ತನ್ನ ಹೆಸರು ಬಳಸಿ ಮಾನಹಾನಿ ಮಾಡಿರುವುದರ ವಿರುದ್ಧ ಪೊಲೀಸ್ ದೂರು ನೀಡಿದ ಶೈಲೇಶ್ ಅಂಬೆಕಲ್ಲು

ಎಲಿಮಲೆಯಲ್ಲಿ ಇತ್ತೀಚೆಗೆ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಶಾಲಾ ಆಡಳಿತಾಧಿಕಾರಿ ಅನಿಲ್ ಎಂಬವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆಯುವ ಸಂದರ್ಭದಲ್ಲಿ ತನ್ನ ಹೆಸರು ಬಳಸಿ ಮಾನಹಾನಿ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶೈಲೇಶ್ ಅಂಬೆಕಲ್ಲು ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಘಟನೆಯ...

ಅಮರಪಡ್ನೂರು : ಬಿಜೆಪಿ ಬೆಂಬಲಿತ ಅಭ್ಯರ್ಥಿ ಸತ್ಯಪ್ರಸಾದ ಪುಳಿಮಾರಡ್ಕ ನಾಮಪತ್ರ ಸಲ್ಲಿಕೆ

ಅಮರಪಡ್ನೂರು ಗ್ರಾ.ಪಂ.ನ 1ನೇ ವಾರ್ಡಿನಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸತ್ಯಪ್ರಸಾದ ಪುಳಿಮಾರಡ್ಕ ಡಿ. 15 ರಂದು ನಾಮಪತ್ರ ಸಲ್ಲಿಸಿದರು.
Ad Widget

ಹರಿಹರ ಪಲ್ಲತ್ತಡ್ಕ : ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ವಾರ್ಡ್ ನಂ.1 ರಲ್ಲಿ ಹಿಂದುಳಿದ ಪಂಗಡ ಮಹಿಳಾ ಸ್ಥಾನಕ್ಕೆ ಬಿ.ಜೆ.ಪಿ ಪಕ್ಷದ ಬೆಂಬಲಿತರಾದ ಪದ್ಮಾವತಿ ಕಲ್ಲೇಮಠ, ಸಾಮಾನ್ಯ ಕ್ಷೇತ್ರದಿಂದ ಯಕ್ಷಿತ್ ಕಜೆಗದ್ದೆ ಹಾಗೂ ವಿಜಯ ಅಂಗಣರವರು ನಾಮಪತ್ರ ಸಲ್ಲಿಸಿದ್ದಾರೆ. ಬಾಳುಗೋಡು ಗ್ರಾಮದ ವಾರ್ಡ್ ನಂ.2 ರಿಂದ ಹಿಂದುಳಿದ ವರ್ಗ ಮಹಿಳಾ ಸ್ಥಾನಕ್ಕೆ ಬಿಂದು.ಪಿ ಮತ್ತು ಸಾಮಾನ್ಯ ಕ್ಷೇತ್ರದಿಂದ ಜಯಂತ ರವರು ನಾಮಪತ್ರ...

ದೇವಚಳ್ಳ : ಬಿಜೆಪಿ ಬೆಂಬಲಿತ ಅಭ್ಯರ್ಥಿ ಭವಾನಿಶಂಕರ ಮುಂಡೋಡಿ ನಾಮಪತ್ರ

ದೇವಚಳ್ಳ : ದೇವಚಳ್ಳ ಗ್ರಾಮ ಪಂಚಾಯತ್ ನ 4 ನೇ ವಾರ್ಡ್ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಭವಾನಿಶಂಕರ ಮುಂಡೋಡಿ ಡಿ.15 ರಂದು ನಾಮಪತ್ರ ಸಲ್ಲಿಸಿದ್ದಾರೆ.

ಪಂಜ : ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಪಂಜ ಗ್ರಾಮ ಪಂಚಾಯತ್ ಕೂತ್ಕುಂಜ 2ನೇ ವಾರ್ಡಿನ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಶರತ್ ಕುದ್ವ ಇಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಸುವರ್ಣಿನಿ ಎನ್ ಎಸ್., ರವಿ ಬಿ.ಎನ್. ನಾಗತೀರ್ಥ, ನಂದಕುಮಾರ್ ಗಟ್ಟಿಗಾರ್, ಚೇತನ್ ಪಂಜ, ರಮೇಶ್ ಕುದ್ವ, ಅಕ್ಷಯ್...

ಗ್ರಾಪಂ ಚುನಾವಣೆ : ಗುತ್ತಿಗಾರಿನಲ್ಲಿ ಕಣಕ್ಕಿಳಿದ ಗ್ರಾಮ ಭಾರತ ತಂಡ

ಗ್ರಾಮ‌ ಪಂಚಾಯತ್ ಚುನಾವಣೆಯಲ್ಲಿ ಗುತ್ತಿಗಾರು ಗ್ರಾ.ಪಂ‌.ನ ಒಂದನೇ ವಾರ್ಡ್ ನ ಎಲ್ಲಾ ಸ್ಥಾನಗಳಿಗೆ ನಾಗರಿಕರ ತಂಡವು ಗ್ರಾಮ‌ ಭಾರತ ಹೆಸರಿನಲ್ಲಿ ಸ್ಫರ್ಧೆಗೆ ಇಳಿದಿದೆ. ರಸ್ತೆ, ಕುಡಿಯುವ ನೀರು ಹಾಗೂ ಮೂಲಭೂತ ವ್ಯವಸ್ಥೆಗಳು, ರಸ್ತೆ ಹಾಗೂ ಸೇತುವೆ ಸೇರಿದಂತೆ ವಿವಿಧ ಉದ್ದೇಶಗಳೊಂದಿಗೆ ಭ್ರಷ್ಟಾಚಾರ ತಡೆಯಲು ಸ್ಫರ್ಧೆಗೆ ಇಳಿದಿದೆ. ಈಗಾಗಲೇ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಗುತ್ತಿಗಾರು ಒಂದನೇ...

ಜಾಲ್ಸೂರು : ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮುಜೀಬ್ ಪೈಚಾರ್ ನಾಮಪತ್ರ ಸಲ್ಲಿಕೆ

ಜಾಲ್ಸೂರು ಗ್ರಾಮ ಪಂಚಾಯತ್ ನ ಎರಡನೇ ವಾರ್ಡಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮುಜೀಬ್ ಪೈಚಾರ್ ಇಂದು ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರಾದ ಸೀತಾರಾಮ ಜಾಲ್ಸೂರು, ಸುಬ್ಬಯ್ಯ ಸೋಣಂಗೇರಿ, ಲತೀಫ್ ಬಿ.ಎಲ್. ಮೊದಲಾದವರು ಉಪಸ್ಥಿತರಿದ್ದರು.

ಮಡಪ್ಪಾಡಿ : ಪಕ್ಷೇತರ ಅಭ್ಯರ್ಥಿ ತೀರ್ಥರಾಮ ದೋಣಿಪಳ್ಳ ನಾಮಪತ್ರ

ಮಡಪ್ಪಾಡಿ ಗ್ರಾಮ ಪಂಚಾಯತಿ ಚುನಾವಣೆಗೆ ಡಿ.15 ರಂದು 1 ನಾಮಪತ್ರ ಮಾತ್ರ ಸಲ್ಲಿಕೆಯಾಗಿವೆ. ಮಡಪ್ಪಾಡಿ2 ನೇ ವಾರ್ಡ್ ನಿಂದ ಸಾಮಾನ್ಯ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ತೀರ್ಥರಾಮ ದೋಣಿಪಳ್ಳ ಅವರು ಇಂದು ನಾಮಪತ್ರ ಸಲ್ಲಿಸಿದರು.

ಕೊಲ್ಲಮೊಗ್ರ : ಟಿಕೇಟ್ ಹಂಚಿಕೆಯಲ್ಲಿ ಅಸಮಾಧಾನ – ಬಿಜೆಪಿ ಕಾರ್ಯಕರ್ತರಿಂದ ರಾಜೀನಾಮೆಗೆ ಸಿದ್ಧತೆ

ಕೊಲ್ಲಮೊಗ್ರ ಗ್ರಾಮ ಪಂಚಾಯತ್ ನ ಕಲ್ಮಕಾರು ವಾರ್ಡ್ 1 ರಲ್ಲಿ ಆಭ್ಯರ್ಥಿಗಳ ಆಯ್ಕೆ ಬಗ್ಗೆ ಗೊಂದಲವಿದ್ದು, ಕೊನೆಯ ಕ್ಷಣದಲ್ಲಿ ಮಂಡಲ ಸಮಿತಿಯು ಪಕ್ಷದ ನಿಷ್ಠಾವಂತರಿಗೆ ಮಣೆ ಹಾಕಿಲ್ಲವೆಂದು ಕಾರ್ಯಕರ್ತರು ಸಾಮೂಹಿಕ ರಾಜೀನಾಮೆಗೆ ಸಜ್ಜಾಗಿದ್ದಾರೆ.ಇಲ್ಲಿ ಬಿಜೆಪಿ ಬೆಂಬಲಿತರಾಗಿ ಸ್ಪರ್ಧೆಗೆ ಅಶ್ವಥ್ ಯಾಲದಾಳು ಮತ್ತು ಪುಷ್ಪರಾಜು ಪಡ್ಪು ಅವರಿಗೆ ಪಕ್ಷ ಟಿಕೇಟ್ ನೀಡಿದೆ. ಅಶ್ವಥ್ ಯಾಲದಾಳು ಅವರಿಗೆ ಟಿಕೆಟ್...

ಸಂಪಾಜೆ ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

ಸಂಪಾಜೆ (ದ. ಕ) ಗ್ರಾಮ ಪಂಚಾಯತ್ ನ 5 ನೇ ವಾರ್ಡ್ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿಯಾಗಿ ರಿಫಾತ್ ಜಿ. ಎಸ್ ನಾಮಪತ್ರ ಸಲ್ಲಿಸಿದ್ದಾರೆ.
Loading posts...

All posts loaded

No more posts

error: Content is protected !!