- Tuesday
- August 11th, 2026
ಸುಳ್ಯ ನಗರ ಪಂಚಾಯತ್ ಸದಸ್ಯ ಸಮಾಜ ಸೇವಕ ಷರೀಫ್ ಕಂಠಿ ಯವರ ಮೇಲೆ ಯಾವುದೋ ದುರುದ್ದೇಶದಿಂದ ಮಹಿಳೆಯೊಬ್ಬರು ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾದ ವಿಷಯ. ಸುಳ್ಯ ನಗರದ ಸಾರ್ವಜನಿಕರಿಗೆ ಕಂಠಿ ಯವರ ಬಗ್ಗೆ ಅವರ ಸೇವೆಯ ಬಗ್ಗೆ ಗೊತ್ತಿದ್ದು ಮಹಿಳೆಯೊಬ್ಬರು ಹಲ್ಲೆ ಮಾಡಲಾಗಿದೆ ಎಂದು ದೂರು ನೀಡಿರುವುದನ್ನು ಸುಳ್ಯ ತಾಲೂಕು AIKMCC ತೀವ್ರವಾಗಿ ಖಂಡಿಸುತ್ತದೆ, ಸಮಾಜದಲ್ಲಿ...
ಬೆಳೆಯುತ್ತಿರುವ ಗುತ್ತಿಗಾರಿನಲ್ಲಿ ಇರುವುದು ಒಂದೇ ರಾಷ್ಟ್ರೀಕೃತ ಬ್ಯಾಂಕ್ ,ಒಂದೇ ಎಟಿಎಂ. ಉತ್ತಮ ಸೇವೆ ನೀಡುವಲ್ಲಿ ನಿರಂತರ ವಿಫಲ. ಹೆಚ್ಚಿನ ದಿನಗಳಲ್ಲಿ ಎಟಿಎಂ ನೋ ಸರ್ವೀಸ್ ನಲ್ಲಿರುತ್ತದೆ. ನಾಲ್ಕು ಗ್ರಾಮಗಳ ಜನರಿಗೆ ಇರುವುದು ಇದೊಂದೇ ಬ್ಯಾಂಕ್. ಈ ಮೊದಲು ಸಿಂಡಿಕೇಟ್ ಬ್ಯಾಂಕ್ ಆಗಿದ್ದಾಗಲೂ ಉತ್ತಮ ಸೇವೆ ನೀಡದ ಬ್ಯಾಂಕ್ ಕೆನರಾ ಬ್ಯಾಂಕ್ ಆಗಿ ಬದಲಾದರೂ ಗುಣಮಟ್ಟದಲ್ಲಿ ಬದಲಾಗಿಲ್ಲ....
ಸುಬ್ರಹ್ಮಣ್ಯ ಮಾ.26: ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಹಾಗೂ ಪರಿಸರದ ಪ್ರದೇಶಗಳಲ್ಲಿ ವಿಪರೀತ ತ್ಯಾಜ್ಯ ವಸ್ತುಗಳನ್ನ ಭಕ್ತಾದಿಗಳು ಎಸೆದು ಇಡೀ ನೀರು ಹಾಗೂ ಪರಿಸರ ಮಲಿನಗೊಂಡಿರುತ್ತದೆ. ಶ್ರೀ ದೇವಳದ ವತಿಯಿಂದ ಅಲ್ಲಿಯ ನೌಕರರು ನೀರಿನಿಂದ ಎಷ್ಟೇ ತ್ಯಾಜ್ಯಗಳಾದ ಬಟ್ಟೆ ಬರೆಗಳನ್ನ ತೆಗೆದರೂ ಮತ್ತೆ ಮತ್ತೆ ಭಕ್ತಾದಿಗಳು ನೀರಲ್ಲೇ ಬಟ್ಟೆಗಳನ್ನ ಬಿಡುವ ಚಾಳಿಯನ್ನು ಮುಂದುವರಿಸುತ್ತಿರುವುದು ಕೇದಕರ....
2024 - 25 ನೇ ಸಾಲಿನ ಎನ್.ಎಂ .ಎಂ .ಎಸ್ ಪರೀಕ್ಷೆಯಲ್ಲಿ ಲಾವಣ್ಯ ಡಿ.ಎನ್. 180 ರಲ್ಲಿ 104 ಅಂಕ ಪಡೆದು ಸುಳ್ಯ ತಾಲೂಕಿಗೆ ತೃತೀಯ ಸ್ಥಾನಿಯಾಗಿದ್ದಾರೆ. ಎಲಿಮಲೆ ಸ.ಪ್ರೌ.ಶಾಲೆಯ 8 ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈ ಕೆ ಗುತ್ತಿಗಾರು ಗ್ರಾಮದ ದೇರುಮಜಲು ಪೈಕ ನೂತನ್ ಹಾಗೂ ರೂಪ ದಂಪತಿಗಳ ಪುತ್ರಿ.
ಸುಬ್ರಹ್ಮಣ್ಯ ಮಾ 27: 800 ವರ್ಷಗಳ ಇತಿಹಾಸವನ್ನು ಹೊಂದಿರುವ ಪುರಾಣ ಪ್ರಸಿದ್ಧ ದೇವಸ್ಥಾನ, ಬಸವನ ಹಣೆಯ ಮೇಲೆ ಈಶ್ವರ ಲಿಂಗ ಇರುವಂತಹ ಏಕೈಕ ದೇವಸ್ಥಾನ, ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಬಸವೇಶ್ವರ ದೇವಸ್ಥಾನಕ್ಕೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮಂಗಳೂರು ಪ್ರಾದೇಶಿಕ ಹಾಗೂ ವಲಯ ಕಛೇರಿ ವತಿಯಿಂದ ದೂರದೂರುಗಳಲ್ಲಿ ಇರುವ ಭಕ್ತಾದಿಗಳಿಗೆ ಕಾಣಿಕೆಯನ್ನ ಸಲ್ಲಿಸಲು ಅನುಕೂಲವಾಗುವಂತೆ ಸ್ಕ್ಯಾನರ್...
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ಒಂದು ದಿನದ ಅಧ್ಯಯನ ಭೇಟಿಯನ್ನು ಪ್ರಥಮ ವರ್ಷದ ವಾಣಿಜ್ಯ ಪದವಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಯಿತು. ಮುರುಳ್ಯದ ಕ್ಷೀರ ಎಂಟರ್ಪ್ರೈಸಸ್ ಇಲ್ಲಿಗೆ ಭೇಟಿ ನೀಡಿ ಈ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ರಾಘವ ಗೌಡ ಅವರ ಸಂಶೋಧನೆ...
ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 6ನೇ ವಾರಕ್ಕೆ ಕಾಲಿರಿಸಿದೆ. ಮಾ.28ರಂದು ಸಂಜೆ 4.30 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.
ಸುಮಾರು 150 ವರ್ಷದಷ್ಟು ಪುರಾತನ ವಾದ ಶ್ರೀ ಧರ್ಮದೈವ ಧೂಮಾವತಿ,ಮೂಕಾಂಬಿಕಾ ಗುಳಿಗ ಮತ್ತು ಸಪರಿವಾರ ದೈವಸ್ಥಾನ ಓಡಬೈ ಇದರ ದೈವಸ್ಥಾನದ ನವೀಕರಣ ಕಾಮಗಾರಿ ನಡೆಯುತ್ತಿದ್ದು ಇದರ ದಾರಂದ ಮೂಹೂರ್ತ ಇಂದು ನಡೆಯಿತುಈ ಸಂದರ್ಭದಲ್ಲಿ ಮುಕುಂದ ನಾಯಕ್ ,ಪ್ರೇಮ್ ರಾಜ್ ,ಉಷಾ ಕಿರಣ ,ಸಾತ್ವಿಕ ,ಸೀತಾರಾಮ್ ,ಆಶಾ ನಾಯಕ್ ,ಗುರುಪ್ರಸಾದ್ ಹಾಗೂ ದೈವಸ್ಥಾನದ ಶಿಲ್ಪಿಗಳಾದ ಪದ್ಮನಾಭ ಆಚಾರ್ಯ...
ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 5 ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ. ಮಾ.27ರಂದು ಸಂಜೆ 3.30 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.
Loading posts...
All posts loaded
No more posts
