ಪಾಲೆಪ್ಪಾಡಿ : ಅಷ್ಟಮಂಗಲ ಕಾರ್ಯಕ್ರಮ

ಪಾಲೆಪ್ಪಾಡಿ ಇರ್ವೆರ್ ಉಳ್ಳಾಕ್ಲು ಚಾವಡಿಯ ವಠಾರದಲ್ಲಿ ಸ್ವರ್ಣ ಇಡುವ ಕಾರ್ಯಕ್ರಮ ಹಾಗೂ ಅಷ್ಟಮಂಗಲ ಕಾರ್ಯಕ್ರಮವು ನ.29 ರಿಂದ ಡಿ.2 ರವರೆಗೆ ನಡೆಯಿತು.‌ ಶಶಿಧರನ್ ನಾಯರ್ ಕುತ್ತಿಕೋಳು ಇವರ ನೇತೃತ್ವದಲ್ಲಿ ಅಷ್ಟಮಂಗಲ ನಡೆದು ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ನಡೆಯಿತು. ಈ ಪುಣ್ಯ ಕಾರ್ಯದಲ್ಲಿ ಪಾಲೆಪ್ಪಾಡಿ ಬೈಲಿನ ಭಕ್ತಾಭಿಮಾನಿಗಳು ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಹೋರಾಟ: ಎನ್ ಎಸ್ ಯು ಐ

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಜಾರಿಗೊಳಿಸುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಶಿಕ್ಷಣ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಹುನ್ನಾರ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಇದನ್ನು ವಿರೋಧಿಸಿ ಹೋರಾಟ ಮುಂದುವರಿಯಲಿದೆ ಎಂದು ಎನ್ ಎಸ್ ಯು ಐ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಕೀರ್ತನ್ ಗೌಡ ಕೊಡಪಾಲ ಇವರು ತಿಳಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರಕಾರ ತರಾತುರಿಯಲ್ಲಿ...
Ad Widget

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಜಲಜೀವನ್ ಮಿಷನ್ ಆಶ್ರಯದಲ್ಲಿ ಮಾಹಿತಿ ಕಾರ್ಯಕ್ರಮ

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಜಿಲ್ಲೆ ಜಲಜೀವನ್ ಮಿಷನ್ ಆಶ್ರಯದಲ್ಲಿ ಮಾಹಿತಿ ಕಾರ್ಯಕ್ರಮ ನೆರವೇರಿತು. ಸಂಪನ್ಮೂಲ ವ್ಯಕ್ತಿಗಳಾದ ಸುರೇಶ್ ನೋಡಲ್ ಅಧಿಕಾರಿ ಜಲಜೀವನ್ ಮಿಷನ್ ಇವರು ನೀರಿನ ಬಳಕೆ, ಸ್ವಚ್ಛತೆ ಸರಬರಾಜು, ವ್ಯವಸ್ಥೆ ,ನೀರು ಇಂಗಿಸುವ ಕ್ರಮ ಇತ್ಯಾದಿಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೀಡಿದರು. ಪಂಚಾಯತು ಸಿಬ್ಬಂದಿ ವಸಂತ್...

ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಸುಳ್ಯ ಸದಸ್ಯರಿಂದ ಧರ್ಮಸ್ಥಳ ಲಕ್ಷದೀಪ ಪಾದಯಾತ್ರೆ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 9ನೇ ವರ್ಷದ ಲಕ್ಷದೀಪ ಪಾದಯಾತ್ರೆಯಲ್ಲಿ ಸುಳ್ಯ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ತಂಡದ 120 ಸ್ವಯಂಸೇವಕರು ನ.29 ರಂದು ಉಜಿರೆ ಲಕ್ಷ್ಮಿಜನಾರ್ಧನ ದೇವಸ್ಥಾನದಿಂದ ಧರ್ಮಸ್ಥಳದ ತನಕ ಪಾದಯಾತ್ರೆಯಲ್ಲಿ ಪಾಲ್ಗೊಂಡರು.ಈ ವರ್ಷದ ಪಾದಯಾತ್ರೆಯಲ್ಲಿ ರಾಜ್ಯದ ಇತರ ತಾಲೂಕುಗಳಿಂದ ಸುಮಾರು 1,200 ವಿಪತ್ತು ನಿರ್ವಹಣಾ ಸ್ವಯಂಸೇವಕರು ಸಮವಸ್ತ್ರದೊಂದಿಗೆ ಪಾದಯಾತ್ರೆ ಕೈಗೊಂಡರು. ವರದಿ :- ಉಲ್ಲಾಸ್...

ಸುಬ್ರಹ್ಮಣ್ಯ- ಐನೆಕಿದು ಸೊಸೈಟಿ ನಿರ್ದೇಶಕ ಜಾಣಪ್ಪ ಅಜಿಲ ನಿಧನ

ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಐನೆಕಿದು ಗ್ರಾಮದ ಕೋಟೆಬೈಲು ನಿವಾಸಿ ಜಾಣಪ್ಪ ಅಜಿಲರು ನ.29 ರಂದು ಹೃದಯಾಘಾತದಿಂದ ನಿಧನರಾದರು. ಇವರಿಗೆ 76 ವರ್ಷ ವಯಸ್ಸಾಗಿತ್ತು.ದೈವ ನರ್ತಕ, ನಾಟಿ ವೈದ್ಯ ಹಾಗೂ ಜಾನಪದ ಕಲಾವಿದರಾಗಿದ್ದ ಇವರಿಗೆ ವಿವಿಧ ಸನ್ಮಾನಗಳು ಲಭಿಸಿವೆ.ಮೃತರು ಪತ್ನಿ ನಾಗಮ್ಮ, ಜಲಜ ಹಾಗೂ ಪುತ್ರರಾದ ಶೇಖರ, ರಮೇಶ್, ಲೋಕೇಶ್, ರಾಜೇಶ್...

ಮಡಪ್ಪಾಡಿ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ

ಮಡಪ್ಪಾಡಿ ಅಂಗನವಾಡಿ ಮತ್ತು ಬಲ್ಕಜೆ ಅಂಗನವಾಡಿ ಸಹಯೋಗದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳ ದಿನಾಚರಣೆ ಅಂಗವಾಗಿ ಪುಟಾಣಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಡಪ್ಪಾಡಿ ಮತ್ತು ಬಲ್ಕಜೆ ಅಂಗನವಾಡಿ ಬಾಲವಿಕಾಸ ಅಧ್ಯಕ್ಷರಾದ ಶ್ರೀಮತಿ ಅನುಪಮ ಹಾಗೂ ಭವಾನಿ.ಕೆ, ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಗೊಂಚಲು ಅಧ್ಯಕ್ಷರಾದ ಶ್ರೀಮತಿ...

ಕಲ್ಮಕಾರು :- ಶ್ರೀ ಕ್ಷೇ. ಧ.ಗ್ರಾ. ಯೋಜನೆಯ ನೂತನ ಸೇವಾ ಕೇಂದ್ರ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಮಕಾರಿನ ಸೇವಾ ಕೇಂದ್ರವು ಸುಬ್ರಹ್ಮಣ್ಯ ಕೊಪ್ಪಡ್ಕ ಅವರ ಮಾಲಕತ್ವದ ಕಟ್ಟಡದಲ್ಲಿ ನ.30 ರಂದು ಉದ್ಘಾಟನೆಗೊಂಡಿತು. ಕಲ್ಮಕಾರು ಒಕ್ಕೂಟದ ಉಪಾಧ್ಯಕ್ಷರಾದ ರಾಮಣ್ಣ ಗೌಡ ಅಂಜನಕಜೆ ದೀಪ ಬೆಳಗಿಸುವ ಮೂಲಕ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಕಲ್ಮಕಾರು ಒಕ್ಕೂಟದ ಅಧ್ಯಕ್ಷರಾದ ಪುಷ್ಪರಾಜ್ ಪಡ್ಪು, ನಿಕಟಪೂರ್ವ ಅದ್ಯಕ್ಷರಾದ ಆನಂದ ಮೆಂಟೆಕಜೆ, ಸ್ಥಾಪಕಾಧ್ಯಕ್ಷರಾದ ರಾಧಾಕೃಷ್ಣ, ಶ್ರೀ...

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಕ್ಕೆ ಹೇಮಾನಂದ‌ ಹೆಚ್. ಗೌಡ ನಾಮಪತ್ರ ಸಲ್ಲಿಕೆ

ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಸ್ಥಾನಕ್ಕೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಅಭ್ಯಥಿ೯ಯಾಗಿ ಮರ್ಕಂಜ ಗ್ರಾಮದ ಹಲ್ದಡ್ಕ ಹೇಮಾನಂದ ಹೆಚ್. ಗೌಡ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಒಕ್ಕಲಿಗ ಸಂಘದ ಗೌರವಾಧ್ಯಕ್ಷ ಸಿದ್ದರಾಜು ಗೌಡ, ಅಧ್ಯಕ್ಷ ಸುರೇಶ್ ಗೌಡ, ಕಾರ್ಯದರ್ಶಿ ಮಂಜುನಾಥ್, ಡಾ. ತುಕಾರಾಮ. ಕೃಷ್ಣ, ರಗುನಂದನ್, ಸತೀಶ್ ಕುಮಾರ್, ಬಾಬು ಗೌಡ,...

ತೊಡಿಕಾನ : ಶ್ರೀ ಮಲ್ಲಿಕಾರ್ಜುನ‌ ದೇವಸ್ಥಾನಕ್ಕೆ ಸಚಿವ ಎಸ್.ಅಂಗಾರ ಭೇಟಿ

ಸಚಿವ ಅಂಗಾರ ಅವರು ತೊಡಿಕಾನ ಶ್ರೀ ಮಲ್ಲಿಕಾರ್ಜುನ‌ ದೇವಳಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸಮಿತಿ ಖಜಾಂಜಿ ಶಿವಾನಂದ ಕುಕ್ಕುಂಬಳ, ಅರಂತೋಡು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕರುಣಾಕರ ಹಾಸ್ಪಾರೆ ವ್ಯಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್, ಸದಸ್ಯರಾದ ಉಮಾಶಂಕರ, ಪ್ರಕಾಶ್ ಪಾನತ್ತಿಲ, ಅರಂತೋಡು ಸೊಸೈಟಿ...

ಬಾಜಿನಡ್ಕ ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ದೈವಸ್ಥಾನ ನೇಮೋತ್ಸವದ ಬಗ್ಗೆ ಪೂರ್ವಭಾವಿ ಸಭೆ

ಅರಂತೋಡು ಗ್ರಾಮದ ಬಾಜಿನಡ್ಕ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ನೇಮೋತ್ಸವ ನಡೆಸುವ ಬಗ್ಗೆ ಪೂರ್ವಭಾವಿ ಸಭೆ ಅರಂತೋಡು ಪಂಚಾಯತ್ ಸಭಾಂಗಣದಲ್ಲಿ ನ.27 ರಂದು ನಡೆಯಿತು.ಬಾಜಿನಡ್ಕ ಶ್ರೀ ಅದಿ ಮೊಗೆರ್ಕಳ ದೈವಸ್ಥಾನ ಅಧ್ಯಕ್ಷ ಮುನ್ಸ ಮೊಗೇರ ರವರು ಅಧ್ಯಕ್ಷತೆ ವಹಿಸಿದರು.ಕಾರ್ಯಕ್ರಮವನ್ನು ಫೆಬ್ರವರಿ 19 ಮತ್ತು 20 ರಂದು ನಡೆಸಲು ತೀರ್ಮಾನಿಸಲಾಯಿತು .ಈ ಸಂದರ್ಭದಲ್ಲಿ ಅರಂತೋಡು ತೊಡಿಕಾನ ಪ್ರಾಥಮಿಕ...
Loading posts...

All posts loaded

No more posts

error: Content is protected !!