ಶರತ್ ನೀರ್ಕಜೆ ನಿರ್ದೇಶನದ ಕಿರುಚಿತ್ರ ಪೋಸ್ಟರ್ ಬಿಡುಗಡೆ

ಯುವಜನತೆ ಹೊಸತನ ತರುವಲ್ಲಿ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. ಅದರಲ್ಲಂತೂ ಸಿನಿಮಾದ ಕಡೆ ಒಲವ ತೋರಿಸುವ ಕಲಾವಿದರೇ ಹೆಚ್ಚಾಗುತ್ತಿದ್ದಾರೆ. ಹೊಸ ಹೊಸ ಕಥೆಗಳು, ಆಲೋಚನೆಗಳು, ಭಾವನೆಗಳನ್ನು ಕಿರುಚಿತ್ರ, ಆಲ್ಬಮ್ ಸಾಂಗ್ ಗಳ ಮೂಲಕ ಪ್ರೇಕ್ಷಕರ ಮನ ಗೆಲ್ಲುವಲ್ಲಿ ನಮ್ಮ ಕರಾವಳಿ ಜನತೆ ಸೈ ಎನಿಸಿಕೊಂಡಿದ್ದಾರೆ. ಆದರೆ ಇಲ್ಲೊಂದು ಕಿರುಚಿತ್ರ ಪೋಸ್ಟರ್ ಬಿಡುಗಡೆಗೊಳ್ಳುವ ಮೊದಲೇ ಮನೆಮಾತಾಗಿದೆ. ಶರತ್ ನೀಕ೯ಜೆ ನಿದೇ೯ಶನದ...

ಅಮೃತ್ ಗ್ರಾಮ ಪಂಚಾಯತ್ ಯೋಜನೆಯಡಿ ಆಯ್ಕೆಯಾದ ಮಂಡೆಕೋಲು ಅರಂತೋಡು ಮತ್ತು ಮರ್ಕಂಜ ಗ್ರಾ.ಪಂ.ಗೆ 25 ಲಕ್ಷ ಅನುದಾನ – ಸಚಿವ ಅಂಗಾರ

ಅಮೃತ್ ಯೋಜನೆಯಡಿ ಆಯ್ಕೆ ಮಾಡಲಾದ ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು, ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಆಯಾ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಮೇಲುಸ್ತುವಾರಿ ವಹಿಸಬೇಕು ಎಂದು ಸಚಿವ ಎಸ್.ಅಂಗಾರ ಸೂಚಿಸಿದರು. ಅಮೃತ್ ಗ್ರಾಮ ಪಂಚಾಯತ್ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಗ್ರಾಮ ಪಂಚಾಯತ್‍ಗೆ 25 ಲಕ್ಷ...
Ad Widget

ಡಾ.ರಶ್ಮಿ ಕೆ.ಎಂ. ಅವರಿಗೆ ಪಿಎಚ್‌ಡಿ ಪದವಿ

low power testing using scan chain masking and re-ordering for diagnosis of multiple chain failures ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದ ಡಾ.ರಶ್ಮಿ ಕೆಎಂ ಅವರಿಗೆ ವಿಟಿಯು ಬೆಳಗಾಂ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ. ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜ್ ಪ್ರಾಧ್ಯಾಪಕ ಡಾ.ಕೆ.ಎನ್.ಮುರಳೀಧರ ಅವರು ಮಾರ್ಗದರ್ಶನ ನೀಡಿದ್ದಾರೆ.ಚೆಂಬು ಗ್ರಾಮದ ಮಾಗಧಾರ...

ಸರಸ್ವತಿ ಕಾಮತ್ ಮೇಲೆ ಹಲ್ಲೆ ಪ್ರಕರಣ- ಹರೀಶ್ ಕಂಜಿಪಿಲಿ ಮತ್ತು ತಂಡಕ್ಕೆ ಶಿಕ್ಷೆ ನಿಗದಿಪಡಿಸಿ ಆದೇಶ

ಸುಳ್ಯ: 2014 ರ ಲೋಕಸಭಾ ಚುನಾವಣೆಯ ಸಂದರ್ಭ ಹರೀಶ್ ಕಂಜಿಪಿಲಿ ಮತ್ತು ತಂಡದವರು  ಅಂದಿನ ಜಿ.ಪಂ. ಚುನಾವಣೆಗೆ ಸ್ಪರ್ಧಿಸಿದ್ದ ಸರಸ್ವತಿ ಕಾಮತ್ ಅವರ ಮೇಲೆ ಮಾಡಿದ್ದಾರೆನ್ನಲಾದ  ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.೬ ರಂದು ಸುಳ್ಯ ನ್ಯಾಯಾಲಯದಲ್ಲಿ ತೀರ್ಪು ಹೊರಬಂದಿದ್ದು ಹರೀಶ್ ಕಂಜಿಪಿಲಿ ಮತ್ತವರ ತಂಡಕ್ಕೆ ಶಿಕ್ಷೆ ನಿಗದಿಯಾಗಿದೆ. ಘಟನೆಯ ಹಿನ್ನಲೆ: 2014 ರ ಲೋಕಸಭಾ  ಚುನಾವಣೆಯ ಸಂದರ್ಭ ...

ಅವಘಡಕ್ಕೆ ಸಾಕ್ಷಿಯಾಗುವಂತಿದೆ ಚಾಮಡ್ಕ ಫಾಲ್ಸ್

ಅಮರ ಮುಡ್ನೂರು ಗ್ರಾಮದ ಚಾಮಡ್ಕ ಫಾಲ್ಸ್ ಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು ಇದೀಗ ಅಲ್ಲಿ ಅಪಾಯದ ಸ್ಥಿತಿಯಲ್ಲಿ ಮೋಜು ಮಸ್ತಿ ಮಾಡುವವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ನೀರಿನ ಹರಿವಿನಿಂದಾಗಿ ಕಲ್ಲುಗಳ ಪಾಚಿಕಟ್ಟಿದ್ದು ಹೆಚ್ಚಿನ ಯುವಕ - ಯುವತಿಯರು ಇತ್ತೀಚಿಗೆ ಈ ಫಾಲ್ಸ್ ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ಮೋಜಿಗೆ ಬಿದ್ದು ಪಾಚಿಗಟ್ಟಿದ ಕಲ್ಲುಗಳ ಮೇಲೆ ಓಡಾಡುತ್ತಿದ್ದಾರೆ.ಪ್ರವಾಸಿಗರಿಗೆ...

ಸದ್ದಿಲ್ಲದೆ ಸಮಾಜಸೇವೆ ಮಾಡುತ್ತಿರುವ ಎಬಿ ಮೊೖದ್ದಿನ್ ಕಳಂಜ

'ಬದುಕಿದರೆ ಹೀಗೆ ಬದುಕಬೇಕಲ್ಲವೇ?' ಎಂಬಂತೆ ಸದ್ದಿಲ್ಲದೆ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯ ಕೆಲಸವನ್ನು ಇಲ್ಲೋರ್ವ ಹಿರಿಯ ವ್ಯಕ್ತಿ ಮಾಡುತ್ತಿದ್ದಾರೆ. ಕಳಂಜ ಗ್ರಾಮದ ಎ.ಬಿ. ಮೊೖದ್ದಿನ್ ಎಂಬವರೇ ಈ ರೀತಿಯಾದ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡವರು.ಇವರು ಹಲವಾರು ವರ್ಷಗಳಿಂದ ವಿದೇಶದಲ್ಲಿ ಕೆಲಸದಲ್ಲಿ ಇದ್ದು ಈಗ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. ಮನೆಯಲ್ಲಿ ಹಾಯಾಗಿ ಇರದೇ ತನ್ನದೇ ಆದ ವಿಶಿಷ್ಟ...

ಅಡ್ತಲೆ : ಎಸ್.ಡಿ.ಎಂ.ಸಿ. ನೂತನ ಅಧ್ಯಕ್ಷರಾಗಿ ಗೋಪಾಲಕೃಷ್ಣ ಪಿಂಡಿಮನೆ

Soumya Durgaprasad meladthale ದ. ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಅಡ್ತಲೆ ಇದರ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸಭೆ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಗಿರಿಪ್ರಕಾಶ್ ಕಲ್ಲುಗದ್ದೆ ಯವರ ಅಧ್ಯಕ್ಷತೆ ಯಲ್ಲಿ ಆರಂತೋಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ.ಕುಮಾರಿ ಶ್ವೇತಾ ಅರಮನೆಗಯ, ಪಂಚಾಯತ್ ಸದಸ್ಯರಾದ ಕೇಶವ ಅಡ್ತಲೆ ಮತ್ತು ಶ್ರೀಮತಿ...

ಐವರ್ನಾಡು ಸೊಸೈಟಿ ವತಿಯಿಂದ ಹಣ್ಣಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ

ಐವರ್ನಾಡು ಕೃಷಿಪತ್ತಿನ ಸಹಕಾರಿ ಸಂಘದ ವತಿಯಿಂದ ಹಣ್ಣಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಹಣ್ಣಿನ ಗಿಡಗಳ ಮಾಹಿತಿ ಕಾರ್ಯಕ್ರಮ ಇಂದು ಸೊಸೈಟಿ ಆವರಣದಲ್ಲಿ ನಡೆಯಿತು. ದಯಾಪ್ರಸಾದ್ ಜಿಮುಳ್ಳು ಅವರು ಹಣ್ಣಿನ ಗಿಡಗಳ ಕುರಿತು ಮಾಹಿ ತಿ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ 600 ಕ್ಕೆ 600 ಅಂಕ ಪಡೆದ ನಾಟಿಕೇರಿ ವಸಂತಕುಮಾರ ಮತ್ತು ಮೀನಾಕ್ಷಿ...

ಪೆರುವೋಡಿ : ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಪೆರುವೋಡಿ : ಮುಕ್ಕೂರುಜ್ಯೋತಿ ಯುವಕ ಮಂಡಲ,ಯುವಸೇನೆ ಮುಕ್ಕೂರುಧರ್ಮಸ್ಥಳ ಗ್ರಾಮಾಭಿವೃದ್ದಿ ಸ್ವ ಸಹಾಯ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಸೆ.5 ರಂದು ಪೆರುವೋಡಿ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ‌ಅರ್ಚಕ ಸುರೇಶ್ ಉಪಾಧ್ಯಾಯ ದೀಪ ಬೆಳಗಿಸಿದರು. ಸತ್ಯಪ್ರಸಾದ್ ಕಂಡಿಪ್ಪಾಡಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಬೆಳ್ಳಾರೆ ಜೆಸೀಐ ಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ, ಗ್ರಾ.ಪಂ.ಸದಸ್ಯೆ ಗುಲಾಬಿ...

ತಳೂರು : ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ – ಅಪಾಯದಿಂದ ಪಾರು

ತಳೂರು ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಇಂದು ಸಂಜೆ ನಡೆದಿದೆ. ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ಮುರಿದಿದ್ದು ಕಾರಿನ ಮುಂಭಾಗ ಜಖಂಗೊಂಡಿದೆ. ಧರ್ಮಸ್ಥಳಕ್ಕೆ ಹೋಗಿ ಹಿಂದಿರುಗುತ್ತಿದ್ದ ಕೋಲ್ಚಾರ್ ನ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ.
Loading posts...

All posts loaded

No more posts

error: Content is protected !!