ಅಮರ ಸುದ್ದಿ ದೀಪಾವಳಿ ವಿಶೇಷಾಂಕ – ಕಥೆ ಕವನ ಲೇಖನಗಳಿಗೆ ಆಹ್ವಾನ

ಸುಳ್ಯದ ಜನಪ್ರಿಯ ವಾರಪತ್ರಿಕೆ ಅಮರ ಸುಳ್ಯ ಸುದ್ದಿ ಈ ಬಾರಿ ನಾಲ್ಕನೇ ವರ್ಷದ ದೀಪಾವಳಿ ವಿಶೇಷಾಂಕ ಹೊರತರುತ್ತಿದ್ದು ಇದಕ್ಕಾಗಿ ಆಸಕ್ತ ಬರಹಗಾರರಿಂದ ಕಥೆ, ಕವನ, ಲೇಖನಗಳನ್ನು ಆಹ್ವಾನಿಸಿದೆ. ದೀಪಾವಳಿ ಆಚರಣೆ, ಪತಿ-ಪತ್ನಿಯರ ಸಂಸಾರ ಬಂಧನ, ಪ್ರೀತಿ-ಪ್ರೇಮ, ಲಾಕ್ ಡೌನ್ ಪರಿಣಾಮ, ಸಾಧಕರನ್ನು ಪರಿಚಯಿಸಲು 'ಇವರು ನಮ್ಮವರು' ಮಕ್ಕಳಿಗಾಗಿ 'ಫೋಟೋ ಸ್ಪರ್ಧೆ', ಮುಂತಾದ ವಿಷಯಗಳ ಜೊತೆಗೆ ಪ್ರಚಲಿತ...

ಅರಂತೋಡು: ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಪ್ಲಾಸ್ಮಾ ದಾನಿಗಳ ರಕ್ತದ ಮಾದರಿ ಸಂಗ್ರಹ ಕಾರ್ಯಕ್ರಮ

ಎಸ್ ಕೆ ಎಸ್ ಎಸ್ ಎಫ್ ವಿಖಾಯ ರಕ್ತದಾನಿ ಬಳಗ ದ.ಕ,ಜಿಲ್ಲೆ, ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಕ್ಲಸ್ಟರ್, ಎಸ್ ಕೆ ಎಸ್ ಎಸ್ ಎಫ್ ಅರಂತೋಡು ಶಾಖೆ ಹಾಗೂ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ, (ರಿ) ಪಠೇಲ್ ಚಾರಿಟೇಬಲ್ ಟ್ರಸ್ಟ್ (ರಿ), ಪಠೇಲ್ ಮೆಡಿಕಲ್ &ಲ್ಯಾಬೋರೇಟರಿ ಸುಳ್ಯ ಮತ್ತು ಇಂಡಿಯನ್ ರೆಡ್ ಕ್ರಾಸ್...
Ad Widget

ಸುಳ್ಯ : ಡ್ರಗ್ಸ್ ವಿರುದ್ಧ ಎಬಿವಿಪಿ ಪತ್ರ ಚಳುವಳಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಇದರ ವತಿಯಿಂದ, ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಡ್ರಗ್ಸ್ ಮಾಫಿಯಾವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕಾನೂನು ರೂಪಿಸಬೇಕೆಂದು ಒತ್ತಾಯಿಸಿ ಸೆ.26 ರಂದು ಸುಳ್ಯದ ಅಂಚೆಕಛೇರಿ ಬಳಿ ಪತ್ರ ಚಳುವಳಿಯನ್ನು ಹಮ್ಮಿಕೊಳ್ಳಲಾಯಿತು. 'ಡ್ರಗ್ಸ್ ಮುಕ್ತ ಕರ್ನಾಟಕ' ದಿಸೆಯಲ್ಲಿ ಈ ಪತ್ರವನ್ನು ಮುಖ್ಯಮಂತ್ರಿಗಳ ವಿಳಾಸಕ್ಕೆ ಕಳುಹಿಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಎ.ಬಿ.ವಿ.ಪಿ.ಯ ನಗರ...

ಪುತ್ತೂರು ಡಿವೈಎಸ್ಪಿ ಯಾಗಿ ಕಾರ್ಯನಿರ್ವಹಿಸಿದ್ದ ದಿನಕರ ಶೆಟ್ಟಿ ದ.ಕ. ಜಿಲ್ಲಾ ಡಿ.ಸಿ.ಆರ್.ಬಿ ಡಿ.ಎಸ್.ಪಿ. ಆಗಿ ಕರ್ತವ್ಯಕ್ಕೆ

ಪುತ್ತೂರು ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸಿದ್ದ ದಿನಕರ ಶೆಟ್ಟಿ ರವರು ದಕ್ಷಿಣ ಕನ್ನಡ ಜಿಲ್ಲಾ ಅಪರಾಧ ತನಿಖಾ ವಿಭಾಗದ ಡಿ ಸಿ ಆರ್ ಬಿ ಡಿ.ಎಸ್.ಪಿ. ಆಗಿ ಮಂಗಳೂರು ಎಸ್ಪಿ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರು ಪುತ್ತೂರಿನಲ್ಲಿ ದಕ್ಷತೆಯ ಸೇವೆಯನ್ನು ಸಲ್ಲಿಸಿ ಜನಮನ್ನಣೆ ಗಳಿಸಿದ್ದರು.

ವಳಲಂಬೆ: ಉದ್ಯೋಗ ನೈಪುಣ್ಯ ತರಬೇತಿ ಸಮಾರೋಪ – ವಿವಿಧ ತರಬೇತಿ ಪಡೆದ 252 ಶಿಬಿರಾರ್ಥಿಗಳು

ಗ್ರಾಮ‌ವಿಕಾಸ ಸಮಿತಿ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ದಕ ಸಂಘ ಪುತ್ತೂರು(ರಿ), ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಗುತ್ತಿಗಾರು ಇವುಗಳ ಸಹಭಾಗಿತ್ವದಲ್ಲಿ ವಾರಗಳ ಕಾಲ ನಡೆದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಇಂದು ಸಮಾಪನಗೊಂಡಿತು. ಆರ್ ಎಸ್ ಎಸ್ ಪ್ರಮುಖರಾದ ಡಾ| ಪ್ರಭಾಕರ ಭಟ್ ದೀಪ ಪ್ರಜ್ವಲನೆಗೊಳಿಸಿದರು. ಈ ಸಂದರ್ಭದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಮಂಡಳಿ...

ಅಪಾಯದ ಸ್ಥಿತಿಯಲ್ಲಿ ಬಾಗಿರುವ ಮರದ ರೆಂಬೆಗಳು ಭಯದ ವಾತಾವರಣದಲ್ಲಿ ಸ್ಥಳೀಯರು ಮತ್ತು ಪ್ರಯಾಣಿಕರು

ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಬೃಹತ್ ಮರವೊಂದು ವಿಶಾಲವಾಗಿ ಹಬ್ಬಿದ್ದು, ಇದರ ರೆಂಬೆಗಳು ಎಲೆಗಳಿಂದ ತುಂಬಿ ಜೋತಾಡುತ್ತ ಮುರಿದು ಬೀಳುವ ಪರಿಸ್ಥಿತಿಯಲ್ಲಿದೆ. ಇದರ ಸಮೀಪದಲ್ಲಿ ವಿದ್ಯುತ್ ತಂತಿಗಳು ಹಾಗೂ ವಿದ್ಯುತ್ ಟ್ರಾನ್ಸ್‌ಫಾರಮ್ ಇದ್ದು ಗಾಳಿ ಬೀಸುವ ಸಂದರ್ಭ ರೆಂಬೆಗಳು ವಿದ್ಯುತ್ ತಂತಿಗೆ ಸ್ಪರ್ಶಿಸಿ ಭಯದ ವಾತಾವರಣವನ್ನು ಉಂಟುಮಾಡುತ್ತಿದೆ. ಇದೇ ಪರಿಸರದಲ್ಲಿ ನೂರಾರು ವಾಹನಗಳು ಬೆಳಗ್ಗಿನಿಂದ...

ದ.ಕ ಜಿಲ್ಲಾ ಸಾಮಾನ್ಯ ಸೇವಾಕೇಂದ್ರದ ಸುಳ್ಯ ತಾಲೂಕು ಸಭೆ

ದಕ್ಷಿಣ ಕನ್ನಡ ಜಿಲ್ಲಾ ಸಾಮಾನ್ಯ ಸೇವಾಕೇಂದ್ರ (ವಿಎಲ್‌ಇ) ಸೊಸೈಟಿ ಇದರ ಸುಳ್ಯ ತಾಲೂಕು ಸಭೆ ಸೆ.೨೬ರಂದು ಸಿ.ಎ ಬ್ಯಾಂಕ್‌ನ ಸಭಾಭವನದಲ್ಲಿ ನಡೆಯಿತು. ಸಭಾ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ರೋಹಿತ್ ಕುಮಾರ್ ವಹಿಸಿದ್ದರು. ಮಾಹಿತಿ ಕಾರ್ಯಗಾರವನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಎಸ್. ಅಬೂಬಕ್ಕರ್ ಆರ್ಲಪದವು ನೀಡಿದರು. ವೇದಿಕೆಯಲ್ಲಿ ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷ ಹೇಮಚಂದ್ರ, ಜಿಲ್ಲಾ ಉಪಾಧ್ಯಕ್ಷ...

ಲಕ್ಷ ಮೌಲ್ಯದ ಸರ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಗುತ್ತಿಗಾರಿನ ಆಶಾಕಿರಣ್

ನಡುಗಲ್ಲಿನಿಂದ ಗುತ್ತಿಗಾರು ಮಾರ್ಗವಾಗಿ ಪಂಜಕ್ಕೆ ಹೋಗುತ್ತಿದ್ದ ನವರತ್ನ ಮೊಬೈಲ್ ಶಾಪ್ ನ ಮಾಲಕ ಪ್ರದೀಪ್ ಅಂಬೇಕಲ್ಲು ರವರ ಸುಮಾರು ಒಂದು ಲಕ್ಷ ಮೌಲ್ಯದ ಚಿನ್ನದ ಸರ ಬಿದ್ದು ಬಿದ್ದು ಹೋದ ಘಟನೆ ಸೆ.24 ರಂದು ನಡೆದಿತ್ತು. ಅಂದು ಗುತ್ತಿಗಾರಿನ ಇಂಡಿಯನ್ ಪೆಟ್ರೋಲ್ (ಮಾತಾ)ಪಂಪಲ್ಲಿ ಪೆಟ್ರೋಲ್ ತುಂಬಿಸಲು ಬಂದಿದ್ದ ಪೈಕದ ರಾಜ ಸಿ ಹೆಚ್ ರವರ ಮಗ...

ವಳಲಂಬೆ: ನಾಳೆ(ಸೆ.26) ಉದ್ಯೋಗ ನೈಪುಣ್ಯ ತರಬೇತಿ ಸಮಾರೋಪ- ಪ್ರಭಾಕರ ಭಟ್ ಕಲ್ಲಡ್ಕ ಆಗಮನ

ಸ್ವಾವಲಂಬಿ ಸಾಧನೆಗಾಗಿ ವಳಲಂಬೆಯಲ್ಲಿ ಹಮ್ಮಿಕೊಳ್ಳಲಾದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರಕ್ಕೆ ಶನಿವಾರ ತೆರೆ ಬೀಳಲಿದೆ. ಮಧ್ಯಾಹ್ನ ಎರಡು ಗಂಟೆಗೆ ಆರಂಭಗೊಳ್ಳಲಿರುವ ಸಮಾರೋಪ ಸಮಾರಂಭದಲ್ಲಿ ಆರ್ ಎಸ್ ಎಸ್ ಮುಖಂಡ ಪ್ರಭಾಕರ ಭಟ್ ಕಲ್ಲಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ವಿಭಾಗ ಮುಖ್ಯಸ್ಥರು , ರಾ.ಸ್ವ.ಸೇ ಸಂಘದ ನ.ಸೀತಾರಾಮ, ಚಂದ್ರಶೇಖರ ಭಟ್...

ಕೋಲ್ಚಾರು ತನಕ ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ಕೂಡಲೆ ಪುನರಾರಂಭಿಸುವಂತೆ ಅಗ್ರಹ – ಧರ್ಮಪಾಲ ಕೊಯಿಂಗಾಜೆ

ಕೆಲವು ತಿಂಗಳುಗಳ ಹಿಂದೆ ಕೊರೊನ ಮಹಾಮಾರಿ ಖಾಯಿಲೆಯಿಂದಾಗಿ ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ಸ್ಥಗಿತಗೊಂಡಿತ್ತು . ಅದರೆ ಸರಕಾರ ಬಸ್ ಸಂಚಾರ ಸೇವೆ ಪುನರಾರಂಭಿಸಿರುವುದರಿಂದ ಜನಜೀವನ ಸಹಜ ಸ್ಥಿತಿಯತ್ತ ಬಂದಿರುವುದು ತಮಗೆಲ್ಲ ತಿಳಿದಿರುವ ವಿಚಾರ . ಕೋಲ್ಚಾರು ಎಂಬಲ್ಲಿಗೆ ಬಸ್ ಸಂಚಾರ ಇಲ್ಲದಿರುವುದರಿಂದ ಸಾರ್ವಜನಿಕರು ದಿನನಿತ್ಯ ಪರದಾಡುವ ಪರಿಸ್ಥಿತಿ ಬಂದಿದೆ ....
Loading posts...

All posts loaded

No more posts

error: Content is protected !!