- Saturday
- August 8th, 2026
ಸುಳ್ಯ ತಾಲೂಕು ಪಂಚಾಯತಿಯ ಪಯಸ್ವಿನಿ ಸಭಾಂಗಣದಲ್ಲಿಸುಳ್ಯ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ಜು.15ರಂದು ವಿಶೇಷ ತರಬೇತಿ ಕಾರ್ಯಾಗಾರ ನಡೆಯಿತು. ಕಾರ್ಯಾಗಾರ ಉದ್ಘಾಟಿಸಿದಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ್ ಪ್ರತೀ ಮನೆಗೆ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರು ಪೂರೈಕೆ ಮಾಡಲು ಹಾಗೂ ಅದರ ಯಶಸ್ವಿ ಅನುಷ್ಠಾನದಲ್ಲಿ ನೀರು...
ತೊಡಿಕಾನ ಗುಂಡಿಗದ್ದೆ ಕಲ್ಲಂಬಳ ಎಸ್ ಸಿ ಕಾಲನಿಗೆ ಹೋಗುವ ರಸ್ತೆಯ ಸಮೀಪ ರಾಮ ಮುಗೇರರ ಜಾಗದಲ್ಲಿ ಬರೆ ಕುಸಿತ ಆರಂಭಗೊಂಡಿದ್ದು, ಬರೆ ಕುಸಿತ ಇನ್ನೂ ಹೆಚ್ಚಾದರೇ ರಸ್ತೆ ಬಂದ್ ಆಗುವ ಭೀತಿ ಎದುರಾಗಿದೆ.
ಜಾಲ್ಸೂರು ಗ್ರಾಮ ವ್ಯಾಪ್ತಿಯಲ್ಲಿ ಹಲವಾರು ಕಾಮಗಾರಿಗಳು ಆಗಬೇಕಾಗಿದ್ದು ಈ ಹಿಂದೆ ಅಧಿಕಾರಿಗಳು ಆಶ್ವಾಸನೆ ನೀಡಿದ್ದರೆ ಹೊರತು ಯಾವುದು ಕೂಡ ಕಾರ್ಯರೂಪಕ್ಕೆ ಬಂದಿಲ್ಲ. ಈ ಬಾರಿ ಈ ಕೆಲಸಗಳನ್ನು ಶೀಘ್ರದಲ್ಲೇ ಮಾಡಬೇಕೆಂಬ ಆಗಬೇಕಾಗಿರುವ ಕಾಮಗಾರಿಗಳ ಪಟ್ಟಿಯನ್ನು ತಯಾರಿಸಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ನೀಡಿ ಮನವಿ ಮಾಡಲಾಯಿತು. ಮನವಿಯಲ್ಲಿ ಈ ಕೆಳಗೆ ಕಾಣಿಸಿರುವ ತುರ್ತು ಸಮಸ್ಯೆ ಗಳನ್ನು ಪರಿಹರಿಸಬೇಕೆಂದು...
ದೇವಚಳ್ಳ ಗ್ರಾಮದ ಮಾವಿನಕಟ್ಟೆ ಕೃಷ್ಣ ಮಣಿಯಾಣಿ ಯವರು ಇಂದು ನಿಧನರಾದರು. ಅವರಿಗೆ ಸುಮಾರು 83 ವಯಸ್ಸಾಗಿತ್ತು.ಕೆಲ ದಿನದ ಹಿಂದೆ ಅಸೌಖ್ಯಕ್ಕೊಳಗಾಗಿ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ಪತ್ನಿ ಜಾನಕಿ, ಪುತ್ರಿಯರಾದ ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಯಶೋದಾ ಬಾಳೆಗುಡ್ಡೆ, ಉಮಾವತಿ, ಪುತ್ರರಾದ ನಿವೃತ್ತ ಕ್ಯಾಪ್ಟನ್ ಸುದಾನಂದ , ಯೋಧ ರಾಜೇಶ್ , ರೋಹಿತ್ ಹಾಗೂ ಗುರುಪ್ರಸಾದ್...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜು.16 ರಂದು ಮರ್ಕಂಜ ಒಕ್ಕೂಟದ ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ).ಸುಳ್ಯ ದೊಡ್ಡತೋಟ ವಲಯದ ಅಮರ ಪಡ್ನೂರು ಕಾರ್ಯಕ್ಷೇತ್ರದ ಚೊಕ್ಕಾಡಿ ಸೇವಾ ಕೇಂದ್ರದಲ್ಲಿ ಲಾಭಾಂಶ ವಿತರಣಾ ಕಾರ್ಯಕ್ರಮ ನಡೆಯಿತು. ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಅನಿಲ್ ಪೂಜಾರಿ ಮನೆ ಹಾಗೂ ಒಕ್ಕೂಟದ ಅಧ್ಯಕ್ಷ ಪ್ರಸಾದ್ ರವರು ದೀಪ ಬೆಳಗಿಸಿ ಉದ್ಘಾಟಿಸಿ, ಲಾಭಾಂಶ ಹಸ್ತಾಂತರ ಮಾಡಿದರು. ವಲಯದ ಮೇಲ್ವಿಚಾರಕರಾದ ನವೀನ್...
ಅರಂತೋಡು ಗ್ರಾಮದ ಅಡ್ತಲೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು ರಸ್ತೆ ಮತ್ತು ಮೊಬೈಲ್ ನೆಟ್ವರ್ಕ್ ಸಮರ್ಪಕವಾಗಿಲ್ಲ. ಜನಪ್ರತಿನಿಧಿಗಳು ಚುನಾವಣೆಯ ವೇಳೆಯಲ್ಲಿ ಮಾತ್ರವೇ ಭರವಸೆ ನೀಡಿ ಮತ್ತೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಅಡ್ತಲೆ ಮುಖ್ಯ ರಸ್ತೆ ಅಗಲೀಕರಣಗೊಳ್ಳದೇ ಹಲವಾರು ಅಪಘಾತಗಳು ಸಂಭವಿಸುತ್ತಿದೆ. ಇದರಿಂದ ಬೇಸತ್ತ ಜನ ಈ ಬಾರಿ ತಾ.ಪಂ.ಹಾಗೂ ಜಿ.ಪಂ. ಚುನಾವಣೆ ಬಹಿಷ್ಕರಿಸಿ, ಬೇಡಿಕೆ ಈಡೇರುವವರೆಗೆ ಹೋರಾಟಕ್ಕೆ ಸಜ್ಜಾಗಿದ್ದಾರೆ....
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೊಡ್ಡತೋಟ ವಲಯದ ನೂತನ ಕಚೇರಿ ಹಾಗೂ ಗ್ರಾಹಕ ಸೇವಾ ಕೇಂದ್ರದ ಉದ್ಘಾಟನೆ ಜು.14 ರಂದು ಬಾಲಾಜಿ ಟ್ರೇಡರ್ಸ್ ಕಟ್ಟಡದಲ್ಲಿ ನೆರವೇರಿತು. ಕೇಂದ್ರ ಒಕ್ಕೂಟದ ಅಧ್ಯಕ್ಷ ಯತೀಶ್ ರೈ, ಅಮರಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶಶಿಕಲ, ಕಟ್ಟಡ ಮಾಲಕ ಕೃಷ್ಣಕುಮಾರ್ ಭಟ್, ವಲಯ ಅಧ್ಯಕ್ಷ ಭಾಸ್ಕರ್ ರಾವ್ ನೂತನ ಕಚೇರಿಯನ್ನು...
ಸೇವಾಜೆ ಸೇತುವೆ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಸೇವಾಜೆ ನಿವಾಸಿಗಳಿಗೆ ಸಂಕಷ್ಟ ಎದುರಾಗಿದೆ. ದೇವಚಳ್ಳ ಗ್ರಾಮ ಪಂಚಾಯಿತ್ ವ್ಯಾಪ್ತಿಗೆ ಒಳಪಟ್ಟ ಸೇವಾಜೆಯ 8 ಬಡ ಕುಟುಂಬಗಳಿಗೆ ತಳೂರು ಪಡಿತರ ಕೇಂದ್ರಕ್ಕೆ ಬಂದು ಪಡಿತರ ಪಡೆಯಲು ಸುತ್ತು ಬಳಸಿ ಬರಬೇಕಾಗಿತ್ತು. ಇಲ್ಲಿಗೆ ಬರುವುದು ಬಡವರಿಗೆ ಹೊರೆಯಾಗುವುದನ್ನು ಮನಗಂಡು ಮಳೆ ಸಂಪೂರ್ಣ ಮುಗಿಯುವ ತನಕ ಮರ್ಕಂಜ ಪ್ರಾ. ಕೃ. ಪ....
Loading posts...
All posts loaded
No more posts
