ಅಡ್ಕಾರ್ ಸ್ಟೋರ್ ಮಾಲಕರಿಂದ ತಂದೆಯ ಪುಣ್ಯಸ್ಮರಣೆ ಪ್ರಯುಕ್ತ ಆಂಬುಲೆನ್ಸ್ ಸೇವಾ ಯೋಜನೆಗೆ ಸಹಾಯಧನ ವಿತರಣೆ

ನೆಲ್ಲೂರು ಕೆಮ್ರಾಜೆ ಗ್ರಾಮದ ಬೆಟ್ಟ ಎಂಬಲ್ಲಿ ಜಿನಸು ಅಂಗಡಿ ವ್ಯಾಪಾರ ನಡೆಸುತ್ತಿರುವ ಜಾಲ್ಸೂರು ಗ್ರಾಮದ ಸತೀಶ್ ಅಡ್ಕಾರ್ ರವರು ತನ್ನ ತಂದೆ ಅಡ್ಕಾರ್ ದಿ.ಕೃಷ್ಣಪ್ಪ ಗೌಡ ಅವರ ಪುಣ್ಯಸ್ಮರಣೆ ಪ್ರಯುಕ್ತ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಗುತ್ತಿಗಾರು ವತಿಯಿಂದ ನಡೆಸಲ್ಪಡುವ ಆಂಬುಲೆನ್ಸ್ ಸೇವಾ ಯೋಜನೆಗೆ ಸಹಾಯಧನ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ...

ಎನ್ನೆಂಸಿ ವಿಜ್ಞಾನ ಸಂಘದ ವತಿಯಿಂದ ವಿಜ್ಞಾನ ಮಾದರಿ ಸ್ಪರ್ಧೆ ಮತ್ತು ಪ್ರದರ್ಶನ

ನೆಹರೂ ಮೆಮೊರಿಯಲ್ ಕಾಲೇಜು ಸುಳ್ಯದ ವಿಜ್ಞಾನ ಸಂಘದ ವತಿಯಿಂದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ಸ್ಪರ್ಧೆ ಮತ್ತು ಪ್ರದರ್ಶನ ಜನವರಿ 13, ಶುಕ್ರವಾರದಂದು ನಡೆಯಿತು. ಕಾಲೇಜಿನ ಶೈಕ್ಷಣಿಕ ಸಲಹೆಗಾರ ಹಾಗೂ ನಿವೃತ ಪ್ರಾಂಶುಪಾಲ ಪ್ರೊ. ಬಾಲಚಂದ್ರ ಗೌಡ ವಿಜ್ಞಾನ ಮಾದರಿ ಸ್ಪರ್ಧೆ ಮತ್ತು ಪ್ರದರ್ಶನವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ....
Ad Widget

ಕಲ್ಲಪಳ್ಳಿ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಜಗದೀಶ್ ಪಿ.ಬಿ ನಿಧನ

ಕಲ್ಲಪಳ್ಳಿ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಜಗದೀಶ್ ಪಿ.ಬಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 42 ವರ್ಷ ವಯಸ್ಸಾಗಿತ್ತು. ಅಲ್ಪಕಾಲದ ಅನಾರೋಗ್ಯದಿಂದ ಬಳಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು. ಮೃತರು ತಾಯಿ,ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಎಲ್ಲರೊಂದಿಗೆ ಆತ್ಮೀಯರಾಗಿದ್ದ ಇವರು ನಾಟಿ ವೈದ್ಯರಾಗಿಯೂ...

ಅಮರ ಸುಳ್ಯ ಅಧ್ಯಯನ ಕೇಂದ್ರ ಅಸ್ತಿತ್ವಕ್ಕೆ – ಡಾ. ಪ್ರಭಾಕರ ಶಿಶಿಲ

ಅಮರ ಸುಳ್ಯ ಅಧ್ಯಯನ ಕೇಂದ್ರ ಅಸ್ತಿತ್ವಕ್ಕೆ ಇದುವರೆಗೆ ಡಾ. ಬ್ರಹ್ಮಾನಂದ ಅರ್ಥಶಾಸ್ತ್ರ ಸಂಶೋಧನಾ ಕೇಂದ್ರವಾಗಿದ್ದ ಕಾಂತಮಂಗಲದಲ್ಲಿರುವ ಡಾ. ಪ್ರಭಾಕರ ಶಿಶಿಲರ ಖಾಸಗಿ ಗ್ರಂಥಾಲಯವು ಅಮರ ಸುಳ್ಯ ಅಧ್ಯಯನ ಕೇಂದ್ರವಾಗಿ ಪರಿವರ್ತನೆ ಹೊಂದಿದೆ.ಸೇವಾ ನಿವೃತ್ತಿಯ ಬಳಿಕ ತಾಂತ್ರಿಕವಾಗಿ ಯಾರೂ ಸಂಶೋಧನಾ ಮಾರ್ಗದರ್ಶಕರಾಗುವಂತಿಲ್ಲ. ಸೇವಾವಧಿಯಲ್ಲಿ ನಾಲ್ಕು ಡಾಕ್ಟರೇಟ್ ಮತ್ತು ಏಳು ಎಂ.ಫಿಲ್ಲ್ ಗಳಿಗೆ ಯಶಸ್ವಿಯಾಗಿ ಮಾರ್ಗದರ್ಶನ ಮಾಡಿದ್ದೇನೆ. ಇನ್ನು...

ಎನ್ನೆಂಸಿ: ವೃತ್ತಿ ಮಾರ್ಗದರ್ಶನ ಕಾರ‍್ಯಕ್ರಮ

ನೆಹರೂ ಮೆಮೋರಿಯಲ್ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಅಸೋಸಿಯೇಷನ್ ನ ವತಿಯಿಂದ ಪ್ಲೆಸ್ಮೆಂಟ್ ಅಂಡ್ ಕೆರಿಯರ್ ಗೈಡೆನ್ಸ್ ಸಹಯೋಗದೊಂದಿಗೆ ವೃತ್ತಿ ಮಾರ್ಗದರ್ಶನ ಕಾರ‍್ಯಕ್ರಮ ನಡೆಯಿತು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರುದ್ರಕುಮಾರ್ ಎಂ.ಎಂ ವಹಿಸಿದ್ದರು. ಈ ಕಾರ‍್ಯಕ್ರಮದಲ್ಲಿ ಶ್ರೀ ಧವಕುಮಾರ್ ನಿರ್ದೆಶಕರು, ಬಿಸಿನೆಸ್ ದೆವಲಪ್ ಮೆಂಟ್, ಸುರಕ್ಷಾ ಕೆರಿಯರ್ ಅಕಾಡೆಮಿ ಬೆಂಗಳೂರು ಹಾಗೂ ಶ್ರೀ ಮಧುಸೂದನ್.ಸಿ.ಎಸ್,...

ಮಿತ್ತೋಡಿ ದೈವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಜ.12 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಲ್ಲಮೊಗ್ರ “ಎ” ಒಕ್ಕೂಟದ ವತಿಯಿಂದ ಮಿತ್ತೋಡಿ ದೈವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಕೊಲ್ಲಮೊಗ್ರ “ಎ” ಒಕ್ಕೂಟದ ಅಧ್ಯಕ್ಷರು, ಸದಸ್ಯರು ಹಾಗೂ ಸೇವಾಪ್ರತಿನಿಧಿ ಉಪಸ್ಥಿತರಿದ್ದರು. ದೈವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಸೇವಾ ಸಮಿತಿಯವರು ಸಹಕರಿಸಿದರು.(ವರದಿ : ಉಲ್ಲಾಸ್...

ಅಯ್ಯನಕಟ್ಟೆ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಸ್ಥಾನ ಮೂರುಕಲ್ಲಡ್ಕದಲ್ಲಿ ಜ.26ರಿಂದ ಜ.29ರ ತನಕ ಅಯ್ಯನಕಟ್ಟೆ ಜಾತ್ರೋತ್ಸವ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಇಂದು (ಜ.14ರಂದು) ನಡೆಯಿತು. ಮೊದಲಾಗಿ ಮೂರುಕಲ್ಲಡ್ಕ ದೈವಸ್ಥಾನದಲ್ಲಿ ಸಂಕ್ರಮಣ ತಂಬಿಲ ಸೇವೆ ನಡೆಯಿತು. ತದನಂತರ ಆಮಂತ್ರಣ ಪತ್ರಿಕೆಯನ್ನು ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು(ರಿ.) ಮೂರುಕಲ್ಲಡ್ಕ ಹಾಗೂ ಅಯ್ಯನಕಟ್ಟೆ ಜಾತ್ರೋತ್ಸವ...

ರಂಗಮನೆಯಲ್ಲಿ ನಾಟಕೋತ್ಸವ ಆರಂಭ – ಸಚಿವರಾದ ಎಸ್.ಅಂಗಾರ ಚಾಲನೆ

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಸುಳ್ಯ ಇದರ ಆಶ್ರಯದಲ್ಲಿ 3 ದಿನಗಳ ನಾಟಕೋತ್ಸವಕ್ಕೆ ಬಂದರು, ಮಿನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯ ಬುದ್ಧ ನಾಯ್ಕ, ಜೀವನ್ ರಾಮ್ ಸುಳ್ಯ, ಕೆ.ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಜ.13 ರಂದು ಯಕ್ಷ ರಂಗಾಯಣ ಕಾರ್ಕಳ ಇಲ್ಲಿನ ಸಂಚಾರಿ ರಂಗ...

ಸಾಲಮನ್ನಾ ಯೋಜನೆಯಿಂದ ವಂಚಿತರಾದ ರೈತರು ಹೋರಾಟಕ್ಕೆ ನಿರ್ಧಾರ – ಜ.17 ರಂದು ಪೂರ್ವಭಾವಿ ಸಭೆ

ಈ ಹಿಂದಿನ ಸರಕಾರಗಳು ಘೋಷಣೆ ಮಾಡಿದ ರೈತರ ಸಾಲಗಳನ್ನು ಮನ್ನಾ ಯೋಜನೆ ಕೆಲವರಿಗೆ ಸಿಕ್ಕಿದ್ದರೇ ಇನ್ನೂ ಕೆಲವರಿಗೆ ಸಿಕ್ಕಿರಲಿಲ್ಲ. ತಾಂತ್ರಿಕ ಕಾರಣಕ್ಕೆ ರಾಜ್ಯದಲ್ಲಿ ಹಲವು ರೈತರು ಈ ಸಾಲಮನ್ನಾ ಯೋಜನೆಯಿಂದ ವಂಚಿತರಾಗಿದ್ದರು. ಮತ್ತು ಕಳೆದ ನಾಲ್ಕು ವರಷಗಳಿಂದ ಸಾಲ ಮನ್ನಾ ಹಣ ಖಾತೆಗೆ ಜಮಾವಣೆಯಾಗುವ ನಿರೀಕ್ಷೆಯಲ್ಲಿದ್ದರು. ಇನ್ನೂ ಬಾರದ ಹಿನ್ನಲೆಯಲ್ಲಿ ಇದೀಗ ರೈತರು ರೋಸಿ ಹೋಗಿದ್ದಾರೆ.2018...

ಶಾರದಾ ಪ.ಪೂ.ಕಾಲೇಜಿನಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ ಜನವರಿ 13ರಂದು ನಡೆಯಿತು. ಕೆವಿಜಿ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ರೇವತಿ ಪಿಎಂ ಇವರು ಪೋಸ್ಕೋ ಕಾಯ್ದೆಯ ಬಗ್ಗೆ ಮಾತನಾಡಿದರು ಮತ್ತು ಕುಮಾರಿ ವೃಂದ ಪ್ರಕಾಶ್ ರವರು ಬಾಲ ಕಾರ್ಮಿಕ ಕಾಯ್ದೆಯ ಬಗ್ಗೆ ಮಾತನಾಡಿದರು. ಕಾನೂನು ಕಾಲೇಜಿನ ಹಿರಿಯ ಉಪನ್ಯಾಸಕರಾದ ಶ್ರೀ ಜಯರಾಮ್...
Loading posts...

All posts loaded

No more posts

error: Content is protected !!