ನಾಳೆ (ಜು.22) ಬೆಳ್ಳಾರೆ ಭಾಗದಲ್ಲಿ ವಿದ್ಯುತ್ ಇಲ್ಲ

ಬೆಳ್ಳಾರೆ 33/11ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಪೀಡರುಗಳಲ್ಲಿ ಜು.22 ಮಂಗಳವಾರದಂದು ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆವಿ ಫೀಡರ್ ಗಳಾದ ಬೆಳ್ಳಾರೆ-1, ಬೆಳ್ಳಾರೆ -2, ನೆಟ್ಟಾರು, ಕಳಂಜ, ಮುರುಳ್ಯ, ಪೆರ್ಲಂಪಾಡಿ, ಚೊಕ್ಕಾಡಿ ಫೀಡರುಗಳಲ್ಲಿ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2:00 ರ ತನಕ ವಿದ್ಯುತ್‌ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆಯಲ್ಲಿ...

ಆಸ್ತಿಕ್ ಬಾಳಿಕಳ ಪಾರ್ಥಿವ ಶರೀರ ಇಂದು ಅಪರಾಹ್ನ 2.15ಕ್ಕೆ ಸುಳ್ಯಕ್ಕೆ

ಸಂಜೆ ಮಡಪ್ಪಾಡಿ ಮನೆಯಲ್ಲಿ ಅಂತ್ಯಸಂಸ್ಕಾರ

ಕಣ್ಣೂರಿನ ಗೆಳೆಯನ ಮನೆಗೆ ತೆರಳಿದ್ದ ಆಸ್ತಿಕ್ ಬಾಳಿಕಳ ಕೆರೆ ನೀರಿನಲ್ಲಿ ಈಜಲು ಹೋಗಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದರು.‌ ಇಂದು ಆಸ್ತಿಕ್ ರವರ ಪಾರ್ಥಿವ ಶರೀರ ಅಪರಾಹ್ನ 2.15ಕ್ಕೆ ಸುಳ್ಯಕ್ಕೆ  ತಲುಪಲಿರುವುದಾಗಿ ತಿಳಿದುಬಂದಿದೆ. ನಿವೃತ್ತ ವೈದ್ಯಾಧಿಕಾರಿ ಡಾ| ನಂದಕುಮಾರ್ ಬಾಳಿಕಳ ರವರ ಪುತ್ರ ಆಸ್ತಿಕ್ ರಾಘವ್ ಮಂಗಳೂರಿನ ದೇರಳಕಟ್ಟೆಯಲ್ಲಿರುವ ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜ್ ನಲ್ಲಿ ಪ್ರಥಮ ವರ್ಷದ...
Ad Widget

ಎಲ್ಲಾ  ಓಕೆ, ಜಂಕ್ ಪುಡ್ ಯಾಕೆ..?

ಇಂದು ಜಂಕ್ ಫುಡ್ ಜಾಗೃತಿ ದಿನ

✍️ಡಾ| ಮುರಲೀ ಮೋಹನ್ ಚೂಂತಾರು“ಬದುಕುವುದಕ್ಕಾಗಿ ತಿನ್ನಿ, ತಿನ್ನಲಿಕ್ಕಾಗಿ ಬದುಕಬೇಡಿ” ಎಂಬ ಮಾತನ್ನು ಪ್ರಾಯಶಃ ಇಂದಿನ ಕಾಲಘಟ್ಟದಲ್ಲಿ ನಮ್ಮ ಯುವಜನತೆ ಮತ್ತು ಮಕ್ಕಳಿಗೆ ಪುನಃ ನೆನಪಿಸಿಕೊಡಬೇಕಾದ ಅನಿವಾರ್ಯತೆ ಬಂದೊದಗಿದೆ ಎಂಬುದಂತೂ ನೂರಕ್ಕೆ ನೂರರಷ್ಟು ಸತ್ಯ. ನಮ್ಮ ದೇಹದ ದೈಹಿಕ, ಮಾನಸಿಕ ಬೌದ್ಧಿಕ ಮತ್ತು ಸರ್ವತೋಮುಖ ಬೆಳವಣಿಗೆಯಲ್ಲಿ ನಮ್ಮ ಆಹಾರ, ಬಹುಮುಖ್ಯ ಪಾತ್ರ ವಹಿಸುತ್ತದೆ. ಬಹಳಷ್ಟು ರೀತಿಯ ಆಧುನಿಕ...

ಸುಳ್ಯ : ಮೊಸರುಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ – ಆಗಸ್ಟ್ 19 ರಂದು ಅದ್ದೂರಿ ಕಾರ್ಯಕ್ರಮ

ವಿಶ್ವಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ ದುರ್ಗವಾಹಿನಿ ಸುಳ್ಯ ಪ್ರಖಂಡ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ಆಗಸ್ಟ್ 19 ರಂದು ನಡೆಯುವ  12ನೇ ವರ್ಷದ ಮೊಸರುಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಜು.20 ರಂದು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಉತ್ಸವ ಸಮಿತಿ  ಅಧ್ಯಕ್ಷ...

ಅಂತಾರಾಜ್ಯ ಸಂಪರ್ಕಿಸುವ ಪೆರಾಜೆ ಕೂರ್ನಡ್ಕ ರಸ್ತೆ ಅವ್ಯವಸ್ಥೆ

ಶ್ರಮದಾನದ ಮುಖಾಂತರ ರಸ್ತೆ ದುರಸ್ತಿ ಮಾಡಿದ ನಿವಾಸಿಗಳು

ಅಂತಾರಾಜ್ಯ ಸಂಪರ್ಕಿಸುವ ಕೇರಳ ಗಡಿಭಾಗದ ಸಮೀಪದಲ್ಲಿ ಹಾದುಹೋಗುವ ಪೆರಾಜೆ ಕೂರ್ನಡ್ಕ ರಸ್ತೆ ಕೆಲವೆಡೆ ತೀರ ಹದಗೆಟ್ಟಿದ್ದು ಜನಪ್ರತಿನಿಧಿಗಳು ಹಾಗೂ ಸ್ಥಳೀಯಾಡಳಿತದ ನಿರ್ಲಕ್ಷ್ಯದಿಂದ ಈ ಭಾಗದ ನಿವಾಸಿಗಳು ಸಂಕಷ್ಟ ಅನುಭವಿಸುವಂತಾಗಿದೆ.‌ಇದೀಗ ಗ್ರಾಮಸ್ಥರೇ ಸೇರಿ ಶ್ರಮದಾನ ನಡೆಸಿ ರಸ್ತೆಯನ್ನು ದುರಸ್ತಿ ಮಾಡಿದ್ದಾರೆ.‌ ಶ್ರಮದಾನದಲ್ಲಿ ಚಿದಾನಂದ ಮಾವಾಜಿ, ಸಂದೇಶ್ ಗರುಗುಂಜ, ಜಯಪ್ರಕಾಶ ಹೊದ್ದೆಟ್ಟಿ, ಅನಂತ ಗರುಗುಂಜ, ವಿನಯ ಗರುಗುಂಜ, ಪವಿತ್ರ...

ಪಂಬೆತ್ತಾಡಿ : ಆಟಿ ಸಂಭ್ರಮ

ಅಮೃತ ಮಹಿಳಾ ಮಂಡಲ ಪಂಬೆತಾಡಿ ಹಾಗೂ ಅಕ್ಷತಾ ಯುವತಿ ಮಂಡಲ ಪಂಬೆತ್ತಾಡಿ ಇವರ ಜಂಟಿ ಆಶ್ರಯದಲ್ಲಿ ಆಟಿ ಸಂಭ್ರಮ ಕಾರ್ಯಕ್ರಮವು ದಿನಾಂಕ 20-7- 25ರಂದು ಪಂಬೆತ್ತಾಡಿ ಪಂಚಾಯತ್ ಸಭಾಭವನ ದಲ್ಲಿ ನಡೆಯಿತು ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಅಮೃತ ಮಹಿಳಾ ಮಂಡಲ ಪಂಬೆತ್ತಾಡಿ ಅಧ್ಯಕ್ಷೆ ಶ್ರೀಮತಿ ಲಲಿತಾ ಬಾಬಿಲಬೆಟ್ಟು ಕಾರ್ಯಕ್ರಮದ ಉದ್ಘಾಟಕರಾಗಿ ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ...

ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ಪ್ರಮಾಣ ಪತ್ರ ವಿತರಣೆ

ಸಾಧಕ ಶಿಕ್ಷಕಿಯರುಗಳಿಗೆ ಹಾಲ್ ಆಫ್ ಫೇಮ್ ಗೌರವ

ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ಪ್ರಮಾಣ ಪತ್ರ ವಿತರಣೆ, ಸಾಧಕ ಶಿಕ್ಷಕಿಯರುಗಳಿಗೆ ಹಾಲ್ ಆಫ್ ಫೇಮ್ 2025 ಅಭಿನಂದನಾ ಕಾರ್ಯಕ್ರಮ ಜ್ಞಾನದೀಪ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ, ಭಾರತ್ ಸೇವಕ್ ಸಮಾಜದ ಜಿಲ್ಲಾ ಸಂಯೋಜಕ ರಘುಕುಮಾರ್,...

ಮರ್ಕಂಜ : ಸರಕಾರಿ ಪ್ರೌಢಶಾಲೆಯಲ್ಲಿ ಕೋ-ಕೋ ಅಂಕಣ ರಚನೆ

ಮರ್ಕಂಜ ಸರಕಾರಿ ಪ್ರೌಢಶಾಲೆಯಲ್ಲಿ ಜು.19 ರಂದು ಕೋ-ಕೋ ಅಂಕಣ ರಚನೆಯು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಗಣೇಶ್.ಎಂ.ಟಿ ರವರ ಮಾರ್ಗದರ್ಶನದಲ್ಲಿ ಶ್ರಮಸೇವೆಯ ಮುಖಾಂತರ ನಡೆಯಿತು.ಶ್ರಮದಾನದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಭೀಮಗುಳಿ, ಸದಸ್ಯರುಗಳಾದ ದಿನಕರ ಕಾಳಮನೆ, ಕುಶಾಲಪ್ಪ ಕಬ್ಬಿನಡ್ಕ, ಹೇಮಕುಮಾರ್ ಕಂಜಿಪಿಲಿ, ಮಹಾವೀರ ಇಂದ್ರ, ಮಾಜಿ ಅಧ್ಯಕ್ಷರಾದ ಆನಂದ ಗೌಡ ಬಾನೂರು, ಮಾಜಿ ಸದಸ್ಯರಾದ ಕಾರ್ಯಪ್ಪ...

ಡಾ.ನಂದ ಕುಮಾರ್ ಬಾಳಿಕಳ ಅವರ ಪುತ್ರ ಆಸ್ತಿಕ್ ರಾಘವ್ ನೀರಿನಲ್ಲಿ ಮುಳುಗಿ ಮೃತ್ಯು

ಸುಳ್ಯದ ನಿವೃತ್ತ ತಾಲೂಕು ಆರೋಗ್ಯಾಧಿಕಾರಿ ಡಾ.ನಂದ ಕುಮಾರ್ ರವರ ಪುತ್ರ, ಮಂಗಳೂರಿನ ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜಿನಲ್ಲಿ ದಂತ ವಿಜ್ಞಾನ ಕಲಿಯುತ್ತಿದ್ದ ಆಸ್ತಿಕ್ ರಾಘವ್ ಇಂದು ಕೇರಳದ ಕಣ್ಣೂರಿನಲ್ಲಿ ಕೆರೆಯ ನೀರಲ್ಲಿ ಮುಳುಗಿ ಮೃತಪಟ್ಟ ಹೃದಯವಿದ್ರಾಹಕ ಘಟನೆ ವರದಿಯಾಗಿದೆ.. ಮಂಗಳೂರಿನಿಂದ ತನ್ನ ಸಹಪಾಠಿಯೊಂದಿಗೆ ಕೇರಳದ ಕಣ್ಣೂರಿನ ಆತನ ಮನೆಗೆ ಆಸ್ತಿಕ್ ಇಂದು ಬೆಳಿಗ್ಗೆ ಹೋಗಿದ್ದರೆನ್ನಲಾಗಿದೆ. ಬಳಿಕ ಅವರು...

ಸುಬ್ರಹ್ಮಣ್ಯ : ರೋಟರಿ ಕ್ಲಬ್, ಸೀನಿಯರ್ ಚೇಂಬರ್ ಹಾಗೂ ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ವತಿಯಿಂದ ಸ್ವಚ್ಛತಾ ಅಭಿಯಾನ

ಸುಬ್ರಹ್ಮಣ್ಯ ಜುಲೈ 20 : ಸುಬ್ರಹ್ಮಣ್ಯ ರೋಟರಿ ಕ್ಲಬ್, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆಶ್ರೀ ಸುಬ್ರಹ್ಮಣ್ಯ ಲಿಜನ್ ಹಾಗೂ ಡಾ.ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ಇವರುಗಳ ಜಂಟಿ ಆಶ್ರಯದಲ್ಲಿ ಇಂದು ಕುಮಾರಧಾರ ಕುಲ್ಕುಂದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು.ಕುಮಾರಧಾರ ಸೇತುವೆ ಬದಿಯಿಂದ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಮೂಲಕವಾಗಿ ಕುಲ್ಕುಂದ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಕಾಲೋನಿ...
Loading posts...

All posts loaded

No more posts

error: Content is protected !!