- Monday
- September 14th, 2026
ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ಕನಕಪುರ ಐವರ್ನಾಡು ಇದರ ಬ್ರಹ್ಮಕಲಶೋತ್ಸವವು ಎಪ್ರಿಲ್ 29, 30 ಹಾಗೂ ಮೇ.01 ರಂದು ನಡೆಯಲಿದೆ. ಬ್ರಹ್ಮಕಲಶೋತ್ಸವದ ಸಮಿತಿ ರಚನೆ ಇತ್ತೀಚೆಗೆ ನಡೆಯಿತು. ಗೌರವಾಧ್ಯಕ್ಷರಾಗಿ ಸೆಲ್ವಕುಮಾರ್, ಅಧ್ಯಕ್ಷರಾಗಿ ಮುತ್ತುಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಕನ್ನದಾಸನ್ ಆಯ್ಕೆಯಾದರು. ಸದಸ್ಯರುಗಳಾಗಿ ಪೆರುಮಾಳ್, ವಿಜಯರಾಜ್, ರಾಮಸ್ವಾಮಿ, ಅಲಗರಾಜ್, ಜ್ಞಾನಶೇಖರ, ಗುಣಶೇಖರ, ಪದ್ಮನಾಭ ಆಯ್ಕೆಯಾಗಿದ್ದಾರೆ.
ಸುಳ್ಯ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ “ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ” ಫೆ.24ರಂದು ಕಾಲೇಜಿನ ಕೆವಿಜಿ ಷಷ್ಟ್ಯಬ್ದ ರಂಗಮಂದಿರದಲ್ಲಿ ನಡೆಯಿತು. ಉದ್ಘಾಟನೆಯನ್ನು ನೆರವೇರಿಸಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷರಾದ ಡಾ. ಕೆ.ವಿ ಚಿದಾನಂದ ರವರು ಮಾತನಾಡುತ್ತಾ, “ಭಾಷೆಗಳು ಉಳಿಯಬೇಕಾದರೆ...
ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ 8ನೇ ತರಗತಿ ವಿದ್ಯಾರ್ಥಿಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಮಾದರಿ ಗ್ರಾಮ ಪಂಚಾಯತ್ ರಾಜ್ಯದ ಆರು ಮಾದರಿ ಗ್ರಾಮ ಪಂಚಾಯತ್ ಗಳಲ್ಲಿ ಒಂದಾಗಿರುವ ಸುಳ್ಯ ತಾಲೂಕಿನ ಏಕೈಕ ಪಂಚಾಯತ್ ಎಂದು ಹೆಗ್ಗಳಿಕೆ ಗಳಿಸಿರುವ ಅರಂತೋಡು ಗ್ರಾಮ ಪಂಚಾಯತ್ ಗೆ ಅಧ್ಯಯನ ನಡೆಸಲು ಮತ್ತು ಮಾಹಿತಿ...
ಅರಂತೋಡು ಗ್ರಾಮದ ಅಡ್ತಲೆ, ಕಿರ್ಲಾಯ, ಬೆದ್ರುಪಣೆ ಭಾಗದಲ್ಲಿ ನಿರಂತರ ಕೃಷಿ ತೋಟಗಳಿಗೆ ದಾಳಿ ಮಾಡಿ ಹಾನಿ ಮಾಡುತ್ತಿದ್ದ ಆನೆಗಳ ಹಿಂಡು ಕೆಲ ದಿನಗಳಿಂದ ಮಡಪ್ಪಾಡಿ ಕಡೆಗೆ ಆಗಮಿಸಿವೆ. ಮಡಪ್ಪಾಡಿ ಗ್ರಾಮದ ದಿನೇಶ್ ಮಡಪ್ಪಾಡಿ ಅವರ ತೋಟಕ್ಕೆ ಫೆ.24 ರಂದು ರಾತ್ರಿ ಏಳು ಆನೆಗಳಿರುವ ಹಿಂಡು ದಾಳಿ ನಡೆಸಿ ಕೃಷಿ ಹಾನಿ ಮಾಡಿದೆ. ತೋಟದಲ್ಲಿ ಡೀಸಿಲ್ ಪಂಪನ್ನು...
ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು, ಕೆ.ಎಸ್.ಎಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ , ರೆಡ್ ಕ್ರಾಸ್ ಯೂನಿಟ್, ರೋವರ್ಸ್ ಅಂಡ್ ರೇಂಜರ್ಸ್ ಯೂನಿಟ್ ಹಾಗೂ ಇಂಟರ್ನಲ್ ಕ್ವಾಲಿಟಿ ಅಸೂರೆನ್ಸ್ ಸೆಲ್ ಇವುಗಳ ಜಂಟಿ ಆಶ್ರಯದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಗುರುವಾರ ರಕ್ತದಾನ ಶಿಬಿರ ನಡೆಯಲಿದ್ದು,...
ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ, ರಾಷ್ಟ್ರೀಯ ಸೇವಾ ಯೋಜನೆ ಕೋಶ ಯೆನೆಪೋಯ(ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ದಕ್ಷಿಣ ಕನ್ನಡ...
ಸುಳ್ಯದ ಬೊಳುಬೈಲಿನಲ್ಲಿ ಫೆ.21 ರಂದು ನಡೆದ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡ ಚಾಲಕ ಕುಕ್ಕೆಶ್ರೀ ವಸಂತ್ ರವರು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಫೆ. 23 ರ ರಾತ್ರಿ ನಿಧನರಾದ ಘಟನೆ ನಡೆದಿದೆ. ಕುಕ್ಕೆಶ್ರೀ ವಸಂತ್ ಅವರು ಕುಟುಂಬದೊಂದಿಗೆ ಮಡಂತ್ಯಾರಿಗೆ ಹೊರಟಿದ್ದ ವೇಳೆ ಬೊಳುಬೈಲಿನಲ್ಲಿ ಅವರ ಕಾರಿಗೆ ಹಿಂಬದಿಯಿಂದ ಅತೀ ವೇಗವಾಗಿ ಬಂದ ಕಾರಿಗೆ ಢಿಕ್ಕಿಯಾಯಿತು. ಪರಿಣಾಮ...
ಸುಬ್ರಹ್ಮಣ್ಯ: ರೋಟರಿ ಕ್ಲಬ್ ಸುಬ್ರಹ್ಮಣ್ಯಕ್ಕೆ ಫೆ.25ರಂದು ರೋಟರಿ ಜಿಲ್ಲೆ 3181ನ ಜಿಲ್ಲಾ ರಾಜ್ಯಪಾಲ ಪಿ.ಕೆ.ರಾಮಕೃಷ್ಣ ಅಧಿಕೃತವಾಗಿ ಭೇಟಿ ನೀಡಲಿದ್ದಾರೆ. ಈ ಸಂದರ್ಭ ಸುಬ್ರಹ್ಮಣ್ಯ ರೋಟರಿಯಿಂದ ಕೊಡಮಾಡುವ ಹಲವಾರು ಸಮಾಜಮುಖಿ ಸಮುದಾಯ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಸುಬ್ರಹ್ಮಣ್ಯ ರೋಟರಿ ಅಧ್ಯಕ್ಷ ಜಯಪ್ರಕಾಶ್.ಆರ್ ತಿಳಿಸಿದ್ದಾರೆ. ಸಮುದಾಯ ಸೇವೆ : ಆರಂಭದಲ್ಲಿ ರೋಟರಿ ಜಿಲ್ಲಾ ರಾಜ್ಯಪಾಲ ರಾಮಕೃಷ್ಣ ಪಿ.ಕೆ...
ಅಟಲ್ ಅಭಿಮಾನಿ ಬಳಗ ಬಾಳುಗೋಡು-ಹರಿಹರ ಪಳ್ಳತ್ತಡ್ಕ ಇದರ ಆಶ್ರಯದಲ್ಲಿ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ದಿ ಪ್ರಯುಕ್ತ ಫೆ.28 ಶನಿವಾರದಂದು ಅಪರಾಹ್ನ 1:00 ಗಂಟೆಯಿಂದ ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದ ಮೈದಾನದಲ್ಲಿ ಆಯ್ದ 8 ತಂಡಗಳ ಲೀಗ್ ಮಾದರಿಯ ಸೂರ್ಯ-ಹೊನಲು ಬೆಳಕಿನ “ಅಟಲ್ ಟ್ರೋಫಿ ವಾಲಿಬಾಲ್ ಪಂದ್ಯಾಟ” ನಡೆಯಲಿದ್ದು, ಅಪರಾಹ್ನ...
"ಶಬ್ದವಿಲ್ಲದೇ ಪ್ರಚಾರ ಮಾಡುವವರು ಸಮಾಜದ ನಿಜವಾದ ನಾಯಕರು." ಈ ಹಿನ್ನೆಲೆಯಲ್ಲಿ ಜೇಸಿಐ ಭಾರತದ ಪೆಬ್ರವರಿ ತಿಂಗಳ ಗೌರವ ಸಮರ್ಪಣೆಯು ಸ್ಥಳೀಯಾಡಳಿತ ವ್ಯವಸ್ಥೆಯಲ್ಲಿ ಸಹಾಯಕರಾಗಿ ನಿಷ್ಠೆ ಪ್ರಾಮಾಣಿಕತೆಯಿಂದ ದುಡಿದ ಸೇವೆಯನ್ನು ಗುರುತಿಸಿ ಗೌರವಿಸುವುದಾಗಿದ್ದು, ಅದರಂತೆ ಅಮರಮುಡ್ನೂರು ಗ್ರಾಮ ಪಂಚಾಯತ್ ನಲ್ಲಿ ಕಳೆದ 16ವರ್ಷಗಳಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ....
Loading posts...
All posts loaded
No more posts
