ಸಂಪಾಜೆಯಲ್ಲಿ ಧೀಡೀರ್ ಬಾವಿ ಕುಸಿತ !

ಸುಳ್ಯ ತಾಲೂಕಿನ ಸಂಪಾಜೆ ಕೆಳೆದ ಮೂರು ವರ್ಷಗಳಿಂದ ಪ್ರಕೃತಿ ವಿಕೋಪ ಗೊಳ್ಳುತ್ತಿದ್ದು ಇಂದು ಕ್ಲಾರೆನ್ಸ್ ಡಿಸೋಜಾ ಸಂಪಾಜೆ ರವರ ಬಾವಿ ದಿಡೀರ್ ಕುಸಿತಗೊಂಡಿದ್ದು ಕೊಟ್ಟಿಗೆ, ಮನೆ ಸಮೀಪ ಅಪಾಯದ ಸ್ಥಿತಿ ತಲುಪಿದೆ ಎಂದು ತಿಳಿದು ಬಂದಿದೆ.

ಮಳೆಯ ಅಬ್ಬರಕ್ಕೆ ಆಲೇಟ್ಟಿಯ ಕೂರ್ನಡ್ಕ ಬಳಿ ನಾಲ್ವರಲ್ಲಿ ಓರ್ವ ನೀರು ಪಾಲು.

ಸುಳ್ಯ ತಾಲೂಕಿನ ಆಲೇಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ಅಪರಿಚಿತ ವ್ಯಕ್ತಿಯೋರ್ವ ನೀರಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು ಸ್ಥಳಕ್ಕೆ ಅಗ್ನಿ ಶಾಮಕ ದಳ, ಕಂದಾಯ ಇಲಾಖೆ ,ಪೊಲೀಸರ ದೌಡಾಯಿಸಿದ್ದು ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ. ತಾಹಾಶೀಲ್ದಾರ್ ಭೇಟಿ ಚಿತ್ರ. ಕೊಡಗು ಕಡೆಯಿಂದ ರಬ್ಬರ ಟ್ಯಾಪಿಂಗ್ ಮಾಡುವ ಕೂಲಿಕಾರ್ಮಿಕರ ನಾಲ್ವರ ತಂಡ ಮಾವಜಿ ಕಡೆಯಿಂದ ಬಡ್ಡಡ್ಕ ಕಡೆಗೆ ನಡೆದುಕೊಂಡು...
Ad Widget

ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 9ನೇ ಶಾಖೆ ಬೆಳ್ಳಾರೆಯಲ್ಲಿ ಉದ್ಘಾಟನೆ.

ಬೆಳ್ಳಾರೆ: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ 9 ನೇ ಶಾಖೆಯು ಬೆಳ್ಳಾರೆಯಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಖಜಾನೆಯಾಗಿ ಬೆಳೆಯಲಿದೆ ಎಂದು ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನದ ಕಾವೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರು ಹೇಳಿದರು.ಬೆಳ್ಳಾರೆಯಲ್ಲಿ ಜು.6ರಂದು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು....

ಚೆಂಬು ವನಮಹೋತ್ಸವ ಕಾರ್ಯಕ್ರಮ.

ಮಡಿಕೇರಿ ವಿಭಾಗದ ಸಂಪಾಜೆ ಪ್ರಾದೇಶಿಕ ವಲಯದ ವತಿಯಿಂದ ಚೆಂಬು ಗ್ರಾಮದ ಕೂಡಡ್ಕ,ಹಿರಿಯ ಪ್ರಾಥಮಿಕ ಶಾಲೆ ಇವರ ಸಹಭಾಗಿತ್ವದಲ್ಲಿ, ಕೋಟಿ ವೃಕ್ಷ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ವನಮಹೋತ್ಸವ ಕಾರ್ಯಕ್ರಮ ಜು.4 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಪರಿಸರದ ಮಹತ್ವದ ಬಗ್ಗೆ ತಿಳಿಸಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು, ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿಗಳಾದ ಮಧುಸೂದನ್. ಯಂ. ಕೆ, ಶಾಲೆ...

ಸಾರ್ವಜನಿಕ ಗ್ರ೦ಥಾಲಯ ಇಲಾಖೆ,ಜಿಲ್ಲಾ ಕೇ೦ದ್ರ ಗ್ರ೦ಥಾಲಯ ಮ೦ಗಳೂರು,ಸುಳ್ಯ ಶಾಖಾ ವತಿಯಿ೦ದ ಡಿಜಿಟಲ್ ಓದುವ ದಿನ,ಓದುವ ತಿ೦ಗಳು ಕಾರ್ಯಕ್ರಮದಲ್ಲಿ ಅಜ್ಜಾವರ ಗ್ರಾಮದ ಮಕ್ಕಳಿಗೆ ಪ್ರಶಸ್ತಿ.

ಸುಳ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ,ಜಿಲ್ಲಾ ಕೇ೦ದ್ರ ಗ್ರಂಥಾಲಯ ಮಂಗಳೂರು,ಸುಳ್ಯ ಶಾಖಾ ವತಿಯಿಂದ ಓದುವ ದಿನ/ಡಿಜಿಟಲ್ ಓದುವ ದಿನ/ಓದುವ ತಿಂಗಳು ಇದರ ಅಂಗವಾಗಿ ನಡೆದ ಚಿತ್ರಕಲಾ ಸ್ಪರ್ದೆಯಲ್ಲಿ ಭಾಗವಹಿಸಿದ ಅಜ್ಜಾವರ ಗ್ರ೦ಥಾಲಯ ಮತ್ತು ಮಾಹಿತಿ ಕೇ೦ದ್ರದ "ಓದುವ ಬೆಳಕು" ಮಕ್ಕಳು 6ಜನ ಭಾಗವಹಿಸಿದ್ದು,4 ಜನ ಬಹುಮಾನವನ್ನು ಪಡೆದಿರುತ್ತಾರೆ.ಪ್ರೌಢ ಶಾಲಾ ವಿಭಾಗದಲ್ಲಿ ಭುವನ್.ಎ.10ನೇ ತರಗತಿ ಸ.ಪ್ರೌ.ಶಾಲೆ ಅಜ್ಜಾವರ ಇವರು...

ಪುತ್ತೂರು ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸುಳ್ಯ ಪ್ರಾಕೃತಿಕ ವಿಕೋಪ ತಾಲೂಕು ಸಮಿತಿ ಸಭೆ .ಅಧಿಕಾರಿಗಳಿಗೆ ಖಡಕ್ ಸೂಚನೆ !

ಸುಳ್ಯ ತಾಲೂಕಿನಲ್ಲಿ ಎಡಬಿಡದೇ ಮಳೆ ಸುರಿಯುತ್ತಿದ್ದ ಪುತ್ತೂರು ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ನೇತ್ರತ್ವದಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಇಂದು ಜರುಗಿತು. ಈ ಸಭೆಯಲ್ಲಿ ಪ್ರತಿ ಗ್ರಾಮದ ಪ್ರಾಕೃತಿಕ ವಿಕೋಪ ನೋಡೆಲ್ ಅಧಿಕಾರಿಗಳು ಸೇರಿದಂತೆ ತಾಲೂಕಿನ ನಾನಾ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಜನತೆಗೆ ಸಮಸ್ಯೆಗಳು ಎದುರಾದಗ ತುರ್ತು ಸಂದರ್ಭದಲ್ಲಿ ಯಾವುದೇ ಅಧಿಕಾರಿಗಳು...

ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳನ್ನು ಬೆಳ್ಳಾರೆ ರಸ್ತೆಯಲ್ಲೇ ಎನ್ ಕೌಂಟರ್ ಮಾಡಿ – ಅರುಣ್ ಕುಮಾರ್ ಪುತ್ತಿಲ ಆಗ್ರಹ

ಬೆಳ್ಳಾರೆಯ ಅರುಣ್ ಕುಮಾರ್ ಪುತ್ತಿಲ ಅಭಿಮಾನಿ ಬಳಗದ ವತಿಯಿಂದ ಭಾರತ ಮಾತಾ ಪೂಜನಾ ಕಾರ್ಯಕ್ರಮ ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜು.2ರಂದು ನಡೆಯಿತು. ಅಯೋಧ್ಯೆ ಕರಸೇವೆಯಲ್ಲಿ ಬಲಿದಾನಗೈದ ಕೊಠಾರಿ ಸಹೋದರ ಶೇಷಪ್ಪ ಆಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಣ್ಣಾ ವಿನಯಚಂದ್ರ ದೀಪ ಬೆಳಗುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭೆಯ ಕೇಂದ್ರ...

⛔ದ.ಕ. ಜಿಲ್ಲಾದ್ಯಂತ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

🔴 ಅಂಗನವಾಡಿ,ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ🔴 ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ರೆಡ್ ಅಲರ್ಟ್ ಘೋಷನೆಯಾಗಿದ್ದು, ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಸೇರಿದಂತೆ ಪ್ರಾಥಮಿಕ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಸೇರಿದಂತೆ ಎಲ್ಲಾ ಸರಕಾರಿ ಅನುದಾನಿತ...

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆ ಮತ್ತು ಸ್ಕೌಟ್ ಗೈಡ್ ಶಿಕ್ಷಕರ ಮಾಹಿತಿ ಕಾರ್ಯಾಗಾರ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆಯು ದಿನಾಂಕ 02.07.2023 ಶನಿವಾರ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ ಬಿ ಕೆ ಇವರ ಅಧ್ಯಕ್ಷತೆಯಲ್ಲಿ ಪಂಜ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರುಗಿತು. ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷೆ, ಪಂಜ ಸ್ಥಳೀಯ ಸಂಸ್ಥೆಯ ಎ.ಡಿ.ಸಿ ವಿಮಲ ರಂಗಯ್ಯ ಸ್ಕೌಟ್ ಗೈಡ್ ವಾರ್ಷಿಕ ಕಾರ್ಯಕ್ರಮಗಳಿಗೆ...

ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳಿಗೆ ಎನ್ ಐ ಎ ಕೊಟ್ಟ ಗಡುವು ಅಂತ್ಯ- ಮುಂದಿನ ನಡೆ ಬಗ್ಗೆ ಕುತೂಹಲ

ಸುಳ್ಯ: ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿಗಳ ಶರಣಾಗತಿಗೆ ಎನ್ ಐ ಎ ನ್ಯಾಯಾಲಯ ಸೂಚಿಸಿದ ಗಡುವು ಮುಗಿದಿದ್ದು, ತನಿಖಾ ಸಂಸ್ಥೆಯ ಮುಂದಿನ ನಡೆಯ ಬಗ್ಗೆ ಬಾರಿ ಕುತೂಹಲ ಮೂಡಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ಜೂ.30ರೊಳಗೆ ಶರಣಾಗಬೇಕು, ಇಲ್ಲವೇ ಆರೋಪಿಗಳ ಮನೆ, ಆಸ್ತಿ ಮುಟ್ಟುಗೋಲು ಹಾಕುವುದಾಗಿ ಸೂಚನೆ...
Loading posts...

All posts loaded

No more posts

error: Content is protected !!