- Saturday
- September 12th, 2026
ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಸ್ವತಃ ಹೋಮ್ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಮೇ.25ರಂದು ಬೆಳಗ್ಗೆ ದೆಹಲಿಯಿಂದ ವಿಮಾನದ ಮೂಲಕ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಸಚಿವರು ಒಂದು ವಾರಗಳ ಕಾಲ ಸ್ವತಃ ಕ್ವಾರಂಟೈನ್ಗೆ ಒಳಪಡಲಿದ್ದಾರೆ ಎಂದು ತಿಳಿದು ಬಂದಿದೆ.ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ನಿಟ್ಟಿನಲ್ಲಿ ಮಹತ್ವದ...
ಬೂಡು ವಾರ್ಡಿನಲ್ಲಿ ಅಪಾಯದ ಸ್ಥಿತಿಯಲ್ಲಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಿಕೊಡುವಂತೆ ಮೆಸ್ಕಾಂಗೆ ನ ಪಂ ಸದಸ್ಯ ರಿಯಾಜ್ ಕಟ್ಟೆ ಕಾರ್ಸ್ ಹಾಗೂ ಸ್ಥಳೀಯರು ನೀಡಿದ ಮನವಿಯ ಹಿನ್ನಲೆ ಸುಳ್ಯ ನಗರ ಮೆಸ್ಕಾಂ ಅಧಿಕಾರಿ ಹರೀಶ್ ನಾಯಕ್ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯುತ್ ಕಂಬಗಳು ಹಾಗೂ ಕೆಲವು ವಿದ್ಯುತ್ ಸಂಚರಿಸುವ ತಂತಿಗಳು ಮಾರ್ಗಕ್ಕೆ ಜೊತು...
ಕೊರೊನಾಗೆ ಮಂಗಳೂರಿನಲ್ಲಿ ಮತ್ತೊಂದು ಬಲಿದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವ್ಯಕ್ತಿ ಸಾವು, ಹೃದಯದ ಕಾಯಿಲೆ ಚಿಕಿತ್ಸೆಗೆ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ ,ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ನಿನ್ನೆ ಸಾವನ್ನಪ್ಪಿದ್ದ ವ್ಯಕ್ತಿ , ಕೋವಿಡ್ ಟೆಸ್ಟ್ ನಲ್ಲಿ ವ್ಯಕ್ತಿಗೆ ಇಂದು ಕೊರೊನ ಪಾಸಿಟಿವ್ . ಮೃತಪಟ್ಟ ಬಳಿಕ ನಿನ್ನೆ ಕೊರೊನಾ ಟೆಸ್ಟ್ ಮಾಡಲಾಗಿತ್ತು ,ದಕ್ಷಿಣ ಕನ್ನಡ...
ಜಯನಗರ ನಿವಾಸಿ ಹಸೈನಾರ್ ಜಯನಗರ ಹಾಗೂ ಸಪಿಯ ದಂಪತಿಗಳ ಪುತ್ರ ಮೋಹಮ್ಮದ್ ಶಫೀಕ್ ರವರ ಹದಿಮೂರನೆಯ ವರ್ಷದ ಹುಟ್ಟುಹಬ್ಬದ ಆಚರಣೆಯನ್ನು ಜಯನಗರ ಮನೆಯಲ್ಲಿ ಇಂದು (ಮೇ ೨೫) ಆಚರಿಸಲಾಯಿತು.
ಸರಕಾರ ಗ್ರಾಮ ಪಂಚಾಯತಿಗಳಿಗೆ ನಾಮನಿರ್ದೇಶನ ಸದಸ್ಯರ ಆಯ್ಕೆ ಮಾಡುವ ಪ್ರಕ್ರಿಯೆ ಸರಿಯಲ್ಲ. ಕೂಡಲೇ ಸರ್ಕಾರದಿಂದ ಆಡಳಿತ ಅಧಿಕಾರಿ ನೇಮಕ ಮಾಡಬೇಕು ಅಥವಾ ಚುನಾವಣೆ ನಡೆಸಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂದು ಅರಂತೋಡು ಗ್ರಾ.ಪಂ.ಸದಸ್ಯ ರವೀಂದ್ರ ಪಂಜಿಕೋಡಿ ಒತ್ತಾಯಿಸಿದ್ದಾರೆ.
ಸುಮಾರು ಎರಡು ತಿಂಗಳಿಂದ ಬಂದ್ ಆಗಿರುವ ದೇಶೀಯ ವಿಮಾನಯಾನ ಸೇವೆ ಮೇ 25 ಸೋಮವಾರದಿಂದ ಆರಂಭವಾಗಲಿದೆ. ವಿಮಾನ ರೈಲು ಮತ್ತು ಅಂತರಾಜ್ಯ ಬಸ್ ಪ್ರಯಾಣಕ್ಕೆ ಆರೋಗ್ಯ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ವಿಮಾನ ಪ್ರಯಾಣಕ್ಕೆ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಎರಡು ಗಂಟೆ ಮೊದಲು ತಲುಪಿ ತಪಾಸಣೆಗೆ ಒಳಪಡಬೇಕು. ಕಡ್ಡಾಯ ಮಾಸ್ಕ್ ಧರಿಸಬೇಕು. ಕಡಿಮೆ ಲಗೇಜ್ ತೆಗೆದುಕೊಂಡು ಹೋಗಬೇಕು....
ಕಾಸರಗೋಡು ಜಿಲ್ಲೆಯಲ್ಲಿ ಆದಿತ್ಯವಾರ ಐದು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇಬ್ಬರು ರೋಗದಿಂದ ಗುಣಮುಖರಾಗಿದ್ದಾರೆ.ಇವರೆಲ್ಲರೂ ಮಹಾರಾಷ್ಟ್ರ ದಿಂದ ಬಂದವರಾಗಿದ್ದಾರೆ
ಕಾಸರಗೋಡು ತಾಲೂಕು ಬಂದಡ್ಕ ಗ್ರಾಮದ ಇಳಂದಿಲ ದಿ. ದೇವಪ್ಪ ಗೌಡರ ಪುತ್ರ, ಕೆ.ಎಸ್.ಆರ್.ಟಿ.ಸಿ ಚಾಲಕ ವಿನೋದ್ ಕುಮಾರ್ ರ ವಿವಾಹವು ಚೆಂಬು ಗ್ರಾಮದ ದಬ್ಬಡ್ಕ ಅಡ್ಪಂಗಾಯ ಸೋಮನಾಥ ಗೌಡರ ಪುತ್ರಿ ಸೌಮ್ಯ ರೊಂದಿಗೆ ಮೇ. 24 ರಂದು ನಡೆಯಿತು.
ಲಾಕ್ ಡೌನ್ ಸಡಿಲಿಕೆ ಬಳಿಕ ಇಂದಿನಿಂದ ದೇಶಿಯ ವಿಮಾನಯಾನ ಸೇವೆಗೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಹಾಗೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದೆ.
ದಕ್ಷಿಣ ಕನ್ನಡದಲ್ಲಿ ಇವತ್ತು ಒಂದು ಕೋರೋನಾ ಪಾಸಿಟಿವ್ ಪತ್ತೆಯಾಗಿದೆ. ವಿಟ್ಲದ ಪೊಲೀಸ್ ಪೇದೆ ಯೊಬ್ಬರಿಗೆ ಕೋರೋನಾ ಇರುವುದು ದೃಢವಾಗಿದೆ. ಮೇ 14 ರಂದು ಮಹಾರಾಷ್ಟ್ರದ ರಾಯಗಡದಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆತ ಕ್ವಾರಂಟೈನ್ಗೆ ಒಳಗಾಗುವ ಮುನ್ನ ಪೊಲೀಸ್ ಠಾಣೆಗೆ ಹೋಗಿದ್ದ ಎಂದು ತಿಳಿದು ಬಂದಿದೆ. ಪೊಲೀಸರ ಕೊರೋನಾ ಪರೀಕ್ಷೆ ನಡೆಸಿದ ವೇಳೆ ಒರ್ವ...
Loading posts...
All posts loaded
No more posts
