- Saturday
- August 1st, 2026
ದಿನಾಂಕ : 21 ಏಪ್ರಿಲ್ 2026ವಾರ : ಮಂಗಳವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಏಪ್ರಿಲ್ 21) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 290-445-473/475ಹಳೆ ಅಡಿಕೆ...
ಬದುಕಿನಲ್ಲಿ ಸೋತ ಜೀವಕ್ಕೆ ನಮ್ಮ ಪ್ರೋತ್ಸಾಹದ ನುಡಿಯೊಂದೇ ಸಾಕು, ಮತ್ತೆದ್ದು ಮುನ್ನಡೆಯಲು ಆ ಜೀವಕ್ಕೆ ಅದು ಪ್ರೇರಣೆಯಾದೀತು, ಆ ಜೀವದ ನಾಳಿನ ಗೆಲುವಿಗೆ ನಮ್ಮ ಇಂದಿನ ಪ್ರೋತ್ಸಾಹದ ನುಡಿಯೇ ಕಾರಣವಾದೀತು...ಬದುಕಿನಲ್ಲಿ ನೊಂದ ಜೀವಕ್ಕೆ ನಮ್ಮ ಸಾಂತ್ವನದ ಮಾತೊಂದೇ ಸಾಕು, ನೋವುಗಳ ತೊರೆದು ನಲಿವಿನೆಡೆಗೆ ಮುನ್ನಡೆಯಲು ಆ ಜೀವಕ್ಕೆ ಅದು ಸ್ಥೈರ್ಯವನ್ನು ನೀಡೀತು, ಆ ಜೀವದ ನಾಳಿನ...
ಏ.20 ರಂದು ಸಂಜೆ ಬೀಸಿದ ಭೀಕರ ಗಾಳಿ ಮಳೆಯು ಯೇನೆಕಲ್ಲು ಗ್ರಾಮದಲ್ಲಿ ಅವಾಂತರವನ್ನೇ ಸೃಷ್ಟಿಸಿ ಅಪಾರವಾದ ನಷ್ಟವನ್ನುಂಟುಮಾಡಿದೆ. ಗ್ರಾಮದ ಅಜಿರ್ಪೊಳಿ ಎಂಬಲ್ಲಿ ಉದಯಕುಮಾರ್, ಉಮೇಶ್ ಎಂಬವರ ಮನೆಯ ಮೇಲೆ ಮರ ಬಿದ್ದು ಅಪಾರ ಹಾನಿಯುಂಟಾಗಿದ್ದು, ಆ ಭಾಗದ ಕೃಷಿಕರ ಹಲವು ತೋಟಗಳಲ್ಲಿ ಅಡಿಕೆ ಮರಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದಾಗಿ ವರದಿಯಾಗಿದೆ.
ಬಳ್ಪ ಗ್ರಾಮ ವ್ಯಾಪ್ತಿಯಲ್ಲೂ ಏ.20ರಂದು ಸಂಜೆ ಬೀಸಿದ ಭೀಕರ ಬಿರುಗಾಳಿಗೆ ಅಪಾರ ಹಾನಿಯುಂಟಾದ ಬಗ್ಗೆ ವರದಿಯಾಗಿದೆ. ಬಳ್ಪ ಗ್ರಾಮದ ಚಿತ್ತರಂಜನ್ ಜೋಗಿ, ಹರಿಪ್ರಸಾದ್ ಉಕ್ಕಿನಮನೆ ರವರ ಸೇರಿದಂತೆ ಹಲವು ಮನೆಗಳ ಮೇಲೆ ಮರ ಬಿದ್ದು ಅಪಾರ ಹಾನಿ ಸಂಭವಿಸಿರುವುದಾಗಿ ತಿಳಿದುಬಂದಿದ್ದು, ಎಣ್ಣೆಮಜಲು ಭಾಗದಲ್ಲಿ ವಿದ್ಯುತ್ ಟಿಸಿಯ ಮೇಲೆ ಮರ ಬಿದ್ದು ಟಿಸಿಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ. ರಸ್ತೆ...
ಸುಮಾರು ಒಂಬತ್ತು ವರ್ಷಗಳಿಂದ ಸಾಂಸ್ಕೃತಿಕವಾಗಿ ಶೈಕ್ಷಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಕಲಾಮಾಯೆ ಸಾಂಸ್ಕೃತಿಕ ವಿದ್ಯಾ ಸಂಸ್ಥೆ(ರಿ.) ಏನೆಕಲ್ ತನ್ನ ಹತ್ತನೇ ವರ್ಷದ ದಶ ಸಂಭ್ರಮ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಿತು. ಏಪ್ರಿಲ್ 12 ರಿಂದ ಪ್ರಾರಂಭ ಗೊಂಡ "ಮಕ್ಕಳ ಗೌಜಿ" ಚಿಣ್ಣರ ಬಣ್ಣದ ಬೇಸಿಗೆ ಶಿಬಿರ ನಾಡಿನ ಪ್ರತಿಭಾವಂತ ಸಂಪನ್ಮೂಲ ಅತಿಥಿ ಗಳನ್ನ ಆಹ್ವಾನಿಸಿ ನಿರ್ದೇಶನ ನೀಡಲಾಯಿತು. ಏಪ್ರಿಲ್...
ಶ್ರೀ ಸದಾಶಿವ ಚಾರಿಟೇಬಲ್ ಟ್ರಸ್ಟ್(ರಿ.) ಬೆಳ್ಳಾರೆ ಇದರ ಆಡಳಿತಕ್ಕೆ ಒಳಪಟ್ಟಿರುವ ಬೆಳ್ಳಾರೆಯ ಶ್ರೀ ಸದಾಶಿವ ಶಿಶು ಮಂದಿರದ ಹದಿನೇಳನೇ ವರ್ಷಾಚರಣೆಯ ಅಂಗವಾಗಿ ಚಿಣ್ಣರ ಹಬ್ಬವು ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಏ.24ರಂದು ಸಂಜೆ ಘಂಟೆ 4:30ರಿಂದ ರಾತ್ರಿ 9:00ರ ತನಕ ನಡೆಯಲಿದೆ. ಸಂಜೆ 4:30ಕ್ಕೆ ದೀಪ ಪ್ರಜ್ವಲನೆ, ಸಂಜೆ 4:45 ರಿಂದ ಸಂಸ್ಥೆಯ ಪುಟಾಣಿಗಳಿಂದ, ಹಿರಿಯ...
ಬೆಳ್ಳಾರೆಯಲ್ಲಿ ಕಳೆದ ಒಂದು ದಶಕದಿಂದ ಕಾರ್ಯಾಚರಿಸುತ್ತಾ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾದ ಹಮ್ನಾ ಪವರ್ ಸೊಲ್ಯೂಷನ್ ಸಂಸ್ಥೆ ತನ್ನ ಎರಡನೇ ಮಳಿಗೆಯನ್ನು ಗ್ರಾಹಕರ ಬೇಡಿಕೆಯ ಮೇರೆಗೆ ಈಶ್ವರಮಂಗಲ ಪಂಚಾಯತ್ ಕಛೇರಿ ಬಳಿ ಇಂದುಮೂಲೆ ಕಾಂಪ್ಲೆಕ್ಸ್ನಲ್ಲಿ ಆರಂಭಿಸಿ ಏ.20ರಂದು ಬೆಳಿಗ್ಗೆ ಬಹು:ಅಸ್ಸಯ್ಯದ್ ಮಶ್ಹೂದ್ ತಂಙಲ್ ಕೂರತ್ ಅವರಿಂದ ಶುಭಾರಂಭ ಕಂಡಿತು. ಜಲಾಲುದ್ದೀನ್ ಅಲ್ ಬುಖಾರಿ ಕುನ್ನುಂಗೈ ದು:ಆ ನೆರವೇರಿಸಿದರು....
ಸುಬ್ರಹ್ಮಣ್ಯ ಏಪ್ರಿಲ್ 20 : ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಏ.20 ರಂದು ಸಂಜೆ ಗುಡುಗು ಸಿಡಿಲಿನೊಂದಿಗೆ ಜೋರಾದ ಮಳೆ ಬಂದು ಕಾದ ಭೂಮಿಯನ್ನು ತಂಪುಗೊಳಿಸಿರುತ್ತದೆ. ಸೋಮವಾರ ಧರ್ಮಸ್ಥಳಕ್ಕೆ ಬಂದ ಭಕ್ತರು ಮಂಗಳವಾರ ಕುಕ್ಕೆಗೆ ಬರುವ ರೂಡಿಯಿದ್ದು, ಸಾಲು ಸಾಲಾಗಿ ಭಕ್ತರ ವಾಹನಗಳು ಮಳೆಯನ್ನು ಲೆಕ್ಕಿಸದೆ ಬರುತ್ತಿರುವುದು ಕಂಡುಬಂತು. ಸರಣಿ ರಜೆ ಇದ್ದುದರಿಂದ ಕುಕ್ಕೆ ದೇವಳಕ್ಕೆ ನಿರಂತರವಾಗಿ...
ಸುಳ್ಯ ಹಳೆಗೇಟು ವಿದ್ಯಾನಗರದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ಸುಳ್ಯ ಬಸ್ ನಿಲ್ದಾಣದ ಬಳಿಯ ಶಿವಕೃಪಾ ಕಲಾ ಮಂದಿರದಲ್ಲಿ ಆರಂಭಗೊಂಡ 26ನೇ ವರ್ಷದ ಅಂತಾರಾಜ್ಯ ಮಟ್ಟದ ಉಚಿತ ವೇದ- ಯೋಗ-ಕಲಾ ಶಿಬಿರದ ಉದ್ಘಾಟನಾ ಸಮಾರಂಭವು ಏ.19ರಂದು ನಡೆಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ಇಂಜಾಡಿ ಕಾರ್ಯಕ್ರಮದ ಅಧ್ಯಕ್ಷತೆ...
ಸುಳ್ಯ : ಆಭರಣಗಳ ಮಾರಾಟ ಮತ್ತು ಸೇವಾ ಕ್ಷೇತ್ರದಲ್ಲಿ ದೀರ್ಘ ಕಾಲದ ಅನುಭವ ಹೊಂದಿರುವ ಜಿ.ಎಲ್ ಆಚಾರ್ಯ ಜುವೆಲರ್ಸ್ ಸಂಸ್ಥೆಯು ಅಕ್ಷಯ ತೃತೀಯದ ಪ್ರಯುಕ್ತ ವಿಶೇಷ ರಿಯಾಯಿತಿ ಕೊಡುಗೆಗಳನ್ನು ಘೋಷಿಸಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸಂಸ್ಥೆಯ ಪುತ್ತೂರು, ಮೂಡುಬಿದಿರೆ, ಸುಳ್ಯ, ಕುಶಾಲನಗರ ಮತ್ತು ಹಾಸನದಲ್ಲಿರುವ ಎಲ್ಲಾ ಮಳಿಗೆಗಳಲ್ಲಿ ಈ ವಿಶೇಷ ಆಫರ್ಗಳನ್ನು ನೀಡಲಾಗುತ್ತಿದ್ದು, ಹಬ್ಬದ...
Loading posts...
All posts loaded
No more posts
