ಮಣಿಮಜಲು ಗರಡಿಯಲ್ಲಿ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರುಗಳ ನೇಮೋತ್ಸವ

ಕಳಂಜ ಗ್ರಾಮದ ಮಣಿಮಜಲು ಗರಡಿಯಲ್ಲಿ ಶ್ರೀ ಕೊಡಮಣಿತ್ತಾಯ ಮತ್ತು ಶ್ರೀ ಬ್ರಹ್ಮಬೈದರುಗಳ ನೇಮೋತ್ಸವವು ಫೆ. 25ರಂದು ಜರುಗಿತು. ಬೆಳಿಗ್ಗೆ ನಾಗತಂಬಿಲ, ತೋರಣ ಮುಹೂರ್ತ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.ಸಂಜೆ ಕೊಡಮಣಿತ್ತಾಯ ದೈವದ ಗಗ್ಗರ ಸೇವೆ, ನೇಮೋತ್ಸವ ನಡೆಯಿತು. ರಾತ್ರಿ ಬೈದರ್ಕಳರು ಗರಡಿ ಇಳಿಯುವುದು, ಮಾಣಿಬಾಲೆ ದೇವಿಯ ಉತ್ಸವ ನಡೆದು ಬೆಳಗ್ಗೆ ಬೈದರ್ಕಳ ದರ್ಶನ ನೇಮೋತ್ಸವ,...

ಸುಳ್ಯ: ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಂದ ನೂತನ ತಾಲೂಕು ಪಂಚಾಯತ್ ಕಟ್ಟಡ ಉದ್ಘಾಟನೆ – ಗಣ್ಯರ ಉಪಸ್ಥಿತಿ

ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಸುಳ್ಯ ತಾಲೂಕು ಪಂಚಾಯತ್ ಕಟ್ಟಡದ ಉದ್ಘಾಟನಾ ಸಮಾರಂಭವು ಇಂದು ನಡೆಯಿತು. ನೂತನ ಕಟ್ಟಡವನ್ನು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿಸುಳ್ಯ ಶಾಸಕ ಹಾಗೂ ಮೀನುಗಾರಿಕಾ, ಬಂದರು ಇಲಾಖಾ ಸಚಿವ ಎಸ್.ಅಂಗಾರ , ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿ.ಪಂ. ಕಸ್ತೂರಿ...
Ad Widget

ಚೊಕ್ಕಾಡಿ ಉಳ್ಳಾಕುಲು ದೈವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

ಅಮರಪಡ್ನೂರು ಗ್ರಾಮದ ಶ್ರೀ ಚೊಕ್ಕಾಡಿ ಉಳ್ಳಾಕುಲು ಯಾನೆ ನಾಯರ್ ಭೂತ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ ಮಾಡಿ ಸರಕಾರ ಆದೇಶಿಸಿದೆ.ಸದಸ್ಯರಾಗಿ ಐತಪ್ಪ ನಾಯ್ಕ ಮುಂಡಕಜೆ, ಶ್ರೀಮತಿ ಧನಲಕ್ಷ್ಮೀ ಕುಸುಮಾಧರ ಕೊಳಂಬೆ, ಶ್ರೀಮತಿ ಪುಷ್ಪವೇಣಿ ಯಶವಂತ ಕಾನಡ್ಕ ಮನೆ, ಶ್ರೀನಾಥ ನೆಲ್ಲಿಕುಂಜ ಮನೆ, ಪ್ರದೀಪ್ ಬೊಳ್ಳೂರು, ಹರಿಶ್ಚಂದ್ರ ಗೌಡ ಮೋಂಟಡ್ಕ ಗಂಗಾಧರ ಹಿರಿಯಡ್ಕ, ಕೇಶವ ಗೌಡ...

ಸ.ಹಿ.ಪ್ರಾ.ಶಾಲೆ ಮುರುಳ್ಯ ಶಾಂತಿನಗರದಲ್ಲಿ ತಂಬಾಕು ಮುಕ್ತ ಶಾಲೆ – ಗುಲಾಬಿ ದಿನಾಚರಣೆ

ಮಕ್ಕಳು ಹಾಗೂ ಯುವಜನತೆಯನ್ನು ತಂಬಾಕು ಹಾಗೂ ಇತರ ಮಾದಕ ವಸ್ತುಗಳಿಂದ ರಕ್ಷಿಸುವ ಸಲುವಾಗಿ ಮತ್ತು ಜಾಗೃತಿಯನ್ನು ಮೂಡಿಸುವ ಸಲುವಾಗಿ ತಂಬಾಕು ಮುಕ್ತ ಶಾಲೆ - ಗುಲಾಬಿ ದಿನಾಚರಣೆಯನ್ನು ಸ.ಹಿ.ಪ್ರಾ.ಶಾಲೆ ಮುರುಳ್ಯ ಶಾಂತಿನಗರ ಇಲ್ಲಿ ಫೆ. 24 ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳು ಸ್ಥಳೀಯ ಶಾಲಾ ಪರಿಸರದಲ್ಲಿ ಜಾಥಾವನ್ನು ನಡೆಸಿದರು ಹಾಗೂ ತಂಬಾಕು ವಿರೋಧಿ ಘೋಷಣೆಗಳನ್ನು...

ಸುಳ್ಯ: ಇಂದು (ಫೆ.26)ನೂತನ ತಾಲೂಕು ಪಂಚಾಯತ್ ಕಟ್ಟಡ ಉದ್ಘಾಟನೆ – ಸಚಿವ ಈಶ್ವರಪ್ಪ ಆಗಮನ

ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಸುಳ್ಯ ತಾಲೂಕು ಪಂಚಾಯತ್ ಕಟ್ಟಡದ ಉದ್ಘಾಟನಾ ಸಮಾರಂಭವು ಇಂದು (ಫೆ.26) ರಂದು ನಡೆಯಲಿದ್ದು ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.ಸುಳ್ಯ ಶಾಸಕ ಹಾಗೂ ಮೀನುಗಾರಿಕಾ, ಬಂದರು ಇಲಾಖಾ ಸಚಿವ ಎಸ್.ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುಜರಾಯಿ...

ಐವರ್ನಾಡು : ಶಿವಕೃಪಾ ಆಯಿಲ್ ಮತ್ತು ಫ್ಲೋರ್ ಮಿಲ್ ಶುಭಾರಂಭ

ಐವರ್ನಾಡಿನ ಕಾರ್ಕಳ ಕಾಂಪ್ಲೆಕ್ಸ್ ನಲ್ಲಿ ಅರುಣ್ ಗುತ್ತಿಗಾರ್‌ಮೂಲೆ ಮಾಲಕತ್ವದ ಶಿವಕೃಪಾ ಆಯಿಲ್ ಮತ್ತು ಫ್ಲೋರ್ ಮಿಲ್ ಫೆ.26ರಂದು ಶುಭಾರಂಭಗೊಳ್ಳಲಿದೆ.

ಸುಳ್ಯ : ಹೆಲ್ಮೆಟ್ ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆ

ಸರಕಾರದ ಆದೇಶದಂತೆ ಎಲ್ಲೆಡೆ ದ್ವಿಚಕ್ರ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ದಾಯ ವಾಗಿದ್ದು. ಹೆಲ್ಮೆಟ್ ಧರಿಸದೆ ಸಂಚಾರ ಮಾಡುವ ದ್ವಿಚಕ್ರ ಸವಾರರಿಗೆ ಪೊಲೀಸರ ದಂಡ ಒಂದೆಡೆಯಾದರೇ, ಹೆಲ್ಮೆಟ್ ಕಳ್ಳರಿಂದ ರಕ್ಷಿಸಿಕೊಳ್ಳುವುದು ತಲೆನೋವಾಗಿ ಪರಿಣಮಿಸಿದೆ.ಸುಳ್ಯ ನಗರದ ರಥಬೀದಿಯಲ್ಲಿ ನಿಲ್ಲಿಸಿದ ಬೈಕ್ ನಲ್ಲಿದ್ದ ಹೆಲ್ಮೆಟ್ ಕಳ್ಳತನ ವಾಗಿತ್ತು. ಕಳ್ಳತನ ಮಾಡಿ ತೆಗೆದುಕೊಂಡು ಹೊಗುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.ಸುಳ್ಯ ಪತ್ರಕರ್ತರೊಬ್ಬರು...

ಬೆಳ್ಳಾರೆ : ಗಟ್ಟಿಗಾರು, ತಡಗಜೆ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ

ಬೆಳ್ಳಾರೆ-ತಡಗಜೆ ಹಾಗೂ ಬೆಳ್ಳಾರೆ- ಗಟ್ಟಿಗಾರು ಸಂಪರ್ಕಿಸುವ ರಸ್ತೆಯು ರೂ. 5.16 ಲಕ್ಷ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳ್ಳಲಿದ್ದು, ಕಾಮಗಾರಿಗೆ ಬೆಳ್ಳಾರೆ ಗ್ರಾ.ಪಂ. ಸದಸ್ಯ ದಿನೇಶ್ಚಂದ್ರ ಹೆಗ್ಡೆ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರುಗಳಾದ ವೀಣಾ, ಜಯಶ್ರೀ, ಭವ್ಯ, ಗ್ರಾಮ ಸ್ವರಾಜ್ಯ ತಂಡದ ಮುಖಂಡ ರಾಮಕೃಷ್ಣ ಭಟ್ ಕುರುಂಬುಡೇಲು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿ ಸಭೆ – ರೈತರ ಸಮಸ್ಯೆಗಳ ಬಗ್ಗೆ ಚರ್ಚೆ

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿ ಸಭೆ ಫೆ. 19 ರಂದು ಸುಬ್ರಮಣ್ಯದಲ್ಲಿ ನಡೆಯಿತು. ಸಭೆಯಲ್ಲಿ ಕೃಷಿಕರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳಾದ ನುಸಿರೋಗ, ಅತಿವೃಷ್ಠಿ, ಹಳದಿ ರೋಗ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಮುಂದಿನ ದಿನಗಳಲ್ಲಿ ಹಳದಿ ರೋಗಕ್ಕೆ ಪರಿಹಾರ ನೀಡುವಂತೆ ಸರಕಾರದ ಗಮನ ಸೆಳೆಯಲು ಮತ್ತು ರೈತಪರ ಹೋರಾಟ ನಡೆಸಲು...

ಗ್ರಾ.ಪಂ.ಅಧ್ಯಕ್ಷ ಜಯಂತ ಬಾಳುಗೋಡು ಅವರಿಗೆ ಸನ್ಮಾನ

ಹರಿಹರಪಲ್ಲತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಜಯಂತ ಬಾಳುಗೋಡು ಅವರನ್ನು ಬಾಳುಗೋಡು ಕುಟುಂಬದ ಪರವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕುಟುಂಬದ ಮುಖ್ಯಸ್ಥರು ಉಪಸ್ಥಿತರಿದ್ದರು.
Loading posts...

All posts loaded

No more posts

error: Content is protected !!