ತೊಡಿಕಾನ – ಕುಂಟುಕಾಡು ಕಾಂಕ್ರಿಟ್ ರಸ್ತೆಗೆ ಗುದ್ದಲಿಪೂಜೆ

ತೊಡಿಕಾನ ಕುಂಟುಕಾಡು ರಸ್ತೆಯ ಕಾಂಕ್ರಿಟೀಕರಣಕ್ಕೆ ಗುದ್ದಲಿ ಪೂಜೆ ನ.27 ರಂದು ತೊಡಿಕಾನ ಹಾಲು ಸೊಸೈಟಿ ಬಳಿ ನಡೆಯಿತು.ಎಪಿಎಂಸಿ ವತಿಯಿಂದ 7.5 ಲಕ್ಷ ಹಾಗೂ ಶಾಸಕರ ಪ್ರದೇಶಾಭಿವೃದ್ದಿ ಯೋಜನೆಯಿಂದ 5 ಲಕ್ಷ ಒಟ್ಟು 12.5 ಲಕ್ಷ ಅನುದಾನದಲ್ಲಿ ರಸ್ತೆಯ ಕಾಂಕ್ರೀಟಿಕರಣ ನಡೆಯಲಿದ್ದು ಶಾಸಕ ಎಸ್. ಅಂಗಾರ ಗುದ್ದಲಿ ಪೂಜೆ ನೆರವೇರಿಸಿದರು.ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ,...

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಪುತ್ತೂರು ಎಸಿ ಡಾ.ಯತೀಶ್ ಉಳ್ಳಾಲ್ ನೇಮಕ

ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಪುತ್ತೂರು ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ಅವರನ್ನು ನೇಮಕ ಮಾಡಲಾಗಿದೆ.ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸರ್ಕಾರದ ಮೇಲಿನ ಉಲ್ಲೇಖದ ಆದೇಶದ ಪ್ರಕಾರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ರ ವಿಧಿ 29 ರನ್ವಯ ದೇವಾಲಯದ ದೈನಂದಿನ ಆಡಳಿತ ನಿರ್ವಹಣೆ ಹಾಗೂ...
Ad Widget

ಚಿಗುರು ಅರೆಭಾಷೆ ಕವನ ಸ್ಪರ್ಧೆ ಫಲಿತಾಂಶ ಪ್ರಕಟ – ಲಿಖಿತಾ ಗುಡ್ಡೆಮನೆ ಪ್ರಥಮ

ಚಿಗುರು ಕ್ರೀಡಾ ಮತ್ತು ಕಲಾ ಯುವಕಮಂಡಲ ಪೆರಾಜೆ ಇವರ ಆಶ್ರಯದಲ್ಲಿ ನಡೆದ ಹುತ್ತರಿ ಮತ್ತು ದೀಪಾವಳಿ ಎಂಬ ವಿಷಯಗಳ ಕುರಿತ ಚಿಗುರು ಅರೆಭಾಷೆ ಕವನ ಸ್ಪರ್ಧೆ 2020ರ ಫಲಿತಾಂಶ ಪ್ರಕಟವಾಗಿದ್ದು, ಪ್ರಥಮ ಬಹುಮಾನ ವನ್ನು ಕುಮಾರಿ ಲಿಖಿತಾ ಗುಡ್ಡೆಮನೆಯವರ "ಹೂ ನರ್ಕುವ ಹಬ್ಬ" ಎಂಬ ಕವನ ಪಡೆದುಕೊಂಡಿದೆ, ದ್ವೀತಿಯ ಮತ್ತು ತೃತೀಯ ಸ್ಥಾನವನ್ನು ಕ್ರಮವಾಗಿ ಮನೋಜ್...

ಗುತ್ತಿಗಾರು : ಪ್ರೌಢಶಾಲಾ ವಿಭಾಗದ ನೂತನ ಕೊಠಡಿಗಳ ಉದ್ಘಾಟನೆ

ಗುತ್ತಿಗಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ನೂತನ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ ನ.27 ರಂದು ನಡೆಯಿತು.ಕೊಠಡಿಗಳ ಉದ್ಘಾಟನೆಯನ್ನು ಶಾಸಕ ಎಸ್ ಅಂಗಾರ ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು "ಜನರ ಸಹಕಾರ ಇದ್ದರೆ ಯೋಜನೆ ಸರಿಯಾಸ ರೀತಿಯಲ್ಲಿ ಆಗುತ್ತದೆ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಯೋಚನೆ ಉತ್ತಮ ಹಾಗೂ...

ಕೋಟೆಮುಂಡುಗಾರು : ಹಾಲು ಉತ್ಪಾದಕರ ಸಂಘದ ಮಹಾಸಭೆ

ಕಳಂಜ ಗ್ರಾಮದ ಕೋಟೆಮುಂಡುಗಾರು ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆಯು ನ.26 ರಂದು ನಡೆಯಿತು. ಸಭೆಯ ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ವಿಶ್ವನಾಥ ರೈ ಕಳಂಜ, ಉಪಾಧ್ಯಕ್ಷರಾದ ಸೂರ್ಯನಾರಾಯಣ ಕೋಟೆ, ಕೆ.ಎಂ.ಎಫ್ ನ ವೈದ್ಯರಾದ ಡಾ.ಕೇಶವ ಸುಳ್ಳಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಮೋನಪ್ಪ ಮಣಿಮಜಲು ವರದಿ ವಾಚಿಸಿದರು. ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಂಘದ ನಿರ್ದೇಶಕರು ಹಾಗೂ ಸದಸ್ಯರು...

ಅಂತರ್ ರಾಜ್ಯ ಮಟ್ಟದ ಚುಟುಕು ಸಾಹಿತ್ಯ ಸ್ಪರ್ಧೆಯಲ್ಲಿ ಸಮ್ಯಕ್ತ್ ಜೈನ್ ದ್ವಿತೀಯ

ತನ್ನ ವಿಭಿನ್ನ ಬರಹ ಶೈಲಿಯ ಮೂಲಕ ಸಾಹಿತ್ಯ ಲೋಕದ ವಿವಿಧ ಮಜಲುಗಳಲ್ಲಿ ಹೆಜ್ಜೆಯನ್ನಿಡುತ್ತಾ ಧ್ವನಿಸುತ್ತಿರುವ ದಕ್ಷಿಣ ಕನ್ನಡ ,ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಯುವ ಪ್ರತಿಭೆ ಇದೀಗ ಚುಟುಕು ಸಾಹಿತ್ಯದಲ್ಲೂ ತನ್ನ ಬರವಣಿಗೆಗೆ ಸೈ ಎನಿಸಿಕೊಂಡಿದ್ದಾರೆ . ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ ) ಕೇಂದ್ರ ಸಮಿತಿ ಬೆಂಗಳೂರು ವತಿಯಿಂದ ಜಿಲ್ಲಾ ಘಟಕ ಯಾದಗಿರಿಯ...

ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿಗೆ ದ.ಕ. ಜಿಲ್ಲೆಯಿಂದ ಸಂಪಾಜೆ ಸೊಸೈಟಿ ಆಯ್ಕೆ- ಇಂದು ಡಿಸಿಸಿ ಬ್ಯಾಂಕಿನಿಂದ ಸನ್ಮಾನ

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಬೆಂಗಳೂರು ಇವರು ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಸಹಕಾರಿ ಸಂಘಗಳಿಗೆ ನೀಡುತ್ತಿರುವ ಪ್ರಶಸ್ತಿ ಹಾಗೂ ಗೌರವಧನಕ್ಕೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಿಂದ ದ.ಕ.ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಆಯ್ಕೆಯಾಗಿದೆ.ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಅಪೆಕ್ಸ್ ಬ್ಯಾಂಕ್ ನ ವಾರ್ಷಿಕ ಮಹಾಸಭೆಯಲ್ಲಿ ಸಂಪಾಜೆ ಸಹಕಾರಿ ಸಂಘವನ್ನು...

ಗುಂಡಿಅಂಗಡಿ ಮೈರ್ಪಳ್ಳ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಗುದ್ದಲಿಪೂಜೆ

ಗುಂಡಿಅಂಗಡಿ ಮೈರ್ಪಳ್ಳ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಶಾಸಕ ಎಸ್.ಅಂಗಾರ ಗುದ್ದಲಿಪೂಜೆ ನೆರವೇರಿಸಿದರು. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಸುಮಾರು 5ಲಕ್ಷ ರೂ ಅನುದಾನದಲ್ಲಿ ಕಾಂಕ್ರೀಟೀಕರಣ ನಡೆಯಲಿದೆ. ಈ ಸಂದರ್ಭದಲ್ಲಿ ಜಿ.ಪಂ.ಇಂಜಿನಿಯರ್ ಹನುಮಂತ ರಾಯಪ್ಪ, ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ಸಹಕಾರಿ ಭಾರತಿ ಅಧ್ಯಕ್ಷ ಪ್ರವೀಣ್ ಎಸ್.ರಾವ್, ಮಾಧನ ನಂದಗೋಕುಲ, ಶರತ್ ಕಾಸಿನಗೊಡ್ಲು, ಭಾನುಪ್ರಕಾಶ್ ಪೆಲ್ತಡ್ಕ, ಗುತ್ತಿಗೆದಾರ ಹರಿಪ್ರಸಾದ್ ಎಲಿಮಲೆ...

ಸಾಧನೆಯ ಹಾದಿ ಕಷ್ಟಕರ – ಶ್ರಮದಲ್ಲಿ ಪರಮಾತ್ಮನನ್ನು ಕಾಣುವ ವ್ಯಕ್ತಿ ಎಂದು ಸೋಲುವುದಿಲ್ಲ

ಈ ಜಗತ್ತೇ ಹಾಗೆ ಒಬ್ಬ ವ್ಯಕ್ತಿ ಏನಾದರೂ ಒಂದು ಸಾಧಿಸಬೇಕೆಂದು ಹೊರಟಾಗ ಕೆಲವರು ಆ ವ್ಯಕ್ತಿಯ ಸಾಧನೆಯ ಹಾದಿಯಲ್ಲಿ ಆತನಿಗೆ ಬೆಂಗಾವಲಾಗಿ ನಿಂತರೆ ಇನ್ನೂ ಕೆಲವರು ಆತನ ಆ ಸಾಧನೆಯ ಗುರಿಯನ್ನು ಮುಟ್ಟದಂತೆ ಮಾಡಲು ತುಂಬಾ ಪ್ರಯತ್ನಿಸುತ್ತಾರೆ.ನಾವು ಸಾಧನೆ ಮಾಡಲು ಹೊರಟಾಗ ತುಂಬಾ ಜನ ನಮ್ಮ ಕಾಲೆಳೆಯಲೆಂದೇ ಕಾಯುತ್ತಾ ಕುಳಿತಿರುತ್ತಾರೆ. ಆದರೆ ಆ ಕಾಲೆಳೆಯಲೆಂದೇ ಕಾಯುತ್ತಾ...

ವಳಲಂಬೆಯಲ್ಲಿ ನ.28 ರಿಂದ ಯಕ್ಷಗಾನ ನೃತ್ಯ ತರಬೇತಿ ಆರಂಭ

ಶ್ರೀ ಶಂಖಪಾಲ ಸುಬ್ರಹ್ಮಣ್ಯ ಯಕ್ಷಗಾನ ಕಲಾ ಕೇಂದ್ರ ವಳಲಂಬೆ ಇದರ ಆಶ್ರಯದಲ್ಲಿ ನಡೆಯುತ್ತಿರುವ ಯಕ್ಷಗಾನ ನೃತ್ಯ ತರಬೇತಿಯ ನಾಲ್ಕನೇ ಬ್ಯಾಚ್ ನ ತರಗತಿಗಳು ಇದೇ ನ.28ರಿಂದ ಪ್ರತಿ ಭಾನುವಾರ ನಡೆಯಲಿವೆ. ಪ್ರತಿ ಮಧ್ಯಾಹ್ನ 2 ರಿಂದ ನಡೆಯಲಿರುವ ತರಗತಿಗೆ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸುವಂತೆ ಸಂಚಾಲಕರು ತಿಳಿಸಿದ್ದಾರೆ. ಹೆಚ್ಚಿನ‌ ಮಾಹಿತಿಗಾಗಿ 9481759851, 9481447718, 9481973364 ಸಂಪರ್ಕಿಸಬಹುದಾಗಿದೆ.
Loading posts...

All posts loaded

No more posts

error: Content is protected !!