- Monday
- September 14th, 2026
ಯುವಕ ಮಂಡಲ (ರಿ) ಕಳಂಜ ಇದರ ಕಟ್ಟಡ ಪ್ರವೇಶಿಸುವಲ್ಲಿ ಗೇಟ್ ನ ಅವಶ್ಯಕತೆ ಇದ್ದುದನ್ನು ಗಮನಿಸಿದ ಕಳಂಜ - ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ವೆಂಕಪ್ಪಯ್ಯನವರು ಗೇಟ್ ನ್ನು ಕೊಡುಗೆಯಾಗಿ ನೀಡಿದ್ದಾರೆ. ಯುವಕ ಮಂಡಲದ ಪರವಾಗಿ ನಿರ್ದೇಶಕರಾದ ಗಂಗಾಧರ ತೋಟದಮೂಲೆ ಕೊಡುಗೆಯನ್ನು ಸ್ವೀಕರಿಸಿದರು.
ಆಸರೆ ಸಮಿತಿ ವತಿಯಿಂದ ನಿರ್ಮಾಣವಾಗಲಿರುವ ಅಬ್ದುಲ್ಲ ದರ್ಕಸ್ತು ಅವರ ಮನೆಯ ಶಿಲಾನ್ಯಾಸ ಕಾರ್ಯಕ್ರಮ ಇಂದು ನಡೆಯಿತು. ಬಡ ನಿರ್ಗತಿಕರಾದ ಅಬ್ದುಲ್ಲ ರವರ ಮನೆ ನಿರ್ಮಾಣದ ಉಸ್ತುವಾರಿ ವಹಿಸಿದ ಆಸರೆ ಸಮಿತಿ ನೇತೃತ್ವದಲ್ಲಿ ಅಬ್ದುಲ್ಲ ರವರ ಮನೆಗೆ ಸಮಿತಿ ಸದಸ್ಯ ರಾದ ಮುನೀರ್ ದಾರಿಮಿ ಉಸ್ತಾದ್ ಶಿಲಾನ್ಯಾಸ ನೆರವೇರಿಸಿದರು. ಇನ್ನೋರ್ವ ಸಮಿತಿ ಸದಸ್ಯರಾದ ಲತೀಫ್ ಸಖಾಫಿ ದುಹಾ...
ಸುಬ್ರಹ್ಮಣ್ಯ ಪರ್ವತಮುಖಿ ನಿವಾಸಿ ಕೆ. ವಿಷ್ಣು ಆಚಾರ್ಯ ಅಲ್ಪಕಾಲದ ಅಸೌಖ್ಯದಿಂದ ಇಂದು ಮಧ್ಯಾಹ್ನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಹಲವು ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ಸ್ನಾನ ಘಟ್ಟದ ಬಳಿ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಬೆಳ್ಳಿ ಹರಕೆ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದರು. ಮೃತರು ಪತ್ನಿ ತಿಲಕ, ಪುತ್ರಿಯರಾದ ವಂದನಾ, ತೃಪ್ತಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
ಕಡಬ ತಾಲೂಕಿನ ಕಡಬ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ವಿಜಯಕುಮಾರ್.ಎ ಪದೋನ್ನತಿ ಹೊಂದಿದ್ದು, ಇದೀಗ ಬೆಳ್ತಂಗಡಿ ತಾಲೂಕಿನ ಸರಕಾರಿ ಪ್ರೌಢಶಾಲೆ ನೇಲ್ಯಡ್ಕ ಇಲ್ಲಿಗೆ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರಾಗಿ ಭಡ್ತಿ ಹೊಂದಿದ್ದಾರೆ.11.08.1998 ರಂದು ಪುತ್ತೂರು ತಾಲೂಕಿನ ಸ.ಹಿ.ಪ್ರಾಥಮಿಕ ಶಾಲೆ ಮೇನಾಲದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ...
ಕನಕಮಜಲು: ಪ್ರಾ.ಕೃ.ಪ.ಸ.ಸಂಘ ನಿ.ಜಾಲ್ಸೂರು ಕನಕ ಸೌಧದಲ್ಲಿ ನಡೆಯಬೇಕಾದ ಶಿಬಿರವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಾವಣಿ ಶಿಬಿರವನ್ನು ಸೆ.15 ಮಂಗಳವಾರ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸುಳ್ಯದ ಕೊಡಿಯಾಲಬೈಲ್ ಸ.ಕಿ.ಪ್ರಾ. ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ವಿಜಯಲಕ್ಷ್ಮಿಯವರು ಮರ್ಕಂಜ ಸರಕಾರಿ ಪ್ರೌಢಶಾಲೆಗೆ ಕನ್ನಡ ಭಾಷಾ ಸಹಶಿಕ್ಷಕರಾಗಿ ಪದೋನ್ನತಿ ಹೊಂದಿದ್ದಾರೆ. ಜಯನಗರ ಸ.ಉ.ಹಿ.ಪ್ರಾ. ಶಾಲೆಯಲ್ಲಿ 18 ವರ್ಷ ಸೇವೆ ಸಲ್ಲಿಸಿದ ಬಳಿಕ ಕೊಡಿಯಾಲಬೈಲ್ ಸ.ಕಿ.ಪ್ರಾ. ಶಾಲೆಗೆ ವರ್ಗಾವಣೆಗೊಂಡು ಅಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ವಿಜಯಲಕ್ಷ್ಮಿಯವರು ಮೂಲತಃ...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊಗ್ರ, ಸುಳ್ಯ ಇಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಪೊಡಿಯ ಪಿ ಯವರು ಪದೋನ್ನತಿ ಹೊಂದಿದ್ದು, ಇದೀಗ ಸರಕಾರಿ ಪ್ರೌಢಶಾಲೆ ಎಡಮಂಗಲಕ್ಕೆ ಆಂಗ್ಲಭಾಷಾ ಸಹಶಿಕ್ಷಕರಾಗಿ ಭಡ್ತಿ ಹೊಂದಿದ್ದಾರೆ.06.08.2002 ರಂದು ಪುತ್ತೂರು ತಾಲೂಕಿನ ಸ.ಕಿ.ಪ್ರಾ.ಶಾಲೆ ಪಿಲಿಕಜೆ ಗುಂಡ್ಯ ಇಲ್ಲಿ ಪ್ರಾಥಮಿಕ ಶಾಲಾ ಸಹಶಿಕ್ಷಕರಾಗಿ ಸೇವೆ ಆರಂಭಿಸಿದ ಇವರು,13 ವರ್ಷಗಳ ಸೇವೆಯನ್ನು ಸಲ್ಲಿಸಿದರು....
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ ಶಾಂತಿನಗರ ಇಲ್ಲಿ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಕುಸುಮಾವತಿ ಪದೋನ್ನತಿ ಹೊಂದಿದ್ದು, ಇದೀಗ ಸರಕಾರಿ ಪದವಿಪೂರ್ವ ಕಾಲೇಜು ಕಾಣಿಯೂರಿನ ಪ್ರೌಢಶಾಲಾ ವಿಭಾಗಕ್ಕೆ ಭಡ್ತಿಗೊಂಡಿದ್ದಾರೆ.ಕಡಬ ತಾಲೂಕು ಕೊಂಬಾರು ಗ್ರಾಮದ ಕೆಂಜಾಲ ದಿ.ತಿಮ್ಮಯ್ಯ ಆಚಾರ್ಯ ಹಾಗೂ ಶ್ರೀಮತಿ ಕೃಷ್ಣಮ್ಮ ದಂಪತಿಗಳ ಪುತ್ರಿಯಾಗಿರುವ ಇವರು 1998 ರಲ್ಲಿ ಸಿರಿಬಾಗಿಲು ಸರಕಾರಿ ಹಿರಿಯ ಪ್ರಾಥಮಿಕ...
ಕೊಲ್ಲಮೊಗ್ರದ ಸ.ಹಿ.ಪ್ರಾ.ಶಾಲೆ. ಬಂಗ್ಲೆ ಗುಡ್ಡೆ ಯಲ್ಲಿ ಸಹಶಿಕ್ಷಕಿಯಾಗಿದ್ದ ಶ್ರೀಮತಿ ತುಳಸಿಯವರು ಪದೋನ್ನತಿ ಹೊಂದಿದ್ದು ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢಶಾಲೆ ಬಿಳಿಯೂರು ಮಡತ್ತಾರು ಇಲ್ಲಿಗೆ ಕನ್ನಡ ಭಾಷಾ ಸಹಶಿಕ್ಷಕರಾಗಿ ಭಡ್ತಿ ಹೊಂದಿದ್ದಾರೆ. ಇವರು ಸ.ಹಿ.ಪ್ರಾಥಮಿಕ ಶಾಲೆ ಕೊಟ್ಟೂರು ಮಡಿಕೇರಿ ತಾಲೂಕು ಕೊಡಗು ಜಿಲ್ಲೆಯಲ್ಲಿ 15 ವರ್ಷಸೇವೆ ಸಲ್ಲಿಸಿ ನಂತರ, ಸ.ಹಿ.ಪ್ರಾಥಮಿಕ ಶಾಲೆ ಬೋಳಿಯಾರು ಮಸೀದಿ ಬಳಿ ಮಂಗಳೂರು...
ಸುಳ್ಯ ತಾಲೂಕು ಕ್ರೈಸ್ತ ಅಲ್ಪಸಂಖ್ಯಾತರ ವಿವಿದೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸೆ.12 ರಂದು ಸಂಘದ ಅಧ್ಯಕ್ಷ ಬಿಟ್ಟಿ ಬಿ.ನಡುನಿಲಂ ಇದರ ಅಧ್ಯಕ್ಷತೆಯಲ್ಲಿ ಜರಗಿತು. ಸಂಘವು 2019-20 ನೇ ಸಾಲಿನಲ್ಲಿ ಗಳಿಸಿದ ಲಾಭಾಂಶ ವಿಂಗಡನೆ ಮಾಡುತ್ತ 15% ಡಿವಿಡೆಂಟ್ ಅನ್ನು ಸದಸ್ಯರಿಗೆ ಕೊಡುವುದೆಂದು ಘೋಷಿಸಿದರು. ಸುಳ್ಯ ತಾಲೂಕಿನ ಎಲ್ಲಾ ಧರ್ಮಿಯಾರಿಗೂ ಕಳೆದ 10 ವರ್ಷಗಳಿಂದ ಉತ್ತಮ...
Loading posts...
All posts loaded
No more posts
