- Wednesday
- July 15th, 2026
ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು, ಜಾಲ್ಸೂರು ವಲಯದ ಸಮಿತಿಯ ರಚನೆಯು ಸೆ.13 ರಂದು ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನಾ ಮಂದಿರದಲ್ಲಿ ನಡೆಯಿತು. ಈ ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಸತೀಶ್ ಆಚಾರ್ಯ, ಅಧ್ಯಕ್ಷರಾಗಿ ತೀರ್ಥರಾಮ ಬಾಳೆಕೊಡಿ, ಉಪಾಧ್ಯಕ್ಷರಾಗಿ ವಸಂತ ವಿಷ್ಣುನಗರ, ಪ್ರಧಾನ ಕಾರ್ಯದರ್ಶಿಗಳಾಗಿ ವಿನಯ್ ಕುಮಾರ್ ನಾರಾಲು, ಕಾರ್ಯದರ್ಶಿಗಳಾಗಿ ರಾಕೇಶ್ ಕಣೆಮರಡ್ಕ, ಹಿಮಕರ ಕುಕ್ಕಂದೂರು,...
ಕಂದ್ರಪ್ಪಾಡಿಯಲ್ಲಿ ಸೆ.12 ರಂದು ದೇವಚಳ್ಳ ಯುವಕ ಮಂಡಲದ ವತಿಯಿಂದ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಂದು ಸರ್ವರ್ ಸಮಸ್ಯೆ ಯಿಂದಾಗಿ ನೋಂದಣಿ ಕಾರ್ಯಕ್ರಮ ರದ್ದಾಗಿತ್ತು. ಆ ದಿನದ ಸಮಯ ವ್ಯರ್ಥವಾಗಬಾದರೆನ್ನುವ ಉದ್ದೇಶದಿಂದ ಯುವಕ ಮಂಡಲದ ಸದಸ್ಯರು ರಸ್ತೆ ದುರಸ್ತಿಯ ಕಾರ್ಯ ನಡೆಸಿದರು. ಕಂದ್ರಪ್ಪಾಡಿ ಶಾಲಾ ಬಳಿ ರಸ್ತೆಯ ಗುಂಡಿಗಳಿಗೆ ಕಲ್ಲು, ಮರಳು ಹಾಕಿ...
ಉಬರಡ್ಕ ಗ್ರಾಮದ ಸುಳ್ಯಕೋಡಿ ರಾಮಪ್ಪ ಗೌಡರ ಧರ್ಮಪತ್ನಿ ನಾಟಿವೈದ್ಯೆ ದೇವಮ್ಮರವರು ಸೆ12 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ 96 ವರ್ಷ ವಯಸ್ಸಾಗಿತ್ತು. ಮೃತರು ಕಾಮಲೆ ,ಸರ್ಪಸುತ್ತು ಮೊದಲಾದ ಹಲವು ರೋಗಗಳಿಗೆ ನಾಟಿ ಔಷಧ ನೀಡುತ್ತಿದ್ದರು. ಅವರು ಪುತ್ರರಾದ ಮಾಧವ, ರಾಮಕೃಷ್ಣ, ಪದ್ಮನಾಭ, ದಿನೇಶ, ಪುತ್ರಿಯರಾದ ಚಂದ್ರಾವತಿ, ಶಾರದ, ಸತ್ಯವತಿ, ಪ್ರೇಮಕಲಾ, ಜಗದೀಶ್ವರಿ ಹಾಗೂ ಸೊಸೆಯಂದಿರು,ಅಳಿಯಂದಿರು ಮತ್ತು...
ಬಾಲಿವುಡ್ ಅಂಗಳದಲ್ಲಿ ನಟ ಸುಶಾಂತ್ ಸಿಂಗ್ ಪ್ರಕರಣವು ಒಂದೊಂದೇ ಕೂತೂಹಲಕಾರೀ ತಿರುವುಗಳು ಪಡೆದುಕೊಳ್ಳುತ್ತಿದ್ದಂತೆ ದೇಶಕ್ಕೆ ಕಂಟಕವಾಗಿರುವ ಮಾದಕ ವಸ್ತುಗಳ ಜಾಲ ಬೆಳಕಿಗೆ ಬಂದಿದೆ. ಆದರೆ ಈಗ ಚಂದನವನದಲ್ಲೂ ಡ್ರಗ್ಸ್ ಮಾಫಿಯಾದ ಗುಟ್ಟು ಹೊರ ಬರುತ್ತಿದೆ. ಕನ್ನಡದ ನಟ ನಟಿಯರು ಮಾದಕ ವಸ್ತುಗಳ ದಾಸರಾಗಿರುವುದು ಅಚ್ಚರಿಯನ್ನು ಉಂಟು ಮಾಡಿದೆ. ಬೆಂಗಳೂರಿಗೂ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲದ ಕೊಂಡಿ ಇರುವುದು...
ಶ್ರೀಕೃಷ್ಣ ಭಜನಾ ಮಂಡಳಿ ಅಡ್ಡಬೈಲು ಇಲ್ಲಿ ಹಿಂದೂ ಜಾಗರಣಾ ವೇದಿಕೆ ಬಳ್ಪ ಹಾಗೂ ಶ್ರೀ ಕೃಷ್ಣ ಭಜನಾ ಮಂಡಳಿ ಅಡ್ಡಬೈಲು ಇದರ ವತಿಯಿಂದ ಇಂದು(ಸೆ.13) ಶ್ರಮದಾನ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಎರಡೂ ಸಮಿತಿಗಳ ಸದಸ್ಯರು, ಊರವರು ಉಪಸ್ಥಿತರಿದ್ದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಮತ್ತು ಆಶ್ಲೇಷ ಬಲಿ ಸೇರಿದಂತೆ ಇತರ ಸೇವೆಗಳು ಸೆ .14 ರಿಂದ ಸರ್ಕಾರದ ಮಾರ್ಗಸೂಚಿಯಂತೆ ನಡೆಯಲಿವೆ . ಸೇವಾರ್ಥಿಗಳಿಗೆ ಮಾತ್ರ ಭೋಜನ ಪ್ರಸಾದ ವಿತರಣೆ ಯಾಗಲಿದೆ . ಬೆಳಗ್ಗೆ 6.30 ರಿಂದ11.30 ಮಧ್ಯಾಹ್ನ 12.15 ರಿಂದ 1.30 ರ ತನಕ , ಮಧ್ಯಾಹ್ನ 3.30 ರಿಂದ ರಾತ್ರಿ...
ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಚಂದ್ರಶೇಖರ ಆಚಾರ್ಯರ ಮನೆಗೆ ಮರ ಬಿದ್ದು ಮನೆ ಹಾನಿಯಾದ ಘಟನೆ ವರದಿಯಾಗಿದೆ.ಸುಳ್ಯ ತಾಲೂಕಿನ ಎಲ್ಲೆಡೆ ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿರುವ ಮಳೆಗೆ ಮನೆ ಮೇಲೆ ಮರ ಬಿದ್ದಿದೆ ಎಂದು ಅಂದಾಜಿಸಲಾಗಿದೆ. ಕಂದಾಯ ಇಲಾಖೆಯವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯಾದ್ಯಂತ ಇನ್ನೊಂದು ವಾರ ಕಾಲ ಭಾರಿ ಮಳೆಯಾಗಲಿದೆ. ರಾಜ್ಯದಲ್ಲಿ ಮಾನ್ಸೂನ್ ಚುರುಕಾಗಿದ್ದು, ದಕ್ಷಿಣ ಕನ್ನಡ, ಉಡುಪಿ ಹಾಗೂ ಇತರೆ ಜಿಲ್ಲೆಯಲ್ಲಿ ಇನ್ನೊಂದು ವಾರ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಕರಾವಳಿ ಭಾಗದಲ್ಲಿ ಇಂದಿನಿಂದ ಸೆಪ್ಟೆಂಬರ್ 17 ರವರೆಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ...
ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಬಾಳಿಲ- ಮುಪ್ಪೇರ್ಯ ಇದರ ಆಶ್ರಯದಲ್ಲಿ ಅ. 25 ರಂದು ಶ್ರೀ ಶಾರದೋತ್ಸವ ಕಾರ್ಯಕ್ರಮ ನಡೆಯಲಿದ್ದು , ಈ ಬಗ್ಗೆ 2 ನೇ ಪೂರ್ವಭಾವಿ ಸಭೆಯು ಸೆ . 13 ರಂದು ಬಾಳಿಲ ವಿದ್ಯಾಬೋಧಿನೀ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು. ಸಭೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಯು . ರಾಧಾಕೃಷ್ಣ ರಾವ್ ,...
ಪ್ರಾಚೀನ ಕಾಲದಿಂದಲೇ ದಕ್ಷಿಣ ಕನ್ನಡ ಜಿಲ್ಲೆಯು ನಾಟಿ ವೈದ್ಯ ಪದ್ಧತಿಯನ್ನು ಬಹಳ ಮುಖ್ಯವಾಗಿ ಅನುಸರಿಸಿಕೊಂಡು ಬಂದಿದೆ. ಪ್ರಾಕೃತಿಕ ರಮಣೀಯವಾಗಿ ಕಂಗೊಳಿಸುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಪ್ರದೇಶಗಳು, ಗುಡ್ಡಗಾಡು ಪ್ರದೇಶಗಳಿಂದ ಆವರಿಸಿಕೊಂಡಿದೆ. ಈ ಕಾರಣದಿಂದಾಗಿ ಕಾಡಿನಲ್ಲಿ ಸಿಗುವ ಆಯುರ್ವೇದ ಔಷಧಿಗಳು, ಮದ್ದಿನ ಗಿಡಬಳ್ಳಿಗಳು, ಔಷಧೋಪಚಾರಕ್ಕೆ ಬೇಕಾದ ಎಲೆ ಮತ್ತು ಕಾಯಿಗಳು ಧಾರಾಳವಾಗಿ ನಮ್ಮ ಜಿಲ್ಲೆಗಳಲ್ಲಿ ಬೇಡಿಕೆಯಲ್ಲಿ...
Loading posts...
All posts loaded
No more posts
