ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಗ್ ವಿಭಾಗದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಮತ್ತು ಪ್ರೆಶರ್‍ಸ್‌ಡೇ ಆಚರಣೆ

ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಫ್ರೆಶರ್ಸ್ ಡೇ ಸ್ಪರ್ಶ ಕಾರ್ಯಕ್ರಮವು ಡಿ.೦೮ರಂದು ಕಾಲೇಜಿನ ಸಭಾಭವನದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಮರ್ಚಂಟ್ ನೇವಿಯ ನಿವೄತ್ತ ಮುಖ್ಯ ಇಂಜಿನಿಯರ್ ದೇರಾಜೆ ಮೋನಪ್ಪ ಗೌಡರವರು ಆಗಮಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಾದ ನೀವು ಜೀವನದಲ್ಲಿ ಒಂದು ಮುಖ್ಯ...

ಪರಪ್ಪೆ ಬಳಿ ಕಾರು ಅಪಘಾತ – ತಾಯಿ,ಮಗು ಮೃತ್ಯು

ಜಾಲ್ಸೂರು ಕಾಸರಗೋಡು ರಸ್ತೆಯ ಪರಪ್ಪೆ ಬಳಿ ಮದುವೆ ದಿಬ್ಬಣದ ಇನೋವಾ ಕಾರು ಸ್ಕಿಡ್ ಆಗಿ ಪಲ್ಟಿ ಹೊಡೆದ ಪರಿಣಾಮವಾಗಿ ಸುಳ್ಯ ಮೂಲದ ತಾಯಿ ಮತ್ತು ಮಗುಮೃತಪಟ್ಟು ನಾಲ್ವರು ತೀವ್ರ ಜಖಂಗೊಂಡ ಘಟನೆ ಡಿ12 ರಂದು ಸಂಜೆ ನಡೆದಿದೆ. ಸುಳ್ಯದ ನಾವೂರು ಬೋರುಗುಡ್ಡೆ ನಿವಾಸಿ ಅಬ್ದುಲ್ಲಾ ಎಂಬವರ ಪುತ್ರಿ, ಪರಪ್ಪೆಯ ಶಾನ್ ಎಂಬವರ ಪತ್ನಿ ೨೮ ವರ್ಷದ...
Ad Widget

ಎಚ್ ಭೀಮರಾವ್ ವಾಷ್ಠರ್ ರವರ ಮ್ಯೂಸಿಕ್ ಆಲ್ಬಮ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ

ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಧಾರವಾಡ ಇದರ ವತಿಯಿಂದ ಆಯೋಜಿಸಿದ ಉತ್ತರ ಕರ್ನಾಟಕ ಅಂತಾರಾಷ್ಟ್ರೀಯ ಕಿರು ಚಿತ್ರೋತ್ಸವ -2022 ಕ್ಕೆ ಸುಳ್ಯದ ಸಾಹಿತಿ ಮತ್ತು ಜ್ಯೋತಿಷಿ ಎಚ್ .ಭೀಮರಾವ್ ವಾಷ್ಠರ್ ರವರು ಸಾಹಿತ್ಯ ಬರೆದು ಹಾಡಿರುವ ನಾಗರಹಾಳ ಗುರುಬಾಬಾ ಭಕ್ತಿಗೀತೆಯು ಮ್ಯೂಸಿಕ್ ಆಲ್ಬಮ್ ಸ್ಪರ್ಧೆಗೆ ಆಯ್ಕೆ ಆಗಿದೆ. ಇದೇ ಡಿಸೇಂಬರ್ 15 ರಿಂದ 17...

ಎನ್ನೆಂಸಿ: ವ್ಯವಹಾರ ಆಡಳಿತ ವಿಭಾಗದಿಂದ ದೀಕ್ಷಾ ಟ್ರೇಡರ್ಸ್ ಗೆ ಭೇಟಿ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ವತಿಯಿಂದ ಪ್ರಥಮ ಬಿಬಿಎ ವಿದ್ಯಾರ್ಥಿಗಳಿಗೆ ಸುಳ್ಯದ ಜಟ್ಟಿಪಳ್ಳದಲ್ಲಿರುವ ದೀಕ್ಷಾ ಟ್ರೇಡರ್ಸ್ ಗೆ ವ್ಯವಹಾರ ಭೇಟಿ ಕಾರ್ಯಕ್ರಮವನ್ನು ಡಿಸೆಂಬರ್ 08 ರಂದು ಆಯೋಜಿಸಲಾಗಿತ್ತು. ದೀಕ್ಷಾ ಟ್ರೇಡರ್ಸ್ ನ ಮಾಲಕರಾದ ಮಾಧವ ರಾವ್ ವಿದ್ಯಾರ್ಥಿಗಳೊಂದಿಗೆ ತಮ್ಮ‌ ಸುದೀರ್ಘ ಕಾಲದ ವ್ಯವಹಾರ ಜ್ಞಾನವನ್ನು ಹಂಚಿಕೊಂಡರು. ವ್ಯವಹಾರದಲ್ಲಿ ಇರಬೇಕಾದ ಜಾಣ್ಮೆ, ವ್ಯವಹಾರದ...

ಅರಂತೋಡು : ಉಚಿತ ಅರೋಗ್ಯ ತಪಾಸಣೆ ಮತ್ತು ಕನ್ನಡಕ ವಿತರಣೆ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕೆ. ವಿ. ಜಿ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ಸಹಯೋಗದಲ್ಲಿ ಪ್ರಾಥಮಿಕ ಶಾಲೆ ಅರಂತೋಡಿನ ಲ್ಲಿ ಉಚಿತ ಅರೋಗ್ಯ ತಪಾಸಣೆ ಮತ್ತು ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಿತು. ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಆಡಳಿತ ಮುಕ್ತೇಸರರಾದ ಕಿಶೋರ್ ಕುಮಾರ್ ಉಳುವಾರು ದೀಪ ಬೆಳಗಿಸಿ ಉದ್ಘಾಟನೆ ಮಾಡಿ...

ಸುಳ್ಯ: ಪ್ರೇಯಸಿಯ ಜೊತೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ವಿವಾಹಿತ ಯುವಕ – ಪತ್ನಿ ಬರುವಾಗ ಎಸ್ಕೇಪ್ ಆಗಲು ಯತ್ನ

ಮಂಗಳೂರು ಮೂಲದ ವಿವಾಹಿತ ಯುವಕನೋರ್ವ ಪ್ರೇಯಸಿಯೊಂದಿಗೆ ಸುಳ್ಯದ ಗಾಂಧಿನಗರದ ಲಾಡ್ಜ್ ಒಂದರಲ್ಲಿ ಬಂದು ತಂಗಿದ್ದಾರೆಂದು ತಿಳಿದ ಯುವಕನ ಪತ್ನಿ ಡಿ.೧೧ರಂದು ಸಂಜೆ ಸುಳ್ಯಕ್ಕೆ ಬಂದು ಅವರು ತಂಗಿದ್ದ ಲಾಡ್ಜ್ ಬಳಿ ಬಂದು ಬೀದಿರಂಪ ಮಾಡಿದ ಘಟನೆ ವರದಿಯಾಗಿದೆ. ಲಾಡ್ಜ್ ನಲ್ಲಿದ್ದ ಯುವತಿಯ ಜತೆಗಿದ್ದ ವಿವಾಹಿತ ಯುವಕ ತನ್ನ ಪತ್ನಿ ಲಾಡ್ಜ್‌ನ ರಿಸೆಪ್ಶನ್ ಬಳಿಗೆ ಬಂದು ನಿಂತಿರುವ...

ಬೆಳ್ಳಾರೆ ಕೆಪಿಎಸ್ ಶಾಲಾ ಮುಖ್ಯೋಪಾಧ್ಯಾಯ
ಮಾಯಿಲಪ್ಪರಿಗೆ ‘ಅಕ್ಷರ ಸಿರಿ ರಾಜ್ಯ ಪ್ರಶಸ್ತಿ’

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಕೊಡಮಾಡುವ `ಅಕ್ಷರ ಸಿರಿ’ ರಾಜ್ಯ ಮಟ್ಟದ ಪ್ರಶಸ್ತಿಗೆ ಬೆಳ್ಳಾರೆ ಕೆ.ಪಿ.ಎಸ್. ಶಾಲಾ ಮುಖ್ಯೋಪಾಧ್ಯಾಯರಾದ ಮಾಯಿಲಪ್ಪರವರು ಭಾಜನರಾಗಿದ್ದು, ನ.೩೦ರಂದು ತುಮಕೂರಿನ ತಿಪಟೂರಿನಲ್ಲಿ ನಡೆದ ರಾಜ್ಯಮಟ್ಟದ ಶಿಕ್ಷಕರ ಸಮಾವೇಶದಲ್ಲಿ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಪ್ರಶಸ್ತಿ ಪ್ರದಾನಗೈದರು.ಮಾಯಿಲಪ್ಪರು ೨೦೨೨ನೇ ಸಾಲಿನ ದ.ಕ. ಜಿಲ್ಲಾ ಶಿಕ್ಷಕ ಪ್ರಶಸ್ತಿ ಪಡೆದಿದ್ದರಲ್ಲದೆ, ಹಲವು ಸಂಘ ಸಂಸ್ಥೆಗಳು...

ಅಡ್ಕಾರು ಕುಟುಂಬದ ಧರ್ಮನಡಾವಳಿ ನೇಮೋತ್ಸವ

ಅಡ್ಕಾರು ಕುಟುಂಬದ ಶ್ರೀ ವಿಷ್ಣುಮೂರ್ತಿ ದೈವ, ಧರ್ಮದೈವ ಶ್ರೀ ರುದ್ರಚಾಮುಂಡಿ, ಶ್ರೀ ಮುನಿ ಸ್ವಾಮಿ ಹಾಗೂ ಪರಿವಾರ ದೈವಗಳ ಧರ್ಮನಡಾವಳಿ ನೇಮೋತ್ಸವವು ಡಿ.10 ಮತ್ತು 11 ರಂದು ಅಡ್ಕಾರು ತರವಾಡು ಮನೆಯಲ್ಲಿ ನಡೆಯಿತು.ಡಿ.10 ರಂದು ಬೆಳಿಗ್ಗೆ ಗಣಪತಿ ಹೋಮ, ಶ್ರೀ ವೆಂಕಟರಮಣ ದೇವರ ಹರಿಸೇವೆ, ಮದ್ಯಾಹ್ನ ಅನ್ನಪ್ರಸಾದ, ಸಂಜೆ ಶ್ರೀ ದೈವಗಳ ಭಂಡಾರ ತೆಗೆಯುವುದು, ರಾತ್ರಿ...

ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಮಂಡಲ ಸಾಂಘಿಕ್

2025 ರ ವೇಳೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಾರಂಭವಾಗಿ 100 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಅದರ ಅಂಗವಾಗಿ ಪ್ರತಿ ಮಂಡಲಗಳಲ್ಲಿ ಸಾಂಘಿಕ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಗುತ್ತಿಗಾರು ಮಂಡಲದ ವತಿಯಿಂದ ಸಾಂಘಿಕ್ ಕಾರ್ಯಕ್ರಮ ಡಿ.10 ರಂದು ನಡೆಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾದ ನಂದೀಶ್ ಚಾಮರಾಜನಗರ ಮಾತನಾಡಿ...

ಎಸ್. ಜೆ. ಎಂ. ರಾಜ್ಯ ಮಟ್ಟದ ಪ್ರತಿಭಾ ಸಂಗಮದಲ್ಲಿ ಪ್ರಥಮ ಸ್ಥಾನ ಪಡೆದ ತಮೀಮ್ ಸುಳ್ಯ ರವರಿಗೆ ಟಿ. ಬಿ. ಕುಟುಂಬದಿಂದ ಸನ್ಮಾನ

ಎಸ್. ಜೆ. ಎಂ. ರಾಜ್ಯ ಮಟ್ಟದ ಪ್ರತಿಭಾ ಸಂಗಮದಲ್ಲಿ ಮಲಯಾಳಂ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಮೀಮ್ ಸುಳ್ಯ ರವರಿಗೆ ಟಿ.ಬಿ. ಕುಟುಂಬದಿಂದ ದಿನಾಂಕ 11.10.2022 ರಂದು ದೊಡ್ಡಡ್ಕ ನಿವಾಸದಲ್ಲಿ ಸನ್ಮಾನ ಮಾಡಲಾಯಿತು ಮತ್ತು ಉಡುಗೊರೆಯಾಗಿ ಸೈಕಲ್ ನೀಡಲಾಯಿತು. ಕುಟುಂಬ ಸದಸ್ಯರಾದ ಟಿ. ಬಿ. ಅಬ್ದುಲ್ಲಾ, ಡಿ. ಎಂ. ಮುಹಮ್ಮದ್ ದರ್ಖಾಸ್, ಅಬ್ದುರ್ರಹ್ಮಾನ್ ದೊಡ್ಡಡ್ಕ,...
Loading posts...

All posts loaded

No more posts

error: Content is protected !!