ನ.9: ಕಸ್ತೂರಿ ರಂಗನ್ ಬಾಧಿತ ಸುಳ್ಯ ತಾಲೂಕಿನ ಗ್ರಾಮ ಪಂಚಾಯತ್ ಗಳಿಂದ ಸರಕಾರಕ್ಕೆ ಮನವಿ ಸಲ್ಲಿಕೆಗೆ ತೀರ್ಮಾನ

ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದಾಗಿ ಬಾಧಿತವಾಗಲಿರುವ ಸುಳ್ಯ ತಾಲೂಕಿನ ೧೦ ಗ್ರಾಮ ಪಂಚಾಯತ್ ಗಳಲ್ಲಿ ಯೋಜನೆ ಕೈಬಿಡುವಂತೆ ಆಗ್ರಹಿಸಿ ನ‌.9 ರಂದು ಪ್ರತೀ ಗ್ರಾಮ ಪಂಚಾಯತ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸುಳ್ಯ ತಾಲೂಕು ಸಮಿತಿ ನಿರ್ಣಯಿಸಿದೆ.ಶುಕ್ರವಾರ ಗುತ್ತಿಗಾರಿನಲ್ಲಿ ಜರಗಿದ ಸುಳ್ಯ ತಾಲೂಕು ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ...

ತೊಡಿಕಾನ ಫೋಟೋ ಶೂಟ್ : ವಿಹಿಂಪ ಮತ್ತು ಬಜರಂಗದಳದಿಂದ ಕ್ರಮಕ್ಕೆ ಒತ್ತಾಯ

ತೊಡಿಕಾನ ದೇವರಗುಂಡಿಯ ಬಳಿ ಇತ್ತೀಚೆಗೆ ಕೆಲವರು ಆಶ್ಲೀಲ ಫೋಟೋ ತೆಗೆದಿರುವ ಘಟನೆ ಯ ಬಗ್ಗೆ ಅರಂತೋಡು ವಿಶ್ವ ಹಿಂದೂ ಪರಿಷದ್ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷದ್ ಭಜರಂಗದಳ ಸುಳ್ಯ ಪ್ರಚಂಡ ತೀವ್ರವಾಗಿ ಖಂಡಿಸಿದ್ದು, ಭಕ್ತಾಭಿಮಾನಿಗಳ ಭಾವನೆಗಳಿಗೆ ಘಾಸಿಯನ್ನುಂಟು ಮಾಡಿದೆ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಹಿಂಪ, ಭಜರಂಗದಳದ ‌ವತಿಯಿಂದ ತೊಡಿಕಾನ ದೇವಸ್ಥಾನ...
Ad Widget

ಉದ್ಯೋಗ ನೈಪುಣ್ಯ ತರಬೇತಿ ಶಿಬಿರದಲ್ಲಿ ಬೆಳ್ಳಾರೆ ಜನ್ಯ ಇಲೆಕ್ಟ್ರಿಕಲ್ ನಿಂದ ವಯರಿಂಗ್ ಬಗ್ಗೆ ಮಾಹಿತಿ

ಬೆಳ್ಳಾರೆ ಯಲ್ಲಿ ನಡೆಯುತ್ತಿರುವ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದಲ್ಲಿ ಬೆಳ್ಳಾರೆ ಜನ್ಯ ಇಲೆಕ್ಟ್ರಿಕಲ್ ನಿಂದ ವಯರಿಂಗ್ ಬಗ್ಗೆ ತರಬೇತಿಯನ್ನು ಮಾಲಕರಾದ ಮಂಜುನಾಥ ಹೆಗ್ಡೆಯವರು ನೀಡಿದರು. ಹಲವಾರು ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡರು.

ಕಾಯರ್ತೋಡಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

ಕಾಯರ್ತೋಡಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ನೇಮಕ ಮಾಡಿ ಸರಕಾರ ಆದೇಶಿಸಿದೆ. ಸದಸ್ಯರಾಗಿ ಪರಮೇಶ್ವರ ಬಿ ಕೆ ಬೊಳಿಯಮಜಲು ಮನೆ, ಶ್ರೀಮತಿ ನಮಿತ ಕುಸುಮಾಧರ ಅಳಿಕೆಮಜಲು ಮನೆ , ಕಾರ್ಯತೋಡಿ, ಶ್ರೀಮತಿ ಅನಂತೇಶ್ವರಿ ರವಿಪ್ರಕಾಶ್, ಪಂಪು ಹೌಸ್ , ಕಲ್ಲುಮುಟ್ಟು ಮನೆ, ಡಿ ಎಸ್ , ಗಿರೀಶ ದೇವರಗುಂಡ ಮನೆ , ಅಟಲ್‌ನಗರ,...

ಕುಕ್ಕೆ ಸುಬ್ರಹ್ಮಣ್ಯಕ್ಕೆ ಅಭಿವೃದ್ಧಿ ಸಮಿತಿ ರಚನೆ – ಅಧ್ಯಕ್ಷರಾಗಿ ಮೋಹನ್ ರಾಮ್ ಸುಳ್ಳಿ ಸಾಧ್ಯತೆ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ಪ್ರಸ್ತಾಪವನ್ನು ಕೈ ಬಿಟ್ಟಿರುವ ರಾಜ್ಯ ಸರಕಾರ, ಪ್ರಾಧಿಕಾರ ರಚನೆಯ ಪೂರ್ವಭಾವಿಯಾಗಿ ಅಭಿವೃದ್ಧಿ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.ಮೋಹನ್‌ರಾಮ್ ಸುಳ್ಳಿ, ಪಿ.ಜಿ.ಎಸ್.ಎನ್.ಪ್ರಸಾದ್, ಪ್ರಸನ್ನ ದರ್ಬೆ, ಕೃಷ್ಣ ಶೆಟ್ಟಿ ಕಡಬ, ಮತ್ತು ಶ್ರೀಮತಿ ವನಜಾ ವಿ. ಭಟ್ ಅಭಿವೃದ್ಧಿ ಸಮಿತಿ ಸದಸ್ಯರಾಗಿದ್ದಾರೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್. ಕಾರ್ಯದರ್ಶಿಯಾಗಿರುತ್ತಾರೆ. ಸದಸ್ಯರಾಗಿರುವ...

ಪೆರುವಾಜೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ 9 ಮಂದಿ ಸದಸ್ಯರ ನೇಮಕ ಮಾಡಿ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್, ವೆಂಕಟಕೃಷ್ಣ ರಾವ್ ಪೆರುವಾಜೆ, ಪದ್ಮನಾಭ ಶೆಟ್ಟಿ ಪೆರುವಾಜೆ, ದಾಮೋದರ ನಾಯ್ಕ‌ ಪೆಲತ್ತಡ್ಕ, ಜಯಪ್ರಕಾಶ್ ರೈ ಪೆರುವಾಜೆ, ಜಗನ್ನಾಥ ರೈ ಪೆರುವಾಜೆ, ಭಾಗ್ಯಲಕ್ಷ್ಮೀ‌ ಅರ್ನಾಡಿ, ನಾರಾಯಣ ಕೊಂಡೆಪ್ಪಾಡಿ, ಯಶೋಧ...

ತೊಡಿಕಾನ : ಅಶ್ಲೀಲ ಫೋಟೋ ಶೂಟ್ ಪ್ರಕರಣ ವಿ.ಹೆಚ್.ಪಿ, ಬಜರಂಗದಳ ಖಂಡನೆ

ತೊಡಿಕಾನ ದೇವರಗುಂಡಿಯ ಬಳಿ ಇತ್ತೀಚೆಗೆ ಕೆಲವರು ಆಶ್ಲೀಲ ಫೋಟೋ ತೆಗೆದಿರುವ ಘಟನೆ ಯ ಬಗ್ಗೆ ಅರಂತೋಡು ವಿಶ್ವ ಹಿಂದೂ ಪರಿಷದ್ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷದ್ ಭಜರಂಗದಳ ಸುಳ್ಯ ಪ್ರಚಂಡ ತೀವ್ರವಾಗಿ ಖಂಡಿಸಿದೆ. ಅಂತವರಿಗೆ ಮತ್ತು ಇದಕ್ಕೆ ಸಂಬಂಧಿಸಿದ ಅಧಿಕಾರಿ ಗಳು ಕ್ರಮ ಕೈಗೊಳ್ಳಲು ಕೋರಿದೆ. ಯಾರೇ ಆಗಿರಲಿ ಧಾರ್ಮಿಕ ಕ್ಷೇತ್ರಕ್ಕೆ ದಕ್ಕೆ ಆಗುವ...

ಅಡ್ಡಬೈಲು ಬೋಗಾಯನಕೆರೆ ರಸ್ತೆ ಅಭಿವೃದ್ಧಿ 8.39 ಕೋ. ರೂ. ಮಂಜೂರು – ಶಾಸಕ ಎಸ್.ಅಂಗಾರ

ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ವ್ಯಾಪ್ತಿಗೆ ಬರುವ ಅಡ್ಡಬೈಲ -ಬೀದಿಗುಡ್ಡೆ - ಬೋಗಾಯನಕೆರೆ ರಸ್ತೆ ಅಭಿವೃದ್ಧಿಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ( ಪಿಎಂಜಿಎಸ್ ವೈ ) ಯಡಿ 8.39 ಕೋಟಿ ರೂ . ಮಂಜೂರುಗೊಂಡಿದೆ ಎಂದು ಸುಳ್ಯ ಶಾಸಕ ಎಸ್.ಅಂಗಾರ ಅವರು ತಿಳಿಸಿದ್ದಾರೆ. 9 ಕಿ.ಮೀ. ಉದ್ದದ ಈ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಸ್ಥಳೀಯರ...

ಡಾ.ಮುರಲೀ ಮೋಹನ ಚೂಂತಾರು ಅವರಿಗೆ ರಾಜೀವ್ ಗಾಂಧಿ ವಿವಿ ಪುರಸ್ಕಾರ

ಖ್ಯಾತ ದಂತ ವೈದ್ಯರು, ವೈದ್ಯ ಸಾಹಿತಿ ಡಾ. ಮುರಲೀ ಮೋಹನ ಚೂಂತಾರು ಅವರು ವೃತ್ತಿಯ ಜತೆಗೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅನುಪಮ ಸೇವೆಯನ್ನು ಗುರುತಿಸಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಅವರನ್ನು ಗೌರವಿಸಲು ತೀರ್ಮಾನಿಸಿದೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್‌. ಸಚ್ಚಿದಾನಂದ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಂಗಳೂರಿನ ರಾಜೀವ್ ಗಾಂಧಿ...

ಕೊಲ್ಲಮೊಗ್ರ : ರಸ್ತೆಯಲ್ಲಿ ಕೆಟ್ಟು ನಿಂತ ಯಂತ್ರ – ತೆರವುಗೊಳಿಸದಿದ್ದರೆ ಸವಾರರಿಗೆ ಕಾದಿದೆ ಸಂಕಟ

ಕಳೆದ ಒಂದು ತಿಂಗಳಿಂದ ಕೊಲ್ಲಮೊಗ್ರ ಪೇಟೆಯಲ್ಲಿ ತಾಂತ್ರಿಕ ಕಾರಣದಿಂದ ಕೆಟ್ಟು ನಿಂತಿರುವ ಜೀಯೋ ಕಂಪೆನಿಯ ಕೇಬಲ್ ಅಳವಡಿಕೆಯ ಯಂತ್ರದಿಂದಾಗಿ ವಾಹನ ಸವಾರರಿಗೆ ತೊಂದರೆ ಉಂಟುಮಾಡುತ್ತಿದೆ. ಈ ಬಗ್ಗೆ ಜೀಯೋ ಕಂಟ್ರಾಕ್ಟರ್ ಗಳಿಗೆ ಹಲವು ಸಲ ಮನವಿ ಮಾಡಿದ್ದರು ಕೂಡ ಕ್ಯಾರೇ ಅನ್ನುತ್ತಿಲ್ಲ. ಕೆಲವೇ ದಿನಗಳಲ್ಲಿ ತೆರವುಗೊಳಿಸುತ್ತೇವೆ ಎಂದು ಭರವಸೆ ಮಾತ್ರ ನೀಡುತ್ತಿದ್ದಾರೆ. ರಾತ್ರಿ ವೇಳೆ ಹಾಗೂ...
Loading posts...

All posts loaded

No more posts

error: Content is protected !!