ಯೇನೆಕಲ್ಲು : ಅಖಂಡ ಭಾರತ ಸಂಕಲ್ಪ ದಿನ

ವಿಶ್ವ ಹಿಂದೂ ಪರಿಷತ್, ಬಜರಂಗದಳ, ಶ್ರೀರಾಮ ಶಾಖೆ ಯೇನೆಕಲ್ಲು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಣೆ ಮಾಡಲಾಯಿತು.ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಊರಿನ ಹಿರಿಯರಾದ ಶೂರಪ್ಪ ಬಾಲಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಸೈನಿಕರು ಅವರ ಸೇವಾ ವೃತ್ತಿಯ ಬಗ್ಗೆ ಮತ್ತು ವಿಶ್ವಹಿಂದೂ ಪರಿಷತ್ತಿನ ಕಾರ್ಯವೈಖರಿ ಬಗ್ಗೆ ಮಾತಾಡಿದರು. ನಂತರ ದೇಶ ಸೇವೆ ಮಾಡಿದ...

ಪೆರಾಜೆ : ಶ್ರೀ ವನದುರ್ಗಾ ಮತ್ತು ಪರಿವಾರ ದೈವಸ್ಥಾನ ದಲ್ಲಿ ನಾಗರಪಂಚಮಿ ಆಚರಣೆ

ಕಲ್ಚರ್ಪೆ ಸಿರಿಕುರಲ್ ನಗರದಲ್ಲಿರುವ ವನದುರ್ಗಾ ಮತ್ತು ಪರಿವಾರ ದೈವಗಳ ದೈವಸ್ಥಾನದ ನಾಗನ ಸಾನಿಧ್ಯದಲ್ಲಿ ನಾಗರಪಂಚಮಿ ಪ್ರಯುಕ್ತ ಪರಿಸರದ ಭಕ್ತಾದಿಗಳಿಂದ ನಾಗರಪಂಚಮಿ ಆಚರಣೆ ನಡೆಯಿತು. ನಾಗರಪಂಚಮಿ ಪ್ರಯುಕ್ತ ಅರ್ಚಕರಾದ ಶ್ರೀವರ ಭಟ್ ರವರ ನೇತೃತ್ವದಲ್ಲಿ ನಾಗನಿಗೆ ಕ್ಷೀರಾಭಿಷೇಕ, ಎಳನೀರಿನ ಅಭಿಷೇಕ ಮತ್ತು ತಂಬಿಲ ಸೇವೆ ನಡೆಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಗೋಕುಲ್ ದಾಸ್,...
Ad Widget

ಅಮರ ಸ್ವಾತಂತ್ರ್ಯ ಹೋರಾಟದ ಸ್ಮಾರಕ ನಿರ್ಮಿಸಲು ಕಟಿಬದ್ಧ: ಸಚಿವ ಅಂಗಾರ

ಭಾರತ ಸ್ವಾತಂತ್ರ್ಯ ಪಡೆಯುವುದಕ್ಕೆ ಅದೆಷ್ಟೋ ಹಿಂದೆ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಈ ಜಿಲ್ಲೆಗೆ 13 ದಿನಗಳ ಸ್ವಾತಂತ್ರ್ಯದ ಸವಿಯನ್ನು ನೀಡಿದ ಕೀರ್ತಿ ನಮ್ಮ ಸುಳ್ಯದ ಹಿರಿಯರಿಗೆ ಸಲ್ಲುತ್ತದೆ ಎನ್ನುವುದು ನಮಗೆ ಹೆಮ್ಮೆಯ ವಿಚಾರ. ಅವರ ತ್ಯಾಗ, ಬಲಿದಾನಗಳನ್ನು ಶಾಶ್ವತವಾಗಿ ನೆನಪಿಸುವುದಕ್ಕಾಗಿ ಬೆಳ್ಳಾರೆಯಲ್ಲಿ ಮತ್ತು ಉಬರಡ್ಕದ ಕೆದಂಬಾಡಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಸ್ಮಾರಕಗಳನ್ನು ನಿರ್ಮಿಸಲು ಕಟಿಬದ್ಧನಾಗಿದ್ದೇನೆ...

ಪ್ರಬಂಧ ಸ್ಪರ್ಧೆ: ಕು|ಸಂಜನಾ.ಬಿ.ಎಸ್ ಪ್ರಥಮ ಸ್ಥಾನ

2021 ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯು ಆಯೋಜಿಸಿದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಕು|ಸಂಜನಾ.ಬಿ.ಎಸ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರು ಸುಳ್ಯ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸಂಜೀವ ಗೌಡ.ಬಿ ಹಾಗೂ ಶಿಕ್ಷಕಿ ಶ್ರೀಮತಿ ನಿರ್ಮಲಾರವರ ಪುತ್ರಿ.

ಸುಬ್ರಹ್ಮಣ್ಯ : ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಭೆ

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಭೆಯು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಅವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಸಚಿವ ಎಸ್.ಅಂಗಾರ ಅವರು ಅಧಿಕಾರಿಗಳಿಗೆ ಸೂಚಿಸಿದಂತೆ ಸರ್ವೇ ಇಲಾಖೆ, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಗಳು ಜಂಟಿ ಸರ್ವೇ ಶೀಘ್ರವಾಗಿ ನಡೆಸಬೇಕು ಹಾಗೂ ಕಡಬ ತಾಲೂಕಿನ ಅಕ್ರಮ ಸಕ್ರಮ ಕಡತಗಳನ್ನು...

ಕಳಂಜ: ಅಸಮರ್ಪಕ ರಸ್ತೆ – ನಡೆದುಕೊಂಡು ಹೋಗಿ ಕೋವಿಡ್ ಪರೀಕ್ಷೆ ನಡೆಸಿದ ಆರೋಗ್ಯ ಕಾರ್ಯಕರ್ತರು

ಬೆಳ್ಳಾರೆ ಸರಕಾರಿ ಆಸ್ಪತ್ರೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಕಳಂಜ ಗ್ರಾಮದ ತಂಟೆಪ್ಪಾಡಿ-ನಾಲ್ಗುತ್ತು ಭಾಗಕ್ಕೆ ಕೋವಿಡ್ ಪರೀಕ್ಷೆಗೆ ತೆರಳಿದ್ದು ತಂಟೆಪ್ಪಾಡಿ-ನಾಲ್ಗುತ್ತು ರಸ್ತೆ ತೀರಾ ಹದಗೆಟ್ಟ ಕಾರಣ ವಾಹನ ಹೋಗದೆ ಸ್ವಾಬ್ ಪರೀಕ್ಷೆಗೆ ನಡೆದುಕೊಂಡು ಹೋಗುವಂತಾಯಿತು. ಈ ರಸ್ತೆಯ ದುಸ್ಥಿತಿಯಿಂದ ಈ ಭಾಗದ ಜನರು ಹಲವಾರು ವರ್ಷಗಳಿಂದ ಇದೇ ಗೋಳು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರಾದ ಲೋಕೇಶ್ ತಂಟೆಪ್ಪಾಡಿಯವರು...

ದಬ್ಬಡ್ಕ : ಅಕ್ರಮ ಮರ ಕಡಿದ ಪ್ರಕರಣ – ಮೂವರ ಬಂಧನ

ಸಂಪಾಜೆ ಪ್ರಾದೇಶಿಕ ವಲಯ ವ್ಯಾಪ್ತಿಯ ದಬ್ಬಡ್ಕ ಶಾಖಾ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಎರಡು ಬೃಹತ್ ಗಾತ್ರದ ಬೂರುಗು ಹಾಗೂ ಹುಲುವೆ ಮರಗಳನ್ನು ಕಡಿಯಲು ಪ್ರಯತ್ನಿಸಿದ್ದು ಈ ಕೃತ್ಯಕ್ಕೆ ಸಂಬಂಧಿಸಿದಂತೆ ಸಂಪಾಜೆ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ದಬ್ಬಡ್ಕ ನಿವಾಸಿಗಳಾದ ಹೆಚ್ ಹೇಮಾಧರ, ಪ್ರದೀಪ್.ಕೆ.ವಿ, ಹರಿಕೃಷ್ಣ.ಡಿ.ಆರ್. ಇವರುಗಳನ್ನು ಬಂಧಿಸಿ ನ್ಯಾಯಾಂಗ...

ಪೆರುವಾಜೆ ಶ್ರೀ ಜಲದುರ್ಗಾದೇವೀ ದೇವಸ್ಥಾನದಲ್ಲಿ ನಾಗರಪಂಚಮಿ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಇಂದು ನಾಗರಪಂಚಮಿ ಪ್ರಯುಕ್ತಶ್ರೀ ಕ್ಷೇತ್ರದ ದೇವರಮಾರು ನಾಗ ಬನದಲ್ಲಿ ಬೆಳಿಗ್ಗೆ ಹಾಲು, ಸಿಯಾಳಾಭಿಷೇಕ ತಂಬಿಲ ಸೇವೆ ನಡೆಯಿತು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ .ಪದ್ಮನಾಭ ಶೆಟ್ಟಿ ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

ತೊಡಿಕಾನ ನಾಗರ ಪಂಚಮಿ ಆಚರಣೆ

ಸುಳ್ಯಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ನಾಗಕಟ್ಟೆಯಲ್ಲಿ ನಾಗರ ಪಂಚಮಿ ‌ ಪ್ರಯುಕ್ತ ನಾಗನಿಗೆ ಪೂಜೆ ಸಲ್ಲಿಸಿ ಹಾಲೆರೆಯಲಾಯಿತು.ದೇವಳದ ಪ್ರಧಾನ ಅರ್ಚಕ ಕೇಶವ ಮೂರ್ತಿ ಪೂಜಾ ಕಾರ್ಯ ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯವರು ಸಿಬ್ಬಂದಿಗಳು ಭಕ್ತಾಧಿಗಳು ಉಪಸ್ಥಿತರಿದ್ದರು.

ಮಿನುಂಗೂರು ದೇವಸ್ಥಾನದಲ್ಲಿ ನಾಗರ ಪಂಚಮಿ

ಮರ್ಕಂಜ: ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿಯ ಪ್ರಯುಕ್ತ ವಿಶೇಷ ಅಭೀಷೆಕ ,ಪೂಜೆ ನಡೆಯಿತು
Loading posts...

All posts loaded

No more posts

error: Content is protected !!