ಕಲ್ಲುಗುಂಡಿ ಬಳಿಯ ರಬ್ಬರ್ ತೋಟದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಕಲ್ಲುಗುಂಡಿ ಸಮೀಪದ ರಬ್ಬರ್ ತೋಟದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆಯೋ , ಕೊಲೆಯೋ ಎಂದು ತನಿಖೆಯಿಂದ ತಿಳಿದುಬರಬೇಕಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ವ್ಯಕ್ತಿಯನ್ನು ಪಂಜ ಸಮೀಪದ ಪಂಬೆತ್ತಾಡಿಯ ರಾಮಣ್ಣ ನಾಯ್ಕ ಅವರ ಪುತ್ರ ಗಣೇಶ್ ಚೀಮುಳ್ಳು ಎಂದು ಗುರುತಿಸಲಾಗಿದೆ.

ಅಂಬೇಡ್ಕರ್ ರಕ್ಷಣಾ ವೇದಿಕೆಯ ನೆಟ್ಟಾರು ಘಟಕ ಉದ್ಘಾಟನೆ – ನೂತನ ಅಧ್ಯಕ್ಷರಾಗಿ ರಾಜೇಶ್ ಕಜೆ

ಅಂಬೇಡ್ಕರ್ ರಕ್ಷಣಾ ವೇದಿಕೆಯ ನೆಟ್ಟಾರು ಘಟಕದ ಉದ್ಘಾಟನೆ ನಡೆಯಿತು. ನೂತನ ಘಟಕದ ಅಧ್ಯಕ್ಷರಾಗಿ ರಾಜೇಶ್ ಕಜೆ, ಉಪಾಧ್ಯಕ್ಷರಾಗಿ ರಮೇಶ್ ನೆಟ್ಟಾರು, ಕಾರ್ಯದರ್ಶಿಯಾಗಿ ವಸಂತ ಬೊಳಿಯಮೂಲೆ, ಜತೆ ಕಾರ್ಯದರ್ಶಿಯಾಗಿ ಗಂಗಾಧರ ನಾಯ್ಕ ನವಗ್ರಾಮ, ನೆಟ್ಟಾರು ಮಹಿಳಾ ಘಟಕದ ಅಧ್ಯಕ್ಷರಾಗಿ ಉಷಾ ಎಸ್. ನವಗ್ರಾಮ, ಮಹಿಳಾ ಕಾರ್ಯದರ್ಶಿಯಾಗಿ ಹರಿಣಾಕ್ಷಿ ನೆಟ್ಟಾರು ಆಯ್ಕೆಯಾದರು. ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ...
Ad Widget

ಹರಿಹರ – ಕಟ್ಟ ರಸ್ತೆಯಲ್ಲಿ ಹಗಲೇ ಸಂಚರಿಸುತ್ತಿರುವ ಒಂಟಿ ಸಲಗ – ಜನರಲ್ಲಿ ಭಯ

ಹರಿಹರಪಲ್ಲತ್ತಡ್ಕದಿಂದ ಕಟ್ಟಕ್ಕೆ ಹೋಗುವ ರಸ್ತೆಯಲ್ಲಿ ಹಗಲಿನ ವೇಳೆಯಲ್ಲಿಯೇ ಆನೆ ಸಂಚರಿಸುತ್ತಿರುವುದು ಜನರಲ್ಲಿ ಭಯದ ವಾತಾವರಣ ಮೂಡಿಸಿದೆ. ಫೆ. 9 ರಂದು ಸಂಜೆ 6 ಗಂಟೆಗೆ ದ್ವಿಚಕ್ರ ಸವಾರನಿಗೆ ಒಂಟಿ ಸಲಗ ಅಡ್ಡ ಬಂದಿದ್ದು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಆನೆ ಕಂಡು ಸ್ಕೂಟರನ್ನು ಕೂಡಲೇ ತಿರುಗಿಸಿದ್ದಾರೆ. ಈ ಭಾಗದಲ್ಲಿ ಕಾಲ್ನಡಿಗೆಯಲ್ಲಿ ಹಾಗೂ ದ್ವಿಚಕ್ರ ವಾಹನದಲ್ಲಿ ಹೋಗುವ ಸವಾರರು...

ಫೆ.13 : ಮುಕ್ಕೂರಿನಲ್ಲಿ ಆಧಾರ್ ನೋಂದಣಿ ಶಿಬಿರ

ಮುಕ್ಕೂರು : ಕುಂಡಡ್ಕ- ಮುಕ್ಕೂರು ನೇಸರ ಯುವಕ ಮಂಡಲ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಆಶ್ರಯದಲ್ಲಿ ಫೆ.13 ರಂದು ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಮುಕ್ಕೂರು ಶಾಲಾ ವಠಾರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನುಶಿವಳ್ಳಿ ಸಂಪನ್ನ ಬೆಳಂದೂರು ವಲಯ ಅಧ್ಯಕ್ಷ ಮೋಹನ ಬೈಪಡಿತ್ತಾಯ ಉದ್ಘಾಟಿಸಲಿದ್ದಾರೆ. ನೇಸರ...

ಹರಿಹರ ಪಲ್ಲತ್ತಡ್ಕ : ಬಿ.ಎಸ್.ಎನ್.ಎಲ್ ಕೇಬಲ್ ಅಳವಡಿಕೆಗೆ ಸ್ಥಳೀಯರೇ ಖರ್ಚು – ಇಲಾಖೆಯಿಂದ ನಿರ್ಲಕ್ಷ್ಯ

ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ಜಿಯೋ ಕೇಬಲ್ ಅಳವಡಿಸುವ ಸಂದರ್ಭದಲ್ಲಿ ಬಿ.ಎಸ್.ಎನ್.ಎಲ್ ಕೇಬಲ್ ಕಟ್ ಮಾಡಿದ್ದರು. ಇದರಿಂದಾಗಿ ಬಿ.ಎಸ್.ಎನ್.ಎಲ್. ಲ್ಯಾಂಡ್ ಲೈನ್ ಸಂಪರ್ಕ ಸರಿಯಾಗಿ ಇರಲಿಲ್ಲ. ಇದನ್ನು ಸ್ಥಳೀಯರೇ ಸೇರಿ ಹಳೆಯ ಕೇಬಲ್ ಗಳನ್ನೇ ಸರಿಪಡಿಸಿ ಲ್ಯಾಂಡ್ ಲೈನ್ ಸಂಪರ್ಕವನ್ನು ಸರಿಪಡಿಸಿದ್ದರು. ಆದರೆ ಕೆಲವರಿಗೆ ಇಂಟರ್ನೆಟ್ ಸಂಪರ್ಕ ಸಿಗುತ್ತಿರಲಿಲ್ಲ ಹಾಗೂ ಫೋನ್ ನಲ್ಲಿ ಮಾತನಾಡುವ...

ಸಂಪಾಜೆ : ವಿದ್ಯುತ್ ಬಿಲ್ ಮುಂಗಡ ಪಾವತಿಸಿದವರಿಗೆ ಸೆಸ್ಕ್ ವತಿಯಿಂದ ಸನ್ಮಾನ

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಾರ್ಯ ಮತ್ತು ಪಾಲನಾ ಉಪವಿಭಾಗ ಮಡಿಕೇರಿ ವತಿಯಿಂದ ಚೆಂಬು ಗ್ರಾ.ಪಂ.ಮಾಜಿ ಅಧ್ಯಕ್ಷ ಎನ್.ವಿ.ಕೃಷ್ಣಪ್ಪ ನಡುಬೆಟ್ಟು, ಪೆರಾಜೆ ಗ್ರಾಮದ ಥೋಮಸ್ ಬಿಳಿಯಾರು, ಕೊಡಗು ಸಂಪಾಜೆಯಿಂದ ಇಸ್ಮಾಯಿಲ್ ಚಡಾವುರವರನ್ನು ಸೆಸ್ಕ್ ಎಇಇ ಮಹೇಶ್ ಮತ್ತು ಸಿಬ್ಬಂದಿವರ್ಗದವರು ಸಂಪಾಜೆ ವಿದ್ಯುತ್ ಕಚೇರಿಯಲ್ಲಿ ಸನ್ಮಾನಿಸಿದರು.ಸಮಯಕ್ಕೆ ಮುಂಚಿತವಾಗಿಯೇ ಇವರು ವಿದ್ಯುತ್ ಬಿಲ್ ಪಾವತಿಸುತ್ತಿದ್ದರು. ಈ ಸಂದರ್ಭದಲ್ಲಿ...

ಫೆ.19 ರಂದು ಸುಳ್ಯದಲ್ಲಿ 25 ನೇ ಕನ್ನಡ ಸಾಹಿತ್ಯ ಸಮ್ಮೇಳನ – ಆಮಂತ್ರಣ ಪತ್ರಿಕೆ ಬಿಡುಗಡೆ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಫೆ.19ರಂದು ನೆಹರೂ ಸ್ಮಾರಕ ಕಾಲೇಜಿನಲ್ಲಿ ನಡೆಯುವ 25ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನೆಹರೂ ಸ್ಮಾರಕ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ, ಸಾಹಿತಿ ಡಾ.ಪೂವಪ್ಪ ಕಣಿಯೂರು ಅಧ್ಯಕ್ಷತೆಯಲ್ಲಿ ಫೆ.19 ರಂದು 25ನೇ ಕನ್ನಡ ಸಾಹಿತ್ಯ ಸಮ್ಮೇಳನ...

ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಶ್ರಮದಾನ

2021 ಪೆಬ್ರವರಿ 07 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯದ ಸದಸ್ಯರಿಂದ ಶ್ರಮದಾನ ಫೆ. 7 ರಂದು ನಡೆಯಿತು. ಘಟಕದ ಸಂಯೋಜಕರಾದ ಸತೀಶ್ ಟಿ.ಎನ್. ಹಾಗೂ ಮಣಿಕಂಠ ಕಟ್ಟ ಇವರ ನೇತೃತ್ವದಲ್ಲಿ ಗಡಿಕಲ್ಲು ವಿಷ್ಣುಮೂರ್ತಿ ದೈವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ದ್ವಾರವನ್ನು ಶ್ರಮಸೇವೆಯ ಮುಖಾಂತರ ಮಾಡಲಾಯಿತು. ಶ್ರೀ ಕ್ಷೇತ್ರ...

ಪ್ರಕೃತಿ ವಿಸ್ಮಯ : ಗೊನೆಯಾಗಿ ಕಡಿದ ಬಾಳೆಯಲ್ಲಿ ಮತ್ತೆ ಗೊನೆ

ಗೊನೆಯಾಗಿ ಕಡಿದ ಬಾಳೆಯಲ್ಲಿ ಮತ್ತೆ ಗೊನೆ ಬಂದು ಪ್ರಕೃತಿ ತನ್ನ ವೈಶಿಷ್ಟ್ಯತೆಯನ್ನು ಪ್ರದರ್ಶಿಸಿದೆ. ಈ ವಿಸ್ಮಯ ಯುವ ಸಾಹಿತಿ,ಕೃಷಿಕರು ಆಗಿರುವ ಗುತ್ತಿಗಾರು ಗ್ರಾಮದ ಹೊಸೊಳಿಕೆ ಯೋಗೀಶ್ ರವರ ತೋಟದಲ್ಲಿ ಕಂಡುಬಂದಿದೆ.

ಸುಳ್ಯ : ಎಸ್.ಡಿ.ಪಿ.ಐ. ಮುಖಂಡನ ವಿರುದ್ಧ ಬಿಜೆಪಿ ಯುವ ಮೋರ್ಚಾ ದೂರು

ನಿರಂತರವಾಗಿ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ಎಸ್ ಡಿ ಪಿ ಐ ಮುಖಂಡ ರಿಯಾಜ್ ಫರಂಗಿಪೇಟೆ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸುಳ್ಯ ಮಂಡಲ ಯುವ ಮೋರ್ಚಾ ವತಿಯಿಂದ ಸುಳ್ಯ ನಗರದ ಉಪ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು. ಸಕಾರಾತ್ಮಕವಾಗಿ ಸ್ಪಂದಿಸಿದ ಪೋಲಿಸ್ ಉಪ ನಿರೀಕ್ಷಕರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ವೇಳೆ...
Loading posts...

All posts loaded

No more posts

error: Content is protected !!