ವಿನ್ಯಾಸ್ ಜಾಕೆ ಮಿಮಿಕ್ರಿ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಸರಕಾರಿ ಪದವಿಪೂರ್ವ ಕಾಲೇಜು ಸುಳ್ಯ ಇಲ್ಲಿ ಡಿಸೆಂಬರ್ 13ರಂದು ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಮಿಮಿಕ್ರಿ ಸ್ಪರ್ಧೆಯಲ್ಲಿ ಎಣ್ಮೂರು ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿ ವಿನ್ಯಾಸ್ ಜಾಕೆ ಪ್ರಥಮ ಸ್ಥಾನ ಪಡೆದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.ಇವರು ಸುವರ್ಣ ಜಾಕೆ ಮತ್ತು ಶ್ರೀಮತಿ ಸುಹಾಸಿನಿ ಜಾಕೆ ದಂಪತಿಗಳ ಸುಪುತ್ರ.

ಡಿ.19 ರಂದು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆ ಪ್ರತಿಭಟನೆಗೆ ನಿರ್ಧಾರ

ಹಲವು ಬಾರಿ ಇಲಾಖೆಗಳಿಗೆ ಮನವಿ ಮಾಡಿದರು ಬಡ ದಲಿತರ ಯಾವುದೇ ಕೆಲಸ ಕಾನೂನು ಬದ್ಧವಾಗಿ ಆಗುತ್ತಿಲ್ಲ. ಎಲ್ಲಾ ಕಡೆಯಲ್ಲೂ ದಲಿತರಿಗೆ ಒಂದು ಕಾನೂನು ಮೇಲ್ವರ್ಗದವರಿಗೆ ಒಂದು ಕಾನೂನು ಎನ್ನುವ ರೀತಿಯಲ್ಲಿ ಸರಕಾರಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಡಿ.19 ರಂದು ಬೇಡಿಕೆ ಈಡೇರಿಕೆಗಾಗಿ ಮನವಿಗೆ ಸ್ಪಂದನೆ ನೀಡದ ಇಲಾಖೆಗಳ ವಿರುದ್ಧ ತಾಲೂಕು ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ...
Ad Widget

ಸ್ವಪ್ನ ನೇಲ್ಯಡ್ಕ ಭಾವಗೀತೆ ಗಾಯನ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ನಡೆದ ವಸತಿ ಶಾಲೆಗಳ ವಿಭಾಗೀಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ, ಉಪ್ಪಿನಂಗಡಿಯ ಡಾ. ಬಿ. ಆರ್ ಅಂಬೇಡ್ಕರ್ ವಸತಿ ಶಾಲೆಯ ಸ್ವಪ್ನ ನೇಲ್ಯಡ್ಕ ಭಾವಗೀತೆ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ...

ಚುಟುಕು ಸಾಹಿತ್ಯ ಪರಿಷತ್ತು ಸುಳ್ಯ ಘಟಕಕ್ಕೆ ಚಾಲನೆ, ಪುಸ್ತಕ ಹಸ್ತಾಂತರ, ಮಕ್ಕಳ ಸಾಹಿತ್ಯಗೋಷ್ಠಿ

ಸುಳ್ಯ: ಚುಟುಕು ಸಾಹಿತ್ಯ ಪರಿಷತ್ತು ಸುಳ್ಯ ಇದರ ನೂತನ ಘಟಕಕ್ಕೆ ಚಾಲನೆ, ಶಾಲಾ ಗ್ರಂಥಾಲಯಕ್ಕೆ ಪುಸ್ತಕ ಹಸ್ತಾಂತರ ಹಾಗೂ ಮಕ್ಕಳ ಸಾಹಿತ್ಯಗೋಷ್ಠಿಯು ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಚು.ಸಾ.ಪ ಇದರ ದ‌‌.ಕ ಜಿಲ್ಲಾಧ್ಯಕ್ಷರಾದ ಹರೀಶ್ ಸುಲಾಯ ಒಡ್ಡಂಬೆಟ್ಟು ಇವರ ನಿರ್ದೇಶನದಂತೆ ಸುಳ್ಯ ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ಹಿರಿಯ ಸಾಹಿತಿ ಎಂ.ಜಿ ಕಾವೇರಮ್ಮ, ನೂತನ ಅಧ್ಯಕ್ಷರಾಗಿ...

ಗೆಲುವಿನ ದಿಕ್ಕು

ಬದುಕಿನಲ್ಲಿ ದಿಕ್ಕು ತೋಚದಾದರೂ ಗೆಲುವಿನ ದಿಕ್ಕನ್ನು ತಾಳ್ಮೆಯಿಂದ ಹುಡುಕಿ ಸಾಗಿದಾಗ ನೀ ಹುಡುಕಿದ ಗೆಲುವಿನ ಹಾದಿಯ ದಿಕ್ಕು ಎದುರಾಗುವುದು, ಬದುಕಿನಲ್ಲಿ ನೀ ಹುಡುಕಿದ ಗೆಲುವಿನ ಹಾದಿಯ ದಿಕ್ಕು ಎದುರಾಗುವುದು…ಗೆಲುವಿನ ಹಾದಿಯಲ್ಲಿ ಸೋತಾಗ ಕುಗ್ಗದೇ, ಬಿದ್ದರೂ ಮತ್ತೆದ್ದು ಮುನ್ನಡೆದಾಗ, ಬದುಕಿನ ಜಿದ್ದಾಜಿದ್ದಿನ ಓಟದಲ್ಲಿ ಕಷ್ಟದಿಂದಲೇ ಮೇಲೆದ್ದು ನಿಲ್ಲುವ ಛಲವನ್ನು ತೋರಿದಾಗ ನೀ ಕಂಡ ಕನಸು ನನಸಾಗುವುದು, ಬದುಕಿನಲ್ಲಿ...

ಡಿಸೆಂಬರ್ 26 ರಂದು ಸುಳ್ಯದಲ್ಲಿ ಬೃಹತ್ ರಕ್ತದಾನ ಶಿಬಿರ

ಆವಿದ್ರಾವಿಡ ಯುವ ವೇದಿಕೆ, ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ಸುಳ್ಯ, ಭಾರತೀಯ ರೆಡ್ ಕ್ರಾಸ್‌ ಸಂಸ್ಥೆ ಆಶ್ರಯದಲ್ಲಿ ಭಾರತೀಯ ರೆಡ್‌ಕ್ರಾಸ್ ರಕ್ತ ನಿಧಿ ಶಾಖೆ, ಸರಕಾರಿ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಬಾಬಾ ಸಾಹೇಬ ಅಂಬೇಡ್ಕರ್‌ರವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಮತ್ತು ಸುಳ್ಯದ ಅಮರ ಶಿಲ್ಪ ಡಾ. ಕುರುಂಜಿ ದಿ. ವೆಂಕಟ್ರಮಣ ಗೌಡರ...

ಸುಳ್ಯ ಎನ್ನೆoಪಿಯುಸಿಯಲ್ಲಿ ವಾರ್ಷಿಕ ಕ್ರೀಡಾಕೂಟ

ಶಿಸ್ತು, ಆರೋಗ್ಯ ವರ್ಧನೆಗೆ ಕ್ರೀಡೆ ಸಹಕಾರಿ.ಕ್ರೀಡಾ ಸ್ಫೂರ್ತಿಯಿಂದ ಭಾಗವಹಿಸುವುದು ಬಹಳ ಮುಖ್ಯ, ಎಲ್ಲರೂ ಕ್ರೀಡಾ ಚಟುವಟಿಕೆಯಲ್ಲಿ ಉತ್ತಮ ರೀತಿಯಲ್ಲಿ ತೊಡಗಿಸಿಕೊಳ್ಳಿ ಎಂದು ಎ ಓ ಎಲ್ ಇ (ರಿ )ಸುಳ್ಯ ಇದರ ಅಧ್ಯಕ್ಷರಾದ ಡಾ ಕೆ ವಿ ಚಿದಾನಂದ ಅವರು ಹೇಳಿದರು. ಅವರು ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ...

ನಾಳೆ (ಡಿ.14)ದುಗ್ಗಲಡ್ಕದಲ್ಲಿ ನಮ್ಮ ಕ್ಲಿನಿಕ್ ಉದ್ಘಾಟನೆ – ಉಚಿತವಾಗಿ 12 ಸೇವೆಗಳು ಲಭ್ಯ

ಆರೋಗ್ಯ ಸೇವೆಯನ್ನು ಇನ್ನಷ್ಟೂ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರಕಾರ ನೂತನ ಯೋಜನೆಯಾದ ನಮ್ಮ ಕ್ಲಿನಿಕ್ ಅನ್ನು ರಾಜ್ಯದ ವಿವಿಧೆಡೆ ಆರಂಭಿಸಲಿದೆ. ಈ ಯೋಜನೆಯ ಮುಖಾಂತರ ದುಗ್ಗಲಡ್ಕದಲ್ಲಿ ಕೂಡ ನಮ್ಮ ಕ್ಲಿನಿಕ್ ಡಿ. 14 ರಂದು ಉದ್ಘಾಟನೆಗೊಳ್ಳಲಿದೆ. ಉದ್ಘಾಟನೆಯನ್ನು ಮೀನುಗಾರಿಕೆ ಬಂದರು ಮತ್ತು ಒಳನಾಡು ಬಲಸಾರಿಗೆ ಸಚಿವ ಎಸ್. ಅಂಗಾರ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ನ.ಪಂ.ಅಧ್ಯಕ್ಷ ವಿನಯಕುಮಾರ ಕಂದಡ್ಕ,...

ಕಂದಾಯ ಅಧಿಕಾರಿಗಳ ದಾಳಿ – ಕೆಂಪು ಕಲ್ಲು ಸಹಿತ ಲಾರಿ ವಶ

ಅಜ್ಜಾವರ ಗ್ರಾಮದಲ್ಲಿ ಅಕ್ರಮವಾಗಿ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸ್ಥಳಗಳಿಗೆ ದೂರಿನ ಮೇರೆಗೆ ಲೋಕಾಯುಕ್ತ ದಾಳಿಯಾಗಿತ್ತು. ಮುಂದುವರಿದ ಭಾಗವಾಗಿ ಡಿ.13 ರಂದು ಬೆಳ್ಳಂಬೆಳಗ್ಗೆ ಕೇರಳ ಗಡಿಭಾಗದಿಂದ ಮಂಡೆಕೋಲು ಗಡಿಯನ್ನು ದಾಟಿ ಕೆಂಪು ಕಲ್ಲು ಸಾಗಾಟ ಮಾಡುವ ಮಾಹಿತಿ ಪಡೆದ ಕಂದಾಯ ಇಲಾಖೆಯ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಯು ಲಾರಿಯನ್ನು ತಡೆದು ಅಂತರಾಜ್ಯದಿಂದ ಸಾಗಾಟ ಮಾಡುತ್ತಿರು ಲಾರಿಗಳನ್ನು...

ಎನ್‌ಎಮ್‌ಸಿ ಕೌಶಲ್ಯ ನೋಂದಣಿ ಮಾರ್ಗದರ್ಶನ ಮತ್ತು ಮೃದು ಕೌಶಲ್ಯ ತರಬೇತಿ ಸಮಾರೋಪ ಸಮಾರಂಭ

ನೆಹರು ಮೆಮೋರಿಯಲ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಕೌಶಲ್ಯ ನೋಂದಣಿ ಕಾರ್‍ಯಗಾರವನ್ನು, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ವತಿಯಿಂದ ಜಿಲ್ಲಾ ಸಂಯೋಜಕರಾದ ರೋಹಿತ್ ಅವರ ಮಾರ್ಗದರ್ಶನದಲ್ಲಿ ಡಿ.೧೦.ರಂದು ನಡೆಯಿತು. ಈ ಕಾರ್ಯಾಗಾರದಲ್ಲಿ ಕೌಶಲ್ಯ ನೋಂದಣಿಯ ಮಹತ್ವವನ್ನು ವಿವರಿಸಲಾಯಿತು. ಕಾಲೇಜಿನ ವೃತ್ತಿ ನಿಯೋಜನಾ ಕೋಶದ ಅಧಿಕಾರಿ ಡಾ. ವಿಜಯಲಕ್ಷ್ಮಿ ಎನ್.ಎಸ್ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದರು. ಪದಾಧಿಕಾರಿಗಳಾದ...
Loading posts...

All posts loaded

No more posts

error: Content is protected !!