- Wednesday
- May 6th, 2026
ಪಂಜ: ಇಲ್ಲಿಗೆ ಸಮೀಪದ ಚಿಂಗಾಣಿಗುಡ್ಡೆಯಲ್ಲಿ ಏಳು ವರ್ಷದ ಹಿಂದೆ ನಿರ್ಮಾಣವಾದ ಕುಡಿಯುವ ನೀರಿನ ಬೃಹತ್ ಟ್ಯಾಂಕ್ ಗೆ ಇದುವರೆಗೆ ಒಂದು ತೊಟ್ಟು ನೀರು ಬಿದ್ದಿಲ್ಲ. ಇಲ್ಲಿಂದ ಎಲ್ಲಿಗೂ ಇದುವರೆಗೆ ನೀರು ಸರಬರಾಜು ಮಾಡಲಾಗದೆ ಟ್ಯಾಂಕ್ ನಿರ್ಮಿಸಿದ ಉದ್ದೇಶವೇ ವಿಫಲವಾಗಿದೆ.ಏಳು ವರ್ಷದ ಹಿಂದೆ ಆಶಾ ತಿಮ್ಮಪ್ಪ ರವರು ಬೆಳ್ಳಾರೆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾಗ ಇಡೀ ಪಂಜಕ್ಕೆ...
ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಎ.𝟏𝟎ರಂದು ಹರಿಹರ-ಐನೆಕಿದು ರಸ್ತೆಯ ಗುಂಡಡ್ಕ ಸೇತುವೆಗೆ ಸಿಲುಕಿದ್ದ ಕಸ-ಕಡ್ಡಿ ಹಾಗೂ ಮರಗಳನ್ನು ತೆರವುಗೊಳಿಸಲಾಯಿತು.ನಂತರ ಹರಿಹರ ಪಲ್ಲತ್ತಡ್ಕ ಮುಖ್ಯ ಪೇಟೆಯಲ್ಲಿರುವ ಸೇತುವೆಗೆ ಅಡ್ಡಲಾಗಿ ಸಿಲುಕಿದ್ದ ಕಸಕಡ್ಡಿಗಳನ್ನು ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ- ಸತೀಶ್.ಟಿ.ಎನ್., ಮಣಿಕಂಠ ಹಾಗೂ ಸ್ವಯಂಸೇವಕರಾದ ಜಯಪ್ರಕಾಶ್, ಲಕ್ಷ್ಮಣ, ಚಂದ್ರಶೇಖರ ಕೋನಡ್ಕ,...
ಸುಳ್ಯ ನ.ಪಂ. ವ್ಯಾಪ್ತಿಯಲ್ಲಿ ೩ ಕೋಟಿ ರೂಗಳ ವಿವಿಧ ರಸ್ತೆಗಳ ಕಾಮಗಾರಿಗಳ ಗುದ್ದಲಿಪೂಜೆಯನ್ನು ಸಚಿವ ಅಂಗಾರ ನೆರವೇರಿಸಿದರು. ಕೇರ್ಪಳ- ಬೂಡು ರಸ್ತೆಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ರಸ್ತೆ ನಿರ್ಮಾಣಕ್ಕೆ ಬೇಕಾದ ಅನುದಾನ ತರಲು ನಾವು ಬದ್ಧರಾಗಿದ್ದೇವೆ. ಆದರೆ ಕೆಲವು ಕಡೆ ಜನರು ಭೂ ಒತ್ತುವರಿ ಮಾಡಿಕೊಂಡು ಅಥವಾ ಸ್ಥಳ ಬಿಟ್ಟುಕೊಡದೇ ರಸ್ತೆ ನಿರ್ಮಾಣಕ್ಕೆ...
ಎನ್ ಎಸ್ ಯು ಐ 50 ನೇ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಸುಳ್ಯದಲ್ಲಿ ಧ್ವಜಾರೋಹಣ ಕಾರ್ಯಕ್ರಮ ವನ್ನು ಆಚರಿಸಲಾಯಿತು. ಧ್ವಜಾರೋಹಣವನು ಎನ್ ಎಸ್ ಯು ಐ ಸುಳ್ಯ ವಿಧಾನ ಸಭಾ ಅಧ್ಯಕ್ಷರಾದ ಕೀರ್ತನ್ ಗೌಡ ಕೊಡಪಾಲ ಅವರು ನೆರವೇರಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಇವರು ಎನ್ ಎಸ್ ಯು ಐ ವಿದ್ಯಾರ್ಥಿ ಸಂಘದಲ್ಲಿ ಕಾರ್ಯನಿರ್ವಹಿಸಿದರು ಹಲವು...
ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯ ಬಳಿ ತೊಡಿಕಾನದ ಅಕ್ಷತಾ ಪ್ರಸಾದ್ ಉಳುವಾರು ಮಾಲಕತ್ವದ ಸಸ್ಯಹಾರಿ ಮತ್ತು ಮಾಂಸಾಹಾರಿ ಹೋಟೆಲ್ ಆರಾಧ್ ಮಾ. 31 ರಂದು ರಂದು ಶುಭಾರಂಭಗೊಂಡಿತು. ಇದರ ಉದ್ಘಾಟನೆಯನ್ನು ಮಹಾಬಲ ಕರ್ಕೆರ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಹಾಬಲೇಶ್ವರ ಚೊಕ್ಕಾಡಿ, ಯಶೋಧ ಉಳುವಾರು, ಶುಭ ಚೊಕ್ಕಾಡಿ, ಶ್ರೀಧರ ಶೇಟ್, ಗಜಾನನ ಶೇಟ್, ಮಮತಾ ಶ್ರೀಕಾಂತ್,...
ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ವತಿಯಿಂದ ಸಜ್ಜನ ಸಭಾಂಗಣ ಮೈದಾನ ಗೂನಡ್ಕ(ಸಂಪಾಜೆ)ದಲ್ಲಿ ನಿಗದಿತ ತಂಡಗಳ 30 ಗಜಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟವು ಏ.4 ಭಾನುವಾರ ಜರುಗಿತು.ಸೋಮಶೇಖರ ಕೊಯಿಂಗಾಜೆ ಅಧ್ಯಕ್ಷರು , ಕೃಷಿ ಪತ್ತಿನ ಸಹಕಾರಿ ಸಂಘ ಸಂಪಾಜೆ, ಪಂದ್ಯಾಕೂಟದ ಉದ್ಘಾಟನೆಯನ್ನು ನೆರವೇರಿಸಿದರು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಕೆ...
ಕಳಂಜ ಗ್ರಾಮದ ಕಿಲಂಗೋಡಿ ಶ್ರೀ ಧೂಮಾವತೀ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರಾ ನಡಾವಳಿಯು ಎ.12 ಹಾಗೂ ಎ.13 ರಂದು ನಡೆಯಲಿದೆ. ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಎ.12 ಸೋಮವಾರ ಬೆಳಿಗ್ಗೆ ಗಂಟೆ 9.00ರಿಂದ ಮಧ್ಯಾಹ್ನ ಗಂಟೆ 1.00ರ ತನಕ ಶ್ರೀ ರಮೇಶ್ಚಂದ್ರ ಕಿಲಂಗೋಡಿ ಮತ್ತು ಮನೆಯವರ ಸೇವಾರ್ಥವಾಗಿ ಹರಕೆಯ ಶ್ರೀ ಧೂಮಾವತೀ ದೈವದ ನೇಮೋತ್ಸವ ನಡೆಯಲಿದೆ. ರಾತ್ರಿ ಗಂಟೆ...
ಸರಕಾರಿ ಬಸ್ ನೌಕರರ ಮುಷ್ಕರ 2 ನೇ ದಿನಕ್ಕೆ ಕಾಲಿರಿಸಿದ್ದು ಸರಕಾರಿ ಬಸ್ ಸೇವೆ ಇಂದು ಕೂಡ ಇಲ್ಲದಾಗಿದೆ. ಸರಕಾರದ ಯಾವುದೇ ಸೂಚನೆ ಲೆಕ್ಕಿಸದೇ ತಮ್ಮ ಬೇಡಿಕೆ ಇಡೇರಿಸುವಂತೆ ನೌಕರರ ಸಂಘ ಒತ್ತಾಯಿಸಿದೆ. ಸುಳ್ಯದಲ್ಲಿ ಬಸ್ ಇಲ್ಲದಿದ್ದರೂ ಖಾಸಗಿ ವಾಹನಗಳು ತಮ್ಮ ಸೇವೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಹೆಚ್ಚೆನೂ ಸಮಸ್ಯೆ ಉದ್ಭವಿಸಿರುವುದು ಕಂಡುಬಂದಿಲ್ಲ. ಸುಳ್ಯ ಬಸ್ ನಿಲ್ದಾಣದಲ್ಲಿ...
ನೀರಬಿದಿರೆ ಕಮಿಲಡ್ಕ ಕೊಡಿಯಾಲಬೈಲ್ ಜಟ್ಟಿಪಳ್ಳಕ್ಕೆ ಸಾಗುವ ಕಾಲುದಾರಿ ಯಾವುದೇ ಅಭಿವೃದ್ಧಿ ಕಾಣದೇ ನಡೆದಾಡುವವರಿಗೆ ಹಾಗೂ ದ್ವಿಚಕ್ರ ಪ್ರಯಾಣಿಕರು ಪ್ರಯಾಸ ಪಡುವಂತಾಗಿದೆ. ಈ ಕಾಲುದಾರಿ ಉಬರಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ. ಇಲ್ಲಿಯ ಜನರಿಗೆ ವಾಹನ ಸೌಕರ್ಯ ಕಡಿಮೆ ಇದ್ದ ವೇಳೆ ಇದೇ ಕಾಲುದಾರಿಯನ್ನೇ ಬಳಸಿ ಸುಳ್ಯಕ್ಕೆ ಹೋಗುತ್ತಿದ್ದರು. ಈಗಲೂ ಅತೀ ಹೆಚ್ಚು ಜನರು ಈ ಕಾಲುದಾರಿಯನ್ನೇ...
ವಿಶ್ವ ಆರೋಗ್ಯ ದಿನವಾದ ಎ.7ರಂದು ಕಳಂಜ ಗ್ರಾಮ ಪಂಚಾಯತ್ ಕೊರೊನಾ ಕಾರ್ಯಪಡೆ ಸಮಿತಿ ಮತ್ತು ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕಳಂಜ ಗ್ರಾಮ ಪಂಚಾಯತಿನ ಗೌರಿ ಸಭಾಂಗಣದಲ್ಲಿ 45 ವರ್ಷ ಮೇಲ್ಪಟ್ಟ ಗ್ರಾಮಸ್ಥರಿಗೆ ಕೊರೊನಾ ಲಸಿಕೆ ಶಿಬಿರವನ್ನು ಬೆಳಿಗ್ಗೆ 10.00 ರಿಂದ ಸಂಜೆ 4.00 ಗಂಟೆಯವರೆಗೂ ಹಮ್ಮಿಕೊಳ್ಳಲಾಗಿತ್ತು. ಕಳಂಜ ಗ್ರಾಮ ಪಂಚಾಯತ್ ಕೊರೊನಾ ಕಾರ್ಯಪಡೆ...
Loading posts...
All posts loaded
No more posts
