ಕ್ಯಾಂಪ್ಕೋ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(26.08.2020 ಬುಧವಾರ) ಅಡಿಕೆ ಧಾರಣೆಹೊಸ ಅಡಿಕೆ 300 - 360ಹಳೆ ಅಡಿಕೆ 300 - 390ಡಬಲ್ ಚೋಲ್ 300 - 390 ಫಠೋರ 220 - 290ಉಳ್ಳಿಗಡ್ಡೆ 110 - 200ಕರಿಗೋಟು 110 - 190 ಕಾಳುಮೆಣಸುಕಾಳುಮೆಣಸು 250 - 325 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ಎ.ವಿ.ತೀರ್ಥರಾಮ ಆಯ್ಕೆ

ಭಾರತೀಯ ಜನತಾ ಪಾರ್ಟಿಯ ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷರಾಗಿ ಅಂಬೆಕಲ್ಲು ಎ.ವಿ.ತೀರ್ಥರಾಮ ರವರು ಆಯ್ಕೆಯಾಗಿದ್ದಾರೆ.
Ad Widget

ದೇವಿಪ್ರಸಾದ್ -ಭಾಗ್ಯಶ್ರೀ

ಗುತ್ತಿಗಾರು ಗ್ರಾಮದ ವಳಲಂಬೆ ಕೋಲ್ಚಾರು ರಾಮಚಂದ್ರ ಗೌಡರ ಪುತ್ರ ದೇವಿಪ್ರಸಾದ್ (ಹೇಮನಾಥ)ರವರ ವಿವಾಹವು ಅಮರಮುಡ್ನೂರು ಗ್ರಾಮದ ಆರ್ನೋಜಿ ಮನೆ ದಿ.ವೆಂಕಟ್ರಮಣ ಗೌಡರ ಪುತ್ರಿ ಭಾಗ್ಯಶ್ರೀ ಯೊಂದಿಗೆ ಆ.24ರಂದು ಶ್ರೀ ಮಹಾವಿಷ್ಣು ಕಲಾಮಂದಿರ ಉದಯಗಿರಿ ಮಾವಿನಕಟ್ಟೆ ಯಲ್ಲಿ ನಡೆಯಿತು.

ನಡುಗಲ್ಲು : ಮರಕತ ಶ್ರೀ ದುರ್ಗಾ ಭಜನಾ ಮಂಡಳಿ ವತಿಯಿಂದ ಗಣೇಶ ಚತುರ್ಥಿ, ವಿಧ್ಯಾರ್ಥಿಗಳಿಗೆ ಸನ್ಮಾನ

ಗಣೇಶ ಚತುರ್ಥಿ ಅಂಗವಾಗಿ ಸುಬ್ರಹ್ಮಣ್ಯ ಪಾಲ್ತಾಡು ರವರ ಮನೆಯಲ್ಲಿ ಗಣಹೋಮ,ಸತ್ಯ ಮಾರ್ಗ ಪೂಜೆ, ಹಾಗೂ ಭಜನಾ ಕಾರ್ಯಕ್ರಮ ನೆರವೇರಿತು. ಶ್ರೀ ದುರ್ಗಾ ಭಜನಾ ಮಂಡಳಿ ಮರಕತ ನಾಲ್ಕೂರು ಇವರಿಂದ ಭಜನಾ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಲಿಪಿಶ್ರೀ (606)ಶ್ರೀ ಕಟೀಲ್ ಮಾವಿನಕಟ್ಟೆ, ಹಿತಾಶ್ರೀ...

ಅಯ್ಯನಕಟ್ಟೆಯಲ್ಲಿ ಶ್ರೀ ಲಕ್ಷ್ಮೀ ಜನರಲ್ ಸ್ಟೋರ್ಸ್ ಶುಭಾರಂಭ

ಅಯ್ಯನಕಟ್ಟೆಯ ಪ್ರಧಾನ ರಸ್ತೆಯಲ್ಲಿರುವ ಕೆ.ಎಸ್ ಕಾಂಪ್ಲೆಕ್ಸ್ ನಲ್ಲಿ ಶ್ರೀ ಲಕ್ಷ್ಮೀ ಜನರಲ್ ಸ್ಟೋರ್ಸ್ ಆಗಸ್ಟ್ 21ರಂದು ಶುಭಾರಂಭಗೊಂಡಿತು. ಅಯ್ಯನಕಟ್ಟೆ, ಕಳಂಜ ಪರಿಸರದ ಜನತೆಗೆ ದಿನನಿತ್ಯದ ಗೃಹಬಳಕೆಗೆ ಅಗತ್ಯವಾದ ದಿನಸಿ ಹಾಗೂ ತರಕಾರಿ ಸಾಮಾಗ್ರಿಗಳು ಉತ್ಕೃಷ್ಟ ಹಾಗೂ ಸ್ವಚ್ಛತೆಯ ವ್ಯವಹಾರದೊಂದಿಗೆ ಇಲ್ಲಿ ದೊರೆಯಲಿದೆ. ಅಲ್ಲದೆ 2 ಕಿ.ಮೀ ಅಂತರದಲ್ಲಿ ಸಾಮಾಗ್ರಿಗಳ 'ಹೋಂ ಡೆಲಿವರಿ' ವ್ಯವಸ್ಥೆ ಮಾಡಲಾಗುವುದೆಂದು ಮಾಲಕ...

ಕೊಲ್ಲಮೊಗ್ರ : ಅರುಣೋದಯ ಚಿಕನ್ ಸೆಂಟರ್ ಶುಭಾರಂಭ

ಕೊಲ್ಲಮೊಗ್ರದ ವಿಜಯ ಬ್ಯಾಂಕ್ ಬಳಿಯ ಎಸ್.ಕೆ. ಕಾಂಪ್ಲೆಕ್ಸ್ ನಲ್ಲಿ ಉದಯ ಶಿವಾಲ ಮಾಲಕತ್ವದ ಅರುಣೋದಯ ಚಿಕನ್ ಸೆಂಟರ್ ಶುಭಾರಂಭಗೊಂಡಿದೆ. ಊರಿನಲ್ಲೇ ಸಾಕಿದ ಬಾಯ್ಲರ್ ಕೋಳಿ ಹಾಗೂ ಮಾಂಸ ಮಿತದರದಲ್ಲಿ ಲಭ್ಯ, ಟೈಸನ್,ಗಿರಿರಾಜ, ಊರು ಕೋಳಿ ಹಾಗೂ ಹಂದಿ ಮಾಂಸ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

ಬೆಳಂದೂರು- ಪೆರುವಾಜೆ ಕಾಂಕ್ರೀಟಿಕೃತ ರಸ್ತೆಯನ್ನು ಉದ್ಘಾಟಿಸಿದ ಸಂಸದರು

ರೂ. 55 ಲಕ್ಷ ವೆಚ್ಚದಲ್ಲಿ ಶಾಸಕರ ಮಳೆಹಾನಿ ನಿಧಿಯಲ್ಲಿ ದುರಸ್ತಿಗೊಂಡ ಬೆಳಂದೂರು- ಪೆರುವಾಜೆ ಕಾಂಕ್ರೀಟಿಕೃತ ರಸ್ತೆಯ ಉದ್ಘಾಟನೆಯನ್ನು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಶ್ರೀ ಎಸ್ ಅಂಗಾರ ಇವರು ನೆರವೇರಿಸಿದರು.ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲಾಧ್ಯಕ್ಷ ಶ್ರೀ ಹರೀಶ್ ಕಂಜಿಪಿಲಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀ...

ಪಂಜ : ಜನತಾ ಚಿಕನ್ ಸೆಂಟರ್ ಶುಭಾರಂಭ

ಪಂಜದ ಮುಖ್ಯರಸ್ತೆಯಲ್ಲಿರುವ ಐಶ್ವರ್ಯ ಕಾಂಪ್ಲೆಕ್ಸ್ ನಲ್ಲಿ ಸತೀಶ್ ಪಲ್ಲೋಡಿ ಮಾಲಕತ್ವದ ಜನತಾ ಚಿಕನ್ ಸೆಂಟರ್ ಶುಭಾರಂಭಗೊಂಡಿತು. ಇಲ್ಲಿ ಬಾಯ್ಲರ್, ಟೈಸನ್, ಗಿರಿರಾಜ, ಉರುಕೋಳಿ, ಹಂದಿಮಾಂಸ, ಮೊಟ್ಟೆ ಹಾಗೂ ಒಣಮೀನು ರಖಂ ಮತ್ತು ಚಿಲ್ಲರೆ ದರದಲ್ಲಿ ಲಭ್ಯವಿದೆ. ಅಲ್ಲದೆ ವಿಶೇಷವಾಗಿ ಶನಿವಾರ ಮಟನ್ ಮಾಂಸ ಲಭ್ಯವಿರಲಿದೆ ಎಂದು ಮಾಲಕರು ತಿಳಿಸಿದ್ದಾರೆ.

ನಾರ್ಕೊಡು ಅಜ್ಜಾವರ ಪೇರಾಲು ಸಡಕ್ ರಸ್ತೆಗೆ ಸಂಸದರಿಂದ ಗುದ್ದಲಿಪೂಜೆ

ರೂ. 6.54 ಕೋಟಿ ವೆಚ್ಚದಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ನಿರ್ಮಾಣವಾಗಲಿರುವ ಸುಳ್ಯ ತಾಲೂಕಿನ ನಾರ್ಕೊಡು- ಅಜ್ಜಾವರ- ಪೇರಾಲು ರಸ್ತೆ ಕಾಮಗಾರಿಗೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಇವರು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸುಳ್ಯ ಶಾಸಕ ಶ್ರೀ ಎಸ್ ಅಂಗಾರ, ಸುಳ್ಯ ಬಿಜೆಪಿ ಮಂಡಲಾಧ್ಯಕ್ಷ...

ಐವರ್ನಾಡಿನಲ್ಲಿ ಪಂಚಲಿಂಗೇಶ್ವರ ಎಂಟರ್ ಪ್ರೈಸಸ್ ನವರ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಲೋಕಾರ್ಪಣೆ

ಐವರ್ನಾಡಿನಲ್ಲಿ ಶ್ರೀ ಪಂಚಲಿಂಗೇಶ್ವರ ಎಂಟರ್ ಪ್ರೈಸಸ್ ನವರ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕನ್ನು ಆ. 24 ರಂದು ಶಾಸಕ ಎಸ್ ಅಂಗಾರ ಉದ್ಘಾಟಿಸಿದರು. ಜಿ.ಪಂ.ಸದಸ್ಯರಾದ ಎಸ್ ಎನ್ ಮನ್ಮಥ, ಪುಷ್ಪಾವತಿ ಬಾಳಿಲ, ತಾ.ಪಂ.ಸದಸ್ಯ ರಾಧಾಕೃಷ್ಣ ಬೊಳ್ಳೂರು, ಜೇನು ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರು, ಐವರ್ನಾಡಿನ ವೈದ್ಯರಾದ ಡಾ.ಬಾಲಸುಬ್ರಹ್ಮಣ್ಯ ಭಟ್, ಯುವಶಕ್ತಿ ಸಂಘದ ಗೌರವಾಧ್ಯಕ್ಷ ದಿನೇಶ್...
Loading posts...

All posts loaded

No more posts

error: Content is protected !!