- Saturday
- August 8th, 2026
ಸಾಲ ಪಡೆದು ವಂಚನೆ ನಡೆಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಲಕ್ಕೆ ಜಾಮೀನು ಹಾಕಿದವರಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ದಿವಾಳಿತನ ಸಂಹಿತೆ (ಐಬಿಸಿ) ಅಡಿಯಲ್ಲಿ ಸಾಲ ಪಡೆದವರು ಅದನ್ನು ತೀರಿಸಲು ವಿಫಲರಾದರೆ ವೈಯಕ್ತಿಕ ಜಾಮೀನುದಾರರ ವಿರುದ್ಧ ಕ್ರಮ ಜರುಗಿಸಲು ಬ್ಯಾಂಕುಗಳಿಗೆ ಅನುಮತಿ ನೀಡಿದೆ. ಕಾರ್ಪೋರೇಟ್ ಸಾಲಗಾರರಿಗೆ ಇಲ್ಲವೇ ಕಂಪೆನಿಗಳಿಗೆ ನೀಡಲಾದ ಸಾಲಕ್ಕೆ ಜಾಮೀನು...
ಕಡಬ ತಾಲೂಕು ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಹರೀಶ ಗೌಡರ ಪುತ್ರಿ ಚೇತನಾರವರ ವಿವಾಹವು ಕಡಬ ತಾಲೂಕು ಚಾರ್ವಾಕ ಗ್ರಾಮದ ನಾಣಿಲ ಶ್ರೀ ತಿಮ್ಮಪ್ಪ ಗೌಡರ ಪುತ್ರ ಗಣೇಶ್ ರವರೊಂದಿಗೆ ಮೇ.20ರಂದು ನಾಣಿಲ ವರನ ಮನೆಯಲ್ಲಿ ನಡೆಯಿತು.
ಮಂಡೆಕೋಲು ಗ್ರಾಮದ ಪೇರಾಲು ಕುಕ್ಕೇಟಿ ದಿ. ಸುಬ್ಬಯ್ಯ ಗೌಡರ ಧರ್ಮಪತ್ನಿ ಶ್ರೀಮತಿ ಮುತ್ತಕ್ಕರವರು ಮೇ.22 ರಂದು ಮುಂಜಾನೆ ನಿಧನರಾದರು.ಮೃತರು ಪುತ್ರರಾದ ಯಶವಂತ ಗೌಡ ಕುಕ್ಕೇಟಿ, ಗಂಗಾಧರ ಗೌಡ ನೆಟ್ಟಣ, ದಯಾನಂದ ಗೌಡ ನಾವೂರು, ಪುರೂಷೋತ್ತಮ ಗೌಡ ಕೊಲ್ಯ, ಶಿವರಾಮ ಗೌಡ ಕುಕ್ಕೇಟಿ, ಪುತ್ರಿಯರಾದ ಶ್ರೀಮತಿ ಶೇಷಮ್ಮ ಉತ್ತಯ್ಯ ಗೌಡ ಬೊಳುಗಲ್ಲು, ಶ್ರೀಮತಿ ಲಲಿತಾ ಚಂದ್ರಶೇಖರ್ ಗೌಡ,...
ರಾಜ್ಯದಲ್ಲಿ ಕೋವಿಡ್ ಸೋಂಕನ್ನು ಸಂಪೂರ್ಣ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮತ್ತೆ 14 ದಿನಗಳ ಲಾಕ್ಡೌನ್ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಘೋಷಣೆ ಮಾಡಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯ ವರೆಗೆ ಖರೀದಿಗೆ ಅವಕಾಶ ನೀಡಲಾಗಿದೆ. ಈ ಬಾರಿಯ ಲಾಕ್ಡೌನ್ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಈ ಬಗ್ಗೆ ಪೊಲೀಸ್ ಇಲಾಖೆಗೂ ಸೂಚನೆ ನೀಡಿದ್ದೇವೆ....
ಲಾಕ್ ಡೌನ್ ವೇಳೆಯಲ್ಲಿ ಕೊಲ್ಲಮೊಗ್ರ ಪರಿಸರದಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದ್ದು ರೇಟ್ ಆಗಿದೆ ಎಂದು ತಿಳಿದುಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸ್ಕಿಡ್ ಆಗಿ ಬಿದ್ದ ಬೈಕ್ ಸವಾರ ಲೋಕನಾಥ ರೈ ಶಿವಾಲ ಅವರ ಬೈಕ್ ಬಾಕ್ಸ್ ನ ತುಂಬ ಮದ್ಯ ಪತ್ತೆಯಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸ್ಥಳೀಯರು ಅಬಕಾರಿ ಇಲಾಖೆಗೆ ದೂರು...
ಕೊಲ್ಲಮೊಗ್ರ ಹರಿಹರ ರಸ್ತೆಯ ನಿಲ್ಕೂರು ಬಳಿ ರಸ್ತೆಗೆ ಇಂದು ಮುಂಜಾನೆ ಮರ ಬಿದ್ದು ಸಂಚಾರ ಸ್ಥಗಿತಗೊಂಡಿತ್ತು. ಕೂಡಲೇ ಸ್ಪಂದಿಸಿದ ಲವಿತ್ ಪಡ್ಪು, ಚಂದ್ರ ನಂಗಾರು, ಶಶಿ ತೋಟದಮಜಲು ಸ್ಥಳಿಯರ ಸಹಕಾರದಿಂದ ತೆರವುಗೊಳಿಸಿದರು.
ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಪಡಿತರ ವಿತರಣಾ ಕೇಂದ್ರದಲ್ಲಿ ಕೊರೋನಾ ವಾರಿಯರ್ಸ್ ಗಳಾದ ಶಶಿಧರ್ ಬಾಳೆಗುಡ್ಡೆ,ಮುಖೇಶ್ ಪಡ್ಪು, ಚಂದ್ರಶೇಖರ್ ಕಡೋಡಿ, ರಾಜೇಶ್ ಅಂಬೆಕಲ್ಲು, ಪುನೀತ್ ಮುಂಡೋಡಿ, ಶಿವಪ್ರಕಾಶ್ ಕಡಪಳ, ಪಂಚಾಯತ್ ಸದಸ್ಯ ರಮೇಶ್ ಪಡ್ಪು, ಶೈಲೇಶ್ ಅಂಬೆಕಲ್ಲು ಹಾಗೂ ಸಹಕಾರ ಸಂಘದ ಸಿಬ್ಬಂದಿ ಪಡಿತರ ವಿತರಣೆಗೆ ಸಹಕಾರ ನೀಡಿದರು.
ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾಲ್ತಾಜೆ ಕಾಲೋನಿಯಲ್ಲಿ ಅನಾರೋಗ್ಯ ಪೀಡಿತರ ಮನೆ ಭೇಟಿ ಮಾಡಿದ ಗ್ರಾ.ಪಂ.ಸದಸ್ಯರು ಅವರಿಗೆ ಮಾನಸಿಕ ಸ್ಥೈರ್ಯ ತುಂಬಿದರು. ಈ ವೇಳೆ ಗ್ರಾ.ಪಂ. ಸದಸ್ಯ ಶೈಲೇಶ್ ಅಂಬೆಕಲ್ಲು, ರಮೇಶ್ ಪಡ್ಪು, ಪಿಡಿಓ ಗುರುಪ್ರಸಾದ್ ಉಪಸ್ಥಿತರಿದ್ದರು.
ಗುತ್ತಿಗಾರಿನ ಕಿರಣ ರಂಗ ಅಧ್ಯಯನ ಸಂಸ್ಥೆ ಮತ್ತು ಕಲಾಮಾಯೆ ಏನೆಕಲ್ಲು ಪ್ರಸ್ತುತ ಪಡಿಸುವ ಅರೆಬಾಸೆ ಪದ್ಯ ಕವನಗಳ ಗಮ್ಮತ್ ಆನ್ಲೈನ್ ನಲ್ಲಿ ನಡೆಯಲಿದೆ. ಕವಿಗಳಿಗೆ, ಕವನ ವಾಚಕರಿಗೆ ಉಚಿತ ಅವಕಾಶವಿರುವ ಈ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರೆಬಾಸೆ ಘನತೆ ಗೌರವ ಹೆಚ್ಚಿಸುವಂತೆ ಹಾಗೂ ಅತೀ ಹೆಚ್ಚು ವ್ಹೀವ್ಸ್ ಪಡೆದವರಿಗೆ ಕಿರಣ ಗೌರವ ಸನ್ಮಾನ ನೀಡಿ ಗೌರವಿಸಲಾಗುವುದು...
ಪ್ರತಿಷ್ಠಿತ ಗ್ರಾಮ ಮಡಪ್ಪಾಡಿ ಆದರೇ ರಸ್ತೆ ಬಗ್ಗೆ ಮಾತ್ರ ಅದೆಷ್ಟೋ ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾ ಬಂದಿದೆ. ಸೇವಾಜೆಯಿಂದ ಮಡಪ್ಪಾಡಿಗೆ ಸಾಗುವ ರಸ್ತೆ ಕೆಲವೆ ವರ್ಷಗಳ ಹಿಂದೆ ಮರುಡಾಮರೀಕರಣ ನಡೆದಿದ್ದರೂ ಡಾಮರು ಕಿತ್ತು ಹೋಗಿ ರಸ್ತೆ ಮತ್ತೆ ಅಸ್ತವ್ಯಸ್ತವಾಗಿದೆ ಸೇವಾಜೆಯಿಂದ ಕಜೆವರೆಗಿನ ರಸ್ತೆ ಗುಂಡಿಗಳಿಗೆ ಕಳೆದ ಬೇಸಿಗೆಯಲ್ಲಿ ಮಣ್ಣು ಹಾಕಿ ಮುಚ್ಚಲಾಗಿತ್ತು. ಈ ಮಣ್ಣು ಬೇಸಿಗೆ ಕಾಲವಿಡೀ...
Loading posts...
All posts loaded
No more posts
