ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೆ ತಂದಿರುವ ಮಸೂದೆಗಳನ್ನು ಹಿಂಪಡೆಯಬೇಕೆಂದು ವಿವಿಧ ಸಂಘಟನೆಗಳಿಂದ ಸುಳ್ಯದಲ್ಲಿ ಇಂದು ಪ್ರತಿಭಟನೆ

ರೈತ, ಕಾರ್ಮಿಕ ವಿರೋಧಿ ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಸುಗ್ರೀವಾಜ್ಞೆ ವಾಣಿಜ್ಯ ಮತ್ತು ಇತರ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುತ್ ,ಖಾಸಗೀಕರಣ ವಿರೋಧಿಸಿ ಕರ್ನಾಟಕ ರಾಜ್ಯದ ರೈತ-ಕಾರ್ಮಿಕ ದಲಿತ ಸಂಘಗಳು ನೀಡಿದ್ದ ಕರ್ನಾಟಕ ಬಂದ್ ಪ್ರತಿಭಟನೆ ಅಂಗವಾಗಿ ಸುಳ್ಯದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನಾ ಸಭೆ ಇಂದು ನಡೆಯಿತು. ಸಭೆಗೂ ಮುನ್ನ ಸುಳ್ಯ...

ಗುತ್ತಿಗಾರು : ಜಾನುವಾರು ಅಕ್ರಮ ಸಾಗಾಟ ಪತ್ತೆ -ಪೋಲಿಸರಿಗೆ ಒಪ್ಪಿಸಿದ ಸಂಘಟನೆ ಕಾರ್ಯಕರ್ತರು

ಗುತ್ತಿಗಾರಿನ ಭಜರಂಗದಳ ಭಗತ್ ಸಿಂಗ್ ಶಾಖೆಯ ಹಾಗೂ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ಕಡ್ತಲ್ಕಜೆ ಎಂಬಲ್ಲಿ ಯಾವುದೇ ಅನುಮತಿ ಪಡೆಯದೆ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಹಿಡಿದು ಸುಬ್ರಹ್ಮಣ್ಯ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.
Ad Widget

ಹಾಲೆಮಜಲು ಶಾಲೆಯಲ್ಲಿ ಶ್ರಮದಾನ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಾಲ್ಕೂರು ಹಾಲೆಮಜಲು ಒಕ್ಕೂಟದ ವತಿಯಿಂದ ಹಾಲೆಮಜಲು ಶಾಲೆಯಲ್ಲಿ ಶ್ರಮದಾನ ಮಾಡುವ ಮೂಲಕ ಶಾಲಾ ಪರಿಸರವನ್ನು ಸ್ವಚ್ಛತೆ ಮಾಡಲಾಯಿತು. ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷರು ಉಪಹಾರ ನೀಡಿ ಸಹಕರಿಸಿದರು.

ಕೃಷಿ ಮಸೂದೆ ವಿರೋಧಿಸಿ ಸೆ.28 ರಂದು ಸುಳ್ಯದಲ್ಲಿ ನಡೆಯುವ ಪ್ರತಿಭಟನೆಗೆ ಎಸ್‌ಡಿಪಿಐ ಬೆಂಬಲ

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ರೈತ ದಲಿತ ಕಾರ್ಮಿಕ ವಿರೋಧಿ ಸುಗ್ರಿವಾಜ್ಞೆಯನ್ನು ಜಾರಿಗೊಳಿಸಿರುವುದರ ವಿರುದ್ಧವಾಗಿ ಸೆ.28 ರಂದು ನಡೆಸುವಂತಹ ಭಾರತ ಬಂದ್ ನ ಭಾಗವಾಗಿ ಸುಳ್ಯದಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ಜ್ಯೋತಿ ವೃತ್ತದಿಂದ ನಡೆಯುವ ಹೋರಾಟಕ್ಕೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಪೂರ್ಣ ಬೆಂಬಲ ನೀಡಲಿದೆಯೆಂದು ಪಕ್ಷದ ಸುಳ್ಯ ವಿಧಾನ ಸಭಾ...

ಹಿಂಜಾವೇ ಆರಂತೋಡು ವಲಯದ ಮರ್ಕಂಜ ಘಟಕ ರಚನೆ – ಅಧ್ಯಕ್ಷರಾಗಿ ನವೀನ್ ನಳಿಯಾರು

ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು, ಆರಂತೋಡು ವಲಯದ ಮರ್ಕಂಜ ಘಟಕ'ವು ಇಂದು ರಚನೆಗೊಂಡಿತು. ಈ ನೂತನ ಘಟಕದ ಗೌರವಾಧ್ಯಕ್ಷರಾಗಿ ವಾಸುದೇವ ಆಚಾರ್ಯ, ಅಧ್ಯಕ್ಷರಾಗಿ ನವೀನ್ ನಳಿಯಾರು, ಉಪಾಧ್ಯಕ್ಷರಾಗಿ ಚರಣ್ ಗುತ್ತುಮಜಲು, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ಕಂಜಿಪಿಲಿ, ಕಾರ್ಯದರ್ಶಿಗಳಾಗಿ ಶಶಿಕಾಂತ್ ಬೂಡು, ಪ್ರವೀಣ್ ಕುಮಾರ್ ಹಲ್ದಡ್ಕ, ಸಂಪರ್ಕ ಪ್ರಮುಖರಾಗಿ ಪ್ರಜ್ವಲ್ ದೇಶಕೋಡಿ, ಪ್ರಚಾರ ಪ್ರಮುಖರಾಗಿ ವಿನ್ಯಾಸ್...

ಸೆ.28 ರಂದು ವಳಲಂಬೆಯಲ್ಲಿ ಗೋವು ಆಧಾರಿತ ಕೃಷಿ, ಗೋ ಕೃಪಾಮೃತ ಬಗ್ಗೆ ಪ್ರಾತ್ಯಕ್ಷಿಕೆ

ಗೋವು ಆಧಾರಿತ ಕೃಷಿ,ಗೋ ಕೃಪಾಮೃತ ಬಗ್ಗೆ ಪರಿಚಯ ಮತ್ತು ಪ್ರಾತ್ಯಕ್ಷಿಕೆ ಡಿ‌.ಯಂ. ರಾಮಣ್ಣ ಗೌಡ ರವರ ಮನೆಯಲ್ಲಿ ಸೆ.28 ರಂದು ಸೋಮವಾರ ದಂದು ಬೆಳಿಗ್ಗೆ 10 ಗಂಟೆಯಿಂದ 10.30 ಗಂಟೆ ಯವರೆಗೆ ನಡೆಯಲಿದೆ. ಈ ಬಗ್ಗೆ ಆರ್.ಕೆ.ಭಟ್ ಸುಳ್ಯ ಇವರು ಮಾಹಿತಿ ನೀಡಲಿದ್ದಾರೆ. ಆಸಕ್ತಿಯುಳ್ಳ ರೈತರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

ಅ.02 ರಂದು ಬಾಲಚಂದ್ರ ಕಳಗಿ ಸ್ಮರಣಾರ್ಥ ಅಭಿಮಾನಿ ಬಳಗದಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಜಿಲ್ಲಾ ಪಂಚಾಯತ್ ಕೊಡಗು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಡಿಕೇರಿ ಕೊಡಗು, ಕೊಡಗು ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಮಡಿಕೇರಿ ಕೊಡಗು, ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆ ಕೊಡಗು, ಗ್ರಾಮ ಪಂಚಾಯತ್ ಸಂಪಾಜೆ, ಪೆರಾಜೆ, ಚೆಂಬು, ಮದೆನಾಡು, ಪಯಸ್ವಿನಿ ಸಹಕಾರಿ ಸಂಘ ಸಂಪಾಜೆ ಹಾಗೂ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಬಾಲಚಂದ್ರ ಕಳಗಿ...

ಅ. 02 ರಂದು ಮುಕ್ಕೂರಿನಲ್ಲಿ ಸ್ವಚ್ಛತಾ ಅಭಿಯಾನ

ಮುಕ್ಕೂರು- ಕುಂಡಡ್ಕ ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ಪೆರುವಾಜೆ ಗ್ರಾ.ಪಂ.ಸಹಯೋಗದಲ್ಲಿ ಶ್ರೀಧರ್ಮಸ್ಥಳ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಪೆರುವಾಜೆ ಗ್ರಾಮದ ಮುಕ್ಕೂರು ವ್ಯಾಪ್ತಿಯ ಸಂಘಗಳ ಸಹಕಾರದೊಂದಿಗೆ ರಾಷ್ಟ್ರಪಿತ ಮಹಾತ್ಮ ಗಾಂಜಿ ಅವರ ಜನ್ಮದಿನದ ಪ್ರಯುಕ್ತ ಅ.2 ರಂದು ಸ್ವಚ್ಛತಾ ಅಭಿಯಾನ ನಡಯಲಿದೆ. ಮುಕ್ಕೂರು- ಕುಂಡಡ್ಕ- ಕಾಪುಕಾಡು-...

ಸುಬ್ರಹ್ಮಣ್ಯ : ಡ್ರಗ್ ಮುಕ್ತ ಸಮಾಜ ನಿರ್ಮಾಣವಾಗಲು ಸೂಕ್ತ ಕಾನೂನು ಜಾರಿಗೊಳಿಸುವಂತೆ ಎಬಿವಿಪಿ ವತಿಯಿಂದ ಸಿಎಂ ಗೆ ಪತ್ರ ಚಳುವಳಿ

ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಡ್ರಗ್ಸ್ ಮಾಫಿಯಾವನ್ನು ತಡೆಗಟ್ಟಲು ಸೂಕ್ತ ಕಾನೂನನ್ನು ರೂಪಿಸಿ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ವಿದ್ಯಾರ್ಥಿ ಪರಿಷತ್ ವತಿಯಿಂದ ಇಂದು ಸುಬ್ರಹ್ಮಣ್ಯ ದ ಅಂಚೆ ಕಛೇರಿ ಬಳಿ ಪತ್ರ ಚಳುವಳಿಯನ್ನು ಹಮ್ಮಿಕೊಂಡಿತ್ತು. ಪತ್ರಗಳನ್ನು ಮುಖ್ಯಮಂತ್ರಿಗಳ ವಿಳಾಸಕ್ಕೆ ಕಳುಹಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ನ ನಗರ ಕಾರ್ಯದರ್ಶಿಯಾದ ಹಿತೇಶ್ ಕಟ್ರಮನೆ, ಕೆ.ಎಸ್.ಎಸ್ ಕಾಲೇಜಿನ...

ಸುಳ್ಯ : ಬಿಜೆಪಿ ಕಛೇರಿಯಲ್ಲಿ ಪಂಡಿತ ದೀನದಯಾಳ ಉಪಾಧ್ಯಾಯರ ಜನ್ಮದಿನಾಚರಣೆ ಕಾರ್ಯಕ್ರಮ

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಕಚೇರಿಯಲ್ಲಿ ಇಂದು ಪಂಡಿತ ದೀನದಯಾಳ ಉಪಾಧ್ಯಾಯರ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲದ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ಅವರು ವಹಿಸಿದ್ದರು. ವೇದಿಕೆಯಲ್ಲಿ ಕ್ಷೇತ್ರದ ಶಾಸಕರಾದ ಎಸ್ ಅಂಗಾರರು ಮತ್ತು ಹಿರಿಯ ಕಾರ್ಯಕರ್ತರಾದ ಪಿಕೆ ಉಮೇಶ್ ರವರು ಉಪಸ್ಥಿತರಿದ್ದರು. ಪಂಡಿತ ದೀನದಯಾಳರ ಜೀವನ ಆದರ್ಶದ ಬಗ್ಗೆ ಮಂಡಲ...
Loading posts...

All posts loaded

No more posts

error: Content is protected !!