ಗುತ್ತಿಗಾರು : ರಿಕ್ಷಾ ಹಾಗೂ ಬೈಕ್ ಅಪಘಾತ – ಸವಾರನಿಗೆ ಗಾಯ

ಗುತ್ತಿಗಾರು ಕಮಿಲ ರಸ್ತೆಯ ಪುಚ್ಚಪ್ಪಾಡಿ ಬಸ್ ನಿಲ್ದಾಣದ ಸಮೀಪ ಅಟೋ ರಿಕ್ಷಾ ಹಾಗೂ ಬೈಕ್ ನಡುವೆ ಅಪಘಾತ ನಡೆದ ಘಟನೆ ಇಂದು ಸಂಜೆ ನಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರನ ಜಗದೀಶ್ ಕೊರ್ತ್ಯಡ್ಕ ತಲೆ ಹಾಗೂ ಭುಜಕ್ಕೆ ಗಾಯಗಳಾಗಿದ್ದು ಸುಳ್ಯದ ಕೆ.ವಿ.ಜಿ.ಆಸ್ಪತ್ರೆಗೆ ಕರೆತರಲಾಗಿದೆ. ಅಟೋ ಚಾಲಕ ಶಶಿ ಚಣಿಲ ಹಾಗೂ ಮೂವರು ಪ್ರಯಾಣಿಕರಿಗೆ ಗಾಯಗಳಾಗಿದೆ ಎಂದು...

ಎರಡನೇ ವಾರವೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಭಾವ ತೀರ ಯಾನ – ಪುತ್ತೂರಿನಲ್ಲಿ ಮಾ.6 ರಂದು 7.15 ಕ್ಕೆ ಶೋ ಲಭ್ಯ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ  ಪ್ರೇಕ್ಷಕರ ಮೆಚ್ಚುಗೆ ಪಡೆದು ಎರಡನೇ ವಾರವೂ ಮುನ್ನಡೆಯುತ್ತಿದೆ. ಪುತ್ತೂರಿನ  ಭಾರತ್ ಸಿನಿಮಾಸ್ ನಲ್ಲಿ  ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಬೇಡಿಕೆ ಹಿನ್ನೆಲೆಯಲ್ಲಿ ಮಾ. 06 ರಂದುಸಂಜೆ 7.15 ಕ್ಕೆ  ಶೋ ನೀಡಲು  ನಿರ್ಧರಿಸಲಾಗಿದೆ. ಕೌಂಟರ್‌'ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ...
Ad Widget

ಸುಬ್ರಹ್ಮಣ್ಯ : ಮುಖ್ಯ ರಸ್ತೆಯಲ್ಲೊಂದು ಮರಣ ಬಾವಿ – ವಾಹನ ಸವಾರರೇ ಎಚ್ಚರ

ರಾಜ್ಯದ ನಂಬರ್ ಒನ್ ದೇವಸ್ಥಾನವಾಗಿರುವ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ಮುಖ್ಯ ರಸ್ತೆಯಲ್ಲೊಂದು ಮರಣ ಬಾವಿಯೊಂದು ಅಪಾಯ ಆಹ್ವಾನಿಸುತ್ತಿದೆ. ಕುಮಾಧಾರದಿಂದ ದೇವಸ್ಥಾನಕ್ಕೆ ಆಗಮಿಸುವ ರಸ್ತೆಯಲ್ಲಿ ಡಿಗ್ರಿ ಕಾಲೇಜು ಎದುರು ಒಳಚರಂಡಿಯ ಮ್ಯಾನ್ ಹೋಲ್ ರಸ್ತೆ ಮಧ್ಯೆಯೇ ಇದ್ದು ಅಪಾಯ ಆಹ್ವಾನಿಸುತ್ತಿದೆ. ಕಬ್ಬಿಣದ ಸರಳನ್ನು ಇಟ್ಟು ಒಳಚರಂಡಿಗೆ ಮುಚ್ಚಳವನ್ನು ಹಾಕಲಾಗಿದ್ದು ದ್ವಿಚಕ್ರ ವಾಹನ‌ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ....

ಸುಬ್ರಹ್ಮಣ್ಯ : ಮುಖ್ಯ ರಸ್ತೆಯಲ್ಲೊಂದು ಮರಣ ಬಾವಿ – ವಾಹನ ಸವಾರರೇ ಎಚ್ಚರ

ರಾಜ್ಯದ ನಂಬರ್ ಒನ್ ದೇವಸ್ಥಾನವಾಗಿರುವ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ಮುಖ್ಯ ರಸ್ತೆಯಲ್ಲೊಂದು ಮರಣ ಬಾವಿಯೊಂದು ಅಪಾಯ ಆಹ್ವಾನಿಸುತ್ತಿದೆ. ಕುಮಾಧಾರದಿಂದ ದೇವಸ್ಥಾನಕ್ಕೆ ಆಗಮಿಸುವ ರಸ್ತೆಯಲ್ಲಿ ಡಿಗ್ರಿ ಕಾಲೇಜು ಎದುರು ಒಳಚರಂಡಿಯ ಮ್ಯಾನ್ ಹೋಲ್ ರಸ್ತೆ ಮಧ್ಯೆಯೇ ಇದ್ದು ಅಪಾಯ ಆಹ್ವಾನಿಸುತ್ತಿದೆ. ಕಬ್ಬಿಣದ ಸರಳನ್ನು ಇಟ್ಟು ಒಳಚರಂಡಿಗೆ ಮುಚ್ಚಳವನ್ನು ಹಾಕಲಾಗಿದ್ದು ದ್ವಿಚಕ್ರ ವಾಹನ‌ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ....

ಎಸ್.ಡಿ.ಪಿ.ಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಬಂಧನ ಖಂಡಿಸಿ ಸುಳ್ಯದಲ್ಲಿ ಪ್ರತಿಭಟನೆ

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ ಯವರನ್ನು ಅನ್ಯಾಯವಾಗಿ ಸುಳ್ಳು ಆರೋಪ ಹೊರಿಸಿ ಬಂಧನ ಮಾಡಿದ್ದಾರೆಂದು ಆರೋಪಿಸಿ ರಾಷ್ಟ್ರಾದ್ಯಂತ ಎಸ್.ಡಿ.ಪಿ.ಐ. ದಿಢೀರ್ ಪ್ರತಿಭಟನೆ ನಡೆಸಿತು. ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವೆಡೆ ಪ್ರತಿಭಟನೆಯನ್ನು ಮಾಡಲಾಯಿತು,ಸುಳ್ಯ ಬ್ಲಾಕ್ ಸಮಿತಿ ವತಿಯಿಂದ ಗಾಂಧಿ ಪಾರ್ಕ್ (ಮಹಾತ್ಮ ಗಾಂಧಿಯವರ ಪುತ್ತಳಿಯ ಮುಂಭಾಗ)ಬೆಳ್ಳಾರೆ ಬ್ಲಾಕ್ ಸಮಿತಿ ವತಿಯಿಂದ...

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೋವರ್ ರೇಂಜರ್ಸ್ ಘಟಕ, ಯುವ ರೆಡ್ ಕ್ರಾಸ್ ಘಟಕ, ಪ್ರಾಕ್ತನ ವಿದ್ಯಾರ್ಥಿ ಪರಿಷತ್, ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್ ಪುತ್ತೂರು ಜಂಟಿ ಆಶ್ರಯದಲ್ಲಿ 4.03.2025 ರಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ರೋಟರಿ ಕ್ಯಾಂಪ್ ಬ್ಲಡ್ ಸೆಂಟರ್ ಪುತ್ತೂರಿನ ವೈದ್ಯಾಧಿಕಾರಿಗಳಾದ, ಡಾ .ಕೆ ಸೀತಾರಾಮ ಭಟ್...

ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ನಿರ್ಮಲಾ ಪದ್ಮನಾಭ ಪರಮಲೆ

ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ನಿರ್ಮಲಾ ಪದ್ಮನಾಭ ಪರಮಲೆಯವರು ಅವಿರೋಧವಾಗಿ ಆಯ್ಕೆಯಾದರು.ಸದಸ್ಯರುಗಳಾಗಿ ದೇವಾಲಯದ ಪ್ರಧಾನ ಅರ್ಚಕ ಮಹಾಬಲೇಶ್ವರ ಭಟ್, ರಾಜೇಶ್ ಉತ್ರಂಬೆ, ಸೂರ್ಯಪ್ರಕಾಶ್ ಕೋಡಿಬೈಲು, ಮೋನಪ್ಪ ಚಾರ್ಮತ, ವೆಂಕಪ್ಪ ನಾಯ್ಕ ಅಂಜೇರಿ, ಷಣ್ಮುಖ ಅಂಬೆಕಲ್ಲು, ಚಂದ್ರಕಲಾ ಉತ್ರಂಬೆ, ರತ್ನಾವತಿ ಹುಲ್ಲುಕುಮೇರಿ ಆಯ್ಕೆಯಾಗಿದ್ದಾರೆ.

ಮಂಗಳೂರು ವಿ.ವಿ.ಮಟ್ಟದ ಚೆಸ್ ಪಂದ್ಯಾವಳಿ – ದ್ವಿತೀಯ ಸ್ಥಾನ ಪಡೆದ ಸುಳ್ಯದ ಡಿಗ್ರಿ ಕಾಲೇಜು ತಂಡ

ಮಂಗಳೂರು ವಿ.ವಿ.ಮಟ್ಟದ ಚೆಸ್ ಪಂದ್ಯಾವಳಿ - ದ್ವಿತೀಯ ಸ್ಥಾನ ಪಡೆದ ಸುಳ್ಯದ ಡಿಗ್ರಿ ಕಾಲೇಜು ತಂಡ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಚೆಸ್ ಪಂದ್ಯಾವಳಿಯು ಡಾ. ದಯಾನಂದ ಪೈ ಸತೀಶ್ ಪೈ ಮೆಮೋರಿಯಲ್ ಕಾಲೇಜು ರಥಬೀದಿ ಮಂಗಳೂರು ಇಲ್ಲಿ ಫೆ. 28ರಂದು ನಡೆಯಿತು. ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ...

ಹರಿಹರ ಪಲ್ಲತಡ್ಕ ಗ್ರಾ.ಪಂ. ಮಾಜಿ ಸದಸ್ಯ ನವೀನ್ ಕಟ್ರಮನೆ ನಿಧನ

ಹರಿಹರ ಪಲ್ಲತಡ್ಕ ಗ್ರಾ.ಪಂ. ಮಾಜಿ ಸದಸ್ಯ, ಬಿಜೆಪಿ ಪಕ್ಷದ ಸಕ್ರಿಯ ಸದಸ್ಯ ಐನೆಕಿದು ಗ್ರಾಮದ ನವೀನ್ ಕಟ್ರಮನೆ ಇಂದು ಸಂಜೆ ನಿಧನರಾದರು. ಇಂದು ಬೆಳಿಗ್ಗೆ ಅನಾರೋಗ್ಯಕ್ಕೆ ಒಳಗಾದ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ನಿಧನರಾದರೆಂದು ತಿಳಿದುಬಂದಿದೆ. ಅವರಿಗೆ 48 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಫುಡ್...

ಕಲ್ಚರ್ಪೆ : ನಿಂತಿದ್ದ ವಾಹನಕ್ಕೆ ಕಾರು ಡಿಕ್ಕಿ – ಪ್ರಯಾಣಿಕರಿಗೆ ಗಾಯ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪೆರಾಜೆ ಸಮೀಪದ ಕಲ್ಚರ್ಪೆಯಲ್ಲಿ ನಿಂತಿದ್ದ ಟೆಂಪೊ ಒಂದಕ್ಕೆ ಮೈಸೂರು ಕಡೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದ ಘಟನೆ ಇಂದು ಸಂಜೆ ನಡೆದಿದದೆ. ಅಪಘಾತದಿಂದ ಕಾರಿನಲ್ಲಿದ್ದ ಮೂವರು ಪ್ರಯಾಣಿಕರಿಗೆ ಗಾಯಗಳಾಗಿದ್ದು,ಅವರನ್ನು ಸುಳ್ಯ ಆಸ್ಪತ್ರೆಗೆ ಕರೆ ತರಲಾಗಿದೆ ಎಂದು ತಿಳಿದುಬಂದಿದೆ.
Loading posts...

All posts loaded

No more posts

error: Content is protected !!