Ad Widget

*ಡಯಾಲಿಸಿಸ್ ಗೆ ಬದಲಿ ವ್ಯವಸ್ಥೆ ಕಲ್ಪಿಸುವಂತೆ ಎಸ್.ಎಸ್ ಎಫ್ ಸಲ್ಲಿಸಿದ ಮನವಿಗೆ ತುರ್ತು ಸ್ಪಂದನೆ*

ಕೋವಿಡ್- 19 ಮಹಾವ್ಯಾಧಿಯು ತಾಲೂಕಿನಲ್ಲೂ ಕಾಣಿಸಿಕೊಂಡಿದ್ದು, ಸುಳ್ಯ ಸರಕಾರಿ ಆಸ್ಪತ್ರೆಯ ಸಿಬ್ಬಂದಿಗಳಿಗೂ ಪಾಸಿಟಿವ್ ವರದಿ ಬಂದು ಆಸ್ಪತ್ರೆಯು ಸೀಲ್ ಡೌನ್ ಆಗಿದ್ದರಿಂದ ಸರಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದ ಸುಮಾರು 33ರಷ್ಟು ಡಯಾಲಿಸೀಸ್ ರೋಗಿಗಳು ಅತಂತ್ರ ಸ್ಥಿತಿಗೊಳಗಾಗಿದ್ದಾರೆ. ಈ ಬಗ್ಗೆ ತಕ್ಷಣ ಎಸ್.ಎಸ್.ಎಫ್ ಸುಳ್ಯ ಡಿವಿಷನ್ ಸಮಿತಿಯು ಮಾನ್ಯ ತಾಲೂಕು ವೈದ್ಯಾಧಿಕಾರಿಯವರಿಗೆ ತುರ್ತು ಕ್ರಮಕೈಗೊಂಡು ಬದಲಿ ವ್ಯವಸ್ಥೆ ಕಲ್ಪಿಸುವಂತೆ...

ಕಲ್ಲುಗುಂಡಿ ಮಹಿಳೆಗೆ ಚೂರಿ ಇರಿತ

ಕಲ್ಲುಗುಂಡಿಯ ಕಡೆಪಾಲ ಸಮೀಪ ಮಹಿಳೆಗೆ ಯುವಕನೋರ್ವ ಚೂರಿ ಇರಿದ ಘಟನೆ ಇದೀಗ ನಡೆದಿದೆ. ಜಾಗದ ವಿವಾದ ಈ ಘಟನೆ ಕಾರಣವೆನ್ನಲಾಗಿದೆ. ಗಂಭೀರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.
Ad Widget

ಬೆಳ್ಳಾರೆಯಲ್ಲಿ ವಿಶ್ವ ಹಿಂದೂ ಪರಿಷತ್-ಬಜರಂಗದಳ ಅಸ್ತಿತ್ವಕ್ಕೆ

ಮನು ಸಚಿನ್ ರೈ ಬಾಲಕೃಷ್ಣ ಸುನಿಲ್ ಬೆಳ್ಳಾರೆಯಲ್ಲಿ ವಿಶ್ವ ಹಿಂದೂ ಪರಿಷತ್ , ಭಜರಂಗದಳ ಮುಖಾಂತರ ಹಿಂದೂ ಸಂಘಟನೆ ಕಾರ್ಯೋನ್ಮುಖವಾಗಿದೆ. ನೂತನ ಸಂಘಟನೆಯ ಅಧ್ಯಕ್ಷರಾಗಿ ಪ್ರಸಾದ್ ಕೆ.ಬಿ., ಕಾರ್ಯದರ್ಶಿಯಾಗಿ ಮನು ಬಾಯಂಬಾಡಿ, ಸತ್ಸಂಗ ಪ್ರಮುಖರಾಗಿ ಉಮೇಶ್ ಮಣಿಮಜಲು, ಬಜರಂಗದಳ ಸಂಯೋಜಕರಾಗಿ ಸಚಿನ್ ರೈ ಪೂವಾಳಿಕೆ, ಸಹ ಸಂಯೋಜಕರಾಗಿ ಬಾಲಕೃಷ್ಣ ಮಣಿಮಜಲು, ಗೋ ರಕ್ಷಕ್ ಪ್ರಮುಖರಾಗಿ ಸುನಿಲ್...

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಇಂದು ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿ " ಕೊರೊನಾ ಮಹಾಮಾರಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದ ಬಳಿಕವೇ ಶಾಲೆಗಳ ಪುನರ್ ಆರಂಭದ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು" ಎಂದರು.ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಜುಲೈ 13 ರಿಂದ ಉತ್ತರ ಪತ್ರಿಕೆಗಳ ಮೌಲ್ಯ...

ಗಿರಿರಾಜ ಕೋಳಿ ಹೋಲ್ ಸೇಲ್ ದರದಲ್ಲಿ ಮಾರಾಟಕ್ಕಿದೆ

ಹೋಲ್ ಸೇಲ್ ದರದಲ್ಲಿ ಗಿರಿರಾಜ ಕೋಳಿ ಮಾರಾಟಕ್ಕಿದೆಸಂಪರ್ಕಿಸಿನವೀನ್ ನಿಂತಿಕಲ್ಲು70220696878618652043

ನ.ಪಂ.ನಿಂದ ಶುದ್ಧವಾದ ಕುಡಿಯುವ ನೀರು ಒದಗಿಸಲು ಆರ್ ಟಿ ಐ ಕಾರ್ಯಕರ್ತ ಶಾರೀಕ್ ಒತ್ತಾಯ

ಡೆಂಗ್ಯೂ ಮತ್ತು ಮಹಾಮಾರಿ ಕೊರೋನಾ ಹರಡುತ್ತಿರುವ ಈ ಕಾಲಘಟ್ಟದಲ್ಲಿ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಶುದ್ಧವಾದ ಕುಡಿಯುವ ನೀರನ್ನು ಸರಬರಾಜು ಮಾಡುವುದು ಸುಳ್ಯ ನಗರ ಪಂಚಾಯಿತಿನ ಕರ್ತವ್ಯವಾಗಿರುತ್ತದೆ. ಆದರೇ ಆಗಾಗ ನೀರಿನ ಸಂಪರ್ಕದ ಒತ್ತಡ ಹೆಚ್ಚಾಗಿ ಪೈಪ್ ಒಡೆಯುತ್ತಿದೆ. ಈ ಹಿಂದೆ ಕಳಪೆ ಗುಣಮಟ್ಟದ ಪೈಪ್ ಅಳವಡಿಸಿರುವುದು ಇದಕ್ಕೆ ಕಾರಣವಾಗಿದೆ. ಇದರ ಬಗ್ಗೆ ಆರ್ ಟಿ...

ರಸ್ತೆ ಅಭಿವೃದ್ಧಿಗೆ ತಡೆಯಲು ಡಿಸಿ ಗೆ ಆಕ್ಷೇಪಣೆ ಅರ್ಜಿ ಸಲ್ಲಿಕೆ – ತನ್ನ ಹೆಸರು ಬಳಸಿ ಅವಮಾನ ಮಾಡಿದ್ದಾರೆಂದು ಗ್ರಾಮಸ್ಥರೊರ್ವರು ದೈವಕ್ಕೆ ಮೊರೆ

ರಸ್ತೆ ಅಭಿವೃದ್ಧಿಗೆ ತಡೆಯಲು ಡಿಸಿ ಗೆ ಆಕ್ಷೇಪಣೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯಲ್ಲಿತನ್ನ ಹೆಸರು ಬಳಸಿ ಅವಮಾನ ಮಾಡಿದ್ದಾರೆಂದು ಅವರ ವಿರುದ್ಧ ಗ್ರಾಮಸ್ಥರಾದ ವಿಶ್ವನಾಥ ಆಚಾರ್ಯ ಕೋಣೆಕಾನ, ದೈವಕ್ಕೆ ಮೊರೆ ಹೋಗುವುದಾಗಿ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ. ತಮ್ಮ ಹೇಳಿಕೆಯಲ್ಲಿ ಅವರು " ಇತ್ತೀಚಿಗೆ ನಮ್ಮ ಶಾಸಕರ ಸಹಕಾರದಿಂದ ಗುತ್ತಿಗಾರಿನ ಮುತ್ತಪ್ಪನಗರದಿಂದ ಚಿಲ್ತಡ್ಕ ಉಳ್ಳಾಕುಲು ಮಾಡ - ಚಿಲ್ತಡ್ಕ...

ಹೊಸೊಳಿಕೆ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಳಲಂಬೆ ನೇರಳಾಡಿ ಹೊಸೊಳಿಕೆ ರಸ್ತೆಯಲ್ಲಿ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡಿದ್ದು ಜು.11ರಂದು ಉದ್ಘಾಟನೆ ಗೊಂಡಿತು. ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ.ಅಧ್ಯಕ್ಷರುಗಳಾದ ವೆಂಕಟ್ ವಳಲಂಬೆ,ಅಚ್ಚುತ ಗುತ್ತಿಗಾರು, ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ ಮೊಟ್ಟೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ, ಶಾಸಕ ಅಂಗಾರ ಸಂಪೂರ್ಣ ವಿಫಲ – ಕಾಂಗ್ರೆಸ್ ಹೇಳಿಕೆ

ದೇಶದಲ್ಲಿ ಕೊರೋನ ಮಹಾಮಾರಿ ಜನರ ಜೀವದೊಂದಿಗೆ ರುದ್ರ ತಾಂಡವ ವಾಡುತ್ತಿದೆ. ದಿನದಿಂದ ದಿನಕ್ಕೆ ಎಲ್ಲಾ ಕಡೆ ಸಾವಿರಾರು ಸಂಖ್ಯೆಯಲ್ಲಿ ಸೋಂಕಿತರು ಹೆಚ್ಚಾಗುತ್ತಲೇ ಇದ್ದಾರೆ. ರಾಜ್ಯ ದಲ್ಲಿ ಇತ್ತೀಚಿನ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಈ ಮಹಾಮಾರಿ ಯನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಅಗತ್ಯ ಆರೋಗ್ಯ ಪರಿಕರಗಳನ್ನು ಒದಗಿಸುವಲ್ಲಿ ಮತ್ತು ಆಸ್ಪತ್ರೆ ಗಳಲ್ಲಿ ಬೆಡ್...

ಸುಳ್ಯ : ಕ್ಯಾಂಪ್ಕೋ ಸಂಸ್ಥಾಪನಾ ದಿನ ಆಚರಣೆ

ಕ್ಯಾಂಪ್ಕೋ ಸ್ಥಾಪನಾ ದಿನ" ವನ್ನು ಇಂದು( ಜುಲೈ 11) ಕ್ಯಾಂಪ್ಕೋ ಸುಳ್ಯ ಶಾಖೆಯಲ್ಲಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಕ್ಯಾಂಪ್ಕೋ ಬ್ರಹ್ಮ ದಿ.ಶ್ರೀ.ವಾರಣಾಶಿ ಸುಬ್ರಾಯ ಭಟ್ ಅವರನ್ನು ನೆನಪಿಸಲಾಯಿತು. ಕಾರ್ಯಕ್ರಮದಲ್ಲಿ ಜಗದೀಶ್ ರಾವ್ ಅಜ್ಜಾವರ,ಸುಬ್ರಹ್ಮಣ್ಯ ಭಟ್ಎಲಿಮಲೆ,ಶಿವರಾಮ ಗೌಡ ಕೇರ್ಪಳ,ಸಂಸ್ಥೆಯ ನೌಕರರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
Loading posts...

All posts loaded

No more posts

error: Content is protected !!