ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ – ಅ.31 ರಂದು ಪೂರ್ವಭಾವಿ ಸಭೆ

ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ನಡೆಯುತ್ತಿದೆ. 2021 ಫೆಬ್ರವರಿ 24 ರಿಂದ 26 ತನಕ ನಡೆಯುವ ಶುಭಮುಹೂರ್ತದಲ್ಲಿ ಪುನರ್ ಪ್ರತಿಷ್ಠಾ- ಬ್ರಹ್ಮಕಲಶೋತ್ಸವದ ಕಾರ್ಯಕ್ರಮ ಜರುಗಲಿದೆ. ಇದರ ಸಲುವಾಗಿ ಆಯಾ ವಿಭಾಗದ ನೂತನ ಸಮಿತಿ ರಚನೆಯ ಪೂರ್ವಭಾವಿ ಸಭೆಯನ್ನು ಇದೇ ಬರುವ ಅ.31 ರಂದು ನಡೆಯಲಿದೆ. ಈ ಸಭೆಯಲ್ಲಿ ಊರ-ಪರವೂರ ಭಕ್ತಾಭಿಮಾನಿಗಳು ಹಾಗೂ...

ಅ.23 : ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ತೆನೆ ತುಂಬಿಸುವ ಕಾರ್ಯಕ್ರಮ

ಕಳಂಜದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ತೆನೆ (ಕದಿರು) ತುಂಬಿಸುವ ಕಾರ್ಯಕ್ರಮವು ಅ. 23 ರ ಶುಕ್ರವಾರ ಬೆಳಗ್ಗೆ 8 ಗಂಟೆಗೆ ನಡೆಯಲಿದೆ. ಭಗವದ್ಭಕ್ತರು ಈ ಕಾರ್ಯಕ್ರಮದಲ್ಲಿ ಸರ್ಕಾರಿ ನಿಯಮದನ್ವಯ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿಕೊಂಡು ಭಾಗವಹಿಸಬೇಕಾಗಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.
Ad Widget

ಕೊಲ್ಲಮೊಗ್ರ : ಭಾರಿ ಮಳೆಯಿಂದ ಹಾನಿಗೊಂಡ ಸೇತುವೆ, ರಸ್ತೆ ವೀಕ್ಷಿಸಿದ ತಾ.ಪಂ.ಅಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು

ಕೊಲ್ಲಮೊಗ್ರ ಇತ್ತೀಚೆಗೆ ಸುರಿದ ಭಾರಿಗೆ ಮಳೆ ಹರಿಹರಪಲ್ಲತ್ತಡ್ಕ, ಕೊಲ್ಲಮೊಗ್ರ,ಕಲ್ಮಕಾರು ಭಾಗದ ರಸ್ತೆ ಹಾಗೂ ಸೇತುವೆಗಳಿಗೆ ಹಾನಿಯಾಗಿತ್ತು. ಕೆಲವೆಡೆ ಸಂಚಾರ ಸ್ಥಗಿತಗೊಂಡಿತ್ತು. ಕಡಂಬಳ, ಕೊಲ್ಲಮೊಗ್ರ, ಜಾಲುಮನೆ ಯಲ್ಲಿ ಹಾನಿಗೊಂಡ ಸೇತುವೆಗಳನ್ನು ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ತಾ.ಪಂ.ಸ್ಥಾನೀಯ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ಭೇಟಿ ಮಾಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಉದಯ ಕೊಪ್ಪಡ್ಕ, ಗ್ರಾಮಸ್ಥರಾದ ಉದಯ...

ಕರಿಕ್ಕಳ : ಪ್ರಗತಿ ಎಂಟರ್ ಪ್ರೈಸಸ್ ಶುಭಾರಂಭ

ಕರಿಕ್ಕಳದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಾಯಿಕೃಪಾ ಸಂಕೀರ್ಣದಲ್ಲಿ, ಶ್ರೀ ರಾಮಚಂದ್ರ ಮಡಪ್ಪಾಡಿಯವರ ಮಾಲಕತ್ವದ ಪ್ರಗತಿ ಎಂಟರ್ ಪ್ರೈಸಸ್ ಅ.19ರಂದು ಗಣಹೋಮದೊಂದಿಗೆ ಶುಭಾರಂಭಗೊಂಡಿತು. ಯಾವುದೇ ಮಿಶ್ರಣವಿಲ್ಲದ ಪರಿಶುದ್ಧ ಕೊಬ್ಬರಿ ಎಣ್ಣೆ, ಶೇಂಗಾ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಎಳ್ಳೆಣ್ಣೆ, ಕುಸುಬಿ ಎಣ್ಣೆ, ಸಾಸಿವೆ ಎಣ್ಣೆ, ತಾಳೆ ಎಣ್ಣೆ ಸೇರಿದಂತೆ ವಿವಿಧ ತೆರನಾದ ಎಣ್ಣೆಯನ್ನು ಕ್ಲಪ್ತ ಸಮಯದಲ್ಲಿ ತಯಾರಿಸಲಾಗುವುದೆಂದು ಮಾಲಕರು ತಿಳಿಸಿದ್ದಾರೆ.

ಕೃಷಿ ಮಾರುಕಟ್ಟೆ

*ಕ್ಯಾಂಪ್ಕೋ ನಿಯಮಿತ ಮಂಗಳೂರು.*                  ಶಾಖೆ  :  *ಸುಳ್ಯ.*           (19.12.2020   ಶನಿವಾರ) *ಅಡಿಕೆ ಧಾರಣೆ*ಹೊಸ ಅಡಿಕೆ          235 - 325ಹಳೆ ಅಡಿಕೆ             330 - 380ಡಬಲ್ ಚೋಲ್     330 - 385 ಹೊಸ ಫಠೋರ     175 - 265ಹಳೆ ಫಠೋರ        250 - 325 ಹೊಸ ಉಳ್ಳಿಗಡ್ಡೆ    110 - 200ಹಳೆ ಉಳ್ಳಿಗಡ್ಡೆ       150 - 210...

ಅ.23 : ಪಂಜದಲ್ಲಿ ಸ್ಪರ್ಶ ಎಲೆಕ್ಟ್ರಾನಿಕ್ಸ್ & ಹೋಮ್ ಅಪ್ಲಾಯೆನ್ಸಸ್ ಶುಭಾರಂಭ

ಪಂಜದ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಹತ್ತಿರ ಇರುವ ಶ್ರೀಕೃಷ್ಣ ಕಾಂಪ್ಲೆಕ್ಸ್ ನಲ್ಲಿ ಪುರುಷೋತ್ತಮ ಎರ್ಮಾಯಿಲ್ ಮಾಲಕತ್ವದ ಸ್ಪರ್ಶ ಎಲೆಕ್ಟ್ರಾನಿಕ್ಸ್ & ಹೋಮ್ ಅಪ್ಲಾಯೆನ್ಸಸ್ ಮಾರಾಟ ಮಳಿಗೆಯು ಅ.23 ರ ಶುಕ್ರವಾರದಂದು ಶುಭಾರಂಭಗೊಳ್ಳಲಿದೆ. ಬೆಳಗ್ಗೆ 10.30 ಕ್ಕೆ ಮಳಿಗೆಯು ಶುಭಾರಂಭಗೊಳ್ಳಲಿದ್ದು , ಹಿರಿಯ ಧಾರ್ಮಿಕ ಮುಂದಾಳು ಶ್ರೀ ತಿಮ್ಮಪ್ಪ ಗೌಡ ಪುತ್ಯ ಉದ್ಘಾಟನೆಗೈಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಂಜ ಗ್ರಾ.ಪಂ.ಮಾಜಿ...

ಕೊಲ್ಲಮೊಗ್ರ ಜಾಲುಮನೆ ಕಿರುಸೇತುವೆ ತಾ.ಪಂ. ಸದಸ್ಯ ಉದಯ ಕೊಪ್ಪಡ್ಕ ನೇತೃತ್ವದಲ್ಲಿ ದುರಸ್ತಿ

ಕೊಲ್ಲಮೊಗ್ರ ದಿಂದ ಜಾಲುಮನೆ ಸಂಚರಿಸುವ ಕಿರುಸೇತುವೆ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಸೇತುವೆಯ ಒಂದು ಬದಿಯ ಮಣ್ಣು ಕುಸಿತಗೊಂಡು ಸಂಚಾರಕ್ಕೆ ತಡೆಯಾಗಿತ್ತು. ಕೂಡಲೇ ಸಮಸ್ಯೆಗೆ ಸ್ಪಂದಿಸಿದ ಕೊಲ್ಲಮೊಗ್ರು ಬಿ.ಜೆ.ಪಿಯ ಕಾರ್ಯಕರ್ತರು ಮತ್ತು ಮುಖಂಡರು ತಾಲೂಕು ಪಂಚಾಯತ್ ಸದಸ್ಯ ಉದಯ ಕೊಪ್ಪಡ್ಕರವರಿಗೆ ತಿಳಿಸಿ ಶೀಘ್ರ ದುರಸ್ತಿ ಗೆ ಮನವಿ ಮಾಡಿದ್ದರು. ಕೂಡಲೇ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿದ...

ವಿಹಿಂಪ : ಮುಕ್ಕೂರು ಕುಂಡಡ್ಕ ಛತ್ರಪತಿ ಶಾಖೆ ಉದ್ಘಾಟನೆ, ಕರಸೇವಕರಿಗೆ ಸನ್ಮಾನ

ವಿಶ್ವ ಹಿಂದೂ ಪರಿಷದ್ ಭಜರಂಗದಳದ ನೂತನ ಮುಕ್ಕೂರು - ಕುಂಡಡ್ಕ ಛತ್ರಪತಿ ಶಾಖೆಯ ಉದ್ಘಾಟನಾ ಕಾರ್ಯಕ್ರಮವು ಅ.18 ರಂದು ಪೆರುವಾಜೆಯ ಜೆ.ಡಿ ಆಡಿಟೋರಿಯಂನಲ್ಲಿ ನಡೆಯಿತು. ಅಯೋಧ್ಯಾ ಕರಸೇವಕರಾದ ಯಶೋಧ ಪ್ರಭು ಏನಡ್ಕ ಪೆರುವಾಜೆ ಇವರು ಉದ್ಘಾಟಿಸಿದರು. ಭಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿಕೃಷ್ಣ ಹಸಂತಡ್ಕ ದಿಕ್ಸೂಚಿ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಭಜರಂಗದಳ ಸಂಯೋಜಕರಾದ ಶ್ರೀಧರ್...

ಸುಳ್ಯದ ವಸತಿಗೃಹದಲ್ಲಿ ಐವರ್ನಾಡಿನ ಹುಡುಗ ಬೆಳ್ತಂಗಡಿಯ ಹುಡುಗಿ ಆತ್ಮಹತ್ಯೆ

ಸುಳ್ಯ ನಗರದ ಖಾಸಗಿ ವಸತಿಗೃಹವೊಂದರಲ್ಲಿ ಹುಡುಗ ಮತ್ತು ಹುಡುಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಘಟನೆ ಇಂದು ವರದಿಯಾಗಿದೆ . ಹುಡುಗ ಐವರ್ನಾಡಿನ ಕಟ್ಟತ್ತಾರು ತಿಮ್ಮಪ್ಪ ಗೌಡರ ಪುತ್ರ ದರ್ಶನ್ ಎಂದು ತಿಳಿದುಬಂದಿದ್ದು , ಹುಡುಗಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಳಿಯ ನಾರ್ಯ ಕಲ್ಕಜೆಯ ಶೇಷಪ್ಪ ಎಂಬವರ ಪುತ್ರಿ ಇಂದಿರಾ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ...

ರಂಗಮನೆಯಲ್ಲಿ ಮೋಹನ ಸೋನರಿಗೆ ನುಡಿನಮನ

ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಆಶ್ರಯದಲ್ಲಿ ಅಗಲಿದ ಮಹಾನ್ ಕಲಾವಿದ ಮೋಹನ ಸೋನರಿಗೆ ರಂಗಗೀತೆ ಗಾಯನ- ನುಡಿ ನಮನ ಕಾರ್ಯಕ್ರಮ ನಡೆಯಿತು. ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಮಾತನಾಡಿ " ಸೋನಾರ ಸಾವು ಸಾವಲ್ಲ. ಅದು ಬದುಕಿನ ಮುಂದುವರಿಕೆ. ಪಂಪ ರನ್ನ ಕುಮಾರವ್ಯಾಸರಂತೆ ಸೋನ ಕೂಡಾ ಸದಾ...
Loading posts...

All posts loaded

No more posts

error: Content is protected !!