- Tuesday
- July 14th, 2026
ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ತೆನೆ (ಕದಿರು) ತುಂಬಿಸುವ ಕಾರ್ಯಕ್ರಮ ಅ. 17 ರ ಶನಿವಾರ ಬೆಳಗ್ಗೆ ಗಂಟೆ 7.45ರ ಶುಭಮುಹೂರ್ತದಲ್ಲಿ ನಡೆಯಲಿದೆ. ಭಗವದ್ಭಕ್ತರು ಈ ಕಾರ್ಯಕ್ರಮದಲ್ಲಿ ಸರ್ಕಾರಿ ನಿಯಮದನ್ವಯ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿಕೊಂಡು ಭಾಗವಹಿಸಬೇಕಾಗಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಕ.ರಾ.ರೈತ ಸಂಘ ಹಸಿರುಸೇನೆ ಐವರ್ನಾಡು ಘಟಕ ಸುಳ್ಯ ಇದರ ನೂತನ ಕಛೇರಿಯ ಉದ್ಘಾಟನೆ ಹಾಗೂ ಗೌರವಾರ್ಪಣೆ ಕಾರ್ಯಕ್ರಮವು ಅ. 19ರ ಸೋಮವಾರದಂದು ಪೂರ್ವಾಹ್ನ ಗಂಟೆ 10 ಕ್ಕೆ ಐವರ್ನಾಡಿನ ಶ್ರೀ ದೇವಿ ಕೃಪಾ ಸಂಕೀರ್ಣದಲ್ಲಿ ಜರುಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐವರ್ನಾಡು ಕ.ರಾ.ರೈ ಸಂಘದ ಅಧ್ಯಕ್ಷರಾದ ಶ್ರೀ ಪದ್ಮನಾಭ ಗೌಡ ವಹಿಸಲಿದ್ದಾರೆ. ಕ.ರಾ. ರೈತ ಸಂಘದ ಪ್ರಧಾನ...
ಪಂಜ ಪೇಟೆಯ ಸಮೀಪ ಕಾರ್ ವರ್ಕಶಾಪ್ ಬಳಿ ಪಾರ್ಕಿಂಗ್ ಮಾಡಿದ್ದ ಕಾರಿನ ಮೇಲೆ ಅ .15 ರಾತ್ರಿ ಭಾರಿ ಗಾತ್ರದ ಮರ ಮುರಿದು ಬಿದ್ದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಏನೆಕಲ್ಲಿನವರದ್ದು ಎಂದು ತಿಳಿದುಬಂದಿದೆ.
ಸುಳ್ಯ ನಗರ ಪಂಚಾಯತಿಗೆ ಸಂಬಂಧಿಸಿದ ಗಾಂಧಿನಗರದಲ್ಲಿ ಇರುವ ವಾಣಿಜ್ಯ ಕಟ್ಟಡದ ಮಳಿಗೆಗಳನ್ನು ಬಾಡಿಗೆ ನೀಡಿರುವುದರಲ್ಲಿ ಅವ್ಯವಹಾರ ನಡೆದಿದೆ ಎಂದು ಸುಳ್ಯ ನಗರದ ಸ್ಥಳೀಯ ನಿವಾಸಿಗಳು ಮಂಗಳೂರು ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ರವರಿಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ. ದೂರಿನಲ್ಲಿ ಸುಳ್ಯ ನಗರ ಪಂಚಾಯತಿಯ ಗಾಂಧಿನಗರದ ಮೀನುಮಾರುಕಟ್ಟೆ ಕಟ್ಟಡದ ಏಲಂನಲ್ಲಿ ಎಸ್ಸಿ ಎಸ್ಟಿ ವಿಭಾಗದವರಿಗೆ ಮೀಸಲಾಗಿದ್ದು...
ದಾವಣಗೆರೆಯಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಸುಳ್ಯದ ಟ್ಯಾಂಕರ್ ಚಾಲಕರೊಬ್ಬರು ಮೃತಪಟ್ಟ ಘಟನೆ ಅ.15 ರಂದು ನಡೆದಿದೆ. ಸುಳ್ಯದ ಕುರುಂಜಿ ಭೋಜಪ್ಪ ಗೌಡರ ಪುತ್ರ ಪ್ರಕಾಶ್ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ. ಪ್ರಕಾಶ್ ಅವರು ಹಲವು ವರ್ಷಗಳಿಂದ ಟ್ಯಾಂಕರ್ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು , ಅ .15 ರಂದು ಮುಂಜಾನೆ ಇವರು ಚಲಾಯಿಸುತ್ತಿದ್ದ ಟ್ಯಾಂಕರ್ ಗೆ ಬಸ್ ಢಿಕ್ಕಿ...
ಪಂಜ ಮುಖ್ಯ ರಸ್ತೆಯಲ್ಲಿರುವ ಶೆಟ್ಟಿ ಕಾಂಪ್ಲೆಕ್ಸ್ ನಲ್ಲಿ ಅಭಿಲಾಷ್ ಕಟ್ಟ ಮಾಲಕತ್ವದ 'ಕಾರ್ ಸ್ಪಾ' ವಾಷಿಂಗ್ ಸೆಂಟರ್ ಅ.18ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಕಾರು, ಬೈಕ್ ಮತ್ತು ಎಲ್ಲಾ ವಾಹನಗಳ ವಾಷಿಂಗ್, ಕಾರ್ ಪಾಲಿಷಿಂಗ್, ವಾಕ್ಯೂಮ್ ಕ್ಲೀನಿಂಗ್, ಕಾರ್ ಡ್ರೈ ಕ್ಲೀನಿಂಗ್ ಹಾಗೂ ಸೋಫಾ ಡ್ರೈ ಕ್ಲೀನಿಂಗ್ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.
ಅ.2 ರಂದು ಗಾಂಧಿ ಜಯಂತಿ ಆಚರಣೆ ಕಾರ್ಯ ಕ್ರಮದಲ್ಲಿ ಸ್ನೇಹ ಸ್ತ್ರೀ ಶಕ್ತಿ ಸಂಘದ ವತಿಯಿಂದ ಸಂಘದ ಸದಸ್ಯರ ಮಕ್ಕಳಲ್ಲಿ ಹೆಚ್ಚು ಅಂಕಗಳಿಸಿದ ಮಕ್ಕಳು ಗಣೇಶ್ ರೈ ಹಾಗೂ ಶ್ರೀಮತಿ ಆಶಾ ಕುಕ್ಕಂದೂರು ದಂಪತಿಗಳ ಪುತ್ರ ಚಿಂತನಾ ರೈ, ಪ್ರಸನ್ನ ಕುಮಾರಿ ಹಾಗೂ ಹೇಮಕರ ನೆಕ್ರಾಜೆ ದಂಪತಿಗಳ ಪುತ್ರ ಕಾರ್ತಿಕ್ ಏನ್. ಹೆಚ್, ಕರುಣಾಕರ ರೈ...
ರೋಟರಿ ಕ್ಲಬ್ ಸುಳ್ಯ, ಭಾರತೀಯ ವೈದ್ಯಕೀಯ ಸಂಘ, ರೋಟರಿ ಸುಳ್ಯಸಿಟಿ ನೇತೃತ್ವದಲ್ಲಿ ನೇತ್ರದಾನ ನೋಂದಾವಣೆ, ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಸುಳ್ಯ ಪ್ರಸಾದ್ ನೇತ್ರಾಲಯ ಮತ್ತು ಕೆಲವು ಟ್ರಸ್ಟ್ ಗಳ ಜಂಟಿ ಆಶ್ರಯದಲ್ಲಿ ರೋಟರಿ ಸಭಾಭವನದಲ್ಲಿ ಅ. 11 ರಂದು ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಗುರುರಾಜ್ ವೈಲಾಯ ವಹಿಸಿದ್ದರು. ಮುಖ್ಯ...
*ಕ್ಯಾಂಪ್ಕೋ ನಿಯಮಿತ ಮಂಗಳೂರು.* ಶಾಖೆ : *ಸುಳ್ಯ.* (15.10.2020 ಗುರುವಾರ ) *ಅಡಿಕೆ ಧಾರಣೆ*ಹೊಸ ಅಡಿಕೆ 235 - 300ಹಳೆ ಅಡಿಕೆ 315 - 383ಡಬಲ್ ಚೋಲ್ 315 - 400 ಹೊಸ ಫಠೋರ 175 - 235ಹಳೆ ಫಠೋರ 220 - 320 ಹೊಸ ಉಳ್ಳಿಗಡ್ಡೆ 110 - 175ಹಳೆ ಉಳ್ಳಿಗಡ್ಡೆ 150 - 243...
Loading posts...
All posts loaded
No more posts
