ ಗೌರವ- ಗ್ರಾಮಸ್ಥರಿಂದ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಅವರಿಗೆ ಸನ್ಮಾನ

ದೇವಚಳ್ಳ ಗ್ರಾಮ ಪಂಚಾಯತ್ ನ 2025-26 ನೇ ಸಾಲಿನ 2 ನೇ ಹಂತದ ಗ್ರಾಮಸಭೆ ಹಾಗೂ ಪಂಚಾಯತ್ ನ ಈಗಿನ ಆಡಳಿತ ಮಂಡಳಿಯ ಕೊನೆಯ ಗ್ರಾಮಸಭೆ ಫೆ.10 ರಂದು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ವಹಿಸಿದ್ದರು. ರಸ್ತೆ ಸಮಸ್ಯೆ - ಬ್ಯಾನರ್ ತೆಗೆದ ಬಗ್ಗೆ ಗ್ರಾಮಸ್ಥರಿಂದ ಚರ್ಚೆ ವಾಲ್ತಾಜೆಯಲ್ಲಿ ರಸ್ತೆ...

ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ:11-02-2026 ಬುಧವಾರ 01,🐏ಮೇಷ ರಾಶಿ🐏📖,ದೂರದ ಪ್ರದೇಶದಲ್ಲಿರುವ ಆತ್ಮೀಯ ಸ್ನೇಹಿತರಿಂದ ಅಮೂಲ್ಯ ಮಾಹಿತಿ ದೊರೆಯುತ್ತದೆ. ಮನೆಯ ಹೊರಗೆ ನಿಮ್ಮ ಮಾತಿಗೆ ಮೌಲ್ಯ ಹೆಚ್ಚಾಗುತ್ತದೆ. ಮೌಲ್ಯದ ವಸ್ತು ಮತ್ತು ವಾಹನಗಳನ್ನು ಖರೀದಿಸಲಾಗುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು,ಪರಿಹಾರ:- ಕುಲ ದೇವರ ಸ್ಮರಣೆ ಮಾಡಿ,02,🐂ವೃಷಭ ರಾಶಿ🐂📖,ಮಿತ್ರರ ಸಹಕಾರದಿಂದ ಕೆಲವು ಕಾರ್ಯಗಳು ಪೂರ್ಣಗೊಳ್ಳುತ್ತದೆ. ಇತರರ ವ್ಯವಹಾರಗಳಿಂದ ದೂರವಿರುವುದು ಉತ್ತಮ. ಸಾಲದ...
Loading posts...

All posts loaded

No more posts

error: Content is protected !!