- Thursday
- May 7th, 2026
ಜ. 31ರಂದು ಪತ್ರಕರ್ತರ ಕೊಂಬಾರು ಗ್ರಾಮ ವಾಸ್ತವ್ಯ ಮತ್ತು ಜಾಗೃತಿ ಶಿಬಿರದಲ್ಲಿ ಭಾಗವಹಿಸಿದ ಕರ್ನಾಟಕ ಸರ್ಕಾರದ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ಕೆ ಎಸ್ ಈಶ್ವರಪ್ಪರವರನ್ನು ಕೇನ್ಯ ಗ್ರಾಮಸ್ಥರ ವತಿಯಿಂದ ಶಾಲು ಹೊದಿಸಿ ಗೌರವಿಸಿ, ಸ್ವಾಗತಿಸಲಾಯಿತು. ಇದೇ ಸಂದರ್ಭದಲ್ಲಿ ಕೇನ್ಯ ಗ್ರಾಮದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಮಾಡಿಕೊಡುವಂತೆ ಗ್ರಾಮಸ್ಥರ ವತಿಯಿಂದ ಮನವಿ ಪತ್ರ...
ಭಾರತೀಯ ಭೂ ಸೇನೆಯಲ್ಲಿ 17 ವರ್ಷಗಳ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿರುವ ಸತೀಶ್ ಜಾಲುಮನೆ ಜ. 31 ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ಕೊಲ್ಲಮೊಗ್ರದ ಚಿನ್ನಪ್ಪ ಗೌಡ ಜಾಲುಮನೆ ಮತ್ತು ಭವಾನಿ ದಂಪತಿಗಳ ಪುತ್ರರಾದ ಸತೀಶ್ ಜಾಲುಮನೆಯವರು 2004 ರಲ್ಲಿ ಸೇನೆಗೆ ಸೇರಿ ದೇಶ ಸೇವೆ ಆರಂಭಿಸಿದ್ದರು. ಜಮ್ಮುಕಾಶ್ಮೀರ, ಉದಂಪುರ, ಶ್ರೀನಗರ, ಉತ್ತರ ಪ್ರದೇಶ, ಜಾನ್ಸಿ, ಪಂಜಾಬ್,...
ಭಾರತೀಯ ಭೂ ಸೇನೆಯಲ್ಲಿ ಸುಮಾರು 17 ವರ್ಷಗಳ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿ ನಿತಿನ್ ನಂಗಾರು ಜ. 31 ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ಮಡಿಕೇರಿ ತಾಲೂಕು ಜೋಡುಪಾಲ ನಂಗಾರು ದಾಸಪ್ಪ ಮತ್ತು ಭಾನುಮತಿ ದಂಪತಿಗಳ ಪುತ್ರ ನಿತಿನ್ ನಂಗಾರು 2004 ರಲ್ಲಿ ಸೇನೆಗೆ ಸೇರಿ ದೇಶ ಸೇವೆ ಆರಂಭಿಸಿದ್ದರು. ಅಸ್ಸಾಂ, ಜಮ್ಮುಕಾಶ್ಮೀರ, ಲಡಾಕ್, ದೆಹಲಿ, ಸಿಕಂದರಬಾದ್,ಜಲಂದರ್,...
ಹರಿಹರ ಪಲ್ಲತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಇಂದು ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ದಿವಾಕರ ಮುಂಡಾಜೆಯವರು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ ಅಂಗಣ, ಆಶಾ ಕಾರ್ಯಕರ್ತೆ ಪುಷ್ಪಾವತಿ, ಗ್ರಂಥಾಲಯ ಮೇಲ್ವಿಚಾರಕಿ...
ಕಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವು ಇಂದು ಕೋಟೆಮುಂಡುಗಾರು ಹಿ. ಪ್ರಾ. ಶಾಲೆಯಲ್ಲಿ ಜರುಗಿತು. ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಬೇಬಿ ಕೆ. ಸಿ, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಜಯಂತಿ, ಶ್ರೀಮತಿ ಶೇಷಮ್ಮ, ಅಂ. ಕಾರ್ಯಕರ್ತೆ ಕು. ದೀಪ್ತಿ ಇವರುಗಳು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.
ಬಾಳಿಲ ಗ್ರಂಥಾಲಯದ ಕಟ್ಟಡದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವು ನಡೆಯಿತು. ಬಾಳಿಲ ಗ್ರಾ.ಪಂ.ನ ಸದಸ್ಯರಾದ ಶ್ರೀಮತಿ ತ್ರಿವೇಣಿಯವರು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬಾಳಿಲ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ದಯಾನಂದಿನಿ, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಶೋಭಾ, ಶ್ರೀಮತಿ ಮೋಹಿನಿ ಹಾಗೂ ಸಹಾಯಕಿಯಾಗಿ ಶ್ರೀಮತಿ ಶಶಿಕಲಾ ಬಾಳಿಲ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ಮೋಹಿನಿಯವರು...
ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ನಡೆದ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಇಂದು ನಡೆಯಿತು. ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ವೈದ್ಯಾಧಿಗಳು, ಸಿಬ್ಬಂದಿಗಳು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಈ ಜೀವನಾ ಒಂದು ಯಾತ್ರೆಯೋಪ್ರತೀ ದಿನಾ ಇಲ್ಲಿ ಜಾತ್ರೆಯೋ...ಮನಸ್ಸಲಿ ಏನೇನೋ ಯೋಚನೆಪ್ರೀತಿಯೇ ಇಲ್ಲಿ ಸಂಪಾದನೆ ನೋವನು ಮರೆಸೊ ಪ್ರೀತಿಯೋಅಥವಾ ನೋವನು ಕೊಡುವ ಪ್ರೀತಿಯೋ... ಇಂದು ಶಿಕ್ಷೆಯಾ ಕೊಡುವ ಮನುಜರುಮುಂದೆ ಅವರೆ ಶಿಕ್ಷೆಯ ಅನುಭವಿಸುವರು... ಕಳೆದು ಹೋದ ಸಮಯವಂತೂಮತ್ತೆ ಎಂದೂ ತಿರುಗಿ ಬಾರದು...ನೀ ಮಾಡಿದ ಪಾಪ-ಪುಣ್ಯವಾನೀ ಅನುಭವಿಸೋ ಕಾಲ ಬರುವುದು... ನಿರೀಕ್ಷೆಯೂ ನಿರಂತರ...ಇಲ್ಲಿ ಪ್ರತೀಕ್ಷೆಯೂ ನಿರಂತರ... ಈ...
ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ, ಪಶು ಚಿಕಿತ್ಸಾಲಯ ಬೆಳ್ಳಾರೆ ವತಿಯಿಂದ ಉಚಿತ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮವು ಜ.30 ರಂದು ಬೆಳ್ಳಾರೆಯಲ್ಲಿ ನಡೆಯಿತು. ಹಿರಿಯ ಪಶು ವೈದ್ಯಕೀಯ ಪರೀಕ್ಷಕ ವಿಶ್ವನಾಥರವರು ನಾಯಿಗಳಿಗೆ ಲಸಿಕೆ ನೀಡಿದರು.
ಸುಳ್ಯ ಇನ್ನರ್ ವ್ಹೀಲ್ ಕ್ಲಬ್ ಮತ್ತು ಶಿಶು ಕಲ್ಯಾಣ ಇಲಾಖೆಯ ವತಿಯಿಂದ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಮಾಹಿತಿ ಶಿಬಿರ ನಡೆಯಿತು. ಶಿಬಿರದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷೆ ಜಯಮಣಿ ಮಾಧವ ವಹಿಸಿದ್ದರು. ಇಲಾಖೆಯ ಅಧಿಕಾರಿ ಶ್ರೀಮತಿ ರಶ್ಮಿ ನೆಕ್ರಾಜೆ ದೀಪ ಬೆಳಗಿಸಿದರು. ಡಾ.ವೀಣಾ ಪಾಲಚಂದ್ರ ಕಿಶೋರಿಯವರಿಗೆ ಯೌವನಾವಸ್ಥೆಯಲ್ಲಿ ಬೇಕಾದ ಆರೋಗ್ಯ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕ್ಲಬ್...
Loading posts...
All posts loaded
No more posts
