ಐವರ್ನಾಡು : ಕಾಂಗ್ರೆಸ್ ಕಾರ್ಯಕರ್ತರ ಸಭೆ – ಕೆಪಿಸಿಸಿ ಮಾಜಿ ಸದಸ್ಯ ಡಾ.ರಘು ಭೇಟಿ

ಐವರ್ನಾಡಿನಲ್ಲಿ ನಡೆದ ನಾ ನಾಯಕಿಯರ ಪೂರ್ವಭಾವಿ ಸಭೆಯು ಜಯಪ್ರಕಾಶ್ ನೆಕ್ರಪ್ಪಾಡಿಯವರ ಮನೆಯಲ್ಲಿ ನಡೆಯಿತು. ಈ ಸಭೆಗೆ ಮಾಜಿ ಕೆಪಿಸಿಸಿ ಸದಸ್ಯರಾದ ಡಾ. ರಘು ಪಾಲ್ಗೊಂಡಿದ್ದರು . ಕಾಂಗ್ರೆಸ್ಸಿನ ಹಿರಿಯರಾದ ನೆಕ್ರಪ್ಪಾಡಿ ಕೃಷ್ಣಪ್ಪಗೌಡ , ಮಾಜಿ ತಾಲೂಕ್ ಪಂಚಾಯತ್ ಸದಸ್ಯ ರಾಜೀವಿ ಉದ್ದಂಪ್ಪಾಡಿ , ಪಂಚಾಯತ್ ಮಾಜಿ ಸದಸ್ಯ ಚಂಚಲಾಕ್ಷಿ ಕತ್ಲಡ್ಕ ಹಾಗೂ ಮಹಿಳೆಯರು ಮತ್ತು ಕಾಂಗ್ರೆಸ್...

ಶಿಥಿಲಗೊಂಡಿರುವ ಕೊಡಿಯಾಲ – ಪೆರುವಾಜೆ ಸಂಪರ್ಕಿಸುವ ಸಾರಕೆರೆ ಕಿಂಡಿ ಅಣೆಕಟ್ಟು, ಸರ್ವಋತು ಸೇತುವೆಗಾಗಿ ನಾಗರಿಕರ ಒತ್ತಾಯ

ಕೊಡಿಯಾಲ - ಪೆರುವಾಜೆ ಗ್ರಾಮಗಳನ್ನು ಸಂಪರ್ಕಿಸುವ ಸಾರಕೆರೆ ಎಂಬಲ್ಲಿ ಸುಮಾರು 45 ವರ್ಷಗಳ ಹಿಂದೆ ನಿರ್ಮಿಸಲಾದ ಕಿಂಡಿ ಅಣೆಕಟ್ಟು ಈಗ ಸಂಪೂರ್ಣ ಶಿಥಿಲಗೊಂಡಿದ್ದು, ಸದ್ರಿ ಅಣೆಕಟ್ಟಿನ ಮೇಲೆ ಇರುವ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುವುದು ದುಸ್ತರವಾಗಿದೆ. ಈ ಕಾಲುದಾರಿಯಲ್ಲಿ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಕೊಡಿಯಾಲ ಗ್ರಾಮದ ಅನಗುರಿ, ಕೆಡೆಂಜಿಮೊಗ್ರು, ಬೇರ್ಯ ಉಡುಕಿ ಕಾಲೋನಿಯ ನಾಗರಿಕರು ಹಾಗೂ...
Ad Widget

ಅರಣ್ಯ ಇಲಾಖೆಯಿಂದ 110ಕೆ.ವಿ. ವಿದ್ಯುತ್ ಲೈನ್ ಎಳೆಯಲು ಅನುಮತಿ – ಶೀಘ್ರ ಕಾಮಗಾರಿ ಆರಂಭ : ಸಚಿವ ಅಂಗಾರ

ಸುಳ್ಯಕ್ಕೆ 110 ಕೆವಿವಿದ್ಯುತ್ ಲೈನ್ ಹಾದು ಹೋಗಲು ಅರಣ್ಯ ಇಲಾಖೆಯ ತೊಡಕು ನಿವಾರಣೆಯಾಗಿದ್ದು ಕೇಂದ್ರ ಪರಿಸರ‌ ಇಲಾಖೆ ಅನುಮತಿ ನೀಡಿದೆ. 110 ಕೆ.ವಿ. ಲೈನ್ ಹಾಗೂ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಗೆ ಶೀಘ್ರ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಹೇಳಿದ್ದಾರೆ. ಸುಳ್ಯದಲ್ಲಿ...

ಕಲ್ಮಕಾರು :- ಗುಳಿಕ್ಕಾನಕ್ಕೆ ಭೂ ವಿಜ್ಞಾನಿಗಳು ಮತ್ತು ಗಣಿ ಇಲಾಖೆಯ ಅಧಿಕಾರಿಗಳ ಭೇಟಿ : ಸ್ಥಳ ಪರಿಶೀಲನೆ, ಮಾಹಿತಿ ಸಂಗ್ರಹ

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಮಕಾರಿನ ಗುಳಿಕ್ಕಾನದ ಗುಡ್ಡದಲ್ಲಿ 2018 ರಲ್ಲಿ ಭೂಮಿ ಆಳವಾಗಿ ಬಿರುಕು ಬಿಟ್ಟಿತು. ಆ ಸಂದರ್ಭದಲ್ಲಿ ಗುಳಿಕ್ಕಾನದ ಗುಡ್ಡದ ಭಾಗದಲ್ಲಿ 10 ಕುಟುಂಬಗಳು ವಾಸಿಸುತ್ತಿದ್ದವು. ಅಲ್ಲಿರುವ ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿ 4 ವರ್ಷಗಳಾದರೂ ಈವರೆಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಗುಳಿಕ್ಕಾನ ಪ್ರದೇಶ ಜನರ ವಾಸಕ್ಕೆ ಯೋಗ್ಯವಾಗಿದೆಯೇ ಎಂದು ತಿಳಿಯಲು...

ಅಡ್ಡನಪಾರೆ : ಮನೆ ಮೇಲೆ ಮರ ಬಿದ್ದು ಸಂಪೂರ್ಣ ಹಾನಿ : ಮಹಿಳೆಯ ತಲೆಗೆ ಗಾಯ

ನಿರಂತರ ಮಳೆಯಿಂದ ಮನೆ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡ ಹಾಗೂ ಮನೆಯೊಳಗಿದ್ದ ಮಹಿಳೆಯ ತಲೆಗೆ ಗಂಭೀರ ಗಾಯಗಳಾದ ಘಟನೆ ಇಂದು ನಡೆದಿದೆ. ದೇವಚಳ್ಳ ಗ್ರಾಮದ ಅಡ್ಡನಪಾರೆ ನಿವಾಸಿ ದೈವ ನರ್ತಕ ಚಿದಾನಂದ ಅವರ ಮನೆಗೆ ಮನೆಗೆ ಮರ ಬಿದ್ದು ಮನೆ ಸಂಪೂರ್ಣ ಕುಸಿದಿದೆ. ಮನೆಯೊಳಗಿದ್ದ ಚಿದಾನಂದ ರವರ ಪತ್ನಿ ಶೀಲಾವತಿಯ ತಲೆಗೆ ಗಂಭೀರ...

ಬೊಳುಬೈಲು : ನವಚೇತನ ಚಿಣ್ಣರ ಕೂಟ ಉದ್ಘಾಟನೆ

ನವಚೇತನ ಯುವಕ ಮಂಡಲ (ರಿ.) ಬೊಳುಬೈಲು ಇದರ ನವಚೇತನ ಚಿಣ್ಣರ ಕೂಟದ ಉದ್ಘಾಟನಾ ಸಮಾರಂಭ ಜು‌.3ರಂದು ಯುವಕ ಮಂಡಲದ ಸಭಾಭವನ ಯುವಸದನ ಬೊಳುಬೈಲುನಲ್ಲಿ ನಡೆಯಿತು.ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ ಇದರ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಉದ್ಘಾಟಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದ ಅವರು ಉದ್ಯೋಗದ ಕಾರಣಕ್ಕಾಗಿ ಶಿಕ್ಷಣ ಪಡೆಯುವ ಪ್ರಸ್ತುತ ಸಂದರ್ಭದಲ್ಲಿ ಮಕ್ಕಳ...

ಮತ್ತೆ ಭೂಕಂಪ – ಪೆರಾಜೆ, ಚೆಂಬು ಭಾಗದಲ್ಲಿ ಶಬ್ಧದೊಂದಿಗೆ ಲಘು ಕಂಪನ

ಕೊಡಗು ಹಾಗೂ ದಕ್ಷಿಣ ಕನ್ನಡ ಗಡಿ ಭಾಗದಲ್ಲಿ ನಿರಂತರ ಕಂಪನ ಸಂಭವಿಸುತ್ತಿದ್ದು ಜು‌.3 ರಂದು ರಾತ್ರಿ 9.18 ಕ್ಕೆ ಭೂಮಿ ಕಂಪಿಸಿದೆ. ಮೊದಲಿಗೆ ಶಬ್ಧ ಹಾಗೂ ನಂತರ ಸಣ್ಣ ಮಟ್ಟಿನ ಕಂಪನ ಆಗಿದೆ ಎಂದು ಚೆಂಬು ನಿವಾಸಿಗಳು ಮಾಹಿತಿ ನೀಡಿದ್ದಾರೆ. ಹಿಂದಿನ ಕಂಪನಗಳಿಗೆ ಹೋಲಿಸಿದರೆ ಇದು ಲಘು ಪ್ರಮಾಣದಲ್ಲಿತ್ತು ಎನ್ನಲಾಗಿದೆ.

ನಡುಗಲ್ಲು ಹರಿಹರಪಲ್ಲತ್ತಡ್ಕ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ತಡೆ

ನಡುಗಲ್ಲು ಹರಿಹರಪಲ್ಲತ್ತಡ್ಕ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ತಡೆ ಉಂಟಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಸಂಚಾರಕ್ಕೆ ಅಡಚಣೆಯಾಗಿದ್ದು ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ.

ನೀನಾಸಂ ರಂಗ ಶಿಕ್ಷಣಕ್ಕೆ ಮಮತಾ ಕಲ್ಮಕಾರು ಆಯ್ಕೆ

ಕರ್ನಾಟಕದ ಪ್ರತಿಷ್ಠಿತ ರಂಗ ಶಿಕ್ಷಣ ಕೇಂದ್ರವಾಗಿರುವ ನೀನಾಸಂ ನ 2022-23 ನೇ ಸಾಲಿನ ರಂಗಪದವಿ ವಿದ್ಯಾರ್ಥಿನಿಯಾಗಿ, ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಸುಳ್ಯದ ಪ್ರತಿಭೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ರಾಜ್ಯಾದ್ಯಂತ ನಡೆಸಿದ ರಂಗ ಪಯಣದ ಸಾಹೇಬ್ರು ಬಂದವೇ ನಾಟಕದ ಮುಖ್ಯ ನಟಿ ಕುಮಾರಿ ಮಮತಾ ಕಲ್ಮಕಾರು ಇವರು ಆಯ್ಕೆ ಆಗಿರುತ್ತಾರೆ.ಮಮತಾರವರು  ಅರೆಭಾಷೆ...

7ನೇ ಬಾರಿಗೆ ನಡುಗಿದ ಭೂಮಿ – ದಿನದಲ್ಲಿ ಎರಡು ಸಲ ಕಂಪನ

ಚೆಂಬು, ಸಂಪಾಜೆ ಗೂನಡ್ಕ, ತೊಡಿಕಾನ ಸೇರಿದಂತೆ ವಿವಿಧೆಡೆ ಇಂದು ರಾತ್ರಿ 8.28 ಕ್ಕೆ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ತಿಳಿದು ಬಂದಿದೆ
Loading posts...

All posts loaded

No more posts

error: Content is protected !!