ಜ.15 – ಜ.21 : ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ಕಲಶ ಹಾಗೂ ಜಾತ್ರಾ ಮಹೋತ್ಸವ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಜ.15 ರಿಂದ ಜ.21 ರವರೆಗೆ ಪ್ರತಿಷ್ಠಾ ಕಲಶ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಜ.10 ರಂದು ಬೆಳಿಗ್ಗೆ ಗಂಟೆ 9.30ಕ್ಕೆ ಗೊನೆ ಮುಹೂರ್ತ ಕಾರ್ಯಕ್ರಮ ನಡೆಯಿತು. ಜ.15 ರಂದು ಸಂಜೆ ದೇವತಾ ಪ್ರಾರ್ಥನೆ, ಆಚಾರ್ಯವರಣ,...

ಅಡುಗೆ ಸ್ಪರ್ಧೆ: ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ

ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಸುಳ್ಯ ತಾಲೂಕು ಮಟ್ಟದ ಅಡುಗೆ ಸಿಬ್ಬಂದಿಗಳ ಅಡುಗೆ ತಯಾರಿ ಸ್ಪರ್ಧೆ ಜ.08ರಂದು ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ನಡೆಯಿತು. ಅಡುಗೆ ತಯಾರಿ ಸ್ಪರ್ಧೆಯಲ್ಲಿ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲ ಪ್ರಥಮ ಸ್ಥಾನ ಪಡೆದಿದೆ. ಅಡುಗೆ ಸಿಬ್ಬಂದಿಗಳಾದ ಗಿರಿಜಾ ಕೆ, ಜಾನಕಿ ಮತ್ತು ಸಾವಿತ್ರಿ ಇವರುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
Ad Widget

ಕಳಂಜ: 25ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಏಕಾಹ ಭಜನೆ ಕಾರ್ಯಕ್ರಮ

ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್(ರಿ.) ಕಳಂಜ ಇದರ ವತಿಯಿಂದ 25ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗೂ ಏಕಾಹ ಭಜನೆ ಕಾರ್ಯಕ್ರಮ ಜ.05 ಹಾಗೂ ಜ.06 ರಂದು ಜರುಗಿತು. ಜ.05 ಸಂಜೆ ಸೂರ್ಯಾಸ್ತದಿಂದ ಆರಂಭವಾದ ಏಕಾಹ ಭಜನೆ ಕಾರ್ಯಕ್ರಮವು ಜ.06 ಸಂಜೆ ಸೂರ್ಯಾಸ್ತದವರೆಗೆ ಜರುಗಿದ್ದು, ಕಾರ್ಯಕ್ರಮದಲ್ಲಿ ವಿವಿಧ ಭಜನಾ ತಂಡಗಳು ಭಾಗವಹಿಸಿದ್ದವು. ಜ.06ರಂದು...

ಯೋಗಾಸನದಲ್ಲಿ ಮೋನಿಷ್ ತಂಟೆಪ್ಪಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಜಿಲ್ಲಾ ಪಂಚಾಯತ್ ಶಿವಮೊಗ್ಗ, ತಾಲೂಕು ಪಂಚಾಯತ್ ಶಿವಮೊಗ್ಗ, ಉಪನಿರ್ದೇಶಕರ ಕಛೇರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿವಮೊಗ್ಗ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆ ಇವರ ಸಂಯುಕ್ತ ಆಶ್ರಯದಲ್ಲಿ 14/17 ವರ್ಷದ ವಯೋಮಿತಿಯೊಳಗಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 14 ವರ್ಷದ ವಯೋಮಿತಿಯೊಳಗಿನ ಬಾಲಕರ...

ಬಾಲಕಿ ಮೋಟ್ನೂರು ನಿಧನ

ಗುತ್ತಿಗಾರು ಗ್ರಾಮದ ವಳಲಂಬೆ ಮೋಟ್ನೂರು ದಿ. ವೀರಪ್ಪ ಗೌಡರ ಧರ್ಮಪತ್ನಿ ಬಾಲಕಿ ಮೋಟ್ನೂರು ಜ.2 ರಂದು ನಿಧನರಾದರು. ಮೃತರು ಪುತ್ರಿಯರಾದ ಮೀನಾಕ್ಷಿ ಕಡ್ಲಾರು, ಜಯ, ಇಂದಿರಾ , ರೇವತಿ, ಪುತ್ರ ಶಿವಪ್ರಸಾದ್, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ನಿನಾದ ತಂಟೆಪ್ಪಾಡಿಯಲ್ಲಿ “ಬಾಬು ಮಾಸ್ಟರ್ ನೆನಪು” ಕಾರ್ಯಕ್ರಮ ಹಾಗೂ ಯಕ್ಷಗಾನ ಬಯಲಾಟ ನಾಗ ಸಂಜೀವನ

ಕಳಂಜ ಗ್ರಾಮದ ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿಯಲ್ಲಿ ಜ.01ರಂದು ತಂಟೆಪ್ಪಾಡಿ ಶಾಲೆಯಲ್ಲಿ 12 ವರ್ಷ ಸೇವೆ ಸಲ್ಲಿಸಿರುವ ಪ್ರಸಿದ್ಧ ಚೆಂಡೆ ವಾದಕರಾಗಿದ್ದ ಬಾಬು ಮಾಸ್ಟರ್ ರವರನ್ನು ನೆನಪಿಸುವ ಸಲುವಾಗಿ "ಬಾಬು ಮಾಸ್ಟರ್ ನೆನಪು" ಕಾರ್ಯಕ್ರಮ ಹಾಗೂ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಮೇಳದವರಿಂದ ಯಕ್ಷಧ್ರುವ ಪಟ್ಲ ಸತೀಶ್...

ಛಲವಿದ್ದರೆ ಮನದಲ್ಲಿ, ಗೆಲ್ಲಬಹುದು ಬದುಕಿನಲ್ಲಿ…

ಬದುಕು ಕಲಿಸುತ್ತಿದೆ ನೂರಾರು ಪಾಠ,ಮನವು ಹೇಳುತ್ತಿದೆ ಇದು ನಿನ್ನದೇ ಓಟ,ಸೋಲು ಗೆಲುವುಗಳೇ ಜೀವನ ಪಾಠ,ಕಷ್ಟ ನಷ್ಟಗಳೇ ಬದುಕಿನ ಪರೀಕ್ಷೆ…ಕನಸೆಂಬುವುದು ಗೆಲುವಲ್ಲ,ಕನಸಿನೊಳಗಡೆ ಗೆಲುವಡಗಿಹುದು,ಹುಡುಕಿ ಸಾಗಿದಾಗಲೇ ಕೈಗೆ ಸಿಗುವುದು, ಗೆಲುವು ಕೈಗೆ ಸಿಗುವುದು…ಇಲ್ಲಿ ನೋವು ಬದುಕ ಅಂತ್ಯವಲ್ಲ,ಕಷ್ಟ ಕನಸ ಮರೆಸೋದಿಲ್ಲ,ಸೋಲೆಂಬುವುದು ಶಾಶ್ವತವಲ್ಲ,ಸೋಲನ್ನು ಸೋಲಿಸುವ ಕ್ಷಣವು ಬರುವುದು,ಬದುಕಿನಲ್ಲಿ ಅವಮಾನಕ್ಕುತ್ತರಿಸುವ ದಿನವು ಬರುವುದು ಛಲವಿದ್ದರೆ ಮನದಲ್ಲಿ, ಗೆಲ್ಲುವ ಛಲವಿದ್ದರೆ ಮನದಲ್ಲಿ… ✍️ಉಲ್ಲಾಸ್...

ಸುಬ್ರಹ್ಮಣ್ಯ : ಭಕ್ತಿ ಸಂಭ್ರಮದ ಶ್ರೀ ಅಯ್ಯಪ್ಪಸ್ವಾಮಿ ದೀಪೋತ್ಸವ

ಅಖಿಲ ಭಾರತ ಶ್ರೀ ಅಯ್ಯಪ್ಪ ಸೇವಾ ಸಂಘ ಸುಬ್ರಹ್ಮಣ್ಯ ಮತ್ತು ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಸುಬ್ರಹ್ಮಣ್ಯದ ಸವಾರಿ ಮಂಟಪದಲ್ಲಿ ಹದಿನಾಲ್ಕನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವವು ಭಕ್ತಿ ಸಂಭ್ರಮದಿಂದ ಉಮೇಶ್ ಗುರುಸ್ವಾಮಿಗಳ ನೇತೃತ್ವದಲ್ಲಿ ಶನಿವಾರ ರಾತ್ರಿ ಜರುಗಿತು.ಈ ಪ್ರಯುಕ್ತ ಬೆಳಗ್ಗೆ ಶ್ರೀ ಗಣಪತಿ ಹೋಮ ನಡೆಯಿತು.ಮದ್ಯಾಹ್ನ...

ಸಂಪಾಜೆ : ಕಬಡ್ಡಿ ಪಂದ್ಯಾಟ – ಸತ್ಯ ದೇವತೆ ಪೆರಾಜೆ ತಂಡಗಳಿಗೆ ಒಲಿದ ಪ್ರಥಮ ಹಾಗೂ ದ್ವಿತೀಯ ಬಹುಮಾನ

ಪಯಸ್ವಿನಿ ಪ್ರೆಂಡ್ಸ್ ಕ್ಲಬ್ ಸಂಪಾಜೆ ಕೊಡಗು ಇದರ ವತಿಯಿಂದ ನಡೆದ 18 ವರ್ಷಗಳಿಗೆ ಒಳಪಟ್ಟು ಯುವಕರ ಕಬಡ್ಡಿ ಪಂದ್ಯಾವಳಿಯು ಜ.1 ರಂದು ರಂದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದ ಗದ್ದೆಯಲ್ಲಿ ನಡೆಯಿತು. ಸಮಾರಂಭದ ಉದ್ಘಾಟನೆಯನ್ನು ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ರಮಾದೇವಿ ಬಾಲಚಂದ್ರ ಕಳಗಿ ನೆರವೇರಿಸಿದರು.ಈ ಶುಭ ಸಂದರ್ಭದಲ್ಲಿ ತೀರ್ಥಪ್ರಸಾದ್ ದುಗ್ಗಳ ಅಧ್ಯಕ್ಷರು, ಪಯಸ್ವಿನಿ...

ಬೆಳ್ಳಾರೆ ಜಿ.ಪಂ.ಕ್ಷೇತ್ರದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಸ್. ಅಂಗಾರರವರಿಂದ ಚಾಲನೆ

ಸುಳ್ಯ ತಾಲೂಕಿನ ಪೆರುವಾಜೆ, ಕೊಡಿಯಾಲ, ಮುರುಳ್ಯ, ಬಾಳಿಲ ಹಾಗೂ ಬೆಳ್ಳಾರೆ ಗ್ರಾ.ಪಂ.ವ್ಯಾಪ್ತಿಯಲ್ಲಿ ರೂ.3.15 ಕೋಟಿ ಮೊತ್ತದ ವಿವಿಧ ರಸ್ತೆ ಕಾಮಗಾರಿಗಳಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು ಇಂದು ಗುದ್ದಲಿ ಪೂಜೆ ನೆರವೇರಿಸಿದರು. ಪೆರುವಾಜೆ ಗ್ರಾಮದ ಮಠತ್ತಡ್ಕ ಎಸ್.ಸಿ.ಕಾಲನಿ ರಸ್ತೆ ಅಭಿವೃದ್ಧಿಗೆ 10 ಲಕ್ಷ, ಪೆರುವಾಜೆ ಗ್ರಾಮದ ಕೊಲ್ಯ ಸಂಪರ್ಕ ರಸ್ತೆ...
Loading posts...

All posts loaded

No more posts

error: Content is protected !!