- Tuesday
- May 5th, 2026
ನೆಲ್ಲೂರು ಕೆಮ್ರಾಜೆ : ನೆಲ್ಲೂರು ಕೆಮ್ರಾಜೆ ಭಾಗದ ಎರ್ಮೆಟ್ಟಿ, ಸುಳ್ಳಿ, ಕೆರೆಮೂಲೆಯಲ್ಲಿ ಆನೆ ದಾಳಿ ನಡೆಸಿದ್ದು ಈ ಭಾಗದ ತೋಟಗಳಲ್ಲಿ ಆನೆ ಹೆಜ್ಜೆ ಗುರುತು ಹಾಗೂ ಕೆಲ ತೋಟಗಳಲ್ಲಿ ಬಾಳೆ, ಅಡಿಕೆ ಗಿಡಗಳಿಗೆ ಹಾನಿ ಮಾಡಿದ ಘಟನೆ ನ.26 ರಂದು ವರದಿಯಾಗಿದೆ.ನೆಲ್ಲೂರು ಕೆಮ್ರಾಜೆ ಭಾಗದಲ್ಲಿ ಆನೆ ಬಂದದ್ದು ಅಪರೂಪ. ಮಂಡೆಕೋಲು,ಮಡಪ್ಪಾಡಿ, ಸಂಪಾಜೆ,ಮರ್ಕಂಜ ಭಾಗದಲ್ಲಿ ಕೃಷಿಗೆ ಹಾನಿ...
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಛೇರಿ ಸಭಾಂಗಣದಲ್ಲಿ ನ.25 ರ ಗುರುವಾರದಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ ಅವರ ಅಧ್ಯಕ್ಷತೆಯಲ್ಲಿ ಚಂಪಾಷಷ್ಠಿ ಹಾಗೂ ಲಕ್ಷ ದೀಪೋತ್ಸವದ ಪೂರ್ವಭಾವಿ ಸಭೆ ನಡೆಯಿತು.ಲಕ್ಷ ದೀಪೋತ್ಸವವನ್ನು ಸಂಘ-ಸಂಸ್ಥೆಗಳ ಸಹಕಾರದಲ್ಲಿ ನಡೆಸಲಾಗುವುದು. ಲಕ್ಷ ದೀಪ ಹಚ್ಚುವ ಹಾಗೂ ಭಜನಾ ಕಾರ್ಯಕ್ರಮ ನಡೆಯಲಿದ್ದು, ದೇವಳದ...
ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ರಿಗೆ ಸಾಂಸ್ಕೃತಿಕ ಸಂಘಟನೆಗಾಗಿ ಏಷಿಯಾ ವೇದಿಕ್ ಕಲ್ಚುರಲ್ ರಿಸರ್ಚ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ ದೊರೆತಿದೆ.ಸಾಂಸ್ಕ್ರತಿಕ ಮತ್ತು ಕ್ರೀಡಾ ಸಂಘಟನೆಯಲ್ಲಿ ತೊಡಗಿಕೊಂಡಿರುವ ಕೆ.ಟಿ.ವಿಶ್ವನಾಥರವರು ಕರ್ನಾಟಕ ಜಾನಪದ ಪರಿಷತ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾಗಿ,ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಯಾಗಿ,ಎನ್ಬೆಂಸಿ...
ನ.27 ರಂದು ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆಯಲ್ಲಿ ಚಂದ್ರಶೇಖರ ಕನಕಮಜಲು ರವರ ಅಧ್ಯಕ್ಷತೆಯಲ್ಲಿ ನಡೆದ ಜೇಸಿಐ ಸುಳ್ಯ ಸಿಟಿಯ ಮಹಾಸಭೆಯಲ್ಲಿ 2022 ರ ಸಾಲಿನ ಅಧ್ಯಕ್ಷ ಸ್ಥಾನಕ್ಕೆ ಬಶೀರ್ ಯು.ಪಿ ಬೆಳ್ಳಾರೆ ಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಅಶ್ವತ್ ಅಡ್ಕಾರ್, ಸಾಯಿಶೃತಿ ಪಿಲಿಕಜೆ, ಮೋಹಿತ್ ಹರ್ಲಡ್ಕ, ರಂಜಿತ್ ಪಿ.ಜೆ, ಶೃತಿ ಪಿ.ಜೆ, ಕಾರ್ಯದರ್ಶಿಯಾಗಿ ಶಶಿಧರ್ ಎಕ್ಕಡ್ಕ, ಜೊತೆ...
ಚುನಾವಣಾ ನಿರ್ಣಯಕ್ಕೆ ಬದ್ಧನಾಗಿ ನಾನು ನಾಮಪತ್ರ ಸಲ್ಲಿಸಿದ್ದೇನೆ. ನಾನು ಯಾರ ಡಮ್ಮಿ ಅಭ್ಯರ್ಥಿ ಅಲ್ಲ, ನಾನೊಬ್ಬ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದೇನೆ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕನಾಗಿ ಆಯ್ಕೆಯಾದರೆ ಗೌಡ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯ ದ.ಕ, ಉಡುಪಿ, ಕಾಸರಗೋಡು ಜಿಲ್ಲೆಯನ್ನು ಪ್ರತಿನಿಧಿಸುವ ನಿರ್ದೇಶಕ ಸ್ಥಾನದ...
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನ.27 ರಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರ ಅಧ್ಯಕ್ಷತೆಯಲ್ಲಿ ಸಂವಿಧಾನ ಸಂಭ್ರಮ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು. ಭಾರತ ಸರ್ಕಾರದ ಸಾಮಾಜಿಕ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ "ನಮ್ಮ ಸಂವಿಧಾನ ಎಷ್ಟು ಚೆನ್ನಾಗಿದೆ ಎಂದರೆ ಅದಕ್ಕೆ ಯಾವ ದೇಶವೂ ಸಾಟಿಯಿಲ್ಲ....
ಬೆಳ್ಳಾರೆ ಮೇಲಿನ ಪೇಟೆಯಲ್ಲಿರುವ ಬಸ್ ನಿಲ್ದಾಣದ ಎದುರುಗಡೆ ವಿದ್ಯುತ್ ಕಂಬವೊಂದು ರಸ್ತೆಗೆ ವಾಲಿದ್ದು, ಮುರಿದು ಬೀಳುವ ಸ್ಥಿತಿಯಲ್ಲಿದೆ. ಮುಖ್ಯ ರಸ್ತೆಯ ಪಕ್ಕದಲ್ಲಿರುವ ಈ ವಿದ್ಯುತ್ ಕಂಬ ಒಂದು ವೇಳೆ ಮುರಿದು ಬಿದ್ದರೆ ಘೋರ ಅನಾಹುತ ಎದುರಾಗುವುದು ಖಂಡಿತ. ಸುಳ್ಯ ತಾಲೂಕಿನಲ್ಲಿ ಸುಳ್ಯ ಪೇಟೆಯ ನಂತರ ಅತಿದೊಡ್ಡ ಪೇಟೆಯಾಗಿರುವ ಬೆಳ್ಳಾರೆಯ ಈ ರಸ್ತೆಯಲ್ಲಿ ಹಲವು ವಾಹನಗಳು ದಿನನಿತ್ಯ...
ಮಾಡಾವು ಸಬ್ ಸ್ಟೇಷನ್ ನಿಂದ ಬೆಳ್ಳಾರೆ, ನಿಂತಿಕಲ್ಲು, ಪಂಜದ ಮೂಲಕ ಗುತ್ತಿಗಾರಿಗೆ ಹಾದುಹೋಗಿರುವ ಎಚ್.ಟಿ ವಿದ್ಯುತ್ ಲೈನ್ ಕಂಬಗಳಲ್ಲಿ ಅಳವಡಿಸಲಾಗಿದ್ದ 'ಅಪಾಯ'(DANGER) ಸೂಚನಾ ಬೋರ್ಡ್ ಗಳು ಬರಿದಾಗಿದ್ದು, ಖಾಲಿ ಖಾಲಿ ಬೋರ್ಡ್ ಗಳು ಕಾಣಸಿಗುತ್ತಿವೆ. ಜನರಿಗೆ ಅಪಾಯ ಎಂಬುದನ್ನು ಮನವರಿಕೆ ಮಾಡುವ ಮೂಲಕ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಹಾಕಲಾಗಿರುವ ಈ ಸೂಚನಾ ಫಲಕಗಳು ಅಗತ್ಯವಿದ್ದು, ಅಕ್ಷರಗಳು...
ಎಲಿಮಲೆ ಸರಕಾರಿ ಪ್ರೌಡಶಾಲೆಯಲ್ಲಿ ನಡೆಯುತ್ತಿರುವ ಅಂತರರಾಜ್ಯ ಸಾಂಸ್ಕೃತಿಕ ಕಾರ್ಯಕ್ರಮ 'ಅನ್ವೇಷಣಾ-2021' ಕಾರ್ಯಕ್ರಮದಲ್ಲಿ ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲೆ ಬಾಳಿಲ ಇಲ್ಲಿನ ವಿದ್ಯಾರ್ಥಿಗಳು ಯಕ್ಷನೃತ್ಯ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರಪ್ರಸಾದ್ ಉಪಸ್ಥಿತರಿದ್ದು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕ ಶಿವಪ್ರಸಾದ್ ಹಾಗೂ ಶಿಕ್ಷಕಿ ಶುಭಾ ಡಿ. ತಂಡವನ್ನು ನಿರ್ದೇಶಿಸಿದ್ದರು.
Loading posts...
All posts loaded
No more posts
