ಎಡಮಂಗಲ : ಶಾಂತಮ್ಮ ಕರಿಯಪ್ಪ ನಾಯ್ಕ ಮುಳಿಯ ನಿಧನ

ಎಡಮಂಗಲ ಗ್ರಾಮದ ಮುಳಿಯ ದಿ. ಕರಿಯಪ್ಪ ನಾಯ್ಕರ ಪತ್ನಿ ಶಾಂತಮ್ಮ ರವರು ಅಲ್ಪ ಕಾಲದ ಅನಾರೋಗ್ಯದಿಂದ ಅ.16ರಂದು ನಿಧನರಾದರು. ಇವರಿಗೆ 95 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಪದ್ಮಯ್ಯ ನಾಯ್ಕ, ಶೀನಪ್ಪ ನಾಯ್ಕ, ವಿಠಲ ನಾಯ್ಕ ಪುತ್ರಿಯರಾದ ಶ್ರೀಮತಿ ಪುಷ್ಪಾವತಿ ಬಳ್ಪ, ಶ್ರೀಮತಿ ಹೊನ್ನಮ್ಮ ಕಣಿಯೂರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಹರಿಹರ ಪಲ್ಲತ್ತಡ್ಕ : ಸಂಗಮ ಕ್ಷೇತ್ರದಲ್ಲಿ ತೀರ್ಥೋದ್ಬವ

ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ಸಂಗಮ ಕ್ಷೇತ್ರದಲ್ಲಿ ಅ.17 ರಂದು ತೀರ್ಥೋದ್ಬವ ಹಾಗೂ ತೀರ್ಥ ಸ್ನಾನ ನಡೆಯಿತು.ತುಲಾ ಸಂಕ್ರಮಣದಂದು ಮದ್ಯಾಹ್ನ 1:11 ಕ್ಕೆ ತೀರ್ಥೋದ್ಬವ ಆಗಿದ್ದು, ಹರಿಹರೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ನದಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹರಿಹರೇಶ್ವರ ದೇವರ ಭಕ್ತರು ನದಿಗೆ ಬಾಗಿನ ಅರ್ಪಣೆ ಮಾಡಿ ತೀರ್ಥ ಸ್ನಾನ...
Ad Widget

ನಿಂತಿಕಲ್ಲು: ಭದ್ರ ಟೆಕ್ ಸಂಸ್ಥೆಯಲ್ಲಿ ಆಯುಧಪೂಜೆ

ನಿಂತಿಕಲ್ಲಿನ ಭದ್ರ ಟೆಕ್ ಸಂಸ್ಥೆಯಲ್ಲಿ ಪುರೋಹಿತ್ ಪ್ರಶಾಂತ್ ಪರ್ಲತ್ತಾಯರ ವೈದಿಕ ಕಾರ್ಯಕ್ರಮದೊಂದಿಗೆ ಅ.14ರಂದು ಆಯಧಪೂಜೆ, ಗಣಪತಿ ಹವನ ನಡೆಯಿತು. ಈ ಕಾರ್ಯಕ್ರಮದಲ್ಲಿ ಭದ್ರ ಟೆಕ್ ಸಂಸ್ಥೆಯ ಮಾಲಕ ದಯಾನಂದ ಮೇಲ್ಮನೆ, ಮಾಲಕರ ತಂದೆ ದಾಸಪ್ಪ ಗೌಡ, ತಾಯಿ ಶ್ರೀಮತಿ ಬಾಲಕಿ ದಾಸಪ್ಪ ಗೌಡ, ಕುಟುಂಬ ಸದಸ್ಯರು, ಸಂಸ್ಥೆಯ ಸಿಬ್ಬಂದಿ ವರ್ಗ, ಸ್ಥಳೀಯರು ಉಪಸ್ಥಿತರಿದ್ದರು.

ಪಂಜ: ಶ್ರೀ ಗಾಯತ್ರಿ ಅಲ್ಯುಮಿನಿಯಂ ಫ್ಯಾಬ್ರಿಕೇಶನ್ ಮತ್ತು ಫ್ಲೈವುಡ್ ಹಾಗೂ ವೆಲ್ಡಿಂಗ್ ವರ್ಕ್ಸ್ ನಲ್ಲಿ ಆಯುಧಪೂಜೆ

ಪಂಜದ ಜಿ.ಕೆ.ರೆಸಿಡೆನ್ಸಿಯಲ್ಲಿರುವ ಶ್ರೀ ಗಾಯತ್ರಿಅಲ್ಯುಮಿನಿಯಂ ಫ್ಯಾಬ್ರಿಕೇಶನ್ ಮತ್ತು ಫ್ಲೈವುಡ್ ಹಾಗೂ ವೆಲ್ಡಿಂಗ್ ವರ್ಕ್ಸ್ ಸಂಸ್ಥೆಯಲ್ಲಿ ಆಯುಧಪೂಜೆ ಕಾರ್ಯಕ್ರಮವು ಅ.13ರಂದು ಜರುಗಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಲಕ ತೇಜೇಶ್ ಆಚಾರ್ಯ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮೂಲಭೂತ ಸೌಕರ್ಯಕ್ಕೆ ಗ್ರಾಮಸ್ಥರ ಒಕ್ಕೊರಲ‌ ಒತ್ತಾಯ – ಡಿ.ಸಿ ಗ್ರಾಮ ವಾಸ್ತವ್ಯದ ಬಳಿಕ ಗ್ರಾಮಸ್ಥರ ಸಮಸ್ಯೆಗಳಿಗೆ ಸಿಗುವುದೇ ಸ್ಪಂದನೆ ?

ಅಮರ ಮುಡ್ನೂರು ಗ್ರಾಮದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರ ಬಳಿ ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್, ಬೋರ್ ವೇಲ್ ಮತ್ತಿತರ ಸಮಸ್ಯೆಗಳನ್ನು ಬಗೆಹರಿಸಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.ಜಿಲ್ಲಾಧಿಕಾರಿ ಅವರ ಗ್ರಾಮ ವಾಸ್ತವ್ಯದ ಸಂದರ್ಭ ಅಹವಾಲು ಸ್ವೀಕರಿಸಿದ ಸಂದರ್ಭ ಜನರು ಡಿ.ಸಿ ಅವರನ್ನು ಆಗ್ರಹಿಸಿದರು.ಕೆಲ ಸಮಸ್ಯೆಗಳು ಇನ್ನೂ ಪರಿಹಾರವಾಗದಕ್ಕೆ ತಾಲೂಕು ಅಧಿಕಾರಿಗಳನ್ನು ಡಿಸಿ ಅವರು...

ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ – ಜನರ ಅಹವಾಲು ಸ್ವೀಕರಿಸಲು ಗ್ರಾಮ ವಾಸ್ತವ್ಯ ಸಹಕಾರಿ- ಅಂಗಾರ

ಅಮರ ಪಡ್ನೂರು ಹಾಗೂ ಅಮರ ಮುಡ್ನೂರು ಗ್ರಾಮದ ಜನರಿಗಿರುವ ಸಮಸ್ಯೆಗಳನ್ನು ಆಯಾ ಇಲಾಖೆಗಳ ಮೂಲಕ ಸರಿ ಮಾಡಲಾಗುವುದು. ಜನರು ಈ ಗ್ರಾಮ ವಾಸ್ತವ್ಯದ ಸಂಪೂರ್ಣ ಸದುಪಯೋಗವನ್ನು ಮಾಡಿಕೊಡಬೇಕು ಎಂದು ಸಚಿವ ಎಸ್ ಅಂಗಾರ ಅವರು ಹೇಳಿದರು. ಅಮರ ಮುಡ್ನೂರು ಗ್ರಾ.ಪಂ. ನಲ್ಲಿ ನಡೆದ ಜಿಲ್ಲಾಧಿಕಾರಿ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾಧಿಕಾರಿ...

ಲತಾಶ್ರೀ ಸುಪ್ರೀತ್ – ರಾಜ್ಯ ಮಟ್ಟದ ಕರುನಾಡ ಕಣ್ಮಣಿ ಹಾಗೂ ರಾಷ್ಟ್ರಮಟ್ಟದ ಡಾ.ಅಬ್ದುಲ್ ಕಲಾಂ ಪ್ರಶಸ್ತಿ

ಮಾತೃಭೂಮಿ ಸೇವಾ ಟ್ರಸ್ಟ್(ರಿ.), ತುಮಕೂರು ಇವರು ಕೊಡಮಾಡುವ ರಾಜ್ಯ ಮಟ್ಟದ ಕರುನಾಡ ಕಣ್ಮಣಿ ಪ್ರಶಸ್ತಿ ಹಾಗೂ ರಾಷ್ಟ್ರಮಟ್ಟದ ಡಾ. ಅಬ್ದುಲ್ ಕಲಾಂ ಪ್ರಶಸ್ತಿ ಗೆ ಸಾಹಿತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಭಾಜನರಾಗಿದ್ದಾರೆ. ಇವರ ಸಾಹಿತ್ಯ ಕ್ಷೇತ್ರದ ಸಾಧನೆ ಯನ್ನು ಮನಗಂಡು ನವೆಂಬರ್ 21ರಂದು ನಡೆಯಲಿರುವ ಸಂಸ್ಥೆಯ 2ನೇ ವರ್ಷದ ಮಾತೃಭೂಮಿ ಸೇವಾ ಟ್ರಸ್ಟ್ ನ ವಾರ್ಷಿಕೋತ್ಸವ...

ಸುಬ್ರಹ್ಮಣ್ಯ : ಕಡವೆ ಗುದ್ದಿ ಹವ್ಯಾಸಿ ಭಾಗವತ ರಾಮಚಂದ್ರ ಅರ್ಬಿತ್ತಾಯ ವಿಧಿವಶ

ಸುಮಾರು 16 ವರ್ಷಗಳಿಂದ ಸುಬ್ರಹ್ಮಣ್ಯದ ಅನುಗ್ರಹ ಎಜ್ಯುಕೇಶನ್ ಟ್ರಸ್ಟ್ ನ ಆಶ್ರಯದಲ್ಲಿರುವ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಹೆಡ್ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದ ರಾಮಚಂದ್ರ ಅರ್ಬಿತ್ತಾಯರು ಇಂದು ಬೆಳಿಗ್ಗೆ ತಮ್ಮ ಸಹೋದರ ರವಿ ಅರ್ಬಿತ್ತಾಯರೊಂದಿಗೆ ಕುಲ್ಕುಂದದ ಸೋಮಶೇಖರ್ ಎಂಬವವರ ಮನೆಗೆ ಬ್ಯಾಡ್ಮಿಂಟನ್ ಆಟವಾಡಲು ತೆರಳುತ್ತಿದ್ದ ಸಂದರ್ಭದಲ್ಲಿ ಅವರು ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಹತ್ತಿರದ ಗುಡ್ಡದಿಂದ ಕಡವೆ...

ಮಡಪ್ಪಾಡಿ : ಶ್ರೀ ರಾಮ ಭಜನಾ ಮಂಡಳಿ ವತಿಯಿಂದ 200 ನೇ ವಾರದ ಭಜನಾ ಕಾರ್ಯಕ್ರಮ

ಮಡಪ್ಪಾಡಿ: ಶ್ರೀ ರಾಮ ಭಜನಾ ಮಂಡಳಿ ಮಡಪ್ಪಾಡಿ ಇದರ ವತಿಯಿಂದ ಪ್ರತಿ ವರ್ಷ ದಂತೆ ಈ ವರ್ಷ ಕೂಡ ನವರಾತ್ರಿ ಉತ್ಸವದ ಪ್ರಯುಕ್ತ 9 ದಿನಗಳ ಭಜನಾ ಕಾರ್ಯಕ್ರಮದ ಅಂಗವಾಗಿ ಅ.15 ರಂದು ಕೊನೆಯ ದಿನದ ಭಜನಾ ಕಾರ್ಯಕ್ರಮ ಯುವಕ ಮಂಡಲ ಸಭಾಭವನದಲ್ಲಿ ನಡೆಯಿತು. ಶ್ರೀ ರಾಮ ಭಜನಾ ಮಂಡಳಿಯು ಪ್ರತಿ ಶುಕ್ರವಾರ ಎಲ್ಲಾ ಸದಸ್ಯರು,ಊರಿನ...

ಮೊಬೈಲ್ ಕಳೆದು ಹೋಗಿದೆ

ಸುಳ್ಯ ಹಾಗೂ ಐವರ್ನಾಡು ಮಧ್ಯೆ ಬೈಕಿನಲ್ಲಿ ತೆರಳುತ್ತಿರುವ ಸಂದರ್ಭದಲ್ಲಿಮೊಬೈಲ್ ಫೋನ್ (Mi 5pro android) ಕಳೆದು ಹೋಗಿದೆ. ಮೊಬೈಲ್ ನಲ್ಲಿ ಅಗತ್ಯ ದಾಖಲೆಗಳು ಇರುವುದರಿಂದ ಯಾರಿಗಾದರೂ ಸಿಕ್ಕಿದಲ್ಲಿ ದಯವಿಟ್ಟು ತಿಳಿಸಿ. ನಿಮಗೆ ಸೂಕ್ತ ಬಹುಮಾನ ಕೊಡಲಾಗುವುದು.ಸಂಪರ್ಕಿಸಿ :77609495459448205053
Loading posts...

All posts loaded

No more posts

error: Content is protected !!