ಯುವಕರಿಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ; ಕೊಲ್ಲಮೊಗ್ರು ಪೇಟೆಯಲ್ಲಿ ಅಂತಿಮ ನಮನ-ಮೃತರ ಅಂತಿಮ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಜನರು

ಕೊಲ್ಲಮೊಗ್ರು ಗ್ರಾಮದ ಹರಿಪ್ರಸಾದ್ ಮಲ್ಲಾಜೆ ಹಾಗೂ ಸುಜಿತ್ ಗೋಳ್ಯಾಡಿ ಎಂಬ ಇಬ್ಬರು ಯುವಕರು ನಿನ್ನೆ(ಜ.18) ಸುಬ್ರಹ್ಮಣ್ಯದ ಕುಲ್ಕುಂದ ಸಮೀಪದ ಕುಮಾರಧಾರ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಇಂದು(ಜ.19) ಮೃತರ ಅಂತಿಮ ಯಾತ್ರೆ ನೆರವೇರಿದ್ದು, ಹರಿಹರ ಪಳ್ಳತ್ತಡ್ಕದಲ್ಲಿ ಅಂತಿಮ ಯಾತ್ರೆಯನ್ನು ಮುಗಿಸಿ ಕೊಲ್ಲಮೊಗ್ರದ ಮಯೂರ ವೃತ್ತಕ್ಕೆ ಬಂದು ಕೊಲ್ಲಮೊಗ್ರು ಪೇಟೆಯಲ್ಲಿ ಮೃತರ ಅಂತಿಮ...

ಯುವಕರಿಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ; ಕೊಲ್ಲಮೊಗ್ರು ಹಾಗೂ ಹರಿಹರ ಪಳ್ಳತ್ತಡ್ಕದಲ್ಲಿ ಅಂಗಡಿ ಮುಂಗಟ್ಟು ಬಂದ್ – ಅವಳಿ ಗ್ರಾಮಗಳಲ್ಲಿ ಆವರಿಸಿದ ನೀರವ ಮೌನ

ಕೊಲ್ಲಮೊಗ್ರು ಗ್ರಾಮದ ಹರಿಪ್ರಸಾದ್ ಮಲ್ಲಾಜೆ ಹಾಗೂ ಸುಜಿತ್ ಗೋಳ್ಯಾಡಿ ಎಂಬ ಇಬ್ಬರು ಯುವಕರು ನಿನ್ನೆ(ಜ.18) ಸುಬ್ರಹ್ಮಣ್ಯದ ಕುಲ್ಕುಂದ ಸಮೀಪದ ಕುಮಾರಧಾರ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಇಂದು(ಜ.19) ಮೃತರ ಅಂತಿಮ ಯಾತ್ರೆ ಹಾಗೂ ಅಂತಿಮ ದರ್ಶನ ನೆರವೇರಿದ್ದು, ಕೊಲ್ಲಮೊಗ್ರು ಹಾಗೂ ಹರಿಹರ ಪಳ್ಳತ್ತಡ್ಕದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಅವಳಿ ಗ್ರಾಮಗಳಲ್ಲಿ...
Ad Widget

ಸುಬ್ರಹ್ಮಣ್ಯ : ನದಿಯಲ್ಲಿ ಯುವಕರಿಬ್ಬರು ಮುಳುಗಿ ಮೃತಪಟ್ಟ ಪ್ರಕರಣ ; ರಕ್ಷಿಸಲು ಹೋದಾತನೂ ನೀರಿನಲ್ಲಿ ಮುಳುಗಿ ಸಾವು – ಕೊಲ್ಲಮೊಗ್ರು ಗ್ರಾಮದಲ್ಲಿ ನೀರವ ಮೌನ

ಸುಬ್ರಹ್ಮಣ್ಯದ ಕುಮಾರಧಾರ ನದಿಗೆ ಸ್ನಾನಕ್ಕೆ ತೆರಳಿದ್ದ ಯುವಕರಿಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇಂದು(ಜ.18) ನಡೆದಿದ್ದು, ಸುಬ್ರಹ್ಮಣ್ಯದ ಕಾಲೇಜು ಹತ್ತಿರದಲ್ಲಿ ಕಾರ್ಯಾಚರಿಸುತ್ತಿರುವ ಅನುಗ್ರಹ ಹಾರ್ಡ್ ವೇರ್ ಸಂಸ್ಥೆಯ ಮ್ಹಾಲಕರಾದ ಕೊಲ್ಲಮೊಗ್ರದ ಹರಿಪ್ರಸಾದ್ ಮಲ್ಲಾಜೆ ಹಾಗೂ ಅಲ್ಲಿ ಕೆಲಸ ಮಾಡುತ್ತಿದ್ದ ಕೊಲ್ಲಮೊಗ್ರದ ಸುಜಿತ್ ಗೋಳ್ಯಾಡಿ ಎಂಬುವವರು ಇಂದು ಕುಲ್ಕುಂದ ಸಮೀಪದ ಕುಮಾರಧಾರ ನದಿಗೆ ಸ್ನಾನ ಮಾಡಲೆಂದು ತೆರಳಿದ್ದು,...

ಸುಬ್ರಹ್ಮಣ್ಯ : ನದಿಯಲ್ಲಿ ಮುಳುಗಿ ಕೊಲ್ಲಮೊಗ್ರದ ಇಬ್ಬರು ಮೃತ್ಯು

ಕುಮಾಧಾರ ನದಿಗೆ ತೆರಳಿದ್ದ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿದ ಘಟನೆ ಕುಲ್ಕುಂದ ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.ಮೃತರನ್ನು ಸುಬ್ರಹ್ಮಣ್ಯದಲ್ಲಿ ಉದ್ಯಮ ನಡೆಸುತ್ತಿರುವ ಕೊಲ್ಲಮೊಗ್ರದ ಹರಿಪ್ರಸಾದ್ ಹಾಗೂ ಸುಜಿತ್‌ ಕೊಲ್ಲಮೊಗ್ರ ಎಂದು ಗುರುತಿಸಲಾಗಿದೆ. ಇವರಿಬ್ಬರೂ ನದಿಗೆ ಈಜಲು ತೆರಳಿರುವ ವೇಳೆ ಮುಳುಗಿ ಸಾವನ್ನಪ್ಪಿರುವುದಾಗಿ ಹೇಳಲಾಗಿದ್ದು ನಿಖರ ಕಾರಣ ತಿಳಿದುಬಂದಿಲ್ಲ.

ಅರಂತೋಡು ಹಿರಿಯ ಪ್ರಾಥಮಿಕ ಶಾಲೆಗೆ ಊಟದ ತಟ್ಟೆ ಕೊಡುಗೆ

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅರಂತೋಡು ಇಲ್ಲಿಗೆ ಆರಂತೋಡಿನ ಕೃಷಿಕ ಯುವ ಉದ್ಯಮಿ ಯು.ಎಂ ವಿನೋದ್ ಕುಮಾರ್ ಮತ್ತು ಮನೆಯವರು ಉಳುವಾರು ಮಲ್ಲಡ್ಕ ಇವರಿಂದ 100 ಊಟದ ತಟ್ಟೆಯನ್ನು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಿಗೆ ಹಸ್ತಾಂತರ ಮಾಡಿದರು.

ಪಂಜದಲ್ಲಿ ಮೇಳೈಸಿದ ರಾಜ್ಯಮಟ್ಟದ ಯುವ ಸಂಭ್ರಮ – ರಾಜ್ಯ ಯುವ ಪ್ರಶಸ್ತಿ ಹಾಗೂ ಸಾಂಘಿಕ ಪ್ರಶಸ್ತಿ ಪ್ರದಾನ :
“ಯುವ ಜನತೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ” – ಭರತ್ ಮುಂಡೋಡಿ
“ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಬೆಳೆಸಿಕೊಳ್ಳಬೇಕಿದೆ” – ಟಿ.ಎಂ.ಶಹೀದ್

“ಯುವ ಜನತೆ  ಸಮಾಜಮುಖಿ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಿ ಮೊಬೈಲ್ ಗೀಳು ಬಿಟ್ಟು ಬದುಕಿದರೇ ಈ ದೇಶಕ್ಕೆ ಭವಿಷ್ಯ ಇದೆ” ಎಂದು ಪಂಚ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಹೇಳಿದರು. ಅವರು ಜ.18 ರಂದು ಪಂಜದಲ್ಲಿ ನಡೆದ ರಾಜ್ಯಮಟ್ಟದ ಯುವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  “75 ದಿನಗಳ ಕಾಲ ನಡೆದ ಪಂಚ ಸಪ್ತತಿ ಸ್ವಚ್ಚತೆ...

ಕವನ : ಬಾನಾಡಿಗಳ ಬದುಕು… – ✍️ಉಲ್ಲಾಸ್ ಕಜ್ಜೋಡಿ

ಇಳಿಸಂಜೆಯ ತಿಳಿಬಿಸಿಲಿನ ತನುತಂಪಿನ ತಂಗಾಳಿಯಲಿ ಬಾನೆತ್ತರ ಹಾರಾಡಿವೆ ಬಾನಾಡಿ ಬಳಗ ಮರಳಿ ಗೂಡು ಸೇರೋ ತವಕದಲಿ, ಕತ್ತಲಾಗೋ ಹೊತ್ತಿನಲಿ...ಮತ್ತೆ ಮರಳಿ ಮುಂಜಾನೆಯ ಆ ಮಂಜಿನಲಿ ಗೂಡು ಬಿಟ್ಟು ಮೇಲೆ ಹಾರಿ, ಅನಂತಾಕಾಶದಲಿ ಆಹಾರವ ಅರಸುತ್ತಾ ಸಾಗಿ, ಮನೆಯಂಗಳದಲೋ-ಕೃಷಿ ತೋಟದಲೋ ಹುಳು-ಹುಪ್ಪಟೆಗಳ ಹುಡುಕಿ ತಿಂದು ಕೃಷಿಕರಿಗೂ ನೆರವಾಗಿವೆ ಬಾನಾಡಿಗಳ ಈ ಬಳಗ...ಇವುಗಳ ಬದುಕೊಂತರ ಹೋರಾಟ, ಪ್ರತಿನಿತ್ಯವೂ ಇದೇ...

ನಿಧನ : ಕಮಾಲುದ್ದೀನ್

ಸುಳ್ಯದ ಪ್ರತಿಷ್ಠಿತ ದಿನಸಿ ಮಳಿಗೆ ಜನತಾ ಸ್ಟೋರ್ಸ್ ನಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರತರಾಗಿದ್ದ ಮಂಗಳೂರು ಮೂಲದ ಉದ್ಯಮಿ ಕಮಾಲುದ್ದೀನ್(54) ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನ ಹೊಂದಿದರು.ಮೃತರು ಕೊಡುಗೈದಾನಿ, ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ನಿರ್ಮಾತೃ ಹಾಗೂ ಸುಳ್ಯ ಅನ್ಸಾರಿಯ ಅನಾಥಾಲಯದ ಮಾಜಿ ಅಧ್ಯಕ್ಷರಾಗಿದ್ದ ದಿವಂಗತ ಹಾಜಿ ಮಹಮ್ಮದ್ ಜನತಾ ಅವರ ಪತ್ನಿಯ...

42 ಕಿಲೋಮೀಟರ್ ಫುಲ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾ ಹರೀಶ್ ಬಂಗಾರಕೋಡಿ

ವಿದ್ಯಾ ಹರೀಶ್ ಬಂಗಾರಕೋಡಿ ಅವರು ಮಂಗಳೂರಿನಲ್ಲಿ ನಡೆದ ಸಮುದ್ರ ಹಬ್ಬದ ಪ್ರಯುಕ್ತ ನಡೆದ 42 ಕಿಲೋಮೀಟರ್ ಫುಲ್ ಮ್ಯಾರಥಾನ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.5 ರಿಂದ 21 ಕಿಲೋಮೀಟರ್ ನ ಹಲವಾರು ಮ್ಯಾರಥಾನ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದುಕೊಂಡ ಇವರು ಇದೀಗ ಪ್ರಪ್ರಥಮ ಬಾರಿಗೆ 42 ಕಿಲೋಮೀಟರ್ ಫುಲ್ ಮ್ಯಾರಥಾನ್ ಸ್ಪರ್ಧೆಯಲ್ಲಿ...

ಗುತ್ತಿಗಾರು : ಇಂದು(ಜ.18) “ಹಿಂದೂ ಸಂಗಮ” ಕಾರ್ಯಕ್ರಮ

ಹಿಂದೂ ಸಂಗಮ ಗುತ್ತಿಗಾರು ಮಂಡಲದ ವತಿಯಿಂದ ದೇವಚಳ್ಳ, ಮಡಪ್ಪಾಡಿ, ಗುತ್ತಿಗಾರು ಹಾಗೂ ನಾಲ್ಕೂರು ಗ್ರಾಮಗಳ ಒಗ್ಗೂಡಿಕೆಯೊಂದಿಗೆ ಹಿಂದೂ ಸಮಾಜದ ಏಕತೆ, ಸಾಮರಸ್ಯ, ಸಾಮಾಜಿಕ ಪರಿವರ್ತನೆ, ಧಾರ್ಮಿಕ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಇಂದು(ಜ.18) ಅಪರಾಹ್ನ 3:00 ಗಂಟೆಯಿಂದ ಗುತ್ತಿಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ “ಹಿಂದೂ ಸಂಗಮ” ಕಾರ್ಯಕ್ರಮ ನೆರವೇರಲಿದೆ ಎಂದು...
Loading posts...

All posts loaded

No more posts

error: Content is protected !!