ಐನೆಕಿದು : ಭೂಮಿ ಸುಪೋಷಣೆ ಹಾಗೂ ಸಂರಕ್ಷಣೆಗಾಗಿ ಪೂಜಾ ಕಾರ್ಯಕ್ರಮ

ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸುಬ್ರಹ್ಮಣ್ಯ, ಶ್ರೀ ಪಯಸ್ವಿನಿ ಸಾವಯವ ಕೃಷಿ ಪರಿವಾರ (ರಿ.) ಸುಳ್ಯ, ಐನೆಕಿದು ಹಾಲು ಉತ್ಪಾದಕರ ಸಂಘ, ನಿಸರ್ಗ ಯುವಕ ಮಂಡಲ (ರಿ.) ಐನೆಕಿದು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐನೆಕಿದು ಇವುಗಳ ಜಂಟಿ ಸಹಯೋಗದಲ್ಲಿ ಭೂಮಿ ಸುಪೋಷಣೆ ಹಾಗೂ ಸಂರಕ್ಷಣೆಗೋಸ್ಕರ ಪೂಜಾ ಕಾರ್ಯಕ್ರಮವು ಶ್ರೀ ಪಯಸ್ವಿನಿ...

ಸುಬ್ರಹ್ಮಣ್ಯಕ್ಕೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಭೇಟಿ

ಕರ್ನಾಟಕ ರಾಜ್ಯ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ರವರು ನ.02 ರಂದು ಸಂಜೆ ಆಗಮಿಸಿ ನ.03 ರಂದು ಬೆಳಿಗ್ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಹೊಸಳಿಗಮ್ಮ, ನರಸಿಂಹ ದೇವರಿಗೆ ನಮಿಸಿ ಆದಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ಸಾಂಕೇತಿಕವಾಗಿ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ...
Ad Widget

ಪಂಜದಲ್ಲಿ ಕಿಸಾನ್ ಅಗ್ರಿ ಸೊಲ್ಯುಷನ್ಸ್ ಶುಭಾರಂಭ

ಪಂಜದ ಮುಖ್ಯರಸ್ತೆಯ ನಾಯರ್ ಕೆರೆ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಹತ್ತಿರ ಕಿಸಾನ್ ಅಗ್ರಿ ಸೊಲ್ಯೂಷನ್ ನ.5 ರಂದು ಶುಭಾರಂಭಗೊಂಡಿತು. ಪಂಜ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ಪ್ರಗತಿಪರ ಕೃಷಿಕರಾದ ಶ್ರೇಯಂಸ್ ಕುಮಾರ್ ಶೆಟ್ಟಿಮೂಲೆ, ಆನಂದ ಗೌಡ ಕಂಬಳ, ಪಂಜ,...

ಬೆಳ್ಳಾರೆ ಮದ್ರಸಾ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧೆ ಮುಸಾಬಖ 2021ಗೆ ಚಾಲನೆ

ಬೆಳ್ಳಾರೆ: ಹಿದಾಯತುಲ್ ಇಸ್ಲಾಂ ಮದ್ರಸ ಝಖರಿಯ್ಯಾ ಜುಮಾ ಮಸ್ಜಿದ್ ಬೆಳ್ಳಾರೆ ಇದರ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ನಡೆಸುವ ಮದ್ರಸಾ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧಾ ಕಾರ್ಯಕ್ರಮ ಮುಸಾಬಖಾ2021 ಮಿಲಾದ್ ಫೆಸ್ಟ್ ಇಂದು ಝಖರಿಯ್ಯಾ ಜುಮಾ ಮಸ್ಜಿದ್ ವಠಾರದಲ್ಲಿ ಜರುಗಿತು. ಸದರ್ ಮುಅಲ್ಲಿಂ ಬಹು ಮುಹಮ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಸ್ಥಳೀಯ ಖತೀಬರಾದ ಬಹು...

ಬೆಳ್ಳಾರೆ: ಸುಪ್ರಭ ಜ್ಯುವೆಲ್ಲರಿ ವರ್ಕ್ಸ್ ಸಂಸ್ಥೆಯಲ್ಲಿ ಗಣಹೋಮ ಹಾಗೂ ಲಕ್ಷ್ಮೀಪೂಜೆ

ಬೆಳ್ಳಾರೆಯ ಮುಖ್ಯರಸ್ತೆ ಬಳಿಯ ಶ್ರೀ ದುರ್ಗಾ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಸುಪ್ರಭ ಜ್ಯುವೆಲ್ಲರಿ ವರ್ಕ್ಸ್ ಸಂಸ್ಥೆಯು 12ನೇ ವರ್ಷಕ್ಕೆ ಪಾದಾರ್ಪಣೆಗೈದಿದ್ದು ಈ ಪ್ರಯುಕ್ತ ಸಂಸ್ಥೆಯಲ್ಲಿ ನ.4ರಂದು ಗಣಹೋಮ ಹಾಗೂ ಲಕ್ಷ್ಮೀಪೂಜೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಲಕರಾದ ಸತ್ಯನಾರಾಯಣ ಆಚಾರ್ಯ ಬೆಳ್ಳಾರೆ ಹಾಗೂ ಪ್ರಸಾದ್ ಆಚಾರ್ಯ ಬೆಳ್ಳಾರೆ ಮತ್ತು ಸಂಸ್ಥೆಯ ಸಿಬ್ಬಂದಿ ಪುರುಷೋತ್ತಮ ಮುಂಡುಗಾರು ಉಪಸ್ಥಿತರಿದ್ದರು.

ವಿಶಾಲಾಕ್ಷಿ ಬಾಬ್ಲುಬೆಟ್ಟು ರವರ ಹುಟ್ಟುಹಬ್ಬದ ಅಮೃತ ಮಹೋತ್ಸವ ಆಚರಣೆ

ಕಲ್ಲಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ದಿ| ಬಿ. ಟಿ. ಗುಡ್ಡಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ವಿಶಾಲಾಕ್ಷಿ ಯವರ 75ನೇ ಹುಟ್ಟು ಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮ ಅ.31ರಂದು ದಿಲೀಪ್ ಬಾಬ್ಲುಬೆಟ್ಟು ರವರ ಮನೆಯಲ್ಲಿ ಅವರ ಮಕ್ಕಳು, ಮೊಮ್ಮಕ್ಕಳು,ನೆಂಟರಿಸ್ಟರೊಂದಿಗೆ ಸಂಭ್ರಮದಿಂದ ಆಚರಿಸಿಕೊಳ್ಳಲಾಯಿತು. ಖ್ಯಾತ ಗಾಯಕರಾದ ಶಶಿಧರ್ ಮಾವಿನಕಟ್ಟೆ ಮತ್ತು ಬಾಲಕೃಷ್ಣ ನೆಟ್ಟಾರುರವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ...

ಶೇಣಿ: ಬಸ್ ತಂಗುದಾಣ ಲೋಕಾರ್ಪಣೆ

ಶೇಣಿಯಲ್ಲಿ ಹಲವು ವರ್ಷಗಳಿಂದ ಬೇಡಿಕೆಯಿದ್ದ ಸಾರ್ವಜನಿಕರ ಬಸ್ ನಿಲ್ದಾಣವನ್ನು ಸಾರ್ವಜನಿಕ ಶ್ರೀಕೃಷ್ಣ ಸೇವಾ ಸಮಿತಿ ಮತ್ತು ದಾನಿಗಳ ಸಹಕಾರದಿಂದ ನಿರ್ಮಾಣಗೊಂಡು ನ. 3ರಂದು ಲೋಕಾರ್ಪಣೆಗೊಂಡಿತು. ನಿವೃತ್ತ ಕನ್ನಡ ಉಪನ್ಯಾಸಕರಾದ ಅನಂತ ಪದ್ಮನಾಭ ಗೋಪಾಲಕಜೆ ತಂಗುದಾಣವನ್ನು ಉದ್ಘಾಟಿಸಿ ಸಮಾಜಮುಖಿ ಕೆಲಸಗಳ ಬಗ್ಗೆ ಶ್ಲಾಘಿಸಿದರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀಕೃಷ್ಣ ಸೇವಾ ಸಮಿತಿಯ ಅಧ್ಯಕ್ಷ ಮಾಧವ ಗೌಡ...

ರಥಬೀದಿಯಲ್ಲಿ ಕಟ್ಲೇರಿ ಅಂಗಡಿ ನಡೆಸುತ್ತಿದ್ದ ಧನಂಜಯ ಟೈಲರ್ ನಿಧನ

ಸುಳ್ಯ ಗಾಂಧಿನಗರ ನಾವೂರು ನಿವಾಸಿ ಧನಂಜಯ ಕೆ. ಟೈಲರ್‌ ರವರು ನ.1 ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 61 ವರ್ಷ ವಯಸ್ಸಾಗಿತ್ತು.ಅವರು ಗಾಂಧಿನಗರ‌ ಮಸೀದಿ ಬಳಿ ಹಲವಾರು ವರ್ಷಗಳ ಕಾಲ ಕಟ್ಲೆರಿ‌ ಅಂಗಡಿಯನ್ನು ನಡೆಸುತ್ತಿದ್ದರು. ಇತ್ತೀಚಿನ ಕೆಲವು ವರ್ಷಗಳಿಂದ ಗಾಂಧಿನಗರದಲ್ಲಿದ್ದ ಉದ್ಯಮವನ್ನು ಸ್ಥಳಾಂತರಿಸಿ ರಥಬೀದಿಯಲ್ಲಿ ಅಂಗಡಿಯನ್ನು ನಡೆಸುತ್ತಿದ್ದರು. ಅಮರಸುದ್ದಿ ಪತ್ರಿಕೆಯ ಏಜೆಂಟರಾಗಿದ್ದರು. ಒಂದು ಅವಧಿಗೆ ಸುಳ್ಯ...

ಚೈನು ಬಿದ್ದು ಸಿಕ್ಕಿರುತ್ತದೆ

ದಿ. 30/10/2021 ರಂದು ಭಾನುವಾರ ಸುಳ್ಯದ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದಲ್ಲಿ ನಡೆದ ಪವಿತ್ರಾ- ಗುಣಪಾಲ ಇವರ ವಿವಾಹ ಸಮಾರಂಭದಲ್ಲಿ ಚೈನೊಂದು ಬಿದ್ದು‌ಸಿಕ್ಕಿರುತ್ತದೆ. ಕಳೆದುಕೊಂಡವರು ಸರಿಯಾದ ವಿವರವನ್ನು ತಿಳಿಸಿ ಪಡೆದುಕೊಳ್ಳಲು ವಿನಂತಿಸಲಾಗಿದೆ. ಸಂಪರ್ಕಿಸಬೇಕಾದ ಸಂಖ್ಯೆ 8971308355, 6362414844, 9482384692

ನ.03: ಐವರ್ನಾಡಿನಲ್ಲಿ ಆರ್.ಪಿ.ಚಿಕನ್ ಸೆಂಟರ್ ಶುಭಾರಂಭ

ಐವರ್ನಾಡಿನ ಮುಚ್ಚಿನಡ್ಕ ಶಿವಕೃಪಾ ಆಯಿಲ್ ಮಿಲ್ ಹತ್ತಿರ ರೇಣುಕಾಪ್ರಸಾದ್ ಚಾಕೋಟೆ ಮಾಲಕತ್ವದಲ್ಲಿ ಆರ್.ಪಿ.ಚಿಕನ್ ಸೆಂಟರ್ ನ.03(ನಾಳೆ) ಬುಧವಾರದಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಬಾಯ್ಲರ್, ಟೈಸನ್, ಗಿರಿರಾಜ, ಊರುಕೋಳಿ ಹಾಗೂ ಮೊಟ್ಟೆ ರಖಂ ಹಾಗೂ ಚಿಲ್ಲರೆ ದರದಲ್ಲಿ ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.
Loading posts...

All posts loaded

No more posts

error: Content is protected !!