ಕಲ್ಲುಗುಂಡಿ: ಬಂಗ್ಲೆಗುಡ್ಡೆಯಲ್ಲಿ ಹೊತ್ತಿ ಉರಿದ ಬೆಂಕಿ; ನಂದಿಸಿದ ಅಗ್ನಿಶಾಮಕ ದಳ

ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಬಂಗ್ಲೆಗುಡ್ಡೆ ಎಂಬಲ್ಲಿ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಇಂದು ಸಂಜೆ ನಡೆದಿದ್ದದು ಇದೀಗ ಅಗ್ನಿ ಶಾಮಕ ದಳ ಆಗಮಿಸಿ ಬೆಂಕಿ ನಂದಿಸಿರುವುದಾಗಿ ತಿಳಿದು ಬಂದಿದೆ.  ಈ ಬೆಂಕಿ ಆಕಸ್ಮಿಕವಾಗಿ ಕಾಡಿಗೆ ಹಬ್ಬಿಕೊಂಡ ಬೆಂಕಿಯಿಂದ ಬಿದಿರಿನ ಹಿಂಡು ಸಹಿತ ಮರಗಿಡಗಳಿಗೆ ಹಬ್ಬಿ ಹೊತ್ತಿ ಉರಿದಿದೆ.  https://youtube.com/shorts/1_yfFgS5qGE?si=eOfmrLRn6T1egUVc   ಬೆಂಕಿ ನಂದಿಸಲು...

ಪ್ರಜಾಪ್ರಭುತ್ವ ಸುಗಮವಾಗಿ ನಡೆಯಲು ವಕೀಲರ ಪಾತ್ರ ಬಹಳ ದೊಡ್ಡದಿದೆ – ಚೌಟ ; ದೇಶ ಕಾಯುವ ಯೋಧನಿಗೆ ಸಂಪೂರ್ಣ ಬೆಂಬಲ- ನಾರಾಯಣ ಕೆ.

ಸುಳ್ಯ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಕ್ಯಾಪ್ಟನ್‌ ಬೃಜೇಶ್ ಚೌಟರವರು ವಕೀಲರ ಜೊತೆ ಸಂವಾದ ಕಾರ್ಯಕ್ರಮವು ಸುಳ್ಯ ಬಿಜೆಪಿ ಮಂಡಲ ಕಛೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ನಾರಾಯಣ ಕೆ ಹೂಗುಚ್ಚ ನೀಡಿ ಸ್ವಾಗತಿಸಿದರು.. ಕ್ಯಾಪ್ಟನ್ ಬೃಜೇಶ್ ಚೌಟ ವಕೀಲರ ಸಂವಾದದಲ್ಲಿ ಮತನಾಡುತ್ತಾ ಸಮಾಜದ ಸಮಸ್ಯೆ ಅರಿತವರು ವಕೀಲರು...
Ad Widget

ಎಣ್ಮೂರು ಸೀತಾರಾಮಾಂಜನೇಯ ಭಾರತೀ ಮಂದಿರದಲ್ಲಿ ಶ್ರೀ ರಾಮನವಮಿ ಉತ್ಸವ

*30ನೇ ವರ್ಷದ ಅರ್ಧ ಏಕಾಹ ಭಜನಾ ಮಂಗಳೋತ್ಸವ, 34ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ದೇವರ ಪೂಜೆ* ಎಣ್ಮೂರು ಕೋಟಿ ಚೆನ್ನಯ ನಗರದ ಶ್ರೀ ಸೀತಾರಾಮಾಂಜನೇಯ ಭಾರತೀ ಮಂದಿರದಲ್ಲಿ ಶ್ರೀ ಕೆ ಪ್ರಸಾದ ಕೆದಿಲಾಯರ ಹಿರಿತನದಲ್ಲಿ ಶ್ರೀ ರಾಮನವಮಿ ಉತ್ಸವವು ಇಂದು(ಎ.17) ಆರಂಭಗೊಂಡಿತು. ಶ್ರೀ ರಾಮನವಮಿ ಉತ್ಸವದ ಪ್ರಯುಕ್ತ ಎ.17 ಹಾಗೂ ಎ.18ರಂದು 30ನೇ ವರ್ಷದ ಅರ್ಧ...

ಅಯ್ಯನಕಟ್ಟೆಯಲ್ಲಿ ವಾಲ್ತಾಜೆ’ಸ್ ಟೀ ಸ್ಟಾಲ್ ಶುಭಾರಂಭ

ಅಯ್ಯನಕಟ್ಟೆಯ ಗೋಕುಲ ಕಾಂಪ್ಲೆಕ್ಸ್ ನಲ್ಲಿ ವಾಲ್ತಾಜೆ ಶ್ರೀ ಸುಬ್ಬಣ್ಣ ಭಟ್ ರವರ ನೇತೃತ್ವದ ವಾಲ್ತಾಜೆ'ಸ್ ಟೀ ಸ್ಟಾಲ್ ಎ.17ರಂದು ಶುಭಾರಂಭಗೊಂಡಿತು. ಅಯ್ಯನಕಟ್ಟೆ ಗೋಕುಲ ಕಾಂಪ್ಲೆಕ್ಸ್ ಮಾಲಕರಾದ ಶ್ರೀ ರಾಮಚಂದ್ರ ರಾವ್ ಬಾಳಿಲ ಟೀ ಸ್ಟಾಲ್ ನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಯ್ಯನಕಟ್ಟೆ ಶಿಶಿರ ಎಂಟರ್ ಪ್ರೈಸಸ್ ಮಾಲಕರಾದ ಸದಾಶಿವ ನಾಯಕ್ ಪಂಜಿಗಾರು, ಕಾರ್ತಿಕ್ ಪದ್ಯಾಣ, ಈಶ್ವರಚಂದ್ರ...

ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಬೇಸಿಗೆ ಶಿಬಿರ

ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಪ್ರಿಲ್ ಮೊದಲ ವಾರದಲ್ಲಿ ಚಿಣ್ಣರ ಅಂಗಳ ಬೇಸಿಗೆ ಶಿಬಿರ ನಡೆಯಿತು. ಶಾಲಾ ಹಿರಿಯ ವಿದ್ಯಾರ್ಥಿ ಮಹೇಶ್ ಕಾಂಚೋಡು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ರಾವ್ ಯು, ಸಂಚಾಲಕರಾದ ಶ್ರೀ ಪಿ.ಜಿ.ಎಸ್.ಎನ್ ಪ್ರಸಾದ್, ಆಡಳಿತ ಮಂಡಳಿ ಸದಸ್ಯರಾದ ಎನ್ ಗೋವಿಂದ...

ಪಿ.ಯು.ಸಿ ಫಲಿತಾಂಶ : ಬೆಳ್ಳಾರೆಯ ಹರ್ಷಿತಾ.ಟಿ ಡಿಸ್ಟಿಂಕ್ಷನ್

ಈ ಸಲದ ಪಿ.ಯು.ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪುತ್ತೂರು ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಬೆಳ್ಳಾರೆ ಮಾಸ್ತಿಕಟ್ಟೆಯ ಹರ್ಷಿತಾ.ಟಿ 545 ಅಂಕಗಳನ್ನು ಗಳಿಸುವ ಮೂಲಕ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ. ಇವರು ಬೆಳ್ಳಾರೆ ಮಾಸ್ತಿಕಟ್ಟೆಯ ಸುಬ್ರಹ್ಮಣ್ಯೇಶ್ವರ ಗ್ಯಾರೇಜ್ ಮಾಲಕ ಶ್ರೀ ತಿರುಮಲೇಶ್ವರ ಹಾಗೂ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಬೇಬಿ.ಕೆ.ಸಿ...

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ

*ದೇವಳದಲ್ಲಿ ಚಂಡಿಕಾ ಹೋಮ, 108 ನಾಳಿಕೇರ ಗಣಪತಿ ಹವನ, ಮೂಡಪ್ಪ ಸೇವೆ ಹಾಗೂ ಶ್ರೀ ಸತ್ಯನಾರಾಯಣ ಪೂಜೆ* ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ, ಚಂಡಿಕಾ ಹೋಮ, 108 ನಾಳಿಕೇರ ಗಣಪತಿ ಹವನ, ಮೂಡಪ್ಪ ಸೇವೆ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯು ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ...

ಗಾಂಧಿನಗರ ಕೆಪಿಎಸ್: ಪಿಯುಸಿ ಕಲಾ ವಿಭಾಗ ಮತ್ತು ವಿಜ್ಞಾನ ವಿಭಾಗದಲ್ಲಿ ಶೇ. ೧೦೦, ವಾಣಿಜ್ಯ ವಿಭಾಗದಲ್ಲಿ ಶೇ. ೯೩

ಸುಳ್ಯ ಗಾಂಧಿನಗರದ ಕೆಪಿಎಸ್ ಪಿಯುಸಿ ವಿಭಾಗದ ಫಲಿತಾಂಶ ಪ್ರಕಟಗೊಂಡಿದ್ದು, ಕಲೆ ಮತ್ತು ವಿಜ್ಞಾನ ವಿಭಾಗದಲ್ಲಿ ಶೇಕಡ ೧೦೦ ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ ೯೩% ಲಭಿಸಿದೆ.ಕಲಾ ವಿಭಾಗದಲ್ಲಿ ರಾಜೇಶ ೫೬೭ ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನದಲ್ಲಿದ್ದರೆ , ಫಾತಿಮತ್ ಜಾಯಿದಾ ೫೬೦ ಅಂಕಗಳಿಸಿ ವಿಜ್ಞಾನ ವಿಭಾಗದಲ್ಲಿ ಪ್ರಥ ಸ್ಥಾನದಲ್ಲಿದ್ದರೆ. ಫಾತಿಮತ್ ತಂಬ್ರಿನ ೪೬೭ ಅಂಕಗಳಿಸಿ...

ನಡುಗಲ್ಲು ಸ.ಹಿ.ಪ್ರಾ.ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿ ಎ.08ರಂದು ಸಮುದಾಯದತ್ತ ಶಾಲಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪ್ರಥಮವಾಗಿ 1 ರಿಂದ 7ನೇ ತರಗತಿ ಮಕ್ಕಳ ಫಲಿತಾಂಶವನ್ನು ಪ್ರಕಟನಾ ಫಲಕದಲ್ಲಿ ಪೂರ್ವಾಹ್ನ 9 ಗಂಟೆಗೆ ಪ್ರಕಟಿಸಿ ಘೋಷಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಉತ್ತೀರ್ಣಗೊಂಡರು. ಬಳಿಕ ಸಮುದಾಯದತ್ತ ಶಾಲಾ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆದವು. ಈ ಸಂದರ್ಭದಲ್ಲಿ ಪೋಷಕರಿಗೆ 2023-...

ಶಾಂತಿ ಸೌಹಾರ್ದತೆಯ ಈದುಲ್ ಫಿತರ್ ಎ.10 ರಂದು (ನಾಳೆ) ಆಚರಣೆ – ದಕ ಖಾಝಿ.

ಮುಸ್ಲಿಂ ಸಮುದಾಯವು ನಿರಂತರವಾಗಿ ಮೂವತ್ತು ದಿನಗಳ ಉಪವಾಸ ಗೈದು 09-04-2024 ಮಂಗಳವಾರ ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ಬುಧವಾರ ರಾತ್ರಿ ಶವ್ವಾಲ್ ತಿಂಗಳ ಈದುಲ್ ಫಿತರ್ ರಂಝಾನ್ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರಾದ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ರವರು ತೀರ್ಮಾನಿಸಿದ್ದು ಈ ಹಿನ್ನಲೆಯಲ್ಲಿ ಜಿಲ್ಲೆಯಾಧ್ಯಂತ ಈದುಲ್ ಫಿತರ್ ನಡೆಯಲಿದೆ.
Loading posts...

All posts loaded

No more posts

error: Content is protected !!