ಕಳಂಜ : ಬಲೆ ತುಳು ಲಿಫಿ ಕಲ್ಪುಗ ಕಾರ್ಯಕ್ರಮದ ಉದ್ಘಾಟನೆ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಳುನಾಡ್ (ರಿ.), ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಕಳಂಜ ಹಾಗೂ ಕಲಾವಿಕಾಸ (ರಿ.) ಕಳಂಜ ಇದರ ಸಂಯುಕ್ತ ಆಶ್ರಯದಲ್ಲಿ ವಿಷ್ಣುನಗರ ಕಳಂಜದಲ್ಲಿ 'ಬಲೆ ತುಳು ಲಿಫಿ ಕಲ್ಪುಗ' ಕಾರ್ಯಾಗಾರವು ಸೆ.27 ರಂದು ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಅರ್ಚಕರಾದ ಶ್ರೀ ನರಸಿಂಹ ಭಟ್ ಬಾಳಿಲ ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು. ಕಾರ್ಯಕ್ರಮದಲ್ಲಿ...

ನಾಳೆಯ ಪ್ರತಿಭಟನೆಗೆ ಸುಳ್ಯ ಜೆಡಿಎಸ್ ಬೆಂಬಲ

ಕೇಂದ್ರ ಸರ್ಕಾರದ ರೈತವಿರೋಧಿ ನೀತಿಗಳ ಹಾಗೂ ರೈತ ವಿರೋಧಿ ಮಸೂದೆ ಜಾರಿ ವಿರೋಧಿಸಿ ಕರ್ನಾಟಕ ರಾಜ್ಯ ವ್ಯಾಪ್ತಿ ದಲಿತ ಸಂಘಟನೆಗಳು ,ಕಾಮಿ೯ಕ ಸಂಘಟನೆ , ರೈತ ಸಂಘ ರೈತಪರ ಸಂಘಟನೆಗಳು ಹಾಗೂ ವಿವಿಧ ಪಕ್ಷಗಳು ಸೆ. 28ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದು ಜನತಾದಳ (ಜ್ಯಾ) ಸುಳ್ಯ ಘಟಕವು ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ. ಹಾಗೂ...
Ad Widget

ಸುಳ್ಯದಲ್ಲಿ ಸೆ.28 ರಂದು ಮಸೂದೆಗಳ ಹಿಂಪಡೆಯಲು ಒತ್ತಾಯಿಸಿ ಪ್ರತಿಭಟನೆ, ಬಂದ್‌ಗೆ ಕರೆ

ಕೃಷಿ ಮಸೂದೆ ವಿವಿಧ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ಸುಮಾರು ೨೬೫ಕ್ಕೂ ಸಂಘಟನೆಗಳು ಬೀದಿಗಿಳಿದಿದ್ದು, ಸುಳ್ಯದಲ್ಲಿ ೧೦ಕ್ಕಿಂತ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಿಸಿದೆ.ಹೊಸ ಕೃಷಿ ಕಾನೂನುಗಳು ಅನ್ನದಾತರನ್ನು ಜೀತದಾಳುಗಳನ್ನಾಗಿ ಮಾಡಿ ಮತ್ತು ಅವರಿಂದ ಕನಿಷ್ಟ ಬೆಂಬಲ ಬೆಲೆಯನ್ನು ಕಸಿದು ಕಸಿದುಕೊಳ್ಳಲಿದೆ. ಕೃಷಿ ಕಾನೂನಿಂದಾಗಿ ರೈತರಿಗೆ ಸರಿಯಾದ ಬೆಲೆಯೂ ಸಿಗುತ್ತಿಲ್ಲ. ತಾವೇ ಕೂಲಿಯಾಳುಗಳಾಗ ಬೇಕಾಗುತ್ತದೆ. ಕೋಟ್ಯಾಧಿಪತಿಗಳ...

ಬಿಜೆಪಿಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಗೀತಾ ಶೇಖರ್ ಉಳುವಾರು

ಸುಳ್ಯ ಮಂಡಲ ಬಿಜೆಪಿಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಗೀತಾ ಶೇಖರ್ ಉಳುವಾರು ನೇಮಕವಾಗಿದ್ದಾರೆ. ಈ ಹಿಂದೆ ಇವರು ಮಹಿಳಾ ಮೋರ್ಚಾದ ಕಾರ್ಯದರ್ಶಿಯಾಗಿದ್ದರು. ಇಬ್ಬರು ಪ್ರಧಾನ ಕಾರ್ಯದರ್ಶಿಗಳಿರಬೇಕೆಂಬ ನಿರ್ಧಾರದ ಹಿನ್ನೆಲೆಯಲ್ಲಿ ಇವರನ್ನು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಭಡ್ತಿಗೊಳಿಸಲಾಗಿದೆ. ಇವರು ಅರಂತೋಡಿನ ಉಳುವಾರಿನ ಯು.ಡಿ.ಶೇಖರ್‌ರವರ ಪತ್ನಿ.

ಬಿಜೆಪಿ ಮಹಿಳಾ ಮೋರ್ಚಾದ ನೂತನ ಕಾರ್ಯದರ್ಶಿಯಾಗಿ ಯಮಿತ ಪೂರ್ಣಚಂದ್ರ ಪೈಕ

ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ನೂತನ ಕಾರ್ಯದರ್ಶಿಯಾಗಿ ಯಮಿತ ಪೂರ್ಣಚಂದ್ರ ಪೈಕ ಆಯ್ಕೆಯಾಗಿದ್ದಾರೆ. ಇವರು ಗುತ್ತಿಗಾರು ಗ್ರಾಮ ಪಂಚಾಯತ್ ನ ಮಾಜಿ ಸದಸ್ಯೆಯಾಗಿದ್ದಾರೆ.

ಬಳ್ಪ: ನವರಾತ್ರಿ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ

ಬಳ್ಪ ಗ್ರಾಮದ ಕಾಂಜಿ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ನವರಾತ್ರಿ ಪೂಜೆಯು ಅ. 17 ರಂದು ಮೊದಲ್ಗೊಂಡು ಅ. 26ರ ತನಕ ನಡೆಯಲಿದ್ದು, ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ಸೆ. 26ರಂದು ನಡೆಯಿತು. ಪ್ರಗತಿಪರ ಕೃಷಿಕರಾದ ವಾಸುದೇವ ಕಾರ್ಜ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ದೇವಳದ ಆಡಳಿತ ಮೊಕ್ತೇಸರರಾದ ಎಂ.ವಿ. ಶ್ರೀವತ್ಸ, ಉತ್ಸವ ಸಮಿತಿ ಗೌರವಾಧ್ಯಕ್ಷ...

ತೊಡಿಕಾನ : ಜಲಮರುಪೂರಣ ಘಟಕ – ಭವಿಷ್ಯದ ದೃಷ್ಠಿಯಿಂದ ಜಲ ಸಂರಕ್ಷಣೆ ಅಗತ್ಯ : ಹರೀಶ್ ಕಂಜಿಪಿಲಿ

ನಮ್ಮ ಮುಂದಿನ ಭವಿಷ್ಯದ ದೃಷ್ಠಿಯಿಂದ ಜಲ ಸಂರಕ್ಷಣೆ ಅಗತ್ಯ ಇದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ಹೇಳಿದರು. ಅವರು ತೊಡಿಕಾನ ಹಾಲು ಸೊಸೈಟಿಯಲ್ಲಿ ಜಿಲ್ಲಾ ಪಂಚಾಯತ್ ಅನುದಾನ ದಿಂದ ನಿರ್ಮಿಸಿದ ಜಲಮರುಪೂರಣ ಯೋಜನೆಗೆ ಚಾಲನೆ ನೀಡಿ ನಂತರ ನಡೆದ ಸಭಾ ಕಾರ್ಯಕ್ರಮಲ್ಲಿ ಮಾತನಾಡಿದರು. ನಮ್ಮ ಭಾಗದಲ್ಲಿ ಬೇಸಿಗೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಜಲಕ್ಷಾಮ ತಲೆದೊರದಿದ್ದರೂ...

ಅರಂತೋಡು : ಸ್ವಾಮಿತ್ವ ಯೋಜನೆಯ ಬಗ್ಗೆ ವಿಶೇಷ ಗ್ರಾಮಸಭೆ

ಅರಂತೋಡು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸೆ. 25 ರಂದು (SVAMITVA) ಸ್ವಾಮಿತ್ವ ಯೋಜನೆಯ ವಿಶೇಷ ಗ್ರಾಮ ಸಭೆ ನಡೆಯಿತು. ಈ ಸಂದರ್ಭದಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಆರ್.ವೆಂಕಟೇಶ್, ಭೂ ದಾಖಲೆಗಳ ಇಲಾಖಾ ಸೂಪರ್ ವೈಸರ್ ಸಿಂಗಾರ ಶೆಟ್ಟಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್., ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ ಉಪಸ್ಥಿತರಿದ್ದರು.ಡ್ರೋನ್ ಕ್ಯಾಮೆರಾದ...

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಕಿರಣ್ ಬುಡ್ಲೆಗುತ್ತು ಮನೆಗೆ ಭೇಟಿ

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಯವರು ಸೆ.25ರಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಕಿರಣ್ ಬುಡ್ಲೆಗುತ್ತು ಮನೆಗೆ ಭೇಟಿ ನೀಡಿದರು. ಈ ವೇಳೆ ಪುಷ್ಪಾವತಿ ದೇವಿದಾಸ್ ಬುಡ್ಲೆಗುತ್ತು, ಶಿವಪ್ರಸಾದ್ ಹಾಲೆಮಜಲು, ಸುಪ್ರಿತ್ ಗುಡ್ಡೆಮನೆ,ಹರೀಶ್ ಹಾಲೆಮಜಲು, ಯಕ್ಷಿತ್ ಮಡ್ತಿಲ, ಜಗದೀಶ್ ಕೆರೆಕ್ಕೋಡಿ, ಗಿರೀಶ್ ಆಳ್ವ, ಚೇತನ್, ಮನೀಷ್ ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ : ಬಡ ಜೀವದ ಚಿಕಿತ್ಸೆಗೆ ನೆರವಾಗುವಿರಾ

ಕಡಬ ತಾಲೂಕಿನ ಸುಬ್ರಹ್ಮಣ್ಯದ ನಿವಾಸಿಯಾಗಿರುವ ಲಕ್ಷ್ಮೀನಾರಾಯಣ ಭಟ್ ಇವರು ಹಲವು ತಿಂಗಳಿನಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಈ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಹೊಟ್ಟೆಯಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು ದೃಢ ಪಟ್ಟಿತು.ಈಗಾಗಲೇ ಅನೇಕ ಚಿಕಿತ್ಸೆಗಳನ್ನು ಮಾಡಿದ್ದುರೂ 3,00,000 ಲಕ್ಷಕ್ಕೂ ಅಧಿಕ ಖರ್ಚಾಗಬಹುದು ಎಂದು ವೈಧ್ಯರು ತಿಳಿಸಿದ್ದಾರೆ. ಸಂಪೂರ್ಣ ಗುಣಮುಖವಾಗಲುಇನ್ನು ಹೆಚ್ಚಿನ ಹಣ ಅಗತ್ಯವಾಗಿ ಬೇಕಾಗಬಹುದು. ಆರ್ಥಿಕವಾಗಿ...
Loading posts...

All posts loaded

No more posts

error: Content is protected !!