- Sunday
- September 13th, 2026
ಸುಳ್ಯದ ಮುಖ್ಯರಸ್ತೆ ಕೊಯಿಂಗೋಡಿ ಕಾಂಪ್ಲೆಕ್ಸ್ ನಲ್ಲಿರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಮುಳಿಯ ಕೃಷ್ಣ ಭಟ್ & ಸನ್ಸ್ ಜ್ಯುವೆಲ್ಲರ್ಸ್ ನಲ್ಲಿ ಏ.19ರಂದು ಅಕ್ಷಯ ತೃತೀಯ ಪ್ರಯುಕ್ತ ಚಿನ್ನಾಭರಣ ಖರೀದಿಗೆ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡಲಾಗಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಚಿನ್ನಾಭರಣಗಳನ್ನು ಖರೀದಿಸಿದರು. ಬೆಳಿಗ್ಗೆಯಿಂದಲೇ ಮಳಿಗೆಯಲ್ಲಿ ಗ್ರಾಹಕರು ಕಿಕ್ಕಿರಿದು ಸೇರಿದ್ದು, ತಮಗಿಷ್ಟವಾದ ಚಿನ್ನಾಭರಣ ಖರೀದಿಸಿದರು. ವಿವಿಧ...
ಪುತ್ತೂರಿನ ಅಕ್ಷಯ ಕಾಲೇಜಿನಲ್ಲಿ ಏ.20ರಂದು ನಡೆದ ಪ್ರಿನ್ಸೆಸ್ & ಪ್ರಿನ್ಸ್ ಆಫ್ ದಕ್ಷಿಣ ಕನ್ನಡ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ದೊಡ್ಡಮನೆ ಶೇಣಿಯ ಮೌರ್ಯ.ಎಸ್ ದ್ವಿತೀಯ ರನ್ನರ್ಅಪ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಬೆಳ್ಳಾರೆಯ ಕೆ.ಪಿ.ಎಸ್ ನಲ್ಲಿ 6ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಇವರು ಅಮರ ಪಡ್ನೂರು ಗ್ರಾಮದ ಶೇಣಿ ದೊಡ್ಡಮನೆ ಡಿ.ಕೆ ಸುರೇಶ್ ರವರ ಪುತ್ರ.
ಮಯೂರಿ ಯುವತಿ ಮಂಡಲ(ರಿ.) ಚೊಕ್ಕಾಡಿ, ಗರುಡ ಯುವಕ ಮಂಡಲ(ರಿ.) ಚೊಕ್ಕಾಡಿ ಹಾಗೂ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್(ರಿ.) ಚೊಕ್ಕಾಡಿ ಇವರ ಆಶ್ರಯದಲ್ಲಿ ಐದು ದಿನಗಳ ವ್ಯಕ್ತಿತ್ವ ವಿಕಸನ ಬೇಸಿಗೆ ಶಿಬಿರವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಜ್ಜನಗದ್ದೆ ಇಲ್ಲಿ ಯಶಸ್ವಿಯಾಗಿ ನಡೆಯಿತು.ಶಿಬಿರವು ಏಪ್ರಿಲ್ 11ರಂದು ಬಾಲಕೃಷ್ಣ ಬೊಳ್ಳೂರು ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೂಪವಾಣಿ ಅವರ ಉಪಸ್ಥಿತಿಯಲ್ಲಿ...
ಕಡಬ ತಾಲೂಕಿನ ಕೋಡಿಂಬಾಳದ ಅಜಿತ್.ಕೆ ರವರು ಕೋಯಂಬತ್ತೂರಿನ ಭಾರತೀಯ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಫಿಲಾಸಫಿ(ಪಿ.ಹೆಚ್.ಡಿ) ಪದವಿಯನ್ನು ಪಡೆದಿದ್ದಾರೆ.ಅಜಿತ್ ರವರು “ಫಾಲಿಸೈಟಿಕ್ ಓವರಿ ಸಿಂಡ್ರೋಮ್ ಗಾಗಿ ಆಹಾರ ಕ್ರಮದ ಮಧ್ಯಸ್ಥಿಕೆ ಮತ್ತು ಜೀವನಶೈಲಿ ಮಾರ್ಪಾಡು - ಒಂದು ನಿರೀಕ್ಷಿತ ಮಧ್ಯಸ್ಥಿಕೆಯ ಅಧ್ಯಯನ(dietary intervention and lifestyle modification in polycystic ovary syndrome - A prospective...
ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪುನರ್ ನಿರ್ಮಾಣ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದದೊಂದಿಗೆ, ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಎ.24ರಿಂದ ಮೇ.3ರ ತನಕ ಹತ್ತು ದಿನಗಳ ಕಾಲ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.ಹಸಿರುವಾಣಿ ಸಮರ್ಪಣೆ - ಉಗ್ರಾಣ ಮುಹೂರ್ತ...
ಗುತ್ತಿಗಾರಿನ ದೇವಿಸಿಟಿ ಕಾಂಪ್ಲೆಕ್ಸ್ ನಲ್ಲಿ ಕಳೆದ 6 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ನ್ಯೂ ಮೂಕಾಂಬಿಕಾ ಜ್ಯುವೆಲ್ಲರ್ಸ್ ಸ್ಥಳಾಂತರಗೊಂಡು ಶ್ರೀ ಮುತ್ತಪ್ಪೇಶ್ವರ ದೈವಸ್ಥಾನದ ಹತ್ತಿರದ ಶ್ರೀಹರಿ ಕಾಂಪ್ಲೆಕ್ಸ್ ಗೆ ಏ.11ರಂದು ಶುಭಾರಂಭಗೊಂಡಿತು. ಮುಖಂಡ ವೆಂಕಟ್ ವಳಲಂಬೆ ಉದ್ಘಾಟಿಸಿದರು. ಕೇಂದ್ರ ರಬ್ಬರ್ ಭೋರ್ಡ್ ನಿರ್ದೆಶಕ ಮುಳಿಯ ಕೇಶವ ಭಟ್ ದೀಪ ಬೆಳಗಿಸಿದರು. ಈ ಸಂದರ್ಭದಲ್ಲಿ ಶ್ರೀಹರಿ ಕಾಂಪ್ಲೆಕ್ಸ್ ನ ಮಾಲಕ...
ದಿನಾಂಕ : 21 ಏಪ್ರಿಲ್ 2026ವಾರ : ಮಂಗಳವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಏಪ್ರಿಲ್ 21) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 290-445-473/475ಹಳೆ ಅಡಿಕೆ...
ಬದುಕಿನಲ್ಲಿ ಸೋತ ಜೀವಕ್ಕೆ ನಮ್ಮ ಪ್ರೋತ್ಸಾಹದ ನುಡಿಯೊಂದೇ ಸಾಕು, ಮತ್ತೆದ್ದು ಮುನ್ನಡೆಯಲು ಆ ಜೀವಕ್ಕೆ ಅದು ಪ್ರೇರಣೆಯಾದೀತು, ಆ ಜೀವದ ನಾಳಿನ ಗೆಲುವಿಗೆ ನಮ್ಮ ಇಂದಿನ ಪ್ರೋತ್ಸಾಹದ ನುಡಿಯೇ ಕಾರಣವಾದೀತು...ಬದುಕಿನಲ್ಲಿ ನೊಂದ ಜೀವಕ್ಕೆ ನಮ್ಮ ಸಾಂತ್ವನದ ಮಾತೊಂದೇ ಸಾಕು, ನೋವುಗಳ ತೊರೆದು ನಲಿವಿನೆಡೆಗೆ ಮುನ್ನಡೆಯಲು ಆ ಜೀವಕ್ಕೆ ಅದು ಸ್ಥೈರ್ಯವನ್ನು ನೀಡೀತು, ಆ ಜೀವದ ನಾಳಿನ...
ಏ.20 ರಂದು ಸಂಜೆ ಬೀಸಿದ ಭೀಕರ ಗಾಳಿ ಮಳೆಯು ಯೇನೆಕಲ್ಲು ಗ್ರಾಮದಲ್ಲಿ ಅವಾಂತರವನ್ನೇ ಸೃಷ್ಟಿಸಿ ಅಪಾರವಾದ ನಷ್ಟವನ್ನುಂಟುಮಾಡಿದೆ. ಗ್ರಾಮದ ಅಜಿರ್ಪೊಳಿ ಎಂಬಲ್ಲಿ ಉದಯಕುಮಾರ್, ಉಮೇಶ್ ಎಂಬವರ ಮನೆಯ ಮೇಲೆ ಮರ ಬಿದ್ದು ಅಪಾರ ಹಾನಿಯುಂಟಾಗಿದ್ದು, ಆ ಭಾಗದ ಕೃಷಿಕರ ಹಲವು ತೋಟಗಳಲ್ಲಿ ಅಡಿಕೆ ಮರಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದಾಗಿ ವರದಿಯಾಗಿದೆ.
ಬಳ್ಪ ಗ್ರಾಮ ವ್ಯಾಪ್ತಿಯಲ್ಲೂ ಏ.20ರಂದು ಸಂಜೆ ಬೀಸಿದ ಭೀಕರ ಬಿರುಗಾಳಿಗೆ ಅಪಾರ ಹಾನಿಯುಂಟಾದ ಬಗ್ಗೆ ವರದಿಯಾಗಿದೆ. ಬಳ್ಪ ಗ್ರಾಮದ ಚಿತ್ತರಂಜನ್ ಜೋಗಿ, ಹರಿಪ್ರಸಾದ್ ಉಕ್ಕಿನಮನೆ ರವರ ಸೇರಿದಂತೆ ಹಲವು ಮನೆಗಳ ಮೇಲೆ ಮರ ಬಿದ್ದು ಅಪಾರ ಹಾನಿ ಸಂಭವಿಸಿರುವುದಾಗಿ ತಿಳಿದುಬಂದಿದ್ದು, ಎಣ್ಣೆಮಜಲು ಭಾಗದಲ್ಲಿ ವಿದ್ಯುತ್ ಟಿಸಿಯ ಮೇಲೆ ಮರ ಬಿದ್ದು ಟಿಸಿಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ. ರಸ್ತೆ...
Loading posts...
All posts loaded
No more posts
