- Tuesday
- August 11th, 2026
"ನಿಮ್ ತರ ಬದುಕೋಕೆ ಪ್ರಯತ್ನ…ನೀವೇ ನಮ್ ಬದುಕಿನ ರಾಜರತ್ನ…..ಮನುಷ್ಯನಿಂದ ದೇವರಾಗಿ ನಿಮ್ಮ ಹುಟ್ಟು ಇದು ಸಾವಲ್ಲ……ಜೊತೆಗಿರದ ಜೀವ ಎಂದೆಂದಿಗೂ ಜೀವಂತ……" ಎಳೆಯ ವಯಸ್ಸಿನಲ್ಲಿ ಅಕಾಲಿಕ ಮರಣ ದವಡೆಗೆ ಸಿಲುಕಿ ಭಗವಂತನ ಪಾದ ಸೇರಿದ ಕರುನಾಡಿನ ಕಣ್ಮಣಿ ಪುನೀತ್ ರಾಜ್ ಕುಮಾರ್ ರಿಗೆ ಮಡಪ್ಪಾಡಿಯ ಯುವಕ ಮಂಡಲ ಸಭಾಭವನದಲ್ಲಿ ಅಶ್ರುತರ್ಪಣ ಕಾರ್ಯಕ್ರಮ ನೆರವೇರಿಸಲಾಯಿತು. ಸುಳ್ಯ ಎಪಿಎಂಸಿ ಅಧ್ಯಕ್ಷರಾದ...
ಜಾಲ್ಸೂರು ಗ್ರಾಮದ ಬೈತಡ್ಕ ಕಾಜಿಮಡ್ಕ ದಿ. ನಾರಾಯಣ ಗೌಡರ ಪುತ್ರ ತೀರ್ಥಪ್ರಸಾದ್ ರ ವಿವಾಹ ನಿಶ್ಚಿತಾರ್ಥವು ಮಡಪ್ಪಾಡಿ ಗ್ರಾಮದ ಬಲ್ಕಜೆ ಪಾರೆಪ್ಪಾಡಿ ನೀಲಪ್ಪ ಗೌಡರ ಪುತ್ರಿ ಶ್ರುತಿಯೊಂದಿಗೆ ನ.10 ರಂದು ವಧುವಿನ ಮನೆಯಲ್ಲಿ ನಡೆಯಿತು.
ಸುಬ್ರಹ್ಮಣ್ಯದ ಕೆಯಸ್ಯಸ್ ಕಾಲೇಜಿನ ರಂಗಘಟಕ ಕುಸುಮ ಸಾರಂಗದ ವತಿಯಿಂದ ಕಾಲೇಜಿನಲ್ಲಿ ರಂಗ ಬೆಳಕು ಎಂಬ ಹೆಸರಿನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಗೋವಿಂದ ಎನ್.ಎಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶೋಭಾ ಗಿರಿಧರ್ ಸ್ಕಂದ, ರಂಗ ನಿರ್ದೇಶಕ ಪ್ರವೀಣ್ ಎಡಮಂಗಲ, ಉಪನ್ಯಾಸಕ ವಿನ್ಯಾಸ್...
ಅಜ್ಜಾವರ ಗ್ರಾಮ ಪಂಜಾಯತ್ ಮಾಜಿ ಅಧ್ಯಕ್ಷರಾದ ಕರುಣಾಕರ ಆಡ್ಪoಗಾಯ ಹಾಗೂ ಮನೆಯವರು ಇರುವಂಬಳ್ಳ ಸರಕಾರಿ ಕಿರಿಯ ಪ್ರಾಧಾಮಿಕಾ ಶಾಲೆಗೆ ಊಟದ ತಟ್ಟೆಗಳನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಕರುಣಾಕರ ಆಡ್ಪoಗಾಯ ಶ್ರೀಮತಿ ಪುಷ್ಪಲತಾ ಕರುಣಾಕರ ಅಡ್ಪಂಗಾಯ, ಅಜ್ಜಾವರ ಗ್ರಾಮ ಪಂಜಾಯತ್ ಉಪಾಧ್ಯಕ್ಷರಾದ ಲೀಲಾ ಮನಮೋಹನ್, ಅಜ್ಜಾವರ ಗ್ರಾಮ.ಪಂ. ಸದ್ಯಸರಾದ ರಾಹುಲ್ ಆಡ್ಪoಗಾಯ, ಅಬ್ಬಾಸ್ ಎ.ಬಿ. ಅಡ್ಕ,...
ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಶಿವರಾಮ ಕಾರಂತರ ಬೆಟ್ಟದ ಜೀವ ಕೃತಿಯನ್ನು ಅರೆಭಾಷೆಗೆ ಅನುವಾದಿಸಲು ಉದ್ದೇಶಿಸಿದ್ದು, ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಅನುರಾಧಾ ಕುರುಂಜಿ ಯವರಿಗೆ ಅನುವಾದಿಸಿಕೊಡಲು ಅನುಮತಿ ಹಾಗೂ ಅನುದಾನವನ್ನು ನೀಡಿರುತ್ತದೆ. ಇವರು ಈಗಾಗಲೇ ನಾಲ್ಕು ಸ್ವತಂತ್ರ ಕೃತಿಗಳನ್ನು ಸಹೃದಯ ಲೋಕಕ್ಕೆ ಅರ್ಪಿಸಿದ್ದು, ಐದನೇ ಕೃತಿ "ಜೀವನ ಪಯಣ" ಕವನ...
ಕೊಡಿಯಾಲ ಗ್ರಾಮ ಪಂಚಾಯತ್ 2021-22 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ್ ರೈ ಅಜ್ರಂಗಳರವರ ಅಧ್ಯಕ್ಷತೆಯಲ್ಲಿ ನ.8 ರಂದು ಪಂಚಾಯತ್ ಆವರಣದಲ್ಲಿ ನಡೆಯಿತು. ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಹರ್ಷನ್ ಕೆ.ಟಿ, ಸದಸ್ಯರಾದ ಕರುಣಾಕರ ಆಳ್ವ, ಶ್ರೀಮತಿ ಚಿತ್ರ, ಶ್ರೀಮತಿ ವಿಜಯಕುಮಾರಿ, ಶ್ರೀಮತಿ ಯಶವಂತಿ ಉಪಸ್ಥಿತರಿದ್ದರು.ತೋಟಗಾರಿಕಾ ಇಲಾಖೆಯ ಸಹಾಯಕ ತೋಟಗಾರಿಕಾ...
ಸುಳ್ಯ ನಗರ ಪಂಚಾಯತ್ ನ ಕಲ್ಲುಮುಟ್ಲು ನೀರು ಶುದ್ಧೀಕರಣ ಘಟಕದಲ್ಲಿ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸುವ ಕಾರ್ಯ ಇರುವುದರಿಂದ ನವೆಂಬರ್ 10 ಬುಧವಾರದಂದು ಸುಳ್ಯ ನಗರ ವ್ಯಾಪ್ತಿಯಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ತಿಳಿಸಿದ್ದಾರೆ.
ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ಮಾಡಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠಕ್ಕೆ ತೆರಳಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳ ಆಶಿರ್ವಾದ ಪಡೆದರು. ಶ್ರೀಗಳು ಸಚಿವರಿಗೆ ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕಾರ್ಯನಿರ್ವಾಹಣಾಧಿಕಾರಿ ಡಾ|ನಿಂಗಯ್ಯ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 2021-22ನೇ ಸಾಲಿನಲ್ಲಿ ಪ್ರಥಮ ಪದವಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಮಾಹಿತಿ ಕಾರ್ಯಾಗಾರವನ್ನು ನವೆಂಬರ್ 8 ರಂದು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.ಮಂಗಳೂರು ವಿಶ್ವವಿದ್ಯಾಲಯದ ಜಂಟಿ ನಿರ್ದೇಶಕರ ಕಛೇರಿಯ ವಿಶೇಷ ಅಧಿಕಾರಿ ಡಾ. ಜಯಕರ ಭಂಡಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ, ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು...
ಸುಳ್ಯ ತಾಲೂಕು ಸಿಪಿ ಐಎಂ ಕಾರ್ಯದರ್ಶಿಯಾಗಿ ಕೆ.ಪಿ.ರಾಬರ್ಟ್ ಡಿಸೋಜ ಮರು ಆಯ್ಕೆಗೊಂಡಿದ್ದಾರೆ.ಸುಳ್ಯ ತಾಲೂಕು ಸಮ್ಮೆಳನದಲ್ಲಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಅವರ ಸಮ್ಮುಖದಲ್ಲಿ ಆಯ್ಕೆಮಾಡಲಾಯಿತು. ಪ್ರಸ್ತುತ ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯರಾಗಿ, ಜಿಲ್ಲಾಮಟ್ಟ ಮತ್ತು ರಾಜ್ಯಮಟ್ಟದ ಕಾರ್ಮಿಕ ಸಂಘಟನೆಗಳಲ್ಲಿ ಹಾಗೂ ಇತರ ಸಂಘ-ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ಸಮಾಜ ಸೇವಕರಾಗಿ ದುಡಿಯುತ್ತಿದ್ದಾರೆ.
Loading posts...
All posts loaded
No more posts
