ಸುಬ್ರಹ್ಮಣ್ಯ ಅಗ್ರಹಾರದಲ್ಲಿ ಸಾಮೂಹಿಕ ಯೋಗ ಶಿವ ನಮಸ್ಕಾರ

ಸುಬ್ರಹ್ಮಣ್ಯ ಫೆಬ್ರವರಿ 16 : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕೇಂದ್ರ ಕಚೇರಿ ತುಮಕೂರು, ನೇತ್ರಾವತಿ ವಲಯ ಮಂಗಳೂರು, ಸುಬ್ರಹ್ಮಣ್ಯ ಶಾಖಾ ವತಿಯಿಂದ ಶಿವರಾತ್ರಿಯ ಅಂಗವಾಗಿ ಸೋಮವಾರ ಬೆಳಗಿನ ಜಾವ ಅಗ್ರಹಾರ ಸೋಮನಾಥೇಶ್ವರ ದೇವಳದ ಮುಂಭಾಗದಲ್ಲಿ ಸಾಮೂಹಿಕ ಯೋಗ ಶಿವ ನಮಸ್ಕಾರ ನಡೆಸಲಾಯಿತು. ಆರಂಭದಲ್ಲಿ ವೆಂಕಟೇಶ್ ಭಜನೆಯನ್ನ ನಿರ್ವಹಿಸಿದರು. ನಂತರ ಅಮೃತವಚನವನ್ನು ಲತಾ, ಪಂಚಾಂಗ...

ಕೊಲ್ಲಮೊಗ್ರು : ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ “ಒತ್ತೆಕೋಲ ಉತ್ಸವ” ಸಂಪನ್ನ

ಕೊಲ್ಲಮೊಗ್ರು ಗ್ರಾಮದ ಕಲ್ಮಕಾರು ವಿಷ್ಣುನಗರ-ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಫೆ.15 ಹಾಗೂ 16 ರಂದು “ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಉತ್ಸವ” ನಡೆಯಿತು. ಫೆ.08 ಆದಿತ್ಯವಾರದಂದು ಗೊನೆ ಮುಹೂರ್ತ ಹಾಗೂ ಫೆ.12 ಗುರುವಾರದಂದು ಸಂಕ್ರಮಣ ಪೂಜೆ ನೆರವೇರಿತು. ಒತ್ತೆಕೋಲ ಉತ್ಸವದ ಮೊದಲನೇ ದಿನವಾದ ಫೆ.15 ಆದಿತ್ಯವಾರದಂದು ಪ್ರಾತಃಕಾಲ ಅಗ್ನಿಕುಂಡ ಜೋಡಣೆ ಪ್ರಾರಂಭ, ಬೆಳಿಗ್ಗೆ ಗಣಪತಿ ಹೋಮ,...
Ad Widget

ಗುತ್ತಿಗಾರು : ಆಸರೆ ಇಲೆಕ್ಟ್ರಾನಿಕ್ಸ್ ನ ಉಳಿತಾಯ ಯೋಜನೆಯ ಪ್ರಥಮ ಉಚಿತ ಡ್ರಾ – ಸದಸ್ಯರಾಗಲು ಸುವರ್ಣಾವಕಾಶ

ಗುತ್ತಿಗಾರಿನ ಆಸರೆ ಇಲೆಕ್ಟ್ರಾನಿಕ್ಸ್ & ಹೋಮ್ ಅಪ್ರೈಯನ್ಸಸ್ ನಲ್ಲಿ ಆರಂಭಗೊಂಡಿರುವ "ಆಸರೆ ಉಳಿತಾಯ ಯೋಜನೆ" ಯ ಪ್ರಥಮ ಉಚಿತ ಡ್ರಾ ಫೆ.15ರಂದು ನಡೆಯಿತು.‌ ಪಂಜ ಪಂಚಶ್ರೀ ಜೇಸಿಐ ನ ಅಧ್ಯಕ್ಷ, ಉದ್ಯಮಿ ದೇವಿಪ್ರಸಾದ್ ಚಿಕ್ಮುಳಿ ಶುಭ ಹಾರೈಸಿ, ಪ್ರಥಮ ಡ್ರಾ ನಡೆಸಿಕೊಟ್ಟರು.‌  ಈ ಸಂದರ್ಭದಲ್ಲಿ ಯೋಗ ತರಬೇತುದಾರ ಶರತ್ ಮರ್ಗಿಲಡ್ಕ, ಕಾಂಪ್ಲೆಕ್ಸ್ ಮಾಲಕರಾದ ಬೊಬಿ, ಪತ್ರಕರ್ತ...

ಆಲೆಟ್ಟಿ : “ಶಿವ ಶಿವಾ ಸದಾಶಿವ” ಕನ್ನಡ ಭಕ್ತಿಗೀತೆ ಬಿಡುಗಡೆ

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಕನ್ನಡ ಭಕ್ತಿಗೀತೆ “ಶಿವ ಶಿವಾ ಸದಾಶಿವ” ಎಂಬ ಕನ್ನಡ ಭಕ್ತಿಗೀತೆಯು ಶ್ರೀ ಕ್ಷೇತ್ರದಲ್ಲಿ ಫೆಬ್ರವರಿ 13 ರಂದು ಜಾತ್ರೋತ್ಸವ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು. ಈ ಭಕ್ತಿಗೀತೆಯನ್ನು ಗುರುಪ್ರಸಾದ್ ರೈ ಮೊರಂಗಲ್ಲು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗಿರೀಶ್ ನಾರ್ಕೋಡು, ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ,...

ಹರಿಹರ ಪಳ್ಳತ್ತಡ್ಕ : ಫೆ.20 ರಿಂದ ಫೆ.22 ರವರೆಗೆ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ “ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ”

ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.20 ಶುಕ್ರವಾರದಿಂದ ಫೆ.22 ಆದಿತ್ಯವಾರದವರೆಗೆ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿ ಉಚ್ಚಿಲ ಇವರ ನೇತೃತ್ವದಲ್ಲಿ “ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ”ವು ಜರುಗಲಿದ್ದು, ಫೆ.14ರಂದು ಗೊನೆ ಮುಹೂರ್ತ ನೆರವೇರಿತು.ಜಾತ್ರೋತ್ಸವದ ಮೊದಲನೇ ದಿನವಾದ ಫೆ.20ನೇ ಶುಕ್ರವಾರದಂದು ಬೆಳಿಗ್ಗೆ 9:00 ಗಂಟೆಗೆ ಹಸಿರು ಕಾಣಿಕೆ ಪ್ರಾರಂಭ, ಮದ್ಯಾಹ್ನ...

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೌಕರರ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

ಸುಬ್ರಹ್ಮಣ್ಯ ಫೆಬ್ರವರಿ 13 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರರ "ಟೆಂಪಲ್ ಸ್ಟಾಫ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ"ವು ಶುಕ್ರವಾರ  ಕುಮಾರಧಾರ ನದಿ ತಟದ ವಿಶಾಲವಾದ ಮೈದಾನದಲ್ಲಿ ನಡೆಯಿತು. ಮುಂಜಾನೆ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ ಮಾತನಾಡುತ್ತಾ‌ “ಇಂದು ಈ ವಿಶಾಲವಾದ ಪರಿಸರದಲ್ಲಿ ನಡೆಯುತ್ತಿರುವ  ...

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ ನೇತೃತ್ವದ ತಂಡ ಪದಗ್ರಹಣ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಫೆ.13 ರಂದು ಸುಳ್ಯದ ಅಂಬಟಡ್ಕದಲ್ಲಿರುವ ಪ್ರೆಸ್ ಕ್ಲಬ್ ಆವರಣದಲ್ಲಿ ನಡೆಯಿತು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಸಭಾಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷ ಮರ್ಕಂಜದ ಅನ್ನಪೂರ್ಣೇಶ್ವರಿ ಸಿದ್ಧಮಠದ ಸ್ವಾಮೀಜಿಗಳಾದ ರಾಜೇಶನಾಥ್.ಜಿ ದೀಪ ಬೆಳಗಿಸಿ ಕಾರ್ಯಕ್ರಮ...

ಹರಿಹರ ಪಳ್ಳತ್ತಡ್ಕ : ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವವು ಫೆ.20 ರಿಂದ 22ರವರೆಗೆ ನಡೆಯಲಿದ್ದು, ಆ ಪ್ರಯುಕ್ತ ಇಂದು(ಫೆ.14) ಶ್ರೀ ದೇವಳದಲ್ಲಿ ಗೊನೆ ಮುಹೂರ್ತ ನೆರವೇರಿತು.ದೇವಳದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ರವರು ವಿಧಿವಿಧಾನಗಳನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪಡ್ಪು, ಸದಸ್ಯರಾದ ದಯಾನಂದ ಕಟ್ಟೆಮನೆ,...

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಧಾಕೃಷ್ಣ ಬೊಳ್ಳೂರು ನೇಮಕ – ಫೆ.16 ರಂದು ಪದಗ್ರಹಣ

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸಂಘಟನಾ ಚತುರ, ಯುವಕರ ಕಣ್ಮಣಿ ರಾಧಾಕೃಷ್ಣ ಬೊಳ್ಳೂರು ಅವರನ್ನು ನೇಮಕಗೊಳಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶಿಸಿದ್ದಾರೆ. ಕಳೆದ ವರ್ಷವೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ  ಬೊಳ್ಳೂರು ಅವರ ಅಯ್ಕೆಯಾಗಿದ್ದರೂ ಪಕ್ಷದೊಳಗಿನ ಭಿನ್ನಮತದಿಂದ ನೇಮಕಕ್ಕೆ ತಡೆಯಾಗಿತ್ತು. ಫೆ.16 ರಂದು ಪದಗ್ರಹಣ ನಡೆಯಲಿದ್ದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಆಶಾಕಿರಣ ಮೂಡಿದೆ. ರಾಧಾಕೃಷ್ಣ ಬೊಳ್ಳೂರು ಅವರು...

ಹರಿಹರ ಪಳ್ಳತ್ತಡ್ಕ : ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಉದ್ಘಾಟನಾ ಕಾರ್ಯಕ್ರಮ

ಹರಿಹರ ಪಳ್ಳತ್ತಡ್ಕ ಗ್ರಾಮದ ಕಲ್ಲೇಮಠ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಉದ್ಘಾಟನಾ ಕಾರ್ಯಕ್ರಮವು ಫೆ.12ರಂದು ನಡೆಯಿತು.ನಿವೃತ್ತ ಉಪನ್ಯಾಸಕರಾದ ರಾಮಚಂದ್ರ ಪಳಂಗಾಯ ರವರು ತೆಂಗಿನಕಾಯಿ ಒಡೆಯುವ ಮೂಲಕ ಹಾಗೂ ನಿವೃತ್ತ ಶಿಕ್ಷಕರಾದ ಶ್ರೀಧರ ಭಾಗವತ್ ರವರು ದೀಪ ಬೆಳಗಿಸುವ ಮೂಲಕ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರವನ್ನು ಉದ್ಘಾಟಿಸಿ...
Loading posts...

All posts loaded

No more posts

error: Content is protected !!