ಜಯನಗರ : ಗಂಡನ ಸಂಬಂಧಿಯೊಂದಿಗೆ ಹೆಂಡತಿ ಪರಾರಿ

ಜಯನಗರದ ಸುಮಾರು ೩೬ ವರ್ಷದ ಮಹಿಳೆಯೊಬ್ಬಳು ತನ್ನ ಗಂಡ ಮಾನಸಿಕ ಹಿಂಸೆ ನೀಡುತ್ತಾನೆ ಎಂದು ಆರೋಪಿಸಿ ಇಬ್ಬರು ಮಕ್ಕಳೊಂದಿಗೆ ಗಂಡನ ಸಂಬಂಧಿಕನೊಂದಿಗೆ ಓಡಿಹೋದ ಘಟನೆ ವರದಿಯಾಗಿದೆ. ಕೆಲ ದಿನಗಳ ಹಿಂದೆ ಈ ಮಹಿಳೆಯೇ ಸುಳ್ಯ ಪೋಲೀಸ್ ಠಾಣೆಗೆ ತೆರಳಿ ಗಂಡ ತನಗೆ ಹಿಂಸೆ ನೀಡುತ್ತಾನೆ. ನನಗೆ ಈತನೊಂದಿಗೆ ಇರಲು ಸಾಧ್ಯವಿಲ್ಲ ಎಂದು ದೂರು ನೀಡಿದ್ದಳು. ಬಳಿಕ...

ಸುಳ್ಯ : ಸವಿತಾ ಜ್ಯುವೆಲ್ಲರಿ ವರ್ಕ್ಸ್ ಶುಭಾರಂಭ

ಸುಳ್ಯದ ಜ್ಯೋತಿ ವೃತ್ತದ ಬಳಿ ಸವಿತಾ ಜ್ಯುವೆಲ್ಲರಿ ವರ್ಕ್ ಸೆ.1 ರಂದು ಶುಭಾರಂಭಗೊಂಡಿದೆ. ಇಲ್ಲಿ ಎಲ್ಲಾ ಬಗೆಯ ಚಿನ್ನ ಬೆಳ್ಳಿಯ ಕೆಲಸಗಳನ್ನು ಮಾಡಿಕೊಡಲಾಗುವುದು. ಹಾಗೂ ಗ್ರಾಹಕರು ತಮಗೆ ಬೇಕಾದಂತೆ ಆಭರಣ, ಮೂರ್ತಿ ಹಾಗೂ ಇತರ ಸಾಮಗ್ರಿಗಳನ್ನು ತಯಾರಿಸಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.
Ad Widget

ಕುರುಂಜಿಭಾಗ್ : ಶ್ರೀ ಮಹಾಲಕ್ಷ್ಮಿ ಜನರಲ್ ಸ್ಟೋರ್ ಶುಭಾರಂಭ

ಸುಳ್ಯದ ಕುರುಂಜಿಭಾಗ್ ಕೆ.ವಿ.ಜಿ.ಸರ್ಕಲ್ ನಲ್ಲಿ ಶ್ರೀ ಮಹಾಲಕ್ಷ್ಮಿ ಜನರಲ್ ಸ್ಟೋರ್ ಶುಭಾರಂಭ ಸೆ.1ರಂದು ಶುಭಾರಂಭಗೊಂಡಿತು. ಎಲ್ಲಾ ಬಗೆಯ ಉತ್ತಮ ಗುಣಮಟ್ಟದ ಜಿನಸು ಸಾಮಾಗ್ರಿಗಳು ದೊರೆಯುತ್ತದೆ. ಸುಳ್ಯ ನಗರ 2 ಕಿ.ಮೀ ವ್ಯಾಪ್ತಿಯಲ್ಲಿ ಹೋಮ್ ಡೆಲಿವರಿ ಲಭ್ಯವಿದೆ ಎಂದು ಮಾಲಕರಾದ ಸಂದೀಪ್ ತಿಳಿಸಿದ್ದಾರೆ.

ಮರ್ಕಂಜ ಪಿಡಿಓ ಆಗಿ ರವಿಚಂದ್ರ ಅಧಿಕಾರ ಸ್ವೀಕಾರ

ಮರ್ಕಂಜ ಗ್ರಾಮ ಪಂಚಾಯತ್ ನ ಪ್ರಭಾರ ಪಿಡಿಓ ಆಗಿ ರವಿಚಂದ್ರ ಎ ಅಧಿಕಾರ ಸ್ವೀಕರಿಸಿದರು. ಪಿಡಿಓ ಧನಪತಿಯವರು ಅಧಿಕಾರ ಹಸ್ತಾಂತರಿಸಿದರು.ಧನಪತಿಯವರು ಗುತ್ತಿಗಾರು ಗ್ರಾಮ ಪಂಚಾಯತ್ ಗೆ ವರ್ಗಾವಣೆಯಾಗಿದ್ದಾರೆ.

ಬೆಳ್ಳಾರೆಯಲ್ಲಿ ‘ಕ್ಷಯ ಮುಕ್ತ ಭಾರತ’ ಕಿರುಚಿತ್ರಕ್ಕೆ ಮುಹೂರ್ತ

ಜೇಸಿಐ ಬೆಳ್ಳಾರೆ, ಯುವ ಜೇಸಿ ವಿಭಾಗ, ಕ್ಷಯ ಚಿಕಿತ್ಸಾ ಘಟಕ ಆರೋಗ್ಯ ಇಲಾಖೆ ಸುಳ್ಯ ನೇತೃತ್ವದಲ್ಲಿ ನಡೆಯುತ್ತಿರುವ 'ಕ್ಷಯ ಮುಕ್ತ ಭಾರತ' ಕಿರುಚಿತ್ರಕ್ಕೆ ಮುಹೂರ್ತ ಕಾರ್ಯಕ್ರಮ ಬೆಳ್ಳಾರೆ ಅಂಗನವಾಡಿ ಕೇಂದ್ರದಲ್ಲಿ ಸೆ.1ರಂದು ನಡೆಯಿತು. ಕಿರುಚಿತ್ರದ ಮುಹೂರ್ತವನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಜೇಸಿ ರಾಜೀವಿ.ಆರ್ ರೈ ನೆರವೇರಸಿ ಕಿರುಚಿತ್ರಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬೆಳ್ಳಾರೆ...

ಅರಂತೋಡು : ಮಾತೃಶ್ರೀ ಜನರಲ್ ಸ್ಟೋರ್ & ಚಿಕನ್ ಸೆಂಟರ್ ಶುಭಾರಂಭ

ತೊಡಿಕಾನ ಗ್ರಾಮದಲ್ಲಿ ಪರ್ನೋಜಿ ಉಲ್ಲಾಸ್ ನಗರದಲ್ಲಿ ನಿವೃತ್ತ ಸೈನಿಕ ಚಂಗಪ್ಪ ಗೌಡ ಕಲ್ಲಗದ್ದೆ ಮಾಲಕತ್ವದ ಮಾತೃಶ್ರೀ ಜನರಲ್ ಸ್ಟೋರ್ & ಚಿಕನ್ ಸೆಂಟರ್ ಸೆ.1 ರಂದು ಶುಭಾರಂಭಗೊಂಡಿತು.

ದೇಶದಲ್ಲಿ ತಾಲಿಬಾನಿ ಮಾನಸಿಕತೆಯ ವ್ಯಕ್ತಿಗಳ ಬಗ್ಗೆ ಎಚ್ಚರ ವಹಿಸುವುದೊಳಿತು – ಜಗದೀಶ್ ಕಾರಂತ

ಅಫ್ಘಾನಿಸ್ತಾನದ ತಾಲಿಬಾನಿಗಳ ಮಾನಸಿಕತೆಯ ವ್ಯಕ್ತಿಗಳು ಭಾರತದಲ್ಲೂ ಇದ್ದು ಹಿಂದೂ ಸಮುದಾಯ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಅದೇ ಮಾನಸಿಕತೆಯ ವ್ಯಕ್ತಿಗಳು ಹಿಂದೂಗಳನ್ನು ಶೋಷಣೆ ಮಾಡುವ ಸನ್ನಿವೇಶಗಳೂ ಎದುರಾಗಬಹುದು ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಹೇಳಿದ್ದಾರೆ. ತಾಲೂಕಿನ ಮಂಡೆಕೋಲು ಗ್ರಾಮದ ಮೈಲೆಟ್ಟಿಪಾರೆ ಎಂಬಲ್ಲಿ ಗೌರಿ ಎಂಬ ಬಡ ದಲಿತ ಮಹಿಳೆಗೆ ವೇದಿಕೆಯ...

ಬಳ್ಪ : ಗ್ರಾಮಾಭಿವೃದ್ಧಿ ಯೋಜನೆಯ ಆರೋಗ್ಯ ರಕ್ಷಾ ಸಹಾಯಧನ ವಿತರಣೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ)ಸುಳ್ಯ ತಾಲೂಕಿನ ಗುತ್ತಿಗಾರು ವಲಯದ ಬಳ್ಪ ಕಾರ್ಯಕ್ಷೇತ್ರದಲ್ಲಿ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದಡಿಯಲ್ಲಿ ಬರುವ ಆರೋಗ್ಯ ರಕ್ಷಾ ಕಾರ್ಯಕ್ರಮದಲ್ಲಿ ಧನ್ವಂತರಿ ಸಂಘದ ಸದಸ್ಯರಾದ ಶ್ರೀಮತಿ ವಸಂತಿಯವರಿಗೆ 6920 ಮಂಜೂರಾಗಿರುತ್ತದೆ. ಮಂಜೂರಾದ ಮೊತ್ತವನ್ನು ಒಕ್ಕೂಟದ ಅಧ್ಯಕ್ಷರಾದ ಮೋಹನ್ ಬಿ ಕೆರೆ ರವರು ವಿತರಿಸಿದರು. ಈ ಸಂದರ್ಭ ವಲಯ ಮೇಲ್ವಿಚಾರಕ ಮುರಳೀಧರ,...

ಬಳ್ಪ : ಆರೋಗ್ಯ ರಕ್ಷಾ ಸಹಾಯಧನ ಹಸ್ತಾಂತರ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ)ಸುಳ್ಯ ತಾಲ್ಲೂಕಿನ ಗುತ್ತಿಗಾರು ವಲಯದ ಬಳ್ಪ ಕಾರ್ಯಕ್ಷೇತ್ರದಲ್ಲಿ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದಡಿಯಲ್ಲಿ ಬರುವ ಆರೋಗ್ಯ ರಕ್ಷಾ ಸಹಾಯಧನ ಧರ್ಮಶ್ರೀ ಸಂಘದ ಸದಸ್ಯರಾದ ಶ್ರೀಮತಿ ಭವಾನಿರವರಿಗೆ 7200 ಮಂಜೂರಾಗಿರುತ್ತದೆ. ಮಂಜೂರಾದ ಮೊತ್ತವನ್ನು ವಲಯದ ಮೇಲ್ವಿಚಾರಕರಾದ ಮುರಲೀಧರ ರವರು ವಿತರಿಸಿದರು. ಈ ಸಂದರ್ಭ ಒಕ್ಕೂಟದ ಅಧ್ಯಕ್ಷರಾದ ಮೋಹನ್ ಬಿ ಕೆರೆ,...

ವಳಲಂಬೆ : ಸ್ತ್ರೀ ಶಕ್ತಿ ಸಂಘದಿಂದ ವಿದ್ಯಾರ್ಥಿನಿಯ ಚಿಕಿತ್ಸೆಗೆ ನೆರವು

ಶ್ರೀ ದುರ್ಗಾ ಸ್ತ್ರೀ ಶಕ್ತಿ ಗುಂಪು ವಳಲಂಬೆ ಇದರ ಸದಸ್ಯೆ ಶ್ರೀಮತಿ ಭಾಗೀರಥಿ ಯವರ ಮಗಳು ಅಂತಿಮ ಬಿ.ಕಾಂ ಓದುತ್ತಿರುವ ಕು. ನವ್ಯಶ್ರೀ ಇವಳು ಅನಾರೋಗ್ಯದಿಂದ ಇದ್ದು ಹೆಚ್ಚಿನ ಚಿಕಿತ್ಸೆ ಬೇಕಾಗಿರುವುದರಿಂದ ಗುಂಪಿನ ವತಿಯಿಂದ ರೂ. 5000 ವನ್ನು ಸದಸ್ಯೆ ಭಾಗೀರಥಿ ಯವರಿಗೆ ನೀಡಲಾಯಿತು.
Loading posts...

All posts loaded

No more posts

error: Content is protected !!