ಮುಂದಿನ ಪೀಳಿಗೆಗಳಿಗೆ ಹಿರಿಯರ ಶೌರ್ಯದ ನೆನಪು ಉಳಿಯಬೇಕು – ಅನಿಂದಿತ್ ಗೌಡ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಭಾರತ ಸ್ವಾತಂತ್ರ್ಯದ ಪ್ರಥಮ ಯುದ್ದ ಎಂದೇ ಖ್ಯಾತಿ ಪಡೆದಿರುವ 1857 ರ ಸಿಪಾಯಿ ಧಂಗೆಗಿಂತ 20 ವರ್ಷ ದ ಹಿಂದೆ ನಡೆದಿದ್ದ ಅಮರ ಸುಳ್ಯದ ಸ್ವಾತಂತ್ರ್ಯ ಹೋರಾಟವನ್ನು ಸ್ಮರಿಸುತ್ತಾ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮೂಲಕ ವೀರರು ಬಲಿದಾನಗೈ ದ ಮಂಗಳೂರಿನ ಬಿಕರ್ನಕಟ್ಟೆ ಹಾಗೂ ಬಂಗೇರಗುಡ್ಡೆ ಎಂಬಪರಿಸರದಲ್ಲಿ ಹೋರಾಟಗಾರರನ್ನು ನೆನಪಿಸುವ...

ಮಹಾಲಿಂಗ ಪಾಟಾಳಿ ಕುಕ್ಕುಜಡ್ಕ ನಿಧನ

ಅಮರಪಡ್ನೂರು ಗ್ರಾಮದ ಕುಕ್ಕುಜಡ್ಕ ಮಹಾಲಿಂಗ ಪಾಟಾಳಿಯವರು ಕೆಲವು ಸಮಯದ ಅಸೌಖ್ಯದಿಂದ ಏಪ್ರಿಲ್ 2ರಂದು ತಮ್ಮ ಮಗಳಮನೆ ಕುಂಬಳೆಯ ಮುಜಂಗಾವುನಲ್ಲಿ ನಿಧನ ಹೊಂದಿದರುಇವರು ಕೆಲವು ವರ್ಷಗಳಿಂದ ಪೆರ್ಣೆಶ್ರೀ ಮುಚ್ಚಿಲೋಟು ಭಗವತೀ ಕ್ಷೇತ್ರದಲ್ಲಿ ಗುರಿಕಾರ (ಕಾರ್ನವ)ರಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು ಮೃತರು ಪತ್ನಿ ಶ್ರೀಮತಿ ರಾಜಿವಿ ಪುತ್ರಿಯರಾದ ಶ್ರೀಮತಿ ಸುಮಂಗಲಾ ಜಯರಾಜ್ ಮುಜಂಗಾವು ಶ್ರೀಮತಿ ಸೌಮ್ಯ ನವೀನ್ ಕುಂಬಳೆ ಶ್ರೀಮತಿ...
Ad Widget

ಐನೆಕಿದು ಶಾಲೆಗೆ ಯುವಕ ಮಂಡಲದ ವತಿಯಿಂದ ದತ್ತಿನಿಧಿ ಕೊಡುಗೆ

ಐನೆಕಿದು ನಿಸರ್ಗ ಯುವಕ ಮಂಡಲದ ವತಿಯಿಂದ ಐನೆಕಿದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎ.05 ರಂದು 5 ಸಾವಿರ ರೂಪಾಯಿ ದತ್ತಿನಿಧಿ ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ನಿಸರ್ಗ ಯುವಕ ಮಂಡಲದ ಅಧ್ಯಕ್ಷರಾದ ಅಜಿತ್ ಕಲ್ಲೇರಿ, ಸದಸ್ಯರಾದ ಲಕ್ಷ್ಮೀಶ ಇಜ್ಜಿನಡ್ಕ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸರಿತಾ, ಸಿ.ಆರ್.ಪಿ ಶ್ರೀಮತಿ ಕುಮಾರಿ ಮತ್ತಿತರರು ಉಪಸ್ಥಿತರಿದ್ದರು.

ಸುಳ್ಯದ ತಾಲೂಕು ಕಛೇರಿ ಯಲ್ಲಿ ಡಾ| ಬಾಬು ಜಗಜೀವನ್ ರಾಂ 115ನೇ ಜನ್ಮ ದಿನಾಚರಣೆ

ಸುಳ್ಯದ ನಾಡಹಬ್ಬಗಳ ದಿನಾಚರಣಾ ಸಮಿತಿಯ ಆಶ್ರಯದಲ್ಲಿ ಹಸಿರು ಕ್ರಾಂತಿಯ ಹರಿಕಾರ ಮತ್ತು ಮಾಜಿ ಉಪಪ್ರಧಾನಿ ಡಾ| ಬಾಬು ಜಗಜೀವನ್ ರಾಂ ರವರ 115ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಏ.5ರಂದು ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆಯಿತು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಮಾಜದಲ್ಲಿ ನಾವೆಲ್ಲ ಸಮಾನವಾಗಿ ಬದುಕಬೇಕು ಎಂದು ಶ್ರಮವಹಿಸಿದವರಲ್ಲಿ...

ಪೆರುವಾಜೆ-ಪುತ್ತೂರು ಮಾರ್ಗ ಮಧ್ಯೆ ಚಿನ್ನದ ಬ್ರಾಸ್ ಲೆಟ್ ಕಳೆದುಹೋಗಿದೆ

ಪೆರುವಾಜೆ ಸವಣೂರು ಪುತ್ತೂರು ಮಾರ್ಗ ಮಧ್ಯೆ ಚಿನ್ನದ ಬ್ರಾಸ್ ಲೆಟ್ ಇಂದು (ಎ.05) ಕಳೆದುಹೋಗಿರುತ್ತದೆ. ಯಾರಿಗಾದರೂ ಸಿಕ್ಕಲ್ಲಿ 8197763860, 9663065466 ಸಂಖ್ಯೆಗೆ ಕರೆಮಾಡುವಂತೆ ಕಳೆದುಕೊಂಡವರು ವಿನಂತಿಸಿದ್ದಾರೆ.

ಜಗನ್ಮೋಹನ ದಂಡಿನಮನೆ ಹೃದಯಾಘಾತದಿಂದ ನಿಧನ

ನಾಲ್ಕೂರು ಗ್ರಾಮದ ದಂಡಿನಮನೆ ಜಗನ್ಮೋಹನ ದಂಡಿನಮನೆ ಇಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.‌ ಅವರು ಬಳ್ಳಾರಿ ಥರ್ಮಲ್ ಪವರ್ ಕಾರ್ಪೋರೇಷನ್ ನಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಹೃದಯಾಘಾತಗೊಂಡ ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆಂದು ತಿಳಿದುಬಂದಿದೆ. ಮೃತರು ಪತ್ನಿ , ಓರ್ವ ಪುತ್ರ, ಸಹೋದರ, ಸಹೋದರಿಯರು...

ಎ.5 ಕೆದಂಬಾಡಿ ಉತ್ಸವ ಮಾಡಬೇಕು – ಗೋಪಾಲ ಪೆರಾಜೆ

ಅಮರ ಸುಳ್ಯದ ಸ್ವಾತಂತ್ರ್ಯ ಸಮರದ ಸ್ಮಾರಕ ನಿರ್ಮಾಣ ಮತ್ತು ಕೆದಂಬಾಡಿ ಉತ್ಸವದ ಕುರಿತು ಎ.4 ರಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಗೋಪಾಲ ಪೆರಾಜೆ ಅವರು ಉಬರಡ್ಕ ಮಿತ್ತೂರು ಮತ್ತು ಬೆಳ್ಳಾರೆಯಲ್ಲಿ ಯುದ್ಧ ಸ್ಮಾರಕ ನಿರ್ಮಾಣ ಮಾಡುವ ವಿಚಾರ, ಮಂಗಳೂರು ವಿ.ವಿಯಲ್ಲಿ ಅಮರ ಸುಳ್ಯ ಸ್ವಾಂತಂತ್ರ್ಯ ಹೋರಾಟ ಅಥವಾ...

ಕುಂಬ್ರ: ಬೈಕ್ ಗಳ ನಡುವೆ ಡಿಕ್ಕಿ- ಅಪಾಯದಿಂದ ಪಾರಾದ ಸವಾರರು

ಪುತ್ತೂರು ತಾಲೂಕಿನ ಕುಂಬ್ರ ಪೇಟೆಯ ಮುಖ್ಯರಸ್ತೆಯ ಸಮೀಪ ಇಂದು ಬೆಳಗ್ಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ ಸಂಶೋಧನೆ ನಡೆಸುತ್ತಿರುವ ನವೀನ್ ಕುಮಾರ್ ಪೆರುವಾಜೆ ರವರು ಚಲಾಯಿಸುತ್ತಿದ್ದ ಯಮಹಾ ಎಫ್.ಜ಼ೆಡ್ ಬೈಕ್ ಹಾಗೂ ಸುಳ್ಯ ಕಡೆಗೆ ಬರುತ್ತಿದ್ದ ಉಪ್ಪಿನಂಗಡಿಯ ಶಮಂತ್ ಎಂಬವರ ಬುಲೆಟ್ ಬೈಕ್ ಪರಸ್ಪರ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ಜಖಂಗೊಂಡಿದ್ದು, ಹೆಲ್ಮೆಟ್ ಧರಿಸಿದ್ದ...

ದೇವಚಳ್ಳ: ತಳೂರು ಚಾಕಟೆತಡಿಯಲ್ಲಿ ವಾರ್ಷಿಕ ಕ್ರೀಡಾಕೂಟ

ಶ್ರೀ ರಾಜ್ಯ ದೈವ ಪುರುಷ ದೈವ ದೇವಸ್ಥಾನ ತಳೂರು, ಸ್ನೇಹ ಯುವ ಬಳಗ ಮತ್ತು ಸೌರಭ ಯುವತಿ ಮಂಡಲದ ಜಂಟಿ ಆಶ್ರಯದಲ್ಲಿ ವಾರ್ಷಿಕ ಕ್ರೀಡಾಕೂಟ ಏ.3 ರಂದು ತಳೂರಿನ ಚಾಕಟೆತಡಿಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಾಗಪ್ಪ ಗೌಡ ಮೆತ್ತಡ್ಕ ನಡೆಸಿದರು. ವೇದಿಕೆಯಲ್ಲಿ ಊರಿನ ಹಿರಿಯರಾದ ಶಿವಣ್ಣ ಗೌಡ ತಳೂರು, ಸ್ನೇಹ ಯುವ ಬಳಗ ಅಧ್ಯಕ್ಷ ವರ್ಷಿತ್...

ಯೋಗಾಸನದಲ್ಲಿ ದಾಖಲೆ ನಿರ್ಮಿಸಿದ ಮೋನಿಷ್ ತಂಟೆಪ್ಪಾಡಿ

ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಮೋನಿಷ್ ತಂಟೆಪ್ಪಾಡಿ ಸಾಧನೆ ಮೆರೆದಿದ್ದಾರೆ.‌ ಬದ್ದ ಪದ್ಮಾಸನ ದಲ್ಲಿ 1ಗಂಟೆ 02 ನಿಮಿಷ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ದಾಖಲೆ ಮಾಡಿದ್ದಾರೆ. ಕಳೆದ ಏಳು ತಿಂಗಳಿಂದ ಯೋಗಾಭ್ಯಾಸವನ್ನು ನಿರಂತರ ಯೋಗ ಕೇಂದ್ರ ಸುಳ್ಯ ಇದರ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಯೋಗ...
Loading posts...

All posts loaded

No more posts

error: Content is protected !!