- Tuesday
- August 4th, 2026
ಯುವ ಬ್ರಿಗೇಡ್ ಸೇರಿದಂತೆ 5 ಸಂಘ ಸಂಸ್ಥೆಗಳಿಗೆ ಹಾಗೂ 65 ಸಾಧಕರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. 1 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುವ ಈ ಪ್ರಶಸ್ತಿಯನ್ನು ನ. 7 ರಂದು ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರ ದಲ್ಲಿ ಪ್ರಧಾನ ಮಾಡಲಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಸಹ ಸಾಧಕರಿಗೆ...
ನಿಂತಿಕಲ್ಲು ಮುಖ್ಯ ರಸ್ತೆಯಲ್ಲಿರುವ ವೃದ್ಧಿ ಕಾಂಪ್ಲೆಕ್ಸ್ ನಲ್ಲಿ ರಾಜೇಶ್ ಮಲೆಕೆರ್ಚಿ ಹಾಗೂ ದಿವೀಶ್ ಮಲೆಕೆರ್ಚಿ ಮಾಲಕತ್ವದಲ್ಲಿ ಪ್ರಕೃತಿ ಕಲೆಕ್ಷನ್ ವಸ್ತ್ರಮಳಿಗೆ ಅ.28 ರಂದು ಶುಭಾರಂಭಗೊಂಡಿತು. ಮಳಿಗೆಯಲ್ಲಿ ನೂತನ ವಿನ್ಯಾಸದ ನವನವೀನ ಬಟ್ಟೆಗಳು ಲಭ್ಯವಿದ್ದು ಪುರುಷರ, ಮಹಿಳೆಯರ ಹಾಗೂ ಮಕ್ಕಳ ಎಲ್ಲಾ ವಿಧದ ಡ್ರೆಸ್ ಗಳು ಮಿತದರದಲ್ಲಿ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.
ಕೊಲ್ಲಮೊಗ್ರು ಗ್ರಾಮ ಪಂಚಾಯತ್ 2019-20ನೇ ಸಾಲಿನ ಜಮಾಬಂದಿಯನ್ನು ಅ.26 ರಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಎಸ್ ಭವಾನಿಶಂಕರ್ ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಎ ರವರು ಸ್ವಾಗತಿಸಿ ವಂದಿಸಿದರು . ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಮಟ್ಟದ ಕೀರ್ತಿ ಸಂಜೀವಿನಿ ಸ್ವಸಹಾಯ ಸಂಘಗಳ ಒಕ್ಕೂಟದ ಎಂ.ಬಿ.ಕೆ ವಿಮಲಾಕ್ಷಿ , ಎಲ್ .ಸಿ ಆರ್.ಪಿ ನೀಲಾವತಿ...
ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ,ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು,ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ,ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪುತ್ತೂರು, ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇವುಗಳ ಸಹಯೋಗದೊಂದಿಗೆ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಅ.28 ರಂದು ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ...
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ಮೊಗ್ರ ಪ್ರದೇಶದ ಜನರ ಮೂಲಭೂತ ಸೌಲಭ್ಯಕ್ಕೆ ಒತ್ತಾಯಿಸಿ ಗುತ್ತಿಗಾರು ಗ್ರಾ ಪಂ ವತಿಯಿಂದ ಶಾಂತಿಯುತ ಧರಣಿ ನಡೆಸಿ ಆಡಳಿತವನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಧರಣಿಯಲ್ಲಿ ಗ್ರಾಮದ ಸುಮಾರು 100 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದಾರೆ.
ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಎಸ್.ಐ. ಒಮನ, ಎ ಎಸ್ ಐ ಮೊಹನ, ಸಿಬ್ಬಂದಿಗಳಾದ ಕರುಣಾಕರ, ಆನಂದ ನಾಯ್ಕ , ವಿಜಯ್, ಭೀಮಣ್ಣಗೌಡ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ಘಟಕದ ವತಿಯಿಂದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಗರ ಅಭ್ಯಾಸ ವರ್ಗ ನಡೆಯಿತು ಕಾರ್ಯಕ್ರಮವನ್ನು ಸ್ಮಿತಾ ಹೆಗ್ಡೆ ಜನರಲ್ ಮ್ಯಾನಜರ್ ಆರ್.ಎನ್. ಎಸ್. ಒನ್. ಸುಬ್ರಹ್ಮಣ್ಯ ಇವರು ಉದ್ಘಾಟಿಸಿದರು. ವಿದ್ಯಾರ್ಥಿ ಪರಿಷತ್ ನ ಸಂಘಟನಾತ್ಮಕ ಕಾರ್ಯಗಳಲ್ಲಿ ಅಭ್ಯಾಸ ವರ್ಗ ಪ್ರಮುಖ ಪಾತ್ರ ವಹಿಸುತ್ತದೆ. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ಪುನರ್...
ಆವಿಷ್ಕಾರ ಯೋಗ ಮಂಗಳೂರು ಮತ್ತು ಯೋಗ ವಿದ್ಯಾ ಟ್ರಸ್ಟ್, ಮಂಗಳೂರು ಸಹಯೋಗದಲ್ಲಿ ಆಯೋಜಿಸಿರುವ ದಸರಾ ಯೋಗ 2020 ಸ್ಪರ್ಧೆಯಲ್ಲಿ ಯೋಗೇನ ಚಿತ್ತಸ್ಯ ತಂಡ ಸುಳ್ಯ ಇದರ ಸದಸ್ಯ ಶರತ್ ಮರ್ಗಿಲಡ್ಕ ಅವರು 26 ರಿಂದ 35ರ ವಯೋಮಿತಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಇವರ ಯೋಗ ಗುರು ಸಂತೋಷ್ ಮುಂಡಕಜೆಯವರಿಂದ ಮಾರ್ಗದರ್ಶನ ಪಡೆದಿರುತ್ತಾರೆ.
ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಅ.27 ರಂದು ವಿಕಲಚೇತನರ ಆರೋಗ್ಯ ಶಿಬಿರ ನಡೆಯಿತು. ವಿಕಲಚೇತನ ಇಲಾಖೆಯ ನಗರ ಪಂಚಾಯತ್ ನ ಯು ಆರ್ ಡಬ್ಲ್ಯೂ ಪ್ರವೀಣ್ ನಾಯಕ್ ಸುಳ್ಯ, ತಾಲೂಕು ಪಂಚಾಯತ್ ಎಮ್ ಆರ್ ಡಬ್ಲ್ಯೂ ಚಂದ್ರಶೇಖರ, ಪುಟ್ಟಣ್ಣ ವಿ. ಮತ್ತು ತಾಲೂಕಿನ ಎಲ್ಲಾ ವಿ ಆರ್ ಡಬ್ಲ್ಯೂ ಸದಸ್ಯರು ಶಿಬಿರದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಲವು...
ಪುತ್ತೂರು ಕಾಣಿಯೂರು ರಸ್ತೆಯ ಭಕ್ತಕೋಡಿಯಲ್ಲಿ ಅ.25 ರಂದು ಮಾರುತಿ ಓಮ್ನಿ ಮತ್ತು ಸ್ವಿಫ್ಟ್ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಓಮ್ನಿ ಚಾಲಕ ಪಡ್ಪಿನಂಗಡಿ ಸಮೀಪ ಅಡಿಬಾಯಿ ಅಬ್ದುಲ್ ರಹಿಮಾನ್ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಐವತ್ತೊಕ್ಲು ಗ್ರಾಮದ ಅಡಿಬಾಯಿ ರಹಿಮಾನ್ ಅವರು ಮೃತಪಟ್ಟವರು. ಅವರಿಗೆ 39 ವರ್ಷ ವಯಸ್ಸಾಗಿತ್ತು. ಅಬ್ದುಲ್...
Loading posts...
All posts loaded
No more posts
