ಭಾರಿ ಮಳೆ : ಹರಿಹರ ಕೊಪ್ಪತ್ತಡ್ಕ ಬಾಳುಗೋಡು ರಸ್ತೆ ಸಂಪರ್ಕ ಕಡಿತ

ತಾಲೂಕಿನಾದ್ಯಂತ ವ್ಯಾಪಕ ಮಳೆ ಸುರಿಯುತ್ತಿದ್ದು ನದಿ ತೊರೆಗಳೆಲ್ಲಾ ತುಂಬಿ ಹರಿಯುತ್ತಿದೆ. ಹರಿಹರ ಪಲ್ಲತ್ತಡ್ಕದಿಂದ ಕೊಪ್ಪತ್ತಡ್ಕ ಕಿರಿಭಾಗ ಬಾಳುಗೋಡು ಸಂಪರ್ಕ ರಸ್ತೆಗೆ ಹೊಳೆ ನೀರುಬಂದಿದ್ದು ಸಂಪರ್ಕ ಕಡಿತವಾಗಿದೆ.

ಪೆರಾಜೆ : ಲಯನ್ಸ್ ಮತ್ತು ಚಿರಂತನ ಕ್ಲಿನಿಕ್ ವತಿಯಿಂದ ಉಚಿತ ಆರೋಗ್ಯ ಶಿಬಿರ

ಸುಳ್ಯ: ಲಯನ್ಸ್ ಕ್ಲಬ್ ಸುಳ್ಯ ಮತ್ತು ಚಿರಂತನ ಕ್ಲಿನಿಕ್ ಪೆರಾಜೆ ಇವರ ಜಂಟಿ ಆಶ್ರಯದಲ್ಲಿ ಇಮಾಮಿ ಲಿಮಿಟೆಡ್‌ರವರ ಪ್ರಾಯೋಜಕತ್ವದೊಂದಿಗೆ ಉಚಿತ ರಕ್ತದೊತ್ತಡ, ಮಧುಮೇಹ ಮತ್ತು ಮೂಳೆ ಖನಿಜಾಂಶ ಸಾಂದ್ರತೆಯ ತಪಾಸಣಾ ಶಿಬಿರವು ಪೆರಾಜೆಯ ಚಿರಂತನ ಕ್ಲಿನಿಕ್‌ನಲ್ಲಿ ನಡೆಯಿತು. ಈ ಉಚಿತ ಆರೋಗ್ಯ ಶಿಬಿರವನ್ನು ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಆನಂದ ಪೂಜಾರಿಯವರು ಉದ್ಘಾಟಿಸಿ ಶುಭ ಹಾರೈಸಿದರು....
Ad Widget

ಮೂರನೇ ಅಲೆ ಭೀತಿ : ರಾಜ್ಯದಲ್ಲಿ ಮತ್ತೆ ವೀಕೆಂಡ್ ಕರ್ಫ್ಯೂ- ನೈಟ್ ಕರ್ಫ್ಯೂ ಜಾರಿ

ರಾಜ್ಯದ ಗಡಿಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ಮತ್ತು ರಾಜ್ಯಾದ್ಯಂತ ನೈಟ್ ಕರ್ಫ್ಯೂ ಸೇರಿದಂತೆ ಹೊಸ ಮಾರ್ಗಸೂಚಿಗಳನ್ನು ರಾಜ್ಯಸರಕಾರ ಹೊರಡಿಸಿದೆ.ಅಗತ್ಯ ವಸ್ತುಗಳನ್ನು ಖರೀದಿಸಲು ಬೆಳಗ್ಗೆ 5ರಿಂದ ಮಧ್ಯಾಹ್ನ 2ರವರೆಗೆ ಅವಕಾಶ ಕಲ್ಪಿಸಲಾಗಿದೆ. ಮಸೀದಿ, ಮಂದಿರ, ಚರ್ಚ್ ಗಳಲ್ಲಿ ಕೋವಿಡ್ ಮಾರ್ಗಸೂಚಿ ಅನುಸರಿಸಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನೈಟ್ ಕರ್ಫ್ಯೂ : ರಾತ್ರಿ 9 ಗಂಟೆಯಿಂದ ಬೆಳಗ್ಗೆ 5...

ಭಾರಿ ಮಳೆ – ಸುಬ್ರಹ್ಮಣ್ಯ ಪಂಜ ರಸ್ತೆ ಬಂದ್

ಸುಬ್ರಹ್ಮಣ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿರುವುದರಿಂದ ಕುಮಾರಧಾರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕುಮಾರಧಾರ ಬಳಿ ಸುಬ್ರಹ್ಮಣ್ಯ- ಏನೆಕಲ್ಲು - ಪಂಜ ರಸ್ತೆಯ ಮೇಲೆ ನೀರು ನಿಂತಿದ್ದು ಸಂಪರ್ಕ ಕಡಿತವಾಗಿದೆ.

ಶ್ರೀಧರ ಮೋಟುಕಾನ ನಿಧನ

ಅಮರಪಡ್ನೂರು ಗ್ರಾಮದ ಮೋಟುಕಾನ ಮಲ್ಲಣ್ಣ ನಾಯ್ಕರ ಪುತ್ರ ಶ್ರೀಧರ ಅಲ್ಪ ಕಾಲದ ಅನಾರೋಗ್ಯದಿಂದ ಅ. 5 ರಂದು ನಿಧನರಾದರು. ಇವರಿಗೆ 44ವರ್ಷ ವಯಸ್ಸಾಗಿತ್ತು.ಮೃತರು ತಂದೆ ಮಲ್ಲಣ್ಣ ನಾಯ್ಕ, ತಾಯಿ ದೇವಕಿ, ಸಹೋದರ ರಾಮಚಂದ್ರ, ಸಹೋದರಿ ಚಂದ್ರಾವತಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ಸುಳ್ಯ : ಏರಿಕೆಯಾಗುತ್ತಿರುವ ಸೋಂಕಿನ ಪ್ರಮಾಣ- ಸುಳ್ಯದಲ್ಲಿಂದು 57 ಪಾಸಿಟಿವ್

ಸುಳ್ಯ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು ಇಂದು 57 ಕ್ಕೆ ಏರಿಕೆಯಾಗಿದೆ.‌

ಯಾವ ಖಾತೆ ನೀಡಿದರೂ ಸಮರ್ಥವಾಗಿ ನಿರ್ವಹಿಸುವೆ – ಕುಕ್ಕೆ ಕ್ಷೇತ್ರದಲ್ಲಿ ಸ್ವಾಗತ ಸ್ವೀಕರಿಸಿದ ಬಳಿಕ ನೂತನ ಸಚಿವ ಎಸ್.ಅಂಗಾರ ಅಭಿಮತ

ಸುಬ್ರಹ್ಮಣ್ಯ: ಎರಡನೇ ಬಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಪ್ರಥಮವಾಗಿ ಕುಕ್ಕೆಸುಬ್ರಹ್ಮಣ್ಯಕ್ಕೆ ಆಗಮಿಸಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವ  ಎಸ್.ಅಂಗಾರ ಅವರನ್ನು ಕುಕ್ಕೆ ಕ್ಷೇತ್ರದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಕ್ಷೇತ್ರಕ್ಕೆ ಆಗಮಿಸಿದ ಸಚಿವರು ಆರಂಭದಲ್ಲಿ ಗೋಪುರದ ಬಳಿಯಿಂದಲೇ ಶ್ರೀ ದೇವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ನಂತರ ಶ್ರೀ ದೇವಳದ ಆಡಳಿತ ಕಚೇರಿ ಸಭಾಂಗಣದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ...

ಸುಳ್ಯ ಸಿಎ ಬ್ಯಾಂಕ್ ನ ಸಿಬ್ಬಂದಿ ದಾಮೋದರ ರವರಿಗೆ ಬೀಳ್ಕೊಡುವ ಕಾರ್ಯಕ್ರಮ

ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುಮಾರು 19 ವರ್ಷ ಸಿಬ್ಬಂದಿ ಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ ದಾಮೋದರ ಇವರ ಬೀಳ್ಕೊಡುವ ಕಾರ್ಯಕ್ರಮ ಜುಲೈ 31 ರಂದು ಸುಳ್ಯ ಸಿ ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಹರೀಶ್ ಬೂಡುಪನ್ನೆ ವಹಿಸಿದ್ದರು ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ವೆಂಕಟ್ರಮಣ ಮುಳ್ಯ...

ಸುಳ್ಯದಲ್ಲಿಂದು 55 ಕೊರೊನ ಪಾಸಿಟಿವ್

ಸುಳ್ಯ ತಾಲೂಕಿನಲ್ಲಿ ಇಂದು 55 ಕೊರೊನಾ ಪಾಸಿಟಿವ್ ಬಂದಿದೆ. ತಾಲೂಕಿನಲ್ಲಿ ಒಟ್ಟು 417 ಸಕ್ರೀಯ ಪ್ರಕರಣಗಳಿವೆ.

ಸುಳ್ಯ : ನಗರದ ಸ್ವಚ್ಚತೆಗೆ ಹೊಸ ವಾಹನಗಳ ಹಸ್ತಾಂತರ

ಸುಳ್ಯ ನಗರ ಪಂಚಾಯತಿಗೆ ಸ್ವಚ್ಛತೆಯ ನಿರ್ವಹಣೆಗಾಗಿ ಇನ್ನೆರಡು ವಾಹನಗಳು ಆಗಮಿಸಿದ್ದು ಟಾಟಾ ಕಂಪೆನಿಯ ಪಿಕಪ್ ಮತ್ತು ಟಾಟಾ 407 ವಾಹನ ಇಂದು ಸುಳ್ಯ ನಗರ ಪಂಚಾಯಿತಿಗೆ ಹಸ್ತಾಂತರಗೊಂಡವು. ಟಾಟಾ ವಾಹನಗಳ ಅಧಿಕೃತ ಮಾರಾಟಗಾರರು ಆದ ಅರವಿಂದ್ ಮೋಟಾರ್ಸ್ ಸಂಸ್ಥೆಯ ಪ್ರತಿನಿಧಿಗಳು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹಾಗೂ ಮುಖ್ಯಾಧಿಕಾರಿ ಕುಮಾರಸ್ವಾಮಿ ಅವರಿಗೆ ವಾಹನದ...
Loading posts...

All posts loaded

No more posts

error: Content is protected !!