- Saturday
- March 14th, 2026
ದಕ್ಷಿಣ ಕನ್ನಡ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಸೆಪ್ಟೆಂಬರ್ 24 ರಿಂದ 30ರ ತನಕ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಲಿದ್ದಾರೆ. ಇದರ ಅಂಗವಾಗಿ ಸೆಪ್ಟೆಂಬರ್ 28 ರಂದು ಸುಳ್ಯಕ್ಕೆ ಭೇಟಿ ನೀಡಲಿದ್ದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸುಳ್ಯ ಸರಕಾರಿ ನಿರೀಕ್ಷಣಾ ಮಂದಿರದಲ್ಲಿ ಸಾರ್ವಜನಿಕರಿಂದ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ದೂರುಗಳನ್ನು ಸ್ವೀಕರಿಸಲಿದ್ದಾರೆ ಎಂದು...
ಸುಳ್ಯ ತಹಶೀಲ್ದಾರ್ ಆಗಿದ್ದ ಕುಂಞ ಅಹಮ್ಮದ್ ರಿಗೆ ನಾಗಮಂಗಲಕ್ಕೆ ವರ್ಗಾವಣೆ ಯಾದಾಗ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿಷ್ಟಾಚಾರ ವಿಭಾಗದ ತಹಶೀಲ್ದಾರ್ ಆಗಿದ್ದ ಅನಂತಶಂಕರ್ ರನ್ನು ಸುಳ್ಯಕ್ಕೆ ನಿಯೋಜಿಸಲಾಗಿತ್ತು .ಕಡಬ ತಹಶೀಲ್ದಾರ್ ಆಗಿದ್ದ ಜಾನ್ ಪ್ರಕಾಶ್ ರೋಡ್ರಿಗಸ್ ಅವರಿಗೆ ವರ್ಗಾವಣೆಯಾಗಿದ್ದು ಅನಂತ ಶಂಕರ ಅವರನ್ನು ಕಡಬ ತಹಶೀಲ್ದಾರ್ ಆಗಿ ಸರಕಾರದಿಂದ ಆದೇಶವಾಗಿದೆ.
ಕಡಿಮೆ ವೆಚ್ಚ ಹಾಗೂ ನೂತನ ಡಿಸೈನ್ ವೈಶಿಷ್ಟ್ಯಗಳೊಂದಿಗೆ ಡಿ - ಡೆಕೋರ್ಸ್ ಸೆ. 21 ರಂದು ಶುಭಾರಂಭಗೊಂಡಿತು. ಮದುವೆ, ಹುಟ್ಟುಹಬ್ಬ, ವಿವಾಹ ನಿಶ್ಚಿತಾರ್ಥ, ನಾಮಕರಣ, ಬಯಕೆ ಮದುವೆ, ಶಾಲಾ ಕಾಲೇಜು ಕಾರ್ಯಕ್ರಮ ಹಾಗೂ ಇನ್ನಿತರ ಎಲ್ಲಾ ಕಾರ್ಯಕ್ರಮಗಳಿಗೆ ಎಲ್ಲಾ ವಿಧದ ಸ್ಟೇಜ್ ಡೆಕೊರೇಷನ್ ಮಾಡಿಕೊಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ ಬೆಳ್ಳಾರೆ ವಲಯ ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ,ಶ್ರೀ ರಕ್ಷ ಗೊಂಚಲು ಸಮಿತಿ ಹಾಗೂ ಕಳಂಜ ಗ್ರಾಮಪಂಚಾಯತ್ ಆಶ್ರಯದಲ್ಲಿ ಅಯ್ಯನಕಟ್ಟೆ ಸಭಾಭವನದಲ್ಲಿ ಪೋಷಣ್ ಅಭಿಯಾನ ಮಾಸಾಚರಣೆ ಮತ್ತು ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಸೆ.22ರಂದು ನಡೆಯಿತು .ಶ್ರೀ ರಕ್ಷ...
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಐವರ್ನಾಡು ರಬ್ಬರ್ ಫ್ಯಾಕ್ಟರಿಯಲ್ಲಿ ಸುಮಾರು 40 ವರ್ಷಗಳ ಕಾಲ ಕಾರ್ಮಿಕರಾಗಿ ಸೇವೆ ಸಲ್ಲಿಸಿದ್ದ ಬಾಲಕೃಷ್ಣ ಗೌಡ ದೊಡ್ಡಮನೆಯವರು ಮಾ.30 ರಂದು ಸೇವೆಯಿಂದ ನಿವೃತ್ತಿಗೊಂಡಿದ್ದಾರೆ. 1985 ರಲ್ಲಿ ಸೇವೆಗೆ ಸೇರಿದ ಇವರು ರಬ್ಬರ್ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿ ಸೇವೆ ಸಲ್ಲಿಸಿದ್ದರು. ಐವರ್ನಾಡು ಗ್ರಾಮದ ದೊಡ್ಡಮನೆಯವರಾದ ಇವರ ಪತ್ನಿ ಸಾವಿತ್ರಿ ದೊಡ್ಡಮನೆಯವರು ಗೃಹಿಣಿಯಾಗಿದ್ದಾರೆ. ಪುತ್ರರಾದ...
ಕೆಲವು ತಿಂಗಳ ಹಿಂದಿನಿಂದ ಸುಳ್ಯದಲ್ಲಿ ಸಂಚಲನವನ್ನೇ ಮೂಡಿಸಿದ್ದ ಆಸಿಯ ಇಬ್ರಾಹಿಂ ಖಲೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಸಿಯ ಮತ್ತು ಅವರ ಹಿತೈಷಿಗಳು ಸಾಮಾಜಿಕ ಜಾಲತಾಣಗಳಲ್ಲಿ ಇಬ್ರಾಹಿಂ ಕಲೀಲ್ ಮತ್ತು ಕುಟುಂಬಸ್ಥರ ಬಗ್ಗೆ ಹರಿದಾಡಿಸುತ್ತಿದ್ದ ಲೇಖನ ಮತ್ತು ಆಡಿಯೋ-ವಿಡಿಯೋ ತುಣುಕುಗಳ ಬೆಳವಣಿಗೆಗೆ ಸುಳ್ಯ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಕಳೆದ ಕೆಲವು ತಿಂಗಳ ಹಿಂದೆ ಆಸಿಯಾ ಎಂಬ ಮಹಿಳೆ ಇಬ್ರಾಹಿಂ...
ದಕ್ಷಿಣ ಕನ್ನಡ ಗೌಡ ವಿದ್ಯಾವರ್ಧಕ ಸಂಘ (ರಿ) ಸುಳ್ಯ ಇದರ ಆಡಳಿತ ಮಂಡಳಿಯ 2020 - 21 ನೇ ಸಾಲಿನ 2ನೇ ಸಾಮಾನ್ಯ ಸಭೆಯು ಸೆ.22ರಂದು ಶ್ರೀ ಶಾರದಾ ಮಹಿಳಾ ಪದವಿ ಕಾಲೇಜಿನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ರಾಜ್ಯ ರೈತ ಮೋರ್ಚಾದ...
ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಸೆ.22 ರಂದು ವಿಕಲಚೇತನರ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಕಾರ್ಯಕ್ರಮ ಸಂಯೋಜಕರಾದ ಸುಳ್ಯ ವಿಕಲಚೇತನರ ಸಂಘದ ಕಾರ್ಯದರ್ಶಿ ಪ್ರವೀಣ್ ನಾಯಕ್ ಸುಳ್ಯ, ಎಂ.ಆರ್.ಡಬ್ಲ್ಯೂ. ಚಂದ್ರಶೇಖರ್, ಪುಟ್ಟಣ್ಣ ವಲಿಕಜೆ ಹಾಗೂ ವಿ.ಆರ್.ಡಬ್ಲ್ಯೂ ಅಧಿಕಾರಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು. ಬಿ.ಆರ್.ಸಿ.ಯಿಂದ ಶಿಕ್ಷಕಿ ಕೃತಿಕಾ ಸಹಕರಿಸಿದರು.
ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(22.09.2020 ಮಂಗಳವಾರ ) ಅಡಿಕೆ ಧಾರಣೆಹೊಸ ಅಡಿಕೆ 300 - 360ಹಳೆ ಅಡಿಕೆ 300 - 400ಡಬಲ್ ಚೋಲ್ 300 - 400 ಫಠೋರ 220 - 290ಉಳ್ಳಿಗಡ್ಡೆ 110 - 220ಕರಿಗೋಟು 110 - 210 ಕಾಳುಮೆಣಸುಕಾಳುಮೆಣಸು 250 - 335 ಕೊಕ್ಕೋಒಣ ಕೊಕ್ಕೋ :- 150 -...
ರಾಜ್ಯ ಸರ್ಕಾರವು ಗ್ರಾಮೀಣ ಜನತೆಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ವಿತರಿಸುವ ಅಧಿಕಾರವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚತಂತ್ರ ತಂತ್ರಾಂಶಕ್ಕೆ ಇ-ಜನನ ತಂತ್ರಾಂಶ ಸಂಯೋಜನೆ ಮಾಡಲಿದ್ದು,...
Loading posts...
All posts loaded
No more posts
